Tuesday, August 2, 2011

ಧನ್ಯವಾದಗಳು !





ಶ್ರಾದ್ಧ ಮಾಡಬೇಕು. ಎಲ್ಲವೂ ಸಿದ್ದವಿದೆ...
ಗಲ್ಲಕ್ಕೆ ಕೈಯಿ, ದಿಟ್ಟಿ ದಿಗಂತದಲ್ಲಿ
ಹೇಗೆ ಮರೆಯಲೋ ಹುಡುಗಾ..!

ದೂರಕ್ಕೆ ಭಾವಬಂಧದ ಪಲುಕು.
ಸನಿಹಕ್ಕೆ ಭಾವಕಂಪನದ ಭೀತಿ.
ಕಣ್ಮುಚ್ಚಿ ಧೇನಿಸಿದರೆ ತೊಳಬಂಧಿಯ ಸುಖ.

’ನಿನ್ಯಾಕೋ ನಿನ್ನ ಹಂಗ್ಯಾಕೋ ರಂಗಾ
ನಿನ್ನ ನಾಮದ ಬಲವೊಂದಿದ್ದರೆ ಸಾಕು’
ನೆರಳುಗಳೊಡನೆ ಜೊತೆಯಾಟ, ಬಿಂಬದೊಡನೆ ಬದುಕು

ಅಹಾ! ಬದುಕು ಸುಂದರ.
’ನಿನಗೆ ನೀನೇ ಗೆಳೆಯ’
ಚೌಕಟ್ಟುಗಳ ಮೀರಿ ಬೆಳೆದೆ.

ಅಲ್ಲಿ-ಇಲ್ಲಿ ಎಲ್ಲೆಲ್ಲೂ ಹಸಿರು
ಮೊಗೆದಷ್ಟು ಜೀವಜಲ, ಮಿಡಿದರೆ ವಿದ್ಯುಲ್ಲತಾ
ಶರಧಿಯೊಳಗಣ ಜಲಬಿಂದು.

ಬಂದ ವಾಸ್ತವದ ದೇವದೂತ
ಗಾಳಿಯಲ್ಲಿ ಕೈಯಾಡಿಸಿದ...
ಕಟ್ಟ ಕಡೆಯ ಕಂಬನಿ.

ಪೂರ್ಣಾಹುತಿಯ ಹೊತ್ತಿನಲ್ಲಿ ಅಸ್ತಿತ್ವದ ಜಿಜ್ನಾಸೆ.
ಎಲ್ಲವೂ ಮುಗಿದೇ ಹೋಯ್ತು.
ಅದು ನನ್ನ ವಿಧಿ.

ಶ್ರಾದ್ಧ ಮಾಡಬೇಕು; ಎಲ್ಲವೂ ಸಿದ್ಧವಿದೆ.
ಮತ್ತೆ ಹುಟ್ಟಿ ಕಾಡಬೇಡ ನನ್ನ.
ಧನ್ಯವಾದಗಳು ನಿನಗೆ.

3 comments:

sunaath said...

ಮನದ ಭಾವ ಉಕ್ಕಿ ಕವನದಲ್ಲಿ ತುಂಬಿದೆ.

Sukhesh said...

ತುಂಬಾ ಇಷ್ಟ ಆಯ್ತು :) ನಿಮಗ ಧನ್ಯವಾದ :)

maanasa saarovra said...

tumbaa chennagide kavite.. nice...