Thursday, July 17, 2008

ಪ್ರತ್ಯೇಕ ಕೃಷಿ ಬಜೇಟ್ ಬೇಕು

ರೈತರ ಆತ್ಮಹತ್ಯೆ ಸಮೂಹ ಸನ್ನಿಯ ರೂಪ ಪಡೆಯುತ್ತಲಿದೆ. ಹಿಂದೆಲ್ಲ ಮೊದಲ ಪುಟದಲ್ಲಿ ವರದಿಯಾಗುತ್ತಿದ್ದ, ಹೆಡ್ ಲೈನ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ರೈತರ ಅತ್ಮಹತ್ಯೆಗಳು ಈಗ ಒಳಪುಟಗಳತ್ತ ಸರಿಯುತ್ತಲಿವೆ. ಮುಂದೊಂದು ದಿನ ಪೇಜ್ ತ್ರಿಯಲ್ಲೂ ಬರಬಹುದು. ಅಂದರೆ ರೈತರ ಆತ್ಮಹತ್ಯೆ ಪ್ರಯತ್ನಗಳು ಸಾಮಾನ್ಯ ಘಟನೆಗಳಾಗುತ್ತಿವೆ. ಅದು ಜನತೆಯಲ್ಲಿ ಯಾವ ತಲ್ಲಣವನ್ನೂ ಉಂಟು ಮಾಡುತ್ತಿಲ್ಲ. ಅವರು ಸಂವೇದನಾಶೂನ್ಯರಾಗುತ್ತಿದ್ದಾರೆ.ಜೂನ್ ೧೯ರಂದು ನಮ್ಮ ಕೃಷಿ ಸಚಿವ ರವೀಂದ್ರನಾಥ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರವನ್ನೇ ನೋಡಿ: ’ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’ಒಬ್ಬ ಜವಬ್ದಾರಿಯುತ ಜನಪ್ರತಿನಿಧಿ ನೀಡುವ ಉತ್ತರವೇ ಇದು? ನಿನ್ನೆ ಸತ್ತವ ರೈತನಲ್ಲ ಎಂದು ಅವರು ಹೇಗೆ ನಿರ್ಧರಿಸಿದರು? ಅವರ ಸುತ್ತಮುತ್ತಲು ಇರುವ ಅಧಿಕಾರವ್ರ್‍ಅಂದ ಅವರಿಗೆ ಈಮಾಹಿತಿಯನ್ನು ನೀಡಿರಬೇಕು ಆಧಿಕಾರಶಾಹಿ ಎಂದೂ ರ್‍ಐತಪರವಾಗಿರಲಾರದು. ಆದರೆ ಜನಪ್ರತಿನಿಧಿಯೊಬ್ಬ ರೈತಪರವಾಗಿರಲೇ ಬೇಕು. ನಿನ್ನೆ ಸತ್ತ ಆ ರೈತ, ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಅಜ್ಜಪ್ಪ[೪೩]. ನಿಜ. ಆತ ಸರ್ಕಾರಿ ದಾಖಲೆಗಳ ಪ್ರಕಾರ ರೈತನಲ್ಲ. ಯಾಕೆಂದರೆ ಆತ ಬೇರೊಬ್ಬರ ಹೊಲವನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದ.. ಅಂದರೆ ಬಗರ್ ಹುಕುಂ ಸಾಗುವಳಿ ಮಾಡುವವರು, ಗೇಣಿದಾರರು, ಕುಮ್ಕಿ, ಜಮ್ಮಬಾಣೆಗಳಲ್ಲಿ ವ್ಯವಸಾಯ ಮಾಡುವವರು ರೈತರಲ್ಲವೇ? ತಮ್ಮದೇ ಜಿಲ್ಲೆಯ, ತಮ್ಮ ಪಕ್ಕದ ಕ್ಷೇತ್ರದ ರೈತನೊಬ್ಬನ ಬಗ್ಗೆ ಕೃಷಿ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದೇ? ಇವರು ಹೇಳಿಕೆ ನೀಡಿದ ಒಂದು ವಾರದ ಹಿಂದೆಯಷ್ಟೇ ಹಾವೇರಿ ಗೋಲಿಬಾರ್ ನಡೆದಿದೆ. ತನ್ನ ಖಾತೆಯ ಬಗ್ಗೆ ಬದ್ದತೆ ಇರುವ ಮಂತ್ರಿಯೊಬ್ಬರಿಗೆ ಮಾಹಿತಿಯನ್ನು ಪಡೆದುಕೊಳ್ಳಲು, ಪರಿಸ್ಥಿತಿಯನ್ನು ಅವಲೋಕಿಸಲು ಇಷ್ಟು ಕಾಲವಕಾಶ ಸಾಕು.ಇಂತಹದ್ದೊಂದು ಸಂದಿಗ್ಧಸ್ಥಿತಿಯಲ್ಲೇ ನಮಗೆ ಅರಿವಾಗುವುದು: ಕೃಷಿಕ್ಷೇತ್ರದ ಸಮಸ್ಯೆಗಳ ಆಳ-ಅರಿವು ಹೊಂದಿರುವ ವ್ಯಕ್ತಿಯೇ ಕೃಷಿ ಮಂತ್ರಿಯಾಗಿರಬೇಕೆಂದು. ಆದರೆ ನಮ್ಮ ದೇಶದ ಇತಿಹಾಸದಲ್ಲೇ ಶರದ್ ಪವಾರ್ ಒಬ್ಬರನ್ನು ಬಿಟ್ಟರೆ ಕೃಷಿ ಖಾತೆ ತನಗೇ ಬೇಕೆಂದು ಕೇಳಿ ಪಡೆದುಕೊಂಡ ಉದಾಹರಣೆ ಇಲ್ಲ. ಯಾಕೆಂದರೆ ಅದರಲ್ಲಿ ಯಾವುದೇ ಪಾಯಿದೆ ಇಲ್ಲ. ರೈತರ ಸಮಸ್ಯೆಗಳನ್ನೇ ಓಟು ಬ್ಯಾಂಕ್ ಗಳನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಮಣ್ಣಿನ ಮಕ್ಕಳಿಗೆ ಕಂದಾಯ, ಗಣಿ, ಕೈಗರಿಕೆ, ಲೋಕೋಪಯೋಗಿ,, ಬೆಂಗಳೂರು ನಗರಾಭಿವದ್ಧಿ ಖಾತೆಗಳೇ ಬೇಕು. ಜನಸೇವೆಗೆ ಇದುವೇ ಮೋಕ್ಷಪಥ!ನಮಗೆ ಗೊತ್ತಿದೆ, ಮುಕ್ತ ಅರ್ಥಿಕ ನೀತಿಯಿಂದಾಗಿ ನಮ್ಮ ರೈತ ಅಭಿವ್ರದ್ಧಿಶಿಲ ದೇಶಗಳ ರೈತರೊಡನೆ ನೇರ ಸ್ಪರ್ದೆಯನ್ನು ಎದುರಿಸಬೇಕಾಗಿದೆ. ಅಂದರೆ ಮಾರುಕಟ್ಟೆಯಲ್ಲಿ ಅಸ್ಟೇಲಿಯದ ಸೇಬು, ಅಮೇರಿಕದ ಗೋದಿ, ಚೀನಾದ ರೇಶ್ಮೆ ಇತ್ಯಾದಿಗಳ ಜೊತೆ ನಮ್ಮ ರೈತ ಪೈಪೋಟಿ ಎದುರಿಸಬೇಕಾಗಿದೆ. ಅಲ್ಲಿ ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಸಿಕ್ಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ.ಹಾಗಾಗಿ ವಿದೇಶಿ ಉತ್ಪನ್ನಗಳು ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಜನ ಅದಕ್ಕೆ ಮುಗಿಬೀಳುತ್ತಾರೆ. ನಮ್ಮ ರೈತ ಏನು ಮಾಡಬೇಕು? ಇಲ್ಲಿ ಸರಕಾರ ’ತಾಯಿ’ಯ ಹಾಗೆ ವರ್ತಿಸಬೇಕು. ದುರ್ಬಲರಿಗೆ ವಿಶೇಶ ಕಾಳಜಿ ಅಗತ್ಯ. ವಿಶ್ವಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ: ರೈತರಿಗೆ ಯಾವುದೇ ತೆರನಾದ ಸಬ್ಸಿಡಿ ನಿಡಬಾರದು. ಇದು ಸರಕಾರಕ್ಕೂ ಗೊತ್ತಿದೆ ಹಾಗಗಿಯೇ ಒಬ್ಬೊಬ್ಬ ಸಚಿವರು ಬಿನ್ನ ಭಿನ್ನ ಹೇಳಿಕೆ ನಿಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಜಾರಿಯಲ್ಲಿ ತರುವುದು ಕಷ್ಟವೆಂದು ಅವರಿಗೂ ಗೊತ್ತಿದೆ. ನಮ್ಮದು ಕೃಷಿಪ್ರಧಾನ ದೇಶ. ಇಲ್ಲಿಯ ಶೇ. ೭೦ರಷ್ಟು ಜನ ಕೃಷಿಕರು. ಹಾಗಾಗಿ ಕ್ರಷಿಕ್ಷೇತ್ರವನ್ನು ಗಂಬೀರ್‍ಅವಾಗಿ ಪರಿಗಣಿಸಬೇಕಾಗಿದೆ. ಈ ದೇಶಕ್ಕೊಂದು ಬಜೆಟ್ ಇದೆ.ಸಂಪರ್ಕಾಕ್ರಾಂತಿಯ ಹೆಸರಿನಲ್ಲಿ ಬ್ರಿಟೀಶರ ಕುರುಹಾಗಿ ಉಳಿದುಕೊಂಡಿರುವ ಪ್ರತ್ಯೇಕ ರೈಲ್ವೆ ಬಜೆಟ್ ಇದೆ. ಆದರೆ ಬಹುಸಂಖ್ಯಾತ ಜನರನ್ನು ಪ್ರತಿನಿಧಿಸುವ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ [ಲ್ಲ. ಅದು ಇಂದಿನ ಅವಸ್ಯಕತೆಯಾಗಿದೆ. ಹಣಕಾಸು ಸಚಿವರು, ರೈಲ್ವೆ ಸಚಿವರು ಬ್ರ್‍ಈಫ್ ಕೇಸ್ ಹಿಡಿದು ಸಂಶತ್ ಪ್ರವೇಶಿಸಿ ಬಜೆಟ್ ಮಂಡಿಸುವುದನ್ನೇ ಜನ ಕಾತರದಿಂದ ಕಾಯುತ್ತಾರೆ. ಆ ಯೋಗ್ಯತೆ ಕೃಷಿ ಸಚಿವರಿಗೆ ಬರಬೇಕಾಗಿದೆ.ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಿಂದ ಏನಾಗುತ್ತದೆ? ’ನಿಮ್ಮೊಡನೆ ನಾವಿದ್ದೇವೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ’ ಎಂಬ ಸ್ಪಷ್ಟ ಸಂದೇಶವನ್ನು ಸರಕಾರ ರವಾನಿಸಿದಂತಾಗುತ್ತದೆ. ಮುಖ್ಯವಾಗಿ ಆಖಾತೆಗೊಂದು ಗೌರವ ಬರುತ್ತದೆ.ಅದರ ತೂಕ ಹೆಚ್ಚುತ್ತದೆ. ತಮ್ಮನ್ನು ಗಂಭೀರವಾಗಿ ಪರಿಗಣಿಸಿದ್ದಾರೆ,ಆಡಳಿತ ಯಂತ್ರದಲ್ಲಿ ತಾವೂ ಕೂಡ ಪಾಲುದಾರರು ಎಂದು ಕೃಷಿಕ ಹೆಮ್ಮೆ ಪಡುತ್ತನೆ.ಅವನ ಆತ್ಮವಿಶ್ವಾಸ ಹೆಚ್ಚುತ್ತದೆ. ಕೃಷಿ ಬಜೆಟ್ ಇಂದಿನ ತುರ್ತು ಅವಸ್ಯಕತೆ. ದೊಡ್ಡ ಸಮುಹದ ದೊಡ್ಡ ಜವಾಬ್ದಾರಿ ಕೃಷಿ ಸಚಿವರ ಹೆಗಲ ಮೇಲಿದೆ. ಅವರು ಅನಿರ್ವಾಯವಾಗಿ ಬುದ್ಧಿ ಮತ್ತು ಹ್ರದಯದ ಮಧ್ಯೆ ಸಮನ್ವಯ ಸಾಧಿಸಲೇಬೇಕಾಗುತ್ತದೆ. ಕೆಲಸ ಮಡಲೇಬೇಕಾಗುತ್ತದೆ.ಪರಿಣಿತರ ಜೊತೆ ಚರ್ಚೆ,ಸಂವಾದ,ಅಧ್ಯಯನ ನಡೆಸಲೇ ಬೇಕು ಕೃಷಿ ಬಜೆಟ್ ಎರಡು ಹಂತಗಳಲ್ಲಿ ಜೊತೆ ಜೊತೆಯಾಗಿ ಜಾರಿಗೆ ಬರಬೇಕು ಮೊದಲನೆಯದಾಗಿ ರೈತರನ್ನು ಎಜ್ಯುಕೇಟ್ ಮಾಡುವುದು.ಅಂದರೆ ಅವರನ್ನು ವ್ರತ್ತಿಪರ ಬ್ಯುಸಿನೆಸ್ ಮೆನ್ ಆಗಿ ಪರಿವರ್ತಿಸುವುದು. ಪರಂಪರಾಗತವಾಗಿ ಆತನನ್ನು ಅನ್ನದಾತ,ನೇಗಿಲಯೋಗಿ, ದೇಶದ ಬೆನ್ನೆಲುಬು ಎಂದೆಲ್ಲ ಕರೆಯಲಾಗುತ್ತಿತ್ತು.ಆಗ ಅದು ಆತನ ತ್ಯಾಗ,ಸೇವೆ, ಸಹನೆಗೆ ಸಂದ ಮನ್ನಣೆಯಾಗಿತ್ತು. ಆದರೆ ಈಗ ಅದರಲ್ಲಿ ವ್ಯಂಗ್ಯ ಧ್ವನಿಸುತ್ತದೆ. ಹಿಂದಿನಿಂದಲೂ ನಮ್ಮ ರೈತ ಸ್ವಾವಲಂಬಿ.ಆತ ಬೀಜ, ಗೊಬ್ಬರ, ಕೀಟನಾಶಕಔಷಧಿ, ನೀರು, ದುಡ್ಡು ಯಾವುದಕ್ಕೂ ಯಾರನ್ನೂ ಅವಲಂಬಿಸಿದವನಲ್ಲ ಪ್ರತಿ ರೈತ ಒಬ್ಬ ಕೃಷಿ ವಿಜ್ನಾನಿಯೇ. ಆತನಿಗೆ ತನ್ನ ಜಮಿನೇ ಪ್ರಯೋಗಶಾಲೆ. ಹಾಗಾಗಿ ಅಕ್ಕ ಪಕ್ಕದ ಮನೆಗಳಲ್ಲೂ ಭಿನ್ನ ಭಿನ್ನವಾದ ಕೃಷಿ ಪದ್ದತಿಯಿತ್ತು. ರೈತ ಪ್ರಯೋಗಗಳಿಗೆ ಮುಕ್ತಮನಸ್ಸುಳ್ಳವನಾಗಿದ್ದನೆ ಎಂಬುದಕ್ಕೆ ಪಾಳೇಕರ್ ಮಾದರಿ ಕೃಷಿ ವಿಧಾನಕ್ಕೆ ಜನ ಮುಗಿಬೀಳುತ್ತಿರುವುದೇ ಸಾಕ್ಷಿಯಾಗಿದೆ. ಎರಡು ನಾಟಿದನವಿದ್ದರೆ ಸಾಕು, ಕೃಷಿ ತ್ಯಾಜ್ಯವನ್ನೇ ಬಳಸಿ ಅತ್ಯುತ್ತಮ ಫಸಲು ತೆಗೆಯಬಹುದು.ಇಂತಹ ಸಾವಯವ ಕೃಷಿ ಉತ್ಪನ್ನಗಳನ್ನು ಕೊಳ್ಳುವಂತೆ ’ಗ್ರಾಹಕ ಜಾಗ್ರತಿ’ ಆಂದೋಲನವನ್ನು ಹಮ್ಮಿಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆದ ಉತ್ಪನ್ನಗಳಿಗೂ ಇರುವ ವ್ಯತ್ಯಾಸವನ್ನು ಜನರಿಗೆ ತಿಳಿಸಿಕೊಡಬೇಕು. ಕಾರ್ಗಿಲ್,ಕೆಂಟಕಿ,ರಿಲೆಯನ್ಸ್ ಜೊತೆಗೆ ಸ್ಪರ್ದೆ ನೀಡುವಂತೆ ನಮ್ಮ ರೈತರನ್ನು ತಯಾರು ಮಾಡಬೇಕು. ಆರೋಗ್ಯ ಕಾಳಜಿ ಎನ್ನುವುದು ನಗರಸಂಸ್ಕ್ರತಿಯ ಇತ್ತೀಚೆಗಿನ ಗೀಳು. ಹಾಗಾಗಿ ಸಾವಯವ ಉತ್ಪನಗಳಿಗೆ ಭವಿಷ್ಯ ಇದ್ದೇಇದೆ. ಎರಡನೆಯದಾಗಿ ಮಾರುಕಟ್ಟೆ ವಿಭಾಗ. ಮೊತ್ತಮೊದಲನೆಯದಾಗಿ ದಲ್ಲಾಳಿಗಳನ್ನು,ಮಧ್ಯವರ್ತಿಗಳನ್ನು ದೂರವಿಡಬೇಕು ಎ.ಪಿ.ಎಮ್.ಸಿಯಲ್ಲಾದ ವೈಪಲ್ಯಗಳು ಇಲ್ಲಿ ಮರುಕಳಿಸಬಾರದು. ಸರಕಾರವೇ ಮಧ್ಯೆ ಪ್ರವೇಶಿಸಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಅದಕ್ಕಾಗಿ ಬಹಳ ವ್ಯವಸ್ಥಿತವಾದ ಮಾರುಕಟ್ಟೆ ಜಾಲವನ್ನು ನೇಯಬೇಕಾಗುತ್ತದೆ. ಅದು ಬಹಳ ದೊಡ್ಡಮಟ್ಟದ ಉದ್ಯೋಗಸ್ರಷ್ಟಿಗೂಕಾರಣವಾಗುತ್ತದೆ. ಕೃಷಿ ಪಧವಿದರರನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದು. ರೈತರ ಬಗ್ಗೆ ನಿಜವಾದ ಕಾಳಜಿ ಇರುವ ಚಿಂತಕರು, ಸಮಾಜ ಸೇವಕರು,ರೈತಮುಖಂಡರ ದೊಡ್ಡ ಪಡೆಯೇ ಇದೆ. ಅವರನ್ನು ಇದರ ಗೌರವ ಕಣ್ಗಾವಲು ಪಡೆಯನ್ನಾಗಿ ನೇಮಿಸಿಕೊಳ್ಳಬಹುದು. ಇದರ ಜೊತೆಗೆ ಮೌಲ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ [ನಂದಿನಿ ಉತ್ಪನ್ನಗಳಂತೆ] ಸರಕಾರವೇ ನೇರವಾಗಿ ಭಾಗಿಯಾಗಬೇಕು. ಟೊಮೇಟವನ್ನು ರಸ್ತೆಗೆ ಸುರಿಯುವುದರ ಬದಲು ಕೆಚಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿ. ಕೊಲ್ಡ್ ಸ್ಟೊರೇಜ್ ಗಳನ್ನು ಹೆಚ್ಚಿಸಲಿ. ಇದರ ಜೊತೆಗೆ ರೈತರಿಗೆ ಕೆಲವು ಸೇವೆಗಳನ್ನು ಸರಕಾರ ಒದಗಿಸಬೇಕು. ರಾಜಕಾರಣಿಗಳಿಗೆ ವಿಧಾನಸೌಧ ಇದೆ,ಶಾಸಕರ ಭವನ ಇದೆ. ಅಧಿಕಾರಶಾಹಿಗಳಿಗೆ ವಿಕಾಸಸೌಧ ಇದೆ. ಬಹುಮಹಡಿ ಕಟ್ಟಡ ಇದೆ. ರೈತರಿಗೆ ಏನಿದೆ? ಬೆಂಗಳೂರಿನಲ್ಲಿ ಒಂದು ರೈತಭವನದ ಅವಸ್ಯಕತೆ ಇದೆ. ಎಲ್ಲಾ ಜಿಲ್ಲೆಗಳ ರೈತರೂ ಇಲ್ಲಿ ಬಂದು ನಿರ್ಧಿಷ್ಟ ಅವಧಿಗೆ ತಂಗುವ ವ್ಯವಸ್ಥೆಯಿರಲಿ. ಪ್ರತಿ ಜಿಲ್ಲೆಯ ಬೆಳೆ ವೈವಿದ್ಯತೆಯನ್ನು ತೋರಿಸುವ ಎಕ್ಸ್ ಭಿಷನ್ , ಭಿತ್ತಿಚಿತ್ರಗಳ ಡಿಸ್ ಪ್ಲೇ ಇರಲಿ. ಗುಲ್ಬರ್ಗ ಜಿಲ್ಲೆಯ ಕೃಷಿ ಅನುಭವವನ್ನು ಮೈಸುರು ಜಿಲ್ಲೆಯ ರೈತ ಹಂಚಿಕೊಳ್ಳಲಿ. ಹಾಗೆ ಮಾಡುವುದರಿಂದ ಬಾಂಧವ್ಯ ಬೆಳೆಯುತ್ತದೆ. ಕಾವೇರಿ-ಕ್ರಷ್ಣೆಯರು ಒಂದಾಗುತ್ತಾರೆ. ಅದರಲ್ಲೊಂದು ಸೆಮಿನಾರ್ ಹಾಲ್ ಇರಲಿ. ನಿರಂತರ ಚರ್ಚಗೋಷ್ಟಿಗಳು, ಸಂವಾದಗಳು ಅಲ್ಲಿ ನಡೆಯುತ್ತಿರಲಿ. ದೇಶದ ಎಲ್ಲಾ ಭಾಗದ ರೈತರು ಅಲ್ಲಿ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲಿ. ಕೆ.ಎ.ಎಸ್ ಗ್ರೇಡಿನ ಅಧಿಕಾರಿಯೊಬ್ಬರು ಅದರ ಉಸ್ತುವಾರಿ ನೋಡಿಕೊಳ್ಳಲಿ. ಇಷ್ಟನ್ನು ಮಾಡಿಕೊಟ್ಟರೂ ಸಾಕು ರೈತ ಖುಷಿ ಪಡುತ್ತಾನೆ. ’ರೈತಭವನ’ ತನ್ನದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅರುವತ್ತು ವರ್ಷ ಮೆಲ್ಪಟ್ಟ ರೈತನಿಗೆ ಮಾಶಾಸನ ಕೊಡುತ್ತದೆಯೆಂದು ಸರಕಾರ ಪ್ರಕಟಿಸಿದೆ. ಅದರ ಜೊತೆಗೆ ಎಲ್.ಟಿಸಿ ಸೌಲಭ್ಯ ದೊರಕಲಿ. ಇತ್ತೀಚೆಗೆ ಕೃಷಿಭೂಮಿಯಲ್ಲಿ ಉತ್ಪಾದನೆ ಕುಂಟಿತಗೊಂಡಿದೆ. ಮುಂದಿನ ದಿನಗಳಲ್ಲಿ ;ಆಹಾರ ಬಧ್ರತೆ’ ಎಂಬುದು ದೊಡ್ಡ ಸವಲಾಗಿ ಕಾಡಲಿದೆ. ಹಾಗಾಗಿ ಕೃಷಿಕ್ಶೇತ್ರವನ್ನು ’ಇಂಡಸ್ಟ್ರಿ’ ಎಂದು ಪರಿಗಣಿಸಿ, ಕೈಗಾರಿಕೆಗೆ ಕೊಡುವಎಲ್ಲ ಸವಲತ್ತುಗಳನ್ನು ನೀಡಿ ಕುಟುಂಬವನ್ನು ಕೈಗಾರಿಕೆಯ ಕನಿಷ್ಟ ಘಟಕ ಎಂದು ಘೋಷಿಸಬೇಕು,ಕ್ರಷಿಯಲ್ಲಿ ಮಾತ್ರ ಆಹಾರ ಬಧ್ರತೆ ಮತ್ತು ಉದ್ಯೋಗ ಬಧ್ರತೆ ಎರಡೂ ಇದೆ. ಈ ಸ್ವಾವಲಂಬಿ ಕ್ಷೇತ್ರವನ್ನು ಸ್ವಲ್ಪ ಒತ್ತು ಕೊಟ್ಟು ಮೇಲೆತ್ತಿದರೆ ನಮ್ಮ ರೈತರ ಹಸಿರು ಶಾಲು ಕುತ್ತಿಗೆಗೆ ಕುಣಿಕೆಯಾಗುವುದರ ಬದಲು ಯಶಸ್ಸಿನ ಪತಾಕೆಯಗುತ್ತದೆ ಎಂದು ರೈತ ಮುಖಂಡರಾದ ಕೆ.ಟಿ.ಗಂಗಾಧರ್ ಹೇಳುತ್ತಾರೆ. ಪ್ರೋ.ನಂಜುಂಡಸ್ವಾಮಿಯವರು ರೈತ ನಾಯಕರು ವಿದಾನಸಭೆಯೊಳಗೆ ಕುಳಿತುಕೊಳ್ಳುವ ಕನಸು ಕಂಡಿದ್ದರು . ನಾವು ಕೃಷಿಗೆ ಸ್ವಾಯತ್ತತೆ ಬರುವ ಕನಸನ್ನು ಕಾಣುತ್ತಿದ್ದೇವೆ. ನಮ್ಮ ಕೃಷಿ ಸಚಿವರು ಕೃಷಿ ಬಜೇಟ್ ನ ಬ್ರೀಫ್ ಕೇಸ್ ಹಿಡಿದು ವಿದಾನಸೌಧದ ಮೆಟ್ಟಲುಗಳನ್ನೆರುವ ಕನಸು ಕಾಣುತ್ತಿದ್ದೇವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಅದನ್ನು ನನಸು ಮಾಡಲಿ.
{ಪ್ರಮುಖ ದಿನಪತ್ರಿಕೆಗಳು ಈ ಲೀಖನವನ್ನು ಪ್ರಕಟಿಸಲಿಲ್ಲ. ಹಾಗಾಗಿ ಇಲ್ಲಿ ಪ್ರಕಟವಾಗಿದೆ.}

Friday, July 11, 2008

..........ಮತ್ತೆ ಜಾರಿದಳು

ಪದ್ಮಪ್ರಿಯಳ ಆತ್ಮಹತ್ಯೆಕೊಲೆ ಇರಬಹುದೆ? ಹಾಗೆ ಗುಮಾನಿ ಪಡಲು ಸಾಕಷ್ಟು ಕಾರಣಗಳಿವೆ. ಒಂದು ವೇಳೆ ಅದು ಆತ್ಮಹತ್ಯೆಯೇ ಆದರೂ ಅದು ವ್ಯವಸ್ಥಿತವಾಗಿ ನಡೆಸಿದ ಕೊಲೆ!

 ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ, ಮಾಧ್ಯಮ ಎಲ್ಲವೂ ಕೂಡ ಪುರುಷಪ್ರಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಟೊಂಕ ಕಟ್ಟಿ ನಿಂತಿವೆ. ಸ್ಸುಧಾ, ವಿಕ್ರಾಂತ ಕರ್ನಾಟಕದಂತ ಕೆಲವೇ ನಿಯತಕಾಲಿಕಗಳು ಮಾತ್ರ ಆದಷ್ಟು ಗಂಭೀರವಾದ ಲೇಖನಗಳನ್ನು ಪ್ರಕಟಿಸಿವೆ. ಡೆಕ್ಕನ್ ಹೆರಾಲ್ಡ್ ಹಿಂದು,ಪ್ರಜಾವಾಣಿ ದಿನಪತ್ರಿಕೆಗಳು ವ್ರತ್ತಿಪರತೆ ತೋರಿಸಿವೆ. ಟ್ಯಾಬ್ಲಾಯ್ಡ್ ಗಳೆಲ್ಲ ಗೋಸುಂಬೆಗಳು. ಅನುಕೂಲಕ್ಕೆ ತಕ್ಕಂತೆ ಯಾವ ಬಣ್ಣ ಬೇಕಾದರೂ ತಳೆಯಬಲ್ಲವು.

 ನನ್ನನ್ನು ತುಂಬಾ ಕಾಡಿದ್ದು, ಕನ್ನಡಪ್ರಭದ ’ಸಖಿ’ ಪುರವಣಿಯಲ್ಲಿ ಗಿರಿಶ್ ರಾವ್ ಬರೆದ ’ಮತ್ತೆ ಜಾರಿದಳು ಅಮ್ರತಮತಿ’ ಲೇಖನ ನನ್ನ ಹಾಗೆ ಹಲವಾರು ಮಂದಿಯನ್ನು ಈ ಲೇಖನ ಡಿಸ್ಟರ್ಬ್ ಮಾಡಿದೆ. ಲೇಖನದ ಆಶಯದ ಬಗ್ಗೆ ಅಂತಹ ತಕರಾರು ಇಲ್ಲ. ಒಬ್ಬ ಪುರುಷ ಯೋಚಿಸುವ ಧಾಟಿಯಲ್ಲೇ ಇದೆ ಅದು. ಆದರೆ ಶಿರ್ಷೀಕೆ.....? ’ಮತ್ತೆ ಜಾರಿದಳು’ ಅಂದ್ರೆ ಏನರ್ಥ? ಈಗಿರುವ ಸ್ಥಿತಿಯಿಂದ ಹೀನ ಸ್ಥಿತಿ ತಲುಪುವುದು. ಔನತ್ಯದಿಂದ ಪತನದೆಡೆಗೆ ಜಾರುವುದು.
ಪದ್ಮಪ್ರಿಯ ’ಗ್ರಹಸ್ವಾಮಿನಿ’ಯ ಪಟ್ಟದಿಂದ ಜಾರತ್ವದ ಕಡೆಗೆ ಜಾರಿ ಜಾರಿಣಿಯಾದಳೆ? ಆಕೆ ಜಾರಿಣೆಯಾದಳು ಎಂದು ಹೇಗೆ ಹೇಳುತ್ತಿರಿ? ಯಾವ ಆಧಾರ ಇದೆ? ’ನಾ ಮುಡಿದ ಮಲ್ಲಿಗೆ ಅವಳೊಂದು ಘಳಿಗೆ ಮುಡಿಯಲಿ’ ಎಂದು ಹಾರೈಸಿದರೆ ಆಕೆ ಸತೀಮಣಿ ಆತ ರಸಿಕ. ಪೌರುಷವಂತ. ಆಕೆಯ ಮನಸ್ಸು ಸ್ವಲ್ಪ ಚಂಚಲಗೊಂಡರೂ ಅವಳು ಕಳಂಕಿನಿ! ಸಿತಾಮಾತೆಯನ್ನು ಕೂಡ ’ಕಳಂಕಿನಿ’ ಎಂದು ಕರೆದವರಿದ್ರು. ಗರ್ಬಿಣಿಯನ್ನು ಕಾಡಿಗೆ ಅಟ್ಟಿ ಅಲ್ಲಿ ಮಕ್ಕಳನ್ನು ಹಡೆದು ಮತ್ತೆ ನಾಡಿಗೆ ಹಿಂದಿರುವಾಗಲೂ ಮತ್ತೊಮ್ಮೆ ಅಗ್ನಿಪರೀಕ್ಷೆ. ಅವಮಾನದಿಂದ ಬೆಂದು ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಉತ್ತರಪ್ರದೇಶದಲ್ಲಿರುವ ’ಸೀತಾಮಡಿ’ ಎಂಬ ಈ ಜಾಗವನ್ನು ನಾನು ನೋಡಿದ್ದೇನೆ. ಅದು ಹಿಂದೆ ವಿಶಾಲವಾದ ಕೆರೆಯಾಗಿದ್ದಿರಬೇಕು. ಕೆರೆಯ ಮಧ್ಯೆ ಸೀತೆಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಇಳಿದು ಹೋಗಬೇಕು. ಜನವಸತಿಯಿಲ್ಲದ ಆ ಭಾಗದಲ್ಲಿ ಅಪಾರ ಸಂಖ್ಯೆಯ ನವಿಲುಗಳಿವೆ. ಆ ಜಾಗ ನೋಡಿದರೆ ಸೀತೆಕೆರೆಗೆ ಹಾರಿ ಆತ್ಮಹತ್ಯೆಮಾದಿಕೊಂಡಿರಬೇಕು ಆನ್ನಿಸುತ್ತದೆ. ಮಾನಕ್ಕೆ ಅಂಜುವವರು ಮಾನಿನಿಯರು ತಾನೆ? ಭಯವಾಗುತ್ತಿದೆ ಗಂಡಂದಿರ ಬಗ್ಗೆ.

ಗಂಡಸರಿಗೆ ಹೆಂಗಸರ ಬಗ್ಗೆ ಆಕರ್ಷಣೆ ಇದೆ; ಕುತೂಹಲ ಇದೆ; ಮೋಹ ಇದೆ. ಆದರೆ ಕಾಳಜಿ ಇಲ್ಲ. ಅದು ಅವರ ಜೀನ್ಸ್ ನಲ್ಲಿ ಪ್ರೋಗ್ರಾಮ್ ಅಗಿಲ್ಲ. ಆಕರ್ಷಣೆ, ಕುತೂಹಲ’ ಮೋಹ ತಗ್ಗಿದ ಮೇಲೆ ಉಳಿಯುವುದೇನು? ಏನೂ ಇಲ್ಲ. ಎಲ್ಲಾ ಉಪಭೋಗ ವಸ್ತುಗಳಂತೆ ಆಕೆಯೂ ಒಂದು. ಅದು ಒಂದು ದಿನ ಹಳೆಯದಾಗುತ್ತದೆ. ಮೂಲೆ ಸೇರುತ್ತದೆ.

 ಬಹುತೇಕ ಎಲ್ಲಾ ಹೆಂಡತಿಯರಿಗೆ ಗಂಡನ ಬಗ್ಗೆ ಅಸಮಾಧಾನ ಇದ್ದೇ ಇರುತ್ತದೆ. ಯಾಕೆಂದರೆ ಪುರುಷರು ಕುಟುಂಬದ ವಿಚಾರದಲ್ಲಿ ಮೂಲತ: ಆಲಸಿಗರೂ. ಬೇಜವಾಬ್ದಾರಿಗಳೂ ಆಗಿರುತ್ತಾರೆ. ಅದರೆ ಅದಕ್ಕೊಂದು ಮಿತಿ ಅನ್ನುವುದು ಇರಬೇಕಲ್ಲ. ಆ ಮಿತಿ ದಾಟಿದಾಗ ಆಕೆ ಪ್ಯಾರಲಲ್ ಐಡೆಂಟಿಟಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಗಂಡನ ಯಶಸ್ಸಿನ ಆರಮನೆಗೆ ಎಷ್ಟು ದಿನ ಮೆಟ್ಟಲಾಗಿರಲು ಸಾಧ್ಯ? ನಿಮ್ಮ ’ಅಹಂ’ ತಣಿಸಿಕೊಳ್ಳುವುದಕ್ಕಾಗಿ ದುಡಿಯುತ್ತೀರಿ...ದುಡ್ಡು ಗುಡ್ಡೆ ಹಾಕಿಕೊಳ್ಳುತ್ತೀರಿ....ಸ್ಥಾನ ಮಾನ ಪಡೆಯುತ್ತೀರಿ. ಅದನ್ನೆಲ್ಲ ಕಾಪಾಡುವ, ಕಾವಲುಗಾರಳೇ ಮಡದಿ ? ಇತ್ತೀಚೆಗಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ಮದುವೆಯೆಂಬ ಕಾನ್ಸೆಪ್ಟ್ ಬಗ್ಗೆಯೇ ಭಯವಾಗುತ್ತಿದೆ.

 ಹೌದು ಸ್ವಾಮಿ, ನಾವು ಅಮ್ರತಮತಿಯ ಹಾದಿಯಲ್ಲಿದ್ದೇವೆ. ನೀವ್ಯಾಕೆ ಯಶೋಧರರಾಗಬಾರದು? ಮಾರಿದತ್ತರಾಗುತ್ತೀರೇಕೆ? ಯಶೋಧರ ಚರಿತೆ’ ಯಲ್ಲಿ ಆತನೂ ಬದಲಾಗುತ್ತಾನೆ. ನೀವ್ಯಾಕೆ ಬದಲಾಗಬಾರದು? ;ತನಗೆ ಸಿಗಲಾರದ್ದು ಯರಿಗೂ ಸಿಗಬಾರದು’ ಎಂದು ಯಾಕೆ ಕೊಲೆ ಮಾಡುತ್ತೀರಿ? ಅಸಿಡ್ ಹಾಕುತ್ತೀರಿ?ಪ್ರತಿ ಪುರುಷನ ಅಂತರಂಗದಲ್ಲಿ ಒಬ್ಬ ’ಜಾರ ಕ್ರ್‍ಅಷ್ಣ’ನಿರುತ್ತಾನೆ ಹಾಗೆಯೇ ಪ್ರತಿ ಸ್ತ್ರಿಯ ಅಂತರಂಗದಲ್ಲಿ ’ಅಮ್ರತಮತಿ’ ಇರುತ್ತಾಳೆ. ಅದು ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ಆದರೆ ’ಸಂಯಮ’ ಎಂಬುದು ಎಲ್ಲರನ್ನೂ ಹದ್ದುಬಸ್ತಿನಲ್ಲಿಡುತ್ತದೆ; ಕಾಪಾಡುತ್ತದೆ: ಕಾಪಾಡಬೇಕು. ಅದು ನಾಗರಿಕ ಸಮಾಜದ ಲಕ್ಷಣ.