tag:blogger.com,1999:blog-3646435558466746357.post4218827166272014705..comments2023-04-11T01:08:25.408-07:00Comments on Mouna kanive: ಹಳೆ ಕಾದಂಬರಿಯ ಹೊಸಪ್ರಶ್ನೆ-’ಸಂಸ್ಕಾರ’ ಯಾರು ಮಾಡಬೇಕು?suragi \ ushakattemanehttp://www.blogger.com/profile/16850125064844723617noreply@blogger.comBlogger3125tag:blogger.com,1999:blog-3646435558466746357.post-49722354736265970692012-12-01T00:10:39.896-08:002012-12-01T00:10:39.896-08:00ಕೋರಿಕೆ ಮೇರೆಗೆ ಲಿ೦ಕಿಸಿದ್ದಕ್ಕೆ ಧನ್ಯವಾದಗಳು ಉಷಕ್ಕ.
ಸ೦ಬ...ಕೋರಿಕೆ ಮೇರೆಗೆ ಲಿ೦ಕಿಸಿದ್ದಕ್ಕೆ ಧನ್ಯವಾದಗಳು ಉಷಕ್ಕ.<br />ಸ೦ಬ೦ಧ ಹಾಗು ಅದರ ಲೈ೦ಗಿಕತೆಯನ್ನು ನಮ್ಮ ಸಮಾಜ ಇನ್ನು ಒಪ್ಪುಲ್ಲ, ಅದರಲ್ಲೂ ಅನೈತಿಕ ಸ೦ಬ೦ಧಗಳನ್ನು ಜನ ಹೀನಾಯವಾಗಿ ತಿರಸ್ಕರಿಸುತ್ತಿದ್ದ ಕಾಲವೊ೦ದಿತ್ತು, ಆದರೆ ಈಗ ಜನ ಅದನ್ನು ಸ್ವಲ್ಪ ಸದರದಿ೦ದ ನೋಡುತ್ತಾರೆ(ಇದು ಎಲ್ಲರಿಗೂ ಅನ್ವಯಿಸುವುದಿಲ್ಲ). ಆದರ ಅ೦ತಹದ್ದು ಅಸ್ತಿತ್ವದಲ್ಲಿರುವುದ೦ತೂ ನಿಜವಲ್ಲವೆ? <br />ಜನರ ನೀತಿ- ಸ೦ಪ್ರದಾಯಗಳು ಹಾಗು ಆಯ ಕಾಲಘಟ್ಟದ ನಡಾವಳಿಗಳನ್ನು ನಾವು ಅಧ್ಯಯನ ಮಾದುವ ಅನಿವಾರ್ಯತೆ ತೀರಾ ಇದೆ. <br />ನಿಮ್ಮ ಅನಿಸಿಕೆಗಳಿಗೆ ನನ್ನ ಸ೦ಪೂರ್ಣ ಅಭಿಮತವಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳು ಈಗ ಬಹಳ ಮು೦ದುವರೆದಿದ್ದಾರೆ, ಅಪ್ಪ ಅಮ್ಮ೦ದಿರಿಗಿರುವ ಜ್ಞಾನಕ್ಕಿ೦ತ ಮಕ್ಕಳಿಗೆ ಲೈ೦ಗಿಕತೆಯ ಬಗ್ಗೆ ಹೆಚ್ಚಿರುತ್ತದೆ.<br />ನಮ್ಮಲ್ಲಿ ಒ೦ದು ಜೋಕ್ ಉ೦ಟು..<br />ಅಪ್ಪ ಅಮ್ಮ ಮುಕ್ತವಾಗಿ ಲೈ೦ಗಿಕತೆಯ ಬಗ್ಗೆ ಮಕ್ಕಳ ಮು೦ದೆ ಮಾತಾಡಿದರೆ ಮಕ್ಕಳು ಅಪ್ಪ ಅಮ್ಮನಿಗೆ ಅದರ ಬಗ್ಗೆ ಗೊತ್ತಿರುವುದಕ್ಕಿ೦ತ, ಅವರಿಗೇ ಹೆಚ್ಚು ತಿಳಿದಿರುವುದನ್ನು ನೋಡಿ ನಗುತ್ತಾರೆ ಅ೦ತ. ಇನ್ನು ಶಿಕ್ಷಕರೂ ಅಷ್ಟೆ.<br />ಇ೦ತೆಲ್ಲಾ ವಿಚಾರಗಳನ್ನು ನಾವು ಮುಕ್ತವಾಗಿ ನೋಡುವ೦ತವರಾಗ ಬೇಕು, ಸಾಹಿತ್ಯಿಕ ದೃಷ್ಟಿಕೋನದಿ೦ದ ನಾವು ಓದಿಕೊಳ್ಳುವ ಜನ್ನನ ಯಶೋಧರ ಚರಿತೆಯ..."ಅಮೃತಮತಿ ಹಾಗು ಅಷ್ಟಾವ೦ಕನ" ಪ್ರಣಯಗಳು ಆಗಿನ ಕಾಲದಲ್ಲಿ ಆದ ಇ೦ತಹ ಬದಲಾವಣೆಗಳನ್ನು ಪ್ರತಿಬಿ೦ಬಿಸುತ್ತದೆ.<br />ಪ್ರಾಕ್ಟಿಕಲ್ ಆಗಿ ಬರೆದಿರುವ ನಿಮ್ಮ ಬರಹಕ್ಕೆ ಚಪ್ಪಾಳೆ...!!!!!sunil Raohttps://www.blogger.com/profile/16496808396924404242noreply@blogger.comtag:blogger.com,1999:blog-3646435558466746357.post-60425798998486364792011-11-11T09:53:13.897-08:002011-11-11T09:53:13.897-08:00ನಿಮ್ಮ ಮಾತುಗಳು ಅಕ್ಷರಶಃ ನಿಜ. ಈ ಎರಡು ದಶಕಗಳಲ್ಲಿ ನಮ್ಮ ...ನಿಮ್ಮ ಮಾತುಗಳು ಅಕ್ಷರಶಃ ನಿಜ. ಈ ಎರಡು ದಶಕಗಳಲ್ಲಿ ನಮ್ಮ ಅಸಹನೆ ಯಾವ ಮಟ್ಟಕ್ಕೆ ಮುಟ್ಟಿಬಿಟ್ಟಿದೆಯೆಂದರೆ ಇಲ್ಲಿ ಸೃಜನಾತ್ಮಕವಾದ, ತಾತ್ವಿಕವಾದ ಅಥವ ವಸ್ತುನಿಷ್ಟವಾದ ಏನೂ ಸಾಧ್ಯವೇ ಇಲ್ಲವೇನೋ ಅನ್ನುವಂತಾಗಿದೆ. ಈಗ ಪ್ರಶ್ನೆಯಲ್ಲಿರುವ ರಾಮಾನುಜಂರ ಲೇಖನವನ್ನು ನಾನೂ ಓದಿದೆ. ಅದರಲ್ಲಿ ರಾಮಾಯಣ ಕಾವ್ಯ ಜನಪದದಲ್ಲಿ ಹಬ್ಬಿ ಹರಡಿಕೊಂಡ ಆಳ-ವಿಸ್ತಾರಗಳ ಬಗೆಗಿನ ಬೆರಗನ್ನು ಬಿಟ್ಟರೆ ಬೇರೇನೂ ಕಾಣದು. ಇದು ಯಾವುದೋ ಧಾರ್ಮಿಕತೆಯನ್ನು ಅದು ಹೇಗೆ ನೋಯಿಸುತ್ತದೋ ಆ ಶ್ರೀರಾಮನಿಗೇ ಗೊತ್ತು. ಹೀಗೆ ಕೂಗುತ್ತಿರುವವರ ಮುಖ್ಯ ಆರೋಪವೆಂದರೆ ಆ ಇನ್ನೂರ ತೊಂಬತ್ತೊಂಬತ್ತೂ ’ರಾಮಾಯಣ’ಗಳನ್ನೂ ಮೂಲ ವಾಲ್ಮೀಕಿ ರಾಮಾಯಣಕ್ಕೆ ಸಮೀಕರಿಸಿಬಿಟ್ಟಿದ್ದಾರೆಂದು! ಹೌದೇ? ಬೇರೆ ಸಂದರ್ಭದಲ್ಲಾಗಿದ್ದರೆ ನಗು ಬರುತ್ತಿತ್ತು, ಆದರೆ ನಡುವೆ ಹಸೀ ಹುಲ್ಲು ಹಾಕಿದರೆ ಹೊತ್ತಿ ಉರಿಯುವ ಈ ಧಾರ್ಮಿಕ ಅಸಹನೆಯ ಯುಗದಲ್ಲಿ ಈ ಮೂರ್ಖತನವನ್ನು ಕಂಡು ಮೈ ಉರಿಯುತ್ತದೆManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-3646435558466746357.post-75996161008918196662011-11-05T10:14:27.866-07:002011-11-05T10:14:27.866-07:00ಸಂಸ್ಕಾರದ ಬಗೆಗೆ ನೀವು ಬರೆದ ಲೇಖನ ತುಂಬ ಸಮುಚಿತವಾಗಿದೆ. ಇ...ಸಂಸ್ಕಾರದ ಬಗೆಗೆ ನೀವು ಬರೆದ ಲೇಖನ ತುಂಬ ಸಮುಚಿತವಾಗಿದೆ. ಇನ್ನು ರಾಮಾನುಜನ್ನರ ಪುಸ್ತಕದ ಬಗೆಗೆ ನನಗೆ ಮಾಹಿತಿ ಇಲ್ಲ. ಹೀಗಾಗಿ ಅದರ ಬಗೆಗೆ ಏನು ಹೇಳಬಹುದು?sunaathhttps://www.blogger.com/profile/13386371953472087631noreply@blogger.com