Monday, February 28, 2011

ಹೇಮಳನ್ನು ’ದಡ್ಡಿ’ಯನ್ನಾಗಿ ಮಾಡಿದ್ದು ಯಾರು?




ಪತ್ರಿಕಾರಂಗ ಹೀಗಾಗಿ ಹೋಯ್ತಲ್ಲಾ... ಎಂದು ವ್ಯಥೆಪಡುತ್ತಿರುವ ಹೊತ್ತಿನಲ್ಲೇ ಮಾರ್ಚ್ ೩ರಂದು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಮಾಲಿನಿಯನ್ನು ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾಗಿರುವ ಧನಂಜಯಕುಮಾರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಹೈಕಮಾಂಡ್ ತನ್ನ ಅಬ್ಯರ್ಥಿ ಹೇಮಮಾಲಿನಿಯ ಹೆಸರನ್ನು ರಾಜ್ಯದ ಮೇಲೆ ಹೇರಿದೆ.

ಇದು ಬಿಜೆಪಿಯ ಆಂತರಿಕ ಭಿನ್ನಮತದ ಒಂದು ಝಳಕ್. ಅದು ನಮಗೆ ಬೇಕಾಗಿಲ್ಲ. ನಮ್ಮ ಮುಂದಿರುವ ಪ್ರಶ್ನೆ; ಆರು ಕೋಟಿ ಜನಸಂಖ್ಯೆಯಿರುವ ನಮ್ಮ ರಾಜ್ಯದಲ್ಲಿ ಒಬ್ಬ ಕನ್ನಡಿಗನಿಗೂ ಈ ಯೋಗ್ಯತೆಯಿರಲಿಲ್ಲವೇ?
ಕನ್ನಡನಾಡಿಗೆ ಇಷ್ಟೊಂದು ಬೌದ್ಧಿಕ ದಾರಿದ್ರ್ಯ ಅಡರಿದೆಯಾ? ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲೇ ಕನ್ನಡೇತರರೊಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ಕನ್ನಡ ನಾಡಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲವೇ? ಕನ್ನಡತನವೆಂಬುದು ಕೇವಲ ಉತ್ಸವಮೂರ್ತಿಯಾಗಿರಬೇಕೇ?

ವಿಧಾನಸಭೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಹೇಮಮಾಲಿನಿ, ”ನನಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಎಲ್ಲವನ್ನೂ ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಡುವೆ” ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ.
ಅಂದರೆ ಅದರ ಅರ್ಥ ಸ್ಪಷ್ಟ; ಒಂದು, ಆಕೆಗೇ ಈ ಆಯ್ಕೆ ಅನಿರೀಕ್ಷಿತವಾಗಿರಬೇಕು. ಧನಂಜಯಕುಮಾರ್ ಅವರನ್ನು, ಆ ಮೂಲಕ ಮುಖ್ಯಮಂತ್ರಿಗಳನ್ನು ಉಪೇಕ್ಷಿಸಲು ಹೇಮಮಾಲೀನಿಯವರನ್ನು ಬಿಜೆಪಿ ಹೈಕಮಾಂಡ್ ಇಲ್ಲಿ ದಾಳವಾಗಿ ಬಳಸಿಕೊಂಡಿದೆ. ಇನ್ನೊಂದು, ಆಕೆಗೆ ತಾನು ಪ್ರತಿನಿಧಿಸಲಿರುವ ಸ್ಥಾನಮಹತ್ವದ ಅರಿವಿಲ್ಲದಿರುವುದು ಅಥವಾ ಸ್ಥಾನ ಗೌರವದ ಅರಿವಿದ್ದೂ ಅದರ ಬಗ್ಗೆ ಉಡಾಫೆಯ ಭಾವ ಪ್ರದರ್ಶಿಸಿರುವುದು.
ಯಾಕೆಂದರೆ ಯಾವನೇ ಒಬ್ಬ ಮನುಷ್ಯ ತಾನು ಒಂದು ಕಾರ್ಯವನ್ನು ಕೈಗೊಳ್ಳುವ ಮುನ್ನ ಫೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಕಾರ್ಯದ ಗಂಭೀರತೆಯನ್ನು ಹೊಂದಿಕೊಂಡು ಪೂರ್ವಸಿದ್ದತೆಯ ತಯಾರಿ ಇರುತ್ತದೆ. ಅದರೆ ಹೇಮಮಾಲಿನಿಯ ಮಾತುಗಳಲ್ಲಿ ಯಾವುದೇ ಪೂರ್ವಸಿದ್ದತೆಯ ಸುಳಿವೂ ಇರಲಿಲ್ಲ. ಆಕೆಗೆ ಕರ್ನಾಟಕ ಎಂದರೆ ಶೋಲೆ ಸಿನೇಮಾದ ಶೂಟಿಂಗ್ ನೆನಪುಗಳು ಮಾತ್ರ.

ಹೇಮಮಾಲಿನಿಗೆ ವಿಶ್ವಪ್ರಸಿದ್ಧವಾದ ಶ್ರೀಗಂಧ ನೆನಪಿಗೆ ಬರುವುದಿಲ್ಲ. ಕೋಲಾರದ ಚಿನ್ನದ ಗಣಿ ನೆನಪಾಗುವುದಿಲ್ಲ. ಮೈಸೂರು ದಸರಾ ನೆನಪಾಗುವುದಿಲ್ಲ. ಇತಿಹಾಸ ಪ್ರಸಿದ್ಧವಾದ ಹಂಪಿ ನೆನಪಾಗುವುದಿಲ್ಲ. ನಮ್ಮ ನಾಡಿನ ಜೀವನದಿಗಳಾದ ಕೃಷ್ಣೆ-ಕಾವೇರಿಯರು ನೆನಪಾಗುವುದಿಲ್ಲ. ಶ್ರೀಮಂತ ಕಲೆಯಾದ ಯಕ್ಷಗಾನವೂ ನೆನಪಾಗುವುದಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಇದು ಗೊತ್ತಿರಲೇಬೇಕು. ಗೊತ್ತಿಲ್ಲವಾದರೆ ಅವರಿಗೆ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಖಂಡಿತಾ ಇಲ್ಲ. ಏಕೆಂದರೆ ಇವೆಲ್ಲಾ ಭಾರತದ ಮಟ್ಟಿಗೆ ಹೆಮ್ಮೆ ತರುವ ಏಕಮೇವಾದ್ವೀತಿಯಾಗಳೇ. ಒಬ್ಬ ನೃತ್ಯಗಾತಿ ಹೇಮಮಾಲಿನಿಗೆ, ಒಬ್ಬ ಸಿನೇಮಾ ನಟಿ ಹೇಮಮಾಲಿನಿಗೆ ಇವುಗಳ ಅರಿವಿಲ್ಲದಿದ್ದರೂ ನಡೆದೀತು. ಆದರೆ ಸಂಸತ್ತಿನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಲಿರುವ ಒಬ್ಬ ರಾಜಕಾರಣಿಗೆ ಇದೆಲ್ಲದರ ಅರಿವಿರಲೇಬೇಕು. ಯಾಕೆಂದರೆ ನಾಳೆ ಇವುಗಳ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಇವರು ಇವುಗಳೆಲ್ಲದರ ಪರವಾಗಿ ಧ್ವನಿ ಎತ್ತಬೇಕು. ಅದು ಹೇಮಮಾಲಿನಿಯೆಂಬ ಉತ್ತರ ಭಾರತೀಯ ನಟಿಯಿಂದ ಸಾಧ್ಯವೇ?

ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಅನ್ಯ ರಾಜ್ಯದವರಾದ ರಾಜೀವ ಚಂದ್ರಶೇಖರ್, ವೆಂಕಯ್ಯನಾಯ್ಡು, ಕನ್ನಡದವರಾಗಿದ್ದೂ ಕನ್ನಡ ಮಾತಾಡದ ವಿಜಯಮಲ್ಯ ಇವರೆಲ್ಲರ ಜೊತೆ ಈಗ ಹೇಮಮಾಲಿನಿ ಸೇರಿಬಿಡುತ್ತಾರೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಒಟ್ಟು ಹನ್ನೆರಡು ಸ್ಥಾನಗಳಲ್ಲಿ ನಾಲ್ಕು ಜನರಿಗೆ ಕನ್ನಡವೇಬಾರದು.
ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ೨೪೫. ಅದರಲ್ಲಿ ೨೩೩ ಸದಸ್ಯರನ್ನು ಅಯಾಯ ರಾಜ್ಯಗಳ ವಿಧಾನ ಸಭ ಸದಸ್ಯರು ಆರಿಸಿ ಕಳುಹಿಸುತ್ತಾರೆ. ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ಸೀಟು ನಿಗದಿಗೊಳಿಸಲಾಗುತ್ತದೆ. ಕರ್ನಾಟಕಕ್ಕೆ ನಿಗದಿಗೊಳಿಸಲಾದ ಸೀಟು ೧೨. ಉಳಿದ ೧೨ ಸದಸ್ಯರನ್ನು ಕಲೆ, ಸಾಹಿತ್ಯ, ವಿಜ್ನಾನ, ಸಮಾಜ ಸೇವೆಯಂತಹ ಮಾನವಿಕ ಕ್ಷೇತ್ರಗಳಿಂದ ರಾಷ್ಟ್ರಪತಿಗಳೇ ನೇರ ನೇಮಕಾತಿ ಮಾಡುತ್ತಾರೆ. ಹಾಗೆ ನೇಮಕಗೊಂಡವರೇ ನಮ್ಮ ನೆಚ್ಚಿನ, ಹೆಮ್ಮೆಯ ರಂಗ ನಟಿ ಬಿ. ಜಯಶ್ರೀ ಅವರು.
ಹೀಗೆ ಇವರು ನಮ್ಮವರೆಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ, ಕನ್ನಡ ಸಂಸ್ಕೃತಿ ತಿಳಿಯದ ಸಂಸದರಿಂದ ನಮಗೇನು ಪ್ರಯೋಜನವಿದೆ?

ಈ ಪ್ರಶ್ನೆ ನಮ್ಮ ನಾಡಿನ ಬುದ್ಧಿಜೀವಿಗಳಲ್ಲಿ, ವಿಚಾರವಂತರಲ್ಲಿ, ಕನ್ನಡದ ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರಲ್ಲಿ ಮೂಡಿದೆ. ಅವರ ಸ್ವಾಭಿಮಾನ ಕೆರಳಿದೆ. ಹಾಗಾಗಿ ನಾಡಿನ ಚಿಂತಕರಲ್ಲಿ ಒಬ್ಬರಾದ ಕೆ. ಮರುಳಸಿದ್ದಪ್ಪನವರನ್ನು ಹೇಮಮಾಲಿನಿಯ ವಿರುದ್ಧ ಕಣಕ್ಕಿಳಿಸಲಾಗಿದೆ. ’ಕನಸಿನ ಕನ್ಯೆ’ಯ ಅವಿರೋಧ ಆಯ್ಕೆಯ ಲೆಖ್ಖಾಚಾರ ಹಾಕಿದ್ದ ಬಿಜೆಪಿಗೆ ಸಣ್ಣದೊಂದು ತಡೆಗೋಡೆಯನ್ನು ಈ ನಾಡಿನ ಪ್ರಜ್ನಾವಂತರು ಸೃಷ್ಟಿಸಿದ್ದಾರೆ. ಪ್ರತಿಪಕ್ಷಗಳು ಅವರನ್ನು ಬೆಂಬಲಿಸಿವೆ.

’ಹೇಮಮಾಲಿನಿ ರಾಷ್ಟ್ರೀಯ ಆಸ್ತಿ. ಅವರನ್ನು ಯಾವುದೇ ರಾಜ್ಯಕ್ಕೆ ಸೀಮಿತಗೊಳಿಸಬಾರದು’ ಎಂದು ಬಿ.ಜೆ.ಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಆ ಮಾತು ನಿಜ. ಆದರೆ..ರಾಜ್ಯಸಭಾ ಸದಸ್ಯತನವೆಂಬುದು ಕೇವಲ ಅಲಂಕಾರಿಕಾ ಹುದ್ದೆ ಅಲ್ವಲ್ಲಾ..

ನನಗೊಂದು ಕುತೂಹಲವಿದೆ; ಜಗತ್ತಿಗೇ ನೀತಿಪಾಠವನ್ನು ಹೇಳುತ್ತಿರುವ, ಸೋನಿಯಾರ ರಾಷ್ಟ್ರೀಯತೆಯನ್ನು ಉಗ್ರವಾಗಿ ಪ್ರಶ್ನಿಸಿದ , ಮತಾಂತರವನ್ನು ಸದಾ ವಿರೋಧಿಸುತ್ತಿರುವ ಬಿಜೆಪಿ ಹೇಮಮಾಲಿನಿಯನ್ನು ಹೇಗೆ ತನ್ನ ಅಬ್ಯರ್ಥಿಯನ್ನಾಗಿ ಆಯ್ಕೆ ಮಾಡಿತು? ಆಕೆ ದರ್ಮೇಂದ್ರನನ್ನು ಮದುವೆಯಾಗುವ ಸಂದರ್ಭದಲ್ಲಿ ಅವರಿಬ್ಬರೂ ಮುಸ್ಲಿಂ ದರ್ಮಕ್ಕೆ ಮತಾಂತರಗೊಂಡಿದ್ದರು. ಯಾಕೆಂದರೆ ಹಿಂದು ಧರ್ಮದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನೊಂದು ಅಸಕ್ತಿಕರ ವಿಷಯ ಗೊತ್ತಾ? ಹೇಮಮಾಲಿನಿಯನ್ನು ಸಂಜೀವ್ ಕುಮಾರ್ ನಂತೆ ಹಲವಾರು ಜನರು ಉನ್ಮತ್ತರಂತೆ ಪ್ರೀತಿಸಿರಬಹುದು. ಆದರೆ ಈ ಕನಸಿನ ಕನ್ಯೆ ಯಾರಿಗೆ ಮನಸೋತಿದ್ದಳು ಗೊತ್ತೆ? ನಮ್ಮ ಕನ್ನಡದ ರಂಗಕರ್ಮಿ, ಜ್ನಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ. ಆದರೆ ಕಾರ್ನಾಡ್ ಆಕೆಯ ಪ್ರಪೋಸಲ್ ಅನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಅದಾಗಲೇ ಕಾರ್ನಾಡ್ ಅವರಿಗೆ ಡಾ.ಸರಸ್ವತಿಯವರೊಡನೆ ಮದುವೆ ನಿಶ್ಚಯವಾಗಿತ್ತು. ಮೊನ್ನೆ ತಾನೇ ಈ ಸಂಗತಿಯನ್ನು ಯಾವುದೋ ಪೇಪರಿನಲ್ಲಿ ಓದಿದ ನೆನಪು.

’ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸ್ವಾತಿಕ ಹಿನ್ನೆಲೆಯಿಂದ ಸ್ಪರ್ಧಿಸುತ್ತಿದ್ದೇನೆ. ಸೋಲು ಗೆಲುವಿನ ಬಗ್ಗೆ ನನಗೆ ಚಿಂತೆ ಇಲ್ಲ.’ ಎಂದಿದ್ದಾರೆ ರಂಗಭೂಮಿಯ ಹಿನ್ನೆಲೆಯುಳ್ಳ, ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು.

ನಿಜ. ತೋಳ್ಬಲ, ಹಣಬಲದ ರಾಜಕೀಯದ ಮುಂದೆ ಸ್ವಾತಿಕ ಹಿನ್ನೆಲೆಯ ಸಜ್ಜನನೊಬ್ಬ ಗೆಲ್ಲುವುದು ಕಷ್ಟ. ಪ್ರಗತಿಪರ ವಿಚಾರಧಾರೆಯ ಮರುಳಸಿದ್ದಪ್ಪನವರ ಬಂಧುವರ್ಗ ಕೂಡಾ ಶಕ್ತ ರಾಜಕಾರಣದ ಹೊರಗಿನ ವ್ಯಕ್ತಿಗಳೇ ಆಗಿದ್ದಾರೆ. ಅವರು ಸಮನ್ವಯ ಕವಿಯೆಂದೇ ಹೆಸರಾದ ರಾಷ್ಟ್ರಕವಿ ಶಿವರುದ್ರಪ್ಪನವರ ಅಳಿಯ. ಪತ್ನಿ ಜಯಂತಿ ಸುಪ್ರಸಿದ್ಧ ವಸ್ತ್ರವಿನ್ಯಾಸಕಿ. ಮಗ ಕೆ.ಎಂ.ಚೈತನ್ಯ ಸಿನೇಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕ.

ಹೇಮಮಾಲಿನಿ ಕೂಡಾ ಶ್ರೇಷ್ಠ ನಟಿ, ಅದಕ್ಕಿಂತಲೂ ಮಿಗಿಲಾಗಿ ಆಕೆಯೊಬ್ಬ ಅಪ್ರತಿಮ ನೃತ್ಯಗಾತಿ. ಆಕೆಗೆ ರಾಜ್ಯಸಭೆಯ ಸದಸ್ಯಳಾಗುವ ಎಲ್ಲಾ ಅರ್ಹತೆ ಇದೆ. ಈ ಹಿಂದೆಯೂ ಒಮ್ಮೆ ಆಕೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆಕೆ ಯಾವುದೇ ರಾಜ್ಯದ ಹೆಮ್ಮೆಯ ಆಯ್ಕೆಯೇ. ಆದರೆ...
ನಮ್ಮ ನಾಡು-ನುಡಿ, ನೆಲ-ಜಲಗಳ ಬಗ್ಗೆ ಪ್ರೀತಿ-ಕಾಳಜಿಗಳಿಲ್ಲದ ಸಂಸದರಿಂದ ನಮಗೇನು ಪ್ರಯೋಜನವಿದೆ?

ನಮ್ಮ ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ!
ನಿಜ, ನಾಡು, ನುಡಿ, ನೆಲ, ಜಲದ ಸಮಸ್ಯೆಗಳನ್ನು ನಾವು ಪರಸ್ಪರ ಸೌಹಾರ್ಧತೆಯಿಂದ ಮಾನವೀಯ ನೆಲೆಯಲ್ಲಿ ಪರಿಹರಿಸಿಕೊಳ್ಳಲು ಸಾಧ್ಯತೆಗಳಿವೆ.. ಆದರೆ ರಾಜಕಾರಣದೊಡನೆ ಸಂಲಗ್ನಗೊಂಡಿರುವ, ಮನುಕುಲವನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಮಸ್ಯೆಗಳ ವಿರುದ್ದ ಹೊರಾಡಲು ಶಕ್ತ ರಾಜಕಾರಣದ ನೆರವೇ ಬೇಕಾಗುತ್ತದೆ. ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪರಿಸರ ನಾಶ ಎಂಬುದು ಮುಂಬರುವ ದಿನಗಳಲ್ಲಿ ನಮ್ಮ ಸಹಜ ಜೀವನಕ್ರಮಕ್ಕೆ ಬಹು ದೊಡ್ಡ ಶಾಪವಾಗಿ ಪರಿಣಮಿಸಲಿದೆ. ಅಕ್ರಮ ಗಣಿಗಾರಿಕೆ, ಜಲ ಮಾಲಿನ್ಯ, ಗೊತ್ತು ಗುರಿಯಿಲ್ಲದ ಕೈಗಾರಿಕೀಕರಣ, ರೈತರ ನಿರಂತರ ಶೋಷಣೆ, ರಾಜ್ಯಕ್ಕೆ ರಕ್ಷಣ ಗೋಡೆಯಂತಿರುವ ಪಶ್ಚಿಮ ಘಟ್ಟ ಶ್ರೇಣಿಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ. ಇವುಗಳ ವಿರುದ್ಧ ಶಾಸನಸಭೆಗಳಲ್ಲಿ ಧ್ವನಿಯೆತ್ತುವ, ಹೋರಾಡುವ ವ್ಯಕ್ತಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅತೀ ತುರ್ತಾಗಿ ಬೇಕಾಗಿದೆ.

ನಮ್ಮದು ಪ್ರಜಾಪ್ರಭುತ್ವ ದೇಶ. ಸಂಖ್ಯಾಬಲವೇ ಶಾಸನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಾಸನಸಭೆಗಳಲ್ಲಿ ರಾಜಕೀಯ ದೃಷ್ಟಿಕೋನವಿರುವ ಸಾಂಸ್ಕೃತಿಕ ಪ್ರತಿನಿಧಿಗಳ ಪ್ರಾತಿನಿಧ್ಯವಿರಬೇಕಾಗುತ್ತದೆ. ಆ ದೃಷ್ಟಿಕೋನವಿರುವ ವ್ಯಕ್ತಿಯೊಬ್ಬರು ಕೆಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆಯನ್ನು ವಿರೋಧಿಸಿ ಹೇಳಿದ ಮಾತುಗಳು ನನಗಿನ್ನೂ ನೆನಪಿವೆ; "ಈ ರಾಜಕಾರಣಿಗಳು ಬೇವಿನಸೊಪ್ಪು ಕಟ್ಟಿಕೊಂಡು ವಿಧಾನಸೌಧದ ಮುಂದೆ ಕುಣಿದಾಡಿದರೂ ಒಂದು ಚಿಕ್ಕ ಕಲ್ಲನ್ನಾದ್ರೂ ಬೆಳೆಯಲು ಸಾಧ್ಯವೇ" ಎಂದೂ ಪ್ರಶ್ನಿಸಿದ್ದರು. ಇದನ್ನು ಒಬ್ಬ ವೃತ್ತಿಪರ ರಾಜಕಾರಣಿಯೇ ಹೇಳಿರಬಹುದು. ಆದರೆ ಇದರಲ್ಲಿ ಎಷ್ಟೊಂದು ಸತ್ಯ ಅಡಗಿದೆ ಅಲ್ಲವೇ?ಮನಸ್ಸು ಮಾಡಿದರೆ ಕೇವಲ ಐವತ್ತು ವರ್ಷಗಳಲ್ಲಿ ನಾವು ಈ ಭೂಮಿಯಲ್ಲಿ ಮತ್ತೆ ದಟ್ಟವಾದ ಅರಣ್ಯ ಬೆಳೆಸಬಹುದು. ಆದರೆ ನೀರಿನ ಸೆಲೆಯನ್ನು ತನ್ನ ಹೊಟ್ಟೆಯಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಕಲ್ಲು ಬಂಡೆಗಳನ್ನು ಬೆಳೆಯಲು ಸಾಧ್ಯವೇ? ಅಂದು ಗಾಳಿಯಲ್ಲಿ ಹಾರಿ ಹೋದ ಆ ಮಾತುಗಳನ್ನು ಯಾರಾದರು ಬೆಂಬಲಿಸುವ ವಾತಾವರಣವಿದ್ದಿದ್ದರೆ....?

ಸಮಾಜದ ಸಾಕ್ಷಿ ಪ್ರಜ್ನೆಯಂತೆ ಕೆಲಸ ಮಾಡಬೇಕಾದ ವ್ಯಕ್ತಿಗಳು ವಿಧಾನ ಸೌಧದಲ್ಲಿ ಹುಟ್ಟುವುದಿಲ್ಲ. ಅವರನ್ನು ನಾವು ಜನಸಾಮಾನ್ಯರ ಮಧ್ಯೆಯೇ ಹುಡುಕಬೇಕಾಗಿದೆ.ಕಳೆದ ಬಾರಿ ರಾಜೀವ ಚಂದ್ರಶೇಖರ್ ಎಂಬ ಉದ್ಯಮಿ ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರತಿಪಕ್ಷಗಳು ಸಾಹಿತಿ ಅನಂತಮೂರ್ತಿಯವರನ್ನು ಕಣಕ್ಕಿಳಿಸಿದ್ದವು.

ಈ ಬಾರಿ ಮರುಳಸಿದ್ದಪ್ಪನವರ ಸರದಿ. ಅವರಿಗೆ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್, ಚಂಪಾ, ಶೂದ್ರ ಶ್ರೀನಿವಾಸ ಸೇರಿದಂತೆ ಕನ್ನಡ ಸಾರಸ್ವತ ಲೋಕ ಬೆಂಬಲ ನೀಡಿದೆ. ಆದರೆ ಗೆಲ್ಲುವ ಸಾಧ್ಯತೆಯೇ ಇಲ್ಲದಾಗ ಮಾತ್ರ ಪಕ್ಷ ರಾಜಕಾರಣ ತಮ್ಮನ್ನು ಬೆಂಬಲಿಸುತ್ತದೆ ಎಂದು ಸಾಹಿತಿಗಳು ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಶಾಸಕರು ಆತ್ಮಸಾಕ್ಷಿಯಿಂದ ಮತ ನೀಡಬೇಕೆಂದು ಅವರೆಲ್ಲ ಕೋರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಕಾರ್ನಾಡ್, ’ಹೇಮಾಗೆ ಜೀವನಾನುಭವ ಕಡಿಮೆ. ಜನಸ್ಪಂದನೆ ಗೊತ್ತಿಲ್ಲ. ಕಳೆದ ರಾಜ್ಯಸಭೆಯ ಆರು ವರ್ಷದ ಅವಧಿಯಲ್ಲಿ ಆಕೆ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಒಳ್ಳೆ ಹುಡ್ಗಿ.ಆದರೆ ದಡ್ಡಿ’ ಎಂದುಬಿಟ್ಟರು.

’ದಡ್ಡಿ’ ಎನ್ನುವ ಪದವನ್ನು ಯಾರೂ ವಾಚ್ಯಾರ್ಥದಲ್ಲಿ ತಗೊಳ್ಳಬೇಕಾಗಿಲ್ಲ. ಇಲ್ಲಿ ಅದು ಪ್ರೀತಿ, ಮಮತೆ ಮತ್ತು ಕಾಳಜಿಗಳಿಂದ ಕೂಡಿದ ಬೈಗಳ ಪದವಾಗಿದೆ. ಅದಕ್ಕೆ ಒಳ್ಳೆ ಹುಡ್ಗಿ ಎಂಬ ವಿಶೇಷಣ ಒತ್ತು ಕೊಡುತ್ತದೆ. ನಮ್ಮ ಅತೀ ಹತ್ತಿರದ ಪ್ರೀತಿಪಾತ್ರರ ಮೇಲೆ ಮಾತ್ರ ಈ ಪದವನ್ನು ಪ್ರಯೋಗಿಸುತ್ತೇವೆ. ಆಕೆ ನಮ್ಮೆಲ್ಲರಿಗೂ ಪ್ರೀತಿಪಾತ್ರಳೇ. ಆದರೆ ಆಕೆ ರಾಜಕಾರಣದಲ್ಲಿ ದಡ್ಡಿಯೇ. ಹಾಗಾಗಿಯೇ ಬಿಜೆಪಿ ಆಕೆಯ ತಾರಾವರ್ಚಸ್ಸನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ದಡ್ಡಿಯನ್ನಾಗಿ ಮಾಡಿದೆ.

ಪವಾಡಗಳೇನಾದರು ಸಂಭವಿಸದೆ ಇದ್ದಲ್ಲಿ ನಾಳೆ ಹೇಮಮಾಲಿನಿ ನಮ್ಮ ರಾಜ್ಯದ ಎಂಪಿಯಾಗುತ್ತಾಳೆ. ಚಿಂತಕರ ಮನೆಯೆಂದೇ ಹೆಸರಾದ ಮೆಲ್ಮನೆಯ ಸದಸ್ಯಳಾಗುತ್ತಾಳೆ. ಶಾಸನ ರಚನೆಯಲ್ಲಿ ತಾನೂ ಭಾಗಿಯಾಗುತ್ತಾಳೆ. ಆಕೆ ನಾಮಪತ್ರ ಸಲ್ಲಿಸಿದ ದಿನ ಪತ್ರಕರ್ತರೊಡನೆ ಮಾತಾಡುತ್ತಾ, "ರಾಜ್ಯ ಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚೆಗೆ ಬಂದಾಗ ನಾನೂ ಕೂಡಾ ಅದರ ಧ್ವನಿಯಾಗುತ್ತೇನೆ. ರಾಜ್ಯದಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ಗೊತ್ತಿಲ್ಲ.ತಿಳಿದುಕೊಂಡು ಆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸುತ್ತೇನೆ" ಎಂದು ಹೇಳಿದ್ದಾರೆ. ನುಡಿದಂತೆ ಆಕೆ ನಡೆದುಕೊಳ್ಳಲಿ ಎಂದು ಆಶಿಸೋಣ.

Monday, February 7, 2011

ಒಂದು ಪುಸ್ತಕವನ್ನು ಅರಸುತ್ತಾ.......


.


ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ ಪುಸ್ತಕವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಕೆಲ ಸಮಯದ ಹಿಂದೆ ಅಂಕಿತಾ, ಸ್ವಪ್ನ, ನವಕರ್ನಾಟಕ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ನವೆಂಬರಿನಲ್ಲಿ ಪ್ರತಿ ಬಾರಿ ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲೂ ಸಿಕ್ಕಿರಲಿಲ್ಲ.

ಪ್ರಸ್ತುತ ವರ್ಷ ರಹಮತ್ ತರಿಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆಯಲ್ಲ ಹಾಗಾಗಿ ಅವರ ಕೃತಿಗಳೆಲ್ಲಾ ಸಮ್ಮೆಳನದಲ್ಲಿ ದೊರಕಬಹುದೆಂಬ ನಿರೀಕ್ಷೆಯಿತ್ತು.

ಆದರೆ ಶುಕ್ರವಾರ ಟೀವಿ ಮುಂದೆ ಕುಳಿತೆ ನೋಡಿ, ಸಮ್ಮೆಳನಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಕನ್ನಡದ ನ್ಯೂಸ್ ಚಾನಲ್ ಗಳು ಪೈಪೋಟಿಗೆ ಬಿದ್ದವರಂತೆ ಸಮ್ಮೇಳನದ ಲೈವ್ ಕವರೇಜ್ ಗಳನ್ನು ನೀಡತೊಡಗಿದವು. ಹಿಂದೆ ಒಂದೆರಡು ಸಮ್ಮೇಳನದಲ್ಲಿ ಭಾಗವಹಿಸಿದ್ದ ನನಗೆ ಗೊತ್ತಿತ್ತು. ಸಮ್ಮೇಳನದ ಎಲ್ಲಾ ಸೂಕ್ಷ ವಿವರಗಳನ್ನು ನಮಗೆ ಕಾಣಲು ಸಾಧ್ಯವಿಲ್ಲವೆಂದು. ಆದರೆ ಕ್ಯಾಮರ ಕಣ್ಣುಗಳ ವ್ಯಾಪ್ತಿ ದೊಡ್ಡದು. ಅವು ಯಾವುದೇ ವ್ಯಾಖ್ಯಾನವಿಲ್ಲದೆ ಸಮಸ್ತ ವಿವರಗಳನ್ನು ಬಹು ಸುಲಭವಾಗಿ ವಿಕ್ಷಕರಿದ್ದೆಡೆಗೇ ತಲುಪಿಸಬಲ್ಲವು.
ಇದಲ್ಲದೆ ಸಮ್ಮೇಳನದ ವರದಿಗೆಂದೇ ’ಅವಧಿ’ ಯ ಸಹಯೋಗದಲ್ಲಿ ’ನುಡಿಮನ’ ಎಂಬ ಬ್ಲಾಗ್ ಹುಟ್ಟಿಕೊಂಡಿತ್ತು. ಅದು ಸಚಿತ್ರ ವರದಿಯೊಂದಿಗೆ ಸದಾ ಅಪ್ಡೇಟ್ ಆಗುತ್ತಲಿತ್ತು. ಜನಜಂಗುಳಿಯಿಂದ ಸದಾ ದೂರವಿರಲು ಇಷ್ಟಪಡುವ ನನಗಿದು ಸಾಕಾಗಿತ್ತು.

ಹಾಗೆ ಕುಳಿತವಳನ್ನು ಮತ್ತೆ ಎಬ್ಬಿಸಿ ಸಮ್ಮೇಳನಕ್ಕೆ ದೂಡಿದ್ದು ಇದೇ ಮಾದ್ಯಮಗಳೇ!. ಅದು ಹೇಗಂತೀರಾ? ಭಾನುವಾರ ಮಧ್ಯಾಹ್ನ ’ಸಮಯ’ ಸುದ್ದಿ ಚಾನಲ್ ’ಸಮ್ಮೇಳನದ ಕಾರ್ಯಕ್ರಮಗಳಲ್ಲಿ ನೂಕುನುಗ್ಗಲು’ ’ ಪುಸ್ತಕ ಮಳಿಗೆಗಳಲ್ಲಿ ಜನ ಸಾಗರ’ ಎಂದು ಬ್ರೇಕಿಂಗ್ ನ್ಯೂಸ್ ಪ್ರಸಾರಿಸತೊಡಗಿತ್ತು. ಅದೇ ಚಾನಲ್ ಸಾಹಿತ್ಯ ಸಮ್ಮೇಳನವನ್ನು ’ಸಾಹಿತ್ಯ ಸಂತೆ’ ಎಂದು ಕರೆದಿತ್ತು. ಹಾಗಾಗಿ ಸಂತೆಗೆ ಹೋಗೋಣ, ಸಂಬ್ರಮದಲ್ಲಿ ಭಾಗಿಯಾಗೋಣ ಎಂದುಕೊಂಡು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದುಬಿಟ್ಟೆ.

ಅಬ್ಬಾ! ಅಲ್ಲಿ ನಿಜಕ್ಕೂ ಸಂತೆ ಹಾಗೂ ಜಾತ್ರೆಯ ಸಂಬ್ರಮವಿತ್ತು. ಎಲ್ಲಾ ಜಿಲ್ಲೆಗಳಿಂದ ಬಂದ ಕನ್ನಡದ ಬಂಧುಗಳು ಬ್ಯಾಡ್ಜ್ ಧರಿಸಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದರು. ಬೀದಿ ಬದಿಯ ವ್ಯಾಪಾರಿಗಳು ಪುಸ್ತಕ ಮಳಿಗೆಗಳು ಮತ್ತು ಸಮ್ಮೇಳನದ ಮುಖ್ಯದ್ವಾರವಾದ ನಾಡಪ್ರಭು ಕೆಂಪೇಗೌಡ ದ್ವಾರದ ನಡುವಿನ ಸ್ವಲ್ಪ ಜಾಗದಲ್ಲೇ ವ್ಯಾಪಾರ ಶುರುವಿಟ್ಟುಕೊಂಡಿದ್ದರು.

ಸಭಾಂಗಣದಲ್ಲಿ ಖುರ್ಚಿ ಖಾಲಿಯಿರುವುದಿರಲಿ ಇಕ್ಕೆಲಗಳಲ್ಲಿ ನಿಂತು ನೋಡುವುದಕ್ಕೂ ಜಾಗವಿರಲಿಲ್ಲ. ಪರಿಚಿತ ಮುಖಗಳೇನಾದರೂ ಕಾಣಿಸುತ್ತದೆಯೇನೋ ಎಂದು ಅತ್ತಿತ್ತ ಕಣ್ಣಾಡಿಸುತ್ತಾ ಪುಸ್ತಕ ಮಳಿಗೆಯತ್ತ ಕಾಲು ಹಾಕಿದರೆ ಪ್ರವೇಶ ದ್ವಾರದಲ್ಲೇ ಒಳಗೆ ಹೆಜ್ಜೆ ಇಡಲಿಕ್ಕೂ ಆಗದಷ್ಟು ಜನಸಂದಣಿ, ಒಮ್ಮೆ ಹಿಂದಿರುಗೋಣವೆಂದುಕೊಂಡೆ. ಆದರೆ ನಾಳೆ ಭಾನುವಾರ ಇದಕ್ಕಿಂತಲೂ ಹೆಚ್ಚು ಜನದಟ್ಟಣೆ ಇರುತ್ತದೆ ಎಂದುಕೊಂಡು ಒಳನುಗ್ಗಿದೆ.

ನನಗೆ ಅಗತ್ಯವಾಗಿ ಬೇಕಾಗಿದ್ದ ರಹಮತ್ ತರಿಕೆರೆಯವರ ’ ಕರ್ನಾಟಕದಲ್ಲಿ ನಾಥಪಂಥ’ ಅವರದೇ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ದೊರೆಯಬಹುದೆಂದು ಹಂಪೆ ವಿಶ್ವ ವಿದ್ಯಾಲಯದ ಮಳಿಗೆಗೆ ಹೋದೆ. ಅಲ್ಲಿರಲಿಲ್ಲ. ಅನಂತರ ನವಕರ್ನಾಟಕಕ್ಕೆ ಹೋದೆ. ಅಂಕಿತಕ್ಕೆ ಹೋದೆ. ಅಲ್ಲಿಂದ ಸ್ವಪ್ನಕ್ಕೆ ಬೇಟಿಯಿತ್ತೆ. ಕೊನೆಗೆ ಅಭಿನವದಲ್ಲಿ ಸಿಗಬಹುದೆಂದು ಅಲ್ಲಿಗೂ ಪಾದ ಬೆಳೆಸಿದೆ. ಅಲ್ಲಿ ಅದರ ಮಾಲೀಕ ರವಿಕುಮಾರ್ ಹೇಳಿದರು; ಅದರ ಪ್ರತಿಗಳು ಮುಗಿದಿವೆ. ಬಹುಶಃ ಪುನರ್ ಮುದ್ರಣ ಮಾಡಬೇಕಾಗುತ್ತೆ.

ಅಲ್ಲಿಗೆ ನನ್ನ ನಾಥಪಂಥದ ಬಗೆಗಿನ ಪುಸ್ತಕದ ಹುಡುಕಾಟ ನಿಲ್ಲಿಸಿ ನನಗೆ ಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿದೆ. ಮಳಿಗೆಗಳಲ್ಲಿನ ಹುಡುಕಾಟ ನನಗೇನೂ ಬೇಸರ ತರಿಸಲಿಲ್ಲ. ಯಾಕೆಂದರೆ ಕೆಲವು ಮಳಿಗೆಗಳಲ್ಲಿ ಸ್ವತಃ ಲೇಖಕರೇ ಕುಳಿತು ಸಾಹಿತ್ಯಾಸಕ್ತರೊಡನೆ ಉಭಯ ಕುಶಲೋಪರಿ ನಡೆಸುವುದನ್ನು ಕಂಡೆ. ನಾಗತಿಹಳ್ಳಿ ’ಅಭಿವ್ಯಕ್ತಿ’ಮಳಿಗೆಯಲ್ಲಿ ಕುಳಿತು ಸಾಹಿತಾಸಕ್ತರಿಗೆ ಸಹಿ ಹಾಕಿ ಪುಸ್ತಕ ನೀಡುತ್ತಿದ್ದರು., ’ಎನ್ ಗುರು ಕಾಫಿ ಆಯ್ತಾ’ ಬ್ಲಾಗ್ ನಡೆಸುತ್ತಿರುವ ಬನವಾಸಿ ಬಳಗದ ಐಟಿ-ಬಿಟಿ ಹುಡುಗರು, ಛಂದ ಪ್ರಕಾಶನದ ವಸುಧೇಂದ್ರ, ಪತ್ರಿಕೆ ಪ್ರಕಾಶನದಲ್ಲಿ ಗೌರಿ ಲಂಕೇಶ್ ಅವರನ್ನೆಲ್ಲ ನೋಡಿಕೊಂಡು ಮುಂದೆ ಬರುತ್ತಿರುವಾಗ ಸಂಕ್ರಮಣ ಮಳಿಗೆಯಲ್ಲಿ ಚಂಪಾ ಕಂಡರು. ಎದುರಲ್ಲಿ ’ಕನ್ನಡ ಸಾಹಿತಿಗಳ ಮಾಹಿತಿ’ ಪುಸ್ತಕ ಇತ್ತು. ಅವರು ಮೊದಲು ತಂದ ಲೇಖಕರ ವಿಳಾಸ ಪುಸ್ತಕ ನನ್ನಲಿತ್ತು. ಅದನ್ನು ಎರವಲು ತೆಗೆದುಕೊಂಡು ಹೋದ ಯಾರೋ ಹಿಂದಿರುಗಿಸಿರಲಿಲ್ಲ. ಹಾಗಾಗಿ ಅದನ್ನು ಕೊಂಡುಕೊಳ್ಳೋಣವೆಂದು ’ಎಷ್ಟು ಸರ್ ಬೆಲೆ’ ಅಂದೆ. ೩೬೦ ಎಂದರು. ಇವ್ರು ಒಂಚೂರು ರಿಯಾಯಿತಿ ಕೊಡೊಲ್ಲ ಎಂದುಕೊಳ್ಳುತ್ತಲೇ ಪುಸ್ತಕ ಕೊಂಡೆ. ಜೋರಾಗಿ ಹೇಳಲಿಲ್ಲ. ಹೇಳಿದ್ದರೆ ಅವರ ಧಾರವಾಡದ ಗಂಡು ಭಾಷೆಯ ಚಾಟಿಯೇಟನ್ನು ಮಂತ್ರಮುಗ್ದಳಾಗಿ ನಾನು ಕೇಳಿಸ್ಕೋಬೇಕಾಗಿತ್ತು. ಆ ಭಾಷೆಯ ಬಗ್ಗೆ ನಂಗೆ ಒಂಥರಾ ಮೋಹ!

ಸಾಹಿತ್ಯ ಸಮ್ಮೇಳನಕ್ಕೆ ಐಟಿ ಬಿಟಿ ಕಡೆಯಿಂದ ಯಾವ ನೆರವು ಬರಲಿಲ್ಲ ಎಂಬುದರಿಂದ ವ್ಯಗ್ರಗೊಂಡ ಪರಿಷತ್ತಿನ ಅಧ್ಯಕ್ಷ ನಲ್ಲೂರಪ್ರಸಾದ್ ’ಸಮ್ಮೇಳನ ನಡೆಸಲು ನಾವು ಕಸ ಗುಡಿಸೋರ ಹತ್ರ ಕೈ ಚಾಚುತ್ತೇವೆಯೇ ಹೊರತು ಅವರತ್ರ ಕೈ ಚಾಚೋದಿಲ್ಲ. ಅವರು ನಮ್ಮಿಂದ ಬದುಕಬೇಕೆ ಹೊರತು ಅವರಿಂದ ನಾವಲ್ಲ.ಅವರ ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಗಳಿಂದ ಭತ್ತ, ಬದನೆ, ಬೂದುಗುಂಬಳಕಾಯಿ ಬೆಳೆಯಕ್ಕಾಗಲ್ಲ. ಕನ್ನಡಿಗರು ಅಭಿಮಾನಿಗಳು, ಅತ್ಯುಗ್ರರು ಎಂದು ಸಮಾರೋಪ ಸಮಾರಂಭದಲ್ಲಿ ಗುಡುಗಿದಾಗ ನನಗೆ ಮಳಿಗೆಯೊಂದರಲ್ಲಿ ಕನ್ನಡದ ಕವಿಗಳ, ಸಾಹಿತಿಗಳ ಮಾತುಗಳನ್ನು ಟೀಶರ್ಟ್ ಗಳಲ್ಲಿ ಮುದ್ರಿಸಿ ಅಭಿಮಾನದಿಂದ ಮಾರುತ್ತಿದ್ದ ಒಂದಷ್ಟು ಐಟಿ-ಬಿಟಿ ಹುಡುಗರ ಚಿತ್ರ ಕಣ್ಮುಂದೆ ಬಂತು.

ಕವಿಗೋಷ್ಟಿಯಲ್ಲಿ ಭಾಗವಹಿಸಲು ಸಚಿವರ, ಶಾಸಕರ ಶಿಪಾರಸ್ಸು ಪತ್ರ ತಂದವರಿಗೆ ಆದ್ಯತೆಯನ್ನು ನೀಡಲಾಗಿದೆ. ಅದನ್ನು ವಿರೋಧಿಸಿ ಪರ್ಯಾಯ ಕವಿಗೋಷ್ಟಿ ನಡೆಸುವುದಾಗಿ ಎಲ್.ಎನ್.ಮುಕುಂದರಾಜ್ ಘೋಷಿಸಿದ್ದಾರೆ ಎಂದು ಯಾರೋ ಹೇಳಿದ್ದರು. ಅದನ್ನು ಕೇಳೋಣವೆಂದು ಅವರನ್ನು ಹುಡುಕಿಕೊಂಡು ಮಳಿಗೆ ೩೩೨ಕ್ಕೆ ಹೋದೆ. ಆದರೆ ಅಲ್ಲಿ ಮುಕುಂದರಾಜು ಸಿಗಲಿಲ್ಲ. ಆದರೆ ಆ ಸ್ಟಾಲಿನಲ್ಲಿಯೇ ಕರಿಸ್ವಾಮಿಯವರ ’ಉಕ್ಕೆಕಾಯಿ’ ಬಿಡುಗಡೆಯಾದ ಮಾಹಿತಿ ದೊರೆಯಿತು.

ಈ ಸಮ್ಮೇಳನ ಹಲವಾರು ಕಾರಣಗಳಿಗಾಗಿ ನನಗೆ ಮುಖ್ಯವೆನಿಸಿತು.
ಸಮ್ಮೇಳನದ ಅಧ್ಯಕ್ಷರಾದ ಕನ್ನಡದ ಕಟ್ಟಾಳು, ನಿಘಂಟು ತಜ್ನ ವೆಂಕಟಸುಬ್ಬಯ್ಯನವರು ಉದ್ಘಾಟನಾ ಭಾಷಣದಲ್ಲಿ, ಮುಖ್ಯಮಂತ್ರಿಗಳನ್ನು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ, ಗೃಹಸಚಿವರೂ ಆದ ಅರ್. ಅಶೋಕ್ ಮತ್ತುಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡೇ ಸರಕಾರವನ್ನು ಹಿಗ್ಗಾಮುಗಾ ಝಾಡಿಸಿ ಪ್ರತಿಭಟನೆಯ ಮುನ್ನುಡಿಯನ್ನು ಬರೆದುಬಿಟ್ಟರು. ಹಿರಿಯ ಸಂಶೋದಕ ಚಿದಾನಂದಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದ ಗೌರವ ಡಾಕ್ಟರೇಟ್ ಅನ್ನು ಅವರು ಕೋಮುವಾದಿ ಎಂಬ ಕಾರಣವನ್ನು ನೀಡಿ ರಾಜ್ಯಪಾಲರು ತಡೆಹಿಡಿದದ್ದು ವೇಗವರ್ಧಕವಾಗಿ ಕೆಲಸ ಮಾಡಿತು. ಹಾಗಾಗಿ ಅದಕ್ಕೆ ಅನಂತಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ಶಿವರುದ್ರಪ್ಪ, ಚಂಪಾ, ಎಂ. ಎಂ. ಕಲ್ಬುರ್ಗಿ, ಕೆ.ಮರುಳಸಿದ್ದಪ್ಪ, ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ ಮುಂತಾದವರು ಅಧ್ಯಾಯಗಳನ್ನು ಸೇರಿಸುತ್ತಾ ಹೋದರು. ಅದಕ್ಕೆ ಬೆನ್ನುಡಿಯನ್ನು ಬರೆದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್; ಇದು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂದಪಟ್ಟಿದ್ದು. ಅದರಲ್ಲಿ ಕೈಹಾಕಲು ಅವರ್ಯಾರೋ ನಂಗೊತ್ತಿಲ್ಲ. ’ಆಜ್ನೆ ಮಾಡೋ ಐಗೋಳ್ ಎಲ್ಲಾ....’ಎಂದು ರತ್ನನ ಪದ ಉದಾಹರಿಸಿ ಕನ್ನಡದ ಸುದ್ದಿಗೆ ಬಂದ್ರೆ ಸಾಹಿತ್ಯ ಪರಿಷತ್ತು ಸುಮ್ಮನಿರೊಲ್ಲ. ಎಂದು ಎಚ್ಚರಿಕೆಯ ಸಂದೇಶವನ್ನು ಗವರ್ನರಿಗೆ ರವಾನಿಸಿಬಿಟ್ಟರು. ಸಮರ್ಥ ಮುನ್ನುಡಿ ಮತ್ತು ಬೆನ್ನುಡಿಗಳೊಂದಿಗೆ ಈ ಪುಸ್ತಕ ಸಾಹಿತ್ಯಾಭಿಮಾನಿಗಳ ಕೈಗೆ ಸಿಕ್ಕಿತು.
ಇದೆಲ್ಲದರ ಫಲಶ್ರುತಿಯಾಗಿ೭೭ನೇ ಸಾಹಿತ್ಯ ಸಮ್ಮೇಳನವು ರಾಜ್ಯಪಾಲರ ವಿರುದ್ದ ಖಂಡನಾ ನಿರ್ಣಯ ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು.

ಈ ಬರಹವನ್ನು ಪೋಸ್ಟ್ ಮಾಡುವ ಹೊತ್ತಿಗೆ ಘನತೆವೆತ್ತ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರಿಂದ ಚಿದಾನಂದ ಮೂರ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಒಪ್ಪಿಗೆಯ ಮುದ್ರೆ ದೊರಕಿದೆಯೆಂದು ಗೊತ್ತಾಗಿದೆ.
ಕಲೆ ಮತ್ತು ಸಂಸ್ಕೃತಿಯ ಮುಂದೆ ಪ್ರಭುತ್ವ ಕೂಡಾ ಒಮ್ಮೊಮ್ಮೆ ತಲೆಬಾಗುತ್ತದೆ

೯೮ ಹರೆಯದ ನವ ಯುವಕ ಜಿ. ವೆಂಕಟಸುಬ್ಬಯ್ಯನವರ ಸಮರ ಸ್ಫೂರ್ತಿಗೆ ನಿಜಕ್ಕೂ ಹ್ಯಾಟ್ಸಪ್. ಅವರು ಸದಾ ಕಾಲ ನಮಗೆಲ್ಲಾ ಸ್ಫೂರ್ತಿಯ ಚಿಲುಮೆಯಾಗಿರಲಿ ಎಂಬುದೇ ಎಲ್ಲಾ ಕನ್ನಡಿಗರ ಆಶಯ.


Saturday, February 5, 2011

ಪ್ರತ್ಯೇಕ ಕೃಷಿ ಬಜೆಟ್ ಬೇಕು



ನನಗೊಂದು ಕನಸಿದೆ; ಹಣಕಾಸು ಸಚಿವರು ಮತ್ತು ರೈಲ್ವೆ ಸಚಿವರ ಮಾದರಿಯಲ್ಲೇ ನಮ್ಮ ಕೃಷಿ ಸಚಿವರು ಕೂಡಾ ಕೈಯಲ್ಲಿ ಕೃಷಿ ಬಜೆಟಿನ ಬ್ರಿಫ್ ಕೇಸ್ ಹಿಡಿದು ಸಂಸತ್ ಮತ್ತು ವಿಧಾನ ಸೌಧದ ಮೆಟ್ಟಲುಗಳನ್ನು ಏರುವುದು. ಇದು ರೈತರ ಕನಸು ಕೂಡಾ ಹೌದು. ಯಾಕೆಂದರೆ ನಮ್ಮ ದೇಶದ ಮುಕ್ಕಾಲು ಪಾಲು ಜನರು ರೈತರು. ಈ ಕನಸನ್ನು ವಾಸ್ತವವಾಗಿಸಿಕೊಳ್ಳುವುದು ಅವರ ಹಕ್ಕು.

ಕೇಂದ್ರದಲ್ಲಿ ಸಧ್ಯಕ್ಕೆ ಈ ಕನಸು ನನಸಾಗಲಾರದು.ಆದರೆ ರಾಜ್ಯದಲ್ಲಿ ಇದು ನನಸಾಗುವ ಸಾಧ್ಯತೆಯಿದೆ. ಯಾಕೆಂದರೆ ನಮ್ಮ ಮುಖ್ಯಮಂತ್ರಿಗಳು ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆ ಮಾಡಿದರೆ ದೇಶದಲ್ಲೇ ಮೊತ್ತಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಯಡಿಯೂರಪ್ಪನವರು ಪಾತ್ರ್ರರಾಗಬಹುದು. ಆದರೆ ಅದು ಪೂರ್ಣ ಪ್ರಮಾಣದ ಬಜೆಟ್ ಆಗಿರುವ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ ಅದಕ್ಕೆ ಬೇಕಾದ ಪೂರ್ವಸಿದ್ದತೆಯನ್ನು ಅವರು ಇನ್ನೂಮಾಡಿಕೊಂಡ ಹಾಗಿಲ್ಲ.

ಸಂಕಷ್ಟಗಳ ಸರಮಾಲೆಗಳ ಕುಣಿಕೆಗಳು ರೈತರ ಕೊರಳನ್ನು ಬಿಗಿಯುತ್ತಲಿದೆ. ಪ್ರಕೃತಿ ವಿಕೋಪಗಳು, ವಿಶೇಷ ಅರ್ಥಿಕ ವಲಯದ ಹೆಸರಲ್ಲಿ ರೈತರ ಭೂಕಬಳಿಕೆ, ಆನೆ, ಜಿಂಕೆ, ಕೋತಿ ಮುಂತಾದ ಕಾಡು ಪ್ರಾಣಿಗಳ ದಾಂಧಲೆ, ಕೃಷಿ ಕಾರ್ಮಿಕರ ಕೊರತೆ-ಇವುಗಳೆಲ್ಲದರ ಜೊತೆ ಹೋರಾಡುತ್ತಲೇ ಸಾಲ ಸೋಲ ಮಾಡಿ ಏನನ್ನಾದರೂ ಬೆಳೆದರೂ ಅದಕ್ಕೆ ಯೋಗ್ಯ ಬೆಲೆ ಸಿಗದೆ ರೈತ ಕಂಗಾಲಾಗುತ್ತಿದ್ದಾನೆ; ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾನೆ.

gÉÊvÀgÀ DvÀäºÀvÉå ¸ÀªÀÄƺÀ ¸À¤ßAiÀÄ gÀÆ¥À ¥ÀqÉAiÀÄÄvÀÛ°zÉ. »AzÉ®è ªÉÆzÀ® ¥ÀÅlzÀ°è ªÀgÀ¢AiÀiÁUÀÄwÛzÀÝ, ºÉqï ¯ÉÊ£ïì £À°è ¥Àæ¸ÁgÀªÁUÀÄwÛzÀÝ gÉÊvÀgÀ CvÀäºÀvÉåUÀ¼ÀÄ FUÀ M¼À¥ÀÅlUÀ¼ÀvÀÛ ¸ÀjAiÀÄÄvÀÛ°ªÉ. ªÀÄÄAzÉÆAzÀÄ ¢£À ¥ÉÃeï wæAiÀÄ®Æè §gÀ§ºÀÄzÀÄ.

CAzÀgÉ gÉÊvÀgÀ DvÀäºÀvÉå ¥ÀæAiÀÄvÀßUÀ¼ÀÄ ¸ÁªÀiÁ£Àå WÀl£ÉUÀ¼ÁUÀÄwÛªÉ. CzÀÄ d£ÀvÉAiÀÄ°è AiÀiÁªÀ vÀ®ètªÀ£ÀÆß GAlÄ ªÀiÁqÀÄwÛ®è. CªÀgÀÄ ¸ÀAªÉÃzÀ£Á±ÀÆ£ÀågÁUÀÄwÛzÁÝgÉ..

EAvÀºÀzÉÆÝAzÀÄ ¸ÀA¢UÀÞ¹ÜwAiÀįÉèà £ÀªÀÄUÉ CjªÁUÀĪÀÅzÀÄ: PÀȶPÉëÃvÀæzÀ ¸ÀªÀĸÉåUÀ¼À D¼À-CjªÀÅ ºÉÆA¢gÀĪÀ ªÀåQÛAiÉÄà PÀȶ ªÀÄAwæAiÀiÁVgÀ¨ÉÃPÉAzÀÄ. DzÀgÉ £ÀªÀÄä zÉñÀzÀ EwºÁ¸ÀzÀ¯Éèà ±ÀgÀzï ¥ÀªÁgï M§âgÀ£ÀÄß ©lÖgÉ PÀȶ SÁvÉ vÀ£ÀUÉà ¨ÉÃPÉAzÀÄ PÉý ¥ÀqÉzÀÄPÉÆAqÀ ಇನ್ನೊಂದು GzÁºÀgÀuÉ E®è. AiÀiÁPÉAzÀgÉ CzÀgÀ°è AiÀiÁªÀÅzÉà ¥Á¬ÄzÉ E®è.

gÉÊvÀgÀ ¸ÀªÀĸÉåUÀ¼À£Éßà NlÄ ¨ÁåAPï UÀ¼À£ÁßV¹PÉÆAqÀÄ C¢üPÁgÀzÀ UÀzÀÄÝUÉ »rAiÀÄĪÀ ªÀÄtÂÚ£À ªÀÄPÀ̽UÉ PÀAzÁAiÀÄ, UÀtÂ, PÉÊಗಾjPÉ, ¯ÉÆÃPÉÆÃ¥ÀAiÉÆÃV,, ¨ÉAUÀ¼ÀÆgÀÄ £ÀUÀgÁ©üªÀ¢Þ SÁvÉUÀ¼Éà ¨ÉÃPÀÄ. d£À¸ÉêÉUÉ EzÀĪÉà ªÉÆÃPÀë¥ÀxÀ!

£ÀªÀÄUÉ UÉÆwÛzÉ, ªÀÄÄPÀÛ CyðPÀ ¤Ãw¬ÄAzÁV £ÀªÀÄä gÉÊvÀ C©üªÀæ¢Þ²® zÉñÀUÀ¼À gÉÊvÀgÉÆqÀ£É £ÉÃgÀ ¸ÀàzÉðAiÀÄ£ÀÄß JzÀÄj¸À¨ÉÃPÁVzÉ. CAzÀgÉ ªÀiÁgÀÄPÀmÉÖAiÀÄ°è C¸ÉÖðAiÀÄzÀ ¸ÉçÄ, CªÉÄÃjPÀzÀ UÉÆâ, aãÁzÀ gÉñÉä EvÁå¢UÀ¼À eÉÆvÉ £ÀªÀÄä gÉÊvÀ ¥ÉÊ¥ÉÇÃn JzÀÄj¸À¨ÉÃPÁVzÉ. C°è PÀȶUÉ PÉÊUÁjPÉAiÀÄ ¸ÁÜ£ÀªÀiÁ£À ¹QÌ zÉÆqÀØ ¥ÀæªÀiÁtzÀ°è GvÁàzÀ£ÉAiÀiÁUÀÄwÛgÀĪÀÅzÀjAzÀ GvÁàzÀ£À ªÉZÀÑ PÀrªÉÄAiÀiÁUÀÄvÀÛzÉ.ºÁUÁV «zÉò GvÀà£ÀßUÀ¼ÀÄ £ÀªÀÄä ªÀiÁgÀÄPÀmÉÖAiÀÄ°è PÀrªÉÄ ¨É¯ÉUÉ ¹UÀÄvÀÛªÉ. d£À CzÀPÉÌ ªÀÄÄV©Ã¼ÀÄvÁÛgÉ. ಇಂತಹ ಸ್ಥಿತಿಯಲ್ಲಿ £ÀªÀÄä gÉÊvÀ K£ÀÄ ªÀiÁqÀ¨ÉÃPÀÄ?

E°è ¸ÀgÀPÁgÀ 'vÁ¬Ä'AiÀÄ ºÁUÉ ªÀwð¸À¨ÉÃPÀÄ. zÀħð®jUÉ «±ÉñÀ PÁ¼Àf CUÀvÀå. ಆದರೆ ಪರಿಹಾರ ಧನವನ್ನು ಬಿಸಾಕಿ ಇಲ್ಲವೆ ಸೀರೆ ಹಂಚಿಕೆಯಂತ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ನಮ್ಮ ರೈತರನ್ನು ಯಾಚಕರನ್ನಾಗಿ ಮಾಡುತ್ತಿದೆ ಸರಕಾರ. ಹಾಗೆ ಮಾಡಬಾರದು. ಅವರು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬದುಕಲು ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಬೇಕು.

«±Àé¨ÁåAPï ¸ÀàµÀÖªÁV ºÉýzÉ: gÉÊvÀjUÉ AiÀiÁªÀÅzÉà vÉgÀ£ÁzÀ ¸À©ìr ¤qÀ¨ÁgÀzÀÄ. EzÀÄ ¸ÀgÀPÁgÀPÀÆÌ UÉÆwÛzÉ. ºÁUÀVAiÉÄà ರೈತರ ಸಾಲ, ಸಬ್ಸಿಡಿ, ರಸಗೊಬ್ಬರ, ಕೀಟನಾಶಕ, ವಿದ್ಯುತ್ ಸರಬರಾಜು,ನೀರಾವರಿಗೆ ಸಂಬಂದಿಸಿದಂತೆ M¨ÉÆâ§â ¸ÀaªÀgÀÄ ©£Àß ©ü£Àß ºÉýPÉ ¤qÀÄwÛzÁÝgÉ. ¥ÀæuÁ½PÉAiÀÄ°è ºÉýzÉÝ®èªÀ£ÀÆß eÁjAiÀÄ°è vÀgÀĪÀÅzÀÄ PÀµÀÖªÉAzÀÄ CªÀjUÀÆ UÉÆwÛzÉ.

£ÀªÀÄäzÀÄ PÀȶ¥ÀæzsÁ£À zÉñÀ. E°èAiÀÄ ±ÉÃ. 70gÀµÀÄÖ d£À PÀȶPÀgÀÄ. ºÁUÁV PÀæ¶PÉëÃvÀæªÀ£ÀÄß UÀA©ÃgÀªÁV ¥ÀjUÀt¸À¨ÉÃPÁVzÉ. F zÉñÀPÉÆÌAzÀÄ §eÉmï EzÉ.¸ÀA¥ÀPÁðPÁæAwAiÀÄ ºÉ¸Àj£À°è ©ænñÀgÀ PÀÄgÀĺÁV G½zÀÄPÉÆArgÀĪÀ ¥ÀævÉåÃPÀ gÉʯÉé §eÉmï EzÉ. DzÀgÉ §ºÀĸÀASÁåvÀ d£ÀgÀ£ÀÄß ¥Àæw¤¢ü¸ÀĪÀ PÀȶ PÉëÃvÀæPÉÌ ¥ÀævÉåÃPÀ §eÉmï ®è. CzÀÄ EA¢£À CªÀಶ್ಯPÀvÉAiÀiÁVzÉ. ºÀtPÁ¸ÀÄ ¸ÀaªÀgÀÄ, gÉʯÉé ¸ÀaªÀgÀÄ ©æÃ¥sï PÉÃ¸ï »rzÀÄ ¸ÀA±Àvï ¥ÀæªÉò¹ §eÉmï ªÀÄAr¸ÀĪÀÅzÀ£Éßà d£À PÁvÀgÀ¢AzÀ PÁAiÀÄÄvÁÛgÉ. D AiÉÆÃUÀåvÉ PÀȶ ¸ÀaªÀjUÉ §gÀ¨ÉÃPÁVzÉ.

¥ÀævÉåÃPÀ PÀȶ §eÉmï ªÀÄAqÀ£É¬ÄAzÀ K£ÁUÀÄvÀÛzÉ?

'¤ªÉÆäqÀ£É £Á«zÉÝêÉ. DvÀ䫱Áé¸À PÀ¼ÉzÀÄPÉƼÀî¨ÉÃr' JA§ ¸ÀàµÀÖ ¸ÀAzÉñÀªÀ£ÀÄß ¸ÀgÀPÁgÀ gÀªÁ¤¹zÀAvÁUÀÄvÀÛzÉ. ªÀÄÄRåªÁV D SÁvÉUÉÆAzÀÄ UËgÀªÀ §gÀÄvÀÛzÉ.CzÀgÀ vÀÆPÀ ºÉZÀÄÑvÀÛzÉ. vÀªÀÄä£ÀÄß UÀA©üÃgÀªÁV ¥ÀjUÀt¹zÁÝgÉ,DqÀ½vÀ AiÀÄAvÀæzÀ°è vÁªÀÇ PÀÆqÀ ¥Á®ÄzÁgÀgÀÄ JAzÀÄ PÀȶPÀ ºÉªÉÄä ¥ÀqÀÄvÀÛ£É.CªÀ£À DvÀ䫱Áé¸À ºÉZÀÄÑvÀÛzÉ.

PÀȶ §eÉmï EA¢£À vÀÄvÀÄð CªÀಶ್ಯPÀvÉ. zÉÆqÀØ ¸ÀªÀÄĺÀzÀ zÉÆqÀØ dªÁ¨ÁÝj PÀȶ ¸ÀaªÀgÀ ºÉUÀ® ªÉÄðzÉ. CªÀgÀÄ C¤ªÁðAiÀĪÁV §Ä¢Þ ªÀÄvÀÄÛ ºÀæzÀAiÀÄzÀ ªÀÄzsÉå ¸ÀªÀÄ£ÀéAiÀÄ ¸Á¢ü¸À¯ÉèÉÃPÁUÀÄvÀÛzÉ. ¥ÀjtÂvÀgÀ eÉÆvÉ ZÀZÉð,¸ÀAªÁzÀ,CzsÀåAiÀÄ£À £ÀqɸÀ¯Éà ¨ÉÃಕಾಗುತ್ತದೆ. ಬುದ್ದಿಪೂರ್ವಕವಾಗಿ ಯೋಜನೆಗಳನ್ನು ರೂಪಿಸಿ ಹೃದಯವಂತಿಕೆಯಿಂದ ಅದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು.

PÀȶ §eÉmï JgÀqÀÄ ºÀAvÀUÀ¼À°è eÉÆvÉ eÉÆvÉAiÀiÁV eÁjUÉ §gÀ¨ÉÃPÀÄ

ªÉÆzÀ®£ÉAiÀÄzÁV gÉÊvÀgÀ£ÀÄß JdÄåPÉÃmï ªÀiÁqÀĪÀÅzÀÄ.CAzÀgÉ CªÀgÀ£ÀÄß ªÀæwÛ¥ÀgÀ §Äå¹£É¸ï ªÉÄ£ï DV ¥ÀjªÀwð¸ÀĪÀÅzÀÄ. ಅವರು ಬೆಳೆದ ಬೆಳೆಯನ್ನು ಮಾರ್ಕೇಟ್ ಮಾಡುವುದನ್ನು ಅವರಿಗೆ ಕಲಿಸಿಕೊಡಬೇಕು. ಇಲ್ಲಿ ಸರಕಾರದ ಕೃಷಿ ನೀತಿ ಏನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಸರಕಾರಕ್ಕಿರಬೇಕು; ರೈತನಿಗೂ ಅದರ ಅರಿವಿರಬೇಕು.

¥ÀgÀA¥ÀgÁUÀvÀªÁV ರೈvÀ£À£ÀÄß C£ÀßzÁvÀ,£ÉÃV®AiÉÆÃV, zÉñÀzÀ ¨É£Éß®Ä§Ä JAzÉ®è PÀgÉAiÀįÁUÀÄwÛvÀÄÛ.DUÀ CzÀÄ DvÀ£À vÁåUÀ,¸ÉêÉ, ¸ÀºÀ£ÉUÉ ¸ÀAzÀ ªÀÄ£ÀßuÉAiÀiÁVvÀÄÛ. DzÀgÉ FUÀ CzÀgÀ°è ªÀåAUÀå zsÀ餸ÀÄvÀÛzÉ. »A¢¤AzÀ®Æ £ÀªÀÄä gÉÊvÀ ¸ÁéªÀ®A©.DvÀ ©Ãd, UÉƧâgÀ, QÃl£Á±ÀPÀOµÀ¢ü, ¤ÃgÀÄ, zÀÄqÀÄØ AiÀiÁªÀÅzÀPÀÆÌ AiÀiÁgÀ£ÀÆß CªÀ®A©¹zÀªÀ£À®è ¥Àæw gÉÊvÀ M§â PÀȶ «eÁߤAiÉÄÃ. DvÀ¤UÉ vÀ£Àß d«Ä£Éà ¥ÀæAiÉÆÃUÀ±Á¯É. ºÁUÁV CPÀÌ ¥ÀPÀÌzÀ ªÀÄ£ÉUÀ¼À®Æè ©ü£Àß ©ü£ÀߪÁzÀ PÀȶ ¥ÀzÀÝw¬ÄvÀÄÛ.

gÉÊvÀ ¥ÀæAiÉÆÃUÀUÀ½UÉ ªÀÄÄPÀÛªÀÄ£À¸ÀÄì¼ÀîªÀ£ÁVzÀÝ£É JA§ÄzÀPÉÌ ¥Á¼ÉÃPÀgï ªÀiÁzÀj PÀȶ «zsÁ£ÀPÉÌ d£À ªÀÄÄV©Ã¼ÀÄwÛgÀĪÀÅzÉà ¸ÁQëAiÀiÁVzÉ. JgÀqÀÄ £ÁnzÀ£À«zÀÝರೂ ¸ÁPÀÄ, ಜೀವಾಮೃತ ತಯಾರಿಸಿ ರಾಸಾಯನಿಕಗಳನ್ನು ಶಾಶ್ವತವಾಗಿ ದೂರವಿಡಬಹುದು. PÀȶ vÁådåªÀ£Éßà §¼À¹ CvÀÄåvÀÛªÀÄ ¥sÀ¸À®Ä vÉUÉAiÀħºÀÄzÀÄ.EAvÀºÀ ¸ÁªÀAiÀĪÀ PÀȶ GvÀà£ÀßUÀ¼À£ÀÄß PÉƼÀÄîªÀAvÉ 'UÁæºÀPÀ eÁUÀæw' DAzÉÆî£ÀªÀ£ÀÄß ºÀ«ÄäPÉƼÀî¨ÉÃPÀÄ. gÁ¸ÁAiÀĤPÀ UÉƧâgÀ, QÃl£Á±ÀPÀUÀ¼À£ÀÄß §¼À¹ ¨É¼ÉzÀ GvÀà£ÀßUÀ½UÀÆ ಸಾವಯವ ಉತ್ಪನ್ನಗಳಿಗೂ EgÀĪÀ ªÀåvÁå¸ÀªÀ£ÀÄß d£ÀjUÉ w½¹PÉÆqÀ¨ÉÃPÀÄ. PÁVð¯ï,PÉAlQ,j¯ÉAiÀÄ£ïì eÉÆvÉUÉ ¸ÀàzÉð ¤ÃqÀĪÀAvÉ £ÀªÀÄä gÉÊvÀgÀ£ÀÄß vÀAiÀiÁgÀÄ ªÀiÁqÀ¨ÉÃPÀÄ. DgÉÆÃUÀå PÁ¼Àf J£ÀÄߪÀÅzÀÄ £ÀUÀgÀ¸ÀA¸ÀÌçwAiÀÄ EwÛÃZÉV£À VüÀÄ. ºÁUÁV ¸ÁªÀAiÀĪÀ GvÀà£ÀUÀ½UÉ ¨sÀ«µÀå EzÉÝÃEzÉ.

JgÀqÀ£ÉAiÀÄzÁV ªÀiÁgÀÄPÀmÉÖ «¨sÁUÀ. ªÉÆvÀÛªÉÆzÀ®£ÉAiÀÄzÁV zÀ¯Áè½UÀ¼À£ÀÄß,ªÀÄzsÀåªÀwðUÀ¼À£ÀÄß zÀÆgÀ«qÀ¨ÉÃPÀÄ J.¦.JªÀiï.¹AiÀįÁèzÀ ªÉÊ¥À®åUÀ¼ÀÄ E°è ªÀÄgÀÄPÀ½¸À¨ÁgÀzÀÄ. ¸ÀgÀPÁgÀªÉà ªÀÄzsÉå ¥ÀæªÉò¹ GvÀà£ÀßUÀ¼À£ÀÄß Rjâ ªÀiÁqÀ¨ÉÃPÀÄ. CzÀPÁÌV §ºÀ¼À ªÀåªÀ¹ÜvÀªÁzÀ ªÀiÁgÀÄPÀmÉÖ eÁ®ªÀ£ÀÄß £ÉÃAiÀĨÉÃPÁUÀÄvÀÛzÉ. CzÀÄ §ºÀ¼À zÉÆqÀتÀÄlÖzÀ GzÉÆåÃUÀ¸Àæ¶ÖUÀÆPÁgÀtªÁUÀÄvÀÛzÉ. PÀȶ ¥ÀzsÀ«zÀgÀgÀ£ÀÄß EzÀgÀ°è vÉÆqÀV¹PÉƼÀÀÄzÀÄ. gÉÊvÀgÀ §UÉÎ ¤dªÁzÀ PÁ¼Àf EgÀĪÀ aAvÀPÀgÀÄ, ¸ÀªÀiÁd ¸ÉêÀPÀgÀÄ,gÉÊvÀªÀÄÄRAqÀgÀ zÉÆqÀØ ¥ÀqÉAiÉÄà EzÉ. CªÀgÀ£ÀÄß EzÀgÀ UËgÀªÀ PÀuÁΪÀ®Ä ¥ÀqÉAiÀÄ£ÁßV £ÉëĹPÉƼÀÀÄzÀÄ. EzÀgÀ eÉÆvÉUÉ ªÀiË®åªÀzsÀðPÀ GvÀà£ÀßUÀ¼À vÀAiÀiÁjPÉAiÀÄ°è [£ÀA¢¤ GvÀà£ÀßUÀ¼ÀAvÉ] ¸ÀgÀPÁgÀªÉà £ÉÃgÀªÁV ¨sÁVAiÀiÁUÀ¨ÉÃPÀÄ. mÉƪÉÄÃlªÀ£ÀÄß gÀ¸ÉÛUÉ ¸ÀÄjAiÀÄĪÀÅzÀgÀ §zÀ®Ä PÉZÀ¥ï vÀAiÀiÁjPÁ WÀlPÀUÀ¼À£ÀÄß ¸Áܦ¸À°. PÉƯïØ ¸ÉÆÖgÉÃeï UÀ¼À£ÀÄß ºÉaѸÀ°.

EzÀgÀ eÉÆvÉUÉ gÉÊvÀjUÉ PÉ®ªÀÅ ¸ÉêÉUÀ¼À£ÀÄß ¸ÀgÀPÁgÀ MzÀV¸À¨ÉÃPÀÄ. gÁdPÁgÀtÂUÀ½UÉ «zsÁ£À¸ËzsÀ EzÉ,±Á¸ÀPÀgÀ ¨sÀªÀ£À EzÉ. C¢üPÁgÀ±Á»UÀ½UÉ «PÁ¸À¸ËzsÀ EzÉ. §ºÀĪÀĺÀr PÀlÖqÀ EzÉ. gÉÊvÀjUÉ K¤zÉ? ¨ÉAUÀ¼ÀÆj£À°è MAzÀÄ gÉÊvÀ¨sÀªÀ£ÀzÀ CªÀ¸ÀåPÀvÉ EzÉ. J¯Áè f¯ÉèUÀ¼À gÉÊvÀgÀÆ E°è §AzÀÄ ¤¢üðµÀÖ CªÀ¢üUÉ vÀAUÀĪÀ ªÀåªÀ¸ÉܬÄgÀ°. ¥Àæw f¯ÉèAiÀÄ ¨É¼É ªÉÊ«zÀåvÉAiÀÄ£ÀÄß vÉÆÃj¸ÀĪÀ JPïì ©üµÀ£ï , ©üwÛavÀæUÀ¼À r¸ï ¥Éèà EgÀ°. UÀÄ®âUÀð f¯ÉèAiÀÄ PÀȶ C£ÀĨsÀªÀªÀ£ÀÄß ªÉÄʸÀÄgÀÄ f¯ÉèAiÀÄ gÉÊvÀ ºÀAaPÉƼÀî°. ºÁUÉ ªÀiÁqÀĪÀÅzÀjAzÀ ¨ÁAzsÀªÀå ¨É¼ÉAiÀÄÄvÀÛzÉ. PÁªÉÃj-PÀæµÉÚAiÀÄgÀÄ MAzÁUÀÄvÁÛgÉ. CzÀgÀ¯ÉÆèAzÀÄ ¸É«Ä£Ágï ºÁ¯ï EgÀ°. ¤gÀAvÀgÀ ZÀZÀðUÉÆöÖUÀ¼ÀÄ, ¸ÀAªÁzÀUÀ¼ÀÄ C°è £ÀqÉAiÀÄÄwÛgÀ°. zÉñÀzÀ J¯Áè ¨sÁUÀzÀ gÉÊvÀgÀÄ C°è MlÄÖ ¸ÉÃj «ZÁgÀ «¤ªÀÄAiÀÄ ªÀiÁrPÉƼÀî°. PÉ.J.J¸ï UÉæÃr£À C¢üPÁjAiÉƧâgÀÄ CzÀgÀ G¸ÀÄÛªÁj £ÉÆÃrPÉƼÀî°. EµÀÖ£ÀÄß ªÀiÁrPÉÆlÖgÀÆ ¸ÁPÀÄ gÉÊvÀ RĶ ¥ÀqÀÄvÁÛ£É. 'gÉÊvÀ¨sÀªÀ£À' vÀ£ÀßzÉAzÀÄ ºÉªÉÄä¬ÄAzÀ ºÉýPÉƼÀÄîvÁÛ£É.

CgÀĪÀvÀÄÛ ªÀµÀð ªÉÄ®àlÖ gÉÊvÀ¤UÉ ªÀiÁ±Á¸À£À PÉÆqÀÄvÀÛzÉAiÉÄAzÀÄ ¸ÀgÀPÁgÀ ¥ÀæPÀn¹zÉ. CzÀgÀ eÉÆvÉUÉ J¯ï.n¹ ¸Ë®¨sÀå zÉÆgÀPÀ°. ಹೇರಳ ದುಡ್ಡು ಖರ್ಚು ಮಾಡಿ ರೈತರನ್ನು ಚೈನ, ಕ್ಯೂಬಾ ಮುಂತಾದ ದೇಶಗಳಿಗೆ ಕಳುಹಿಸುವ ಬದಲು ಭಾರತ ಪ್ರವಾಸ ಮಾಡಿಸಿದರೆ ತಮ್ಮದೇ ನೆಲ-ಜಲ-ಗಂಧದ ಸ್ಪರ್ಶದಿಂದ ಮಾನವೀಯ ಸಂಬಂಧಗಳು ಗಟ್ಟಿಯಾಗಬಹುದು.

EwÛÃZÉUÉ PÀȶ¨sÀÆ«ÄAiÀÄ°è GvÁàzÀ£É PÀÄAnvÀUÉÆArzÉ. ªÀÄÄA¢£À ¢£ÀUÀ¼À°è ;DºÁgÀ §zsÀævÉ' JA§ÄzÀÄ zÉÆqÀØ ¸ÀªÀ¯ÁV PÁqÀ°zÉ. ºÁUÁV PÀȶPÉêÃvÀæªÀ£ÀÄß 'EAqÀ¹Öç' JAzÀÄ ¥ÀjUÀt¹, PÉÊUÁjPÉUÉ PÉÆqÀĪÀJ®è ¸ÀªÀ®vÀÄÛUÀ¼À£ÀÄß ¤Ãr PÀÄlÄA§ªÀ£ÀÄß PÉÊUÁjPÉAiÀÄ PÀ¤µÀÖ WÀlPÀ JAzÀÄ WÉÆö¸À¨ÉÃPÀÄ,PÀæ¶AiÀÄ°è ªÀiÁvÀæ DºÁgÀ §zsÀævÉ ªÀÄvÀÄÛ GzÉÆåÃUÀ §zsÀævÉ JgÀqÀÆ EzÉ. F ¸ÁéªÀ®A© PÉëÃvÀæªÀ£ÀÄß ¸Àé®à MvÀÄÛ PÉÆlÄÖ ªÉÄïÉwÛzÀgÉ £ÀªÀÄä gÉÊvÀgÀ ºÀ¹gÀÄ ±Á®Ä PÀÄwÛUÉUÉ PÀÄtÂPÉAiÀiÁUÀĪÀÅzÀgÀ §zÀ®Ä AiÀıÀ¹ì£À ¥ÀvÁPÉAiÀÄUÀÄvÀÛzÉ JAzÀÄ gÉÊvÀ ªÀÄÄRAqÀgÁzÀ PÉ.n.UÀAUÁzsÀgï ºÉüÀÄvÁÛgÉ.

¥ÉÇæÃ.£ÀAdÄAqÀ¸Áé«ÄAiÀĪÀgÀÄ gÉÊvÀgÀÄ «zÁ£À¸À¨sÉAiÉƼÀUÉ PÀĽvÀÄPÉƼÀÄîªÀ PÀ£À¸ÀÄ PÀArzÀÝgÀÄ . £ÁªÀÅ PÀȶUÉ ¸ÁéAiÀÄvÀÛvÉ §gÀĪÀ PÀ£À¸À£ÀÄß PÁtÄwÛzÉÝêÉ. £ÀªÀÄä PÀȶ ¸ÀaªÀgÀÄ PÀȶ §eÉÃmï £À ©æÃ¥sï PÉÃ¸ï »rzÀÄ «zÁ£À¸ËzsÀzÀ ªÉÄlÖ®ÄUÀ¼À£ÉßgÀĪÀ PÀ£À¸ÀÄ PÁtÄwÛzÉÝêÉ. gÉÊvÀgÀ ºÉ¸Àj£À°è ¥ÀæªÀiÁtªÀZÀ£À ¹éÃPÀj¹zÀ ªÀÄÄRåªÀÄAwæUÀ¼ÀÄ CzÀ£ÀÄß £À£À¸ÀÄ ªÀiÁqÀ°.

[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ]