Wednesday, December 12, 2012

ನಲ್ಲಮಲ ಕಾಡಿನಲ್ಲಿ...ಉಗ್ರನರಸಿಂಹ...!



ಪಾವನ ನರಸಿಂಹ

ಪ್ರಹ್ಲಾದನ ಅಪ್ಪ ಹಿರಣ್ಯಕಶಿಪನನ್ನು ನರಸಿಂಹ  ಕೊಂದ ಕತೆಯನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಅಂತಹದೊಂದು ಘಟನೆ ನಡೆದಿದೆಯೆಂದು ನಂಬಲಾದ ನಿರ್ಧಿಷ್ಟ  ಜಾಗವೊಂದು ನಿಜವಾಗಿಯೂ ಈ ಭರತ ಭೂಮಿಯಲ್ಲಿದೆಯೆಂದು ನನಗೆ ಗೊತ್ತಿರಲಿಲ್ಲ. ಕಳೆದ ವಾರ ಆ ಜಾಗದಲ್ಲಿ ನಾನು ಅಲೆದಾಡಿ ಬಂದೆ.
ಅಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಅರಣ್ಯದೊಳಗಿದೆ ಹಿರಣ್ಯಕಶಿಪನನ್ನು ನರಸಿಂಹ ಕೊಂದನೆಂದು ಆಸ್ತಿಕರು ನಂಬಿರುವ ಜಾಗ. ನಲ್ಲಮಲ ಅರಣ್ಯ ಎಂದೊಡನೆ ನಮಗೆ ನೆನಪಾಗುವುದು ಎರಡು ವಿಚಾರಗಳು ಒಂದು ಇಲ್ಲಿನ ದಟ್ಟ ಅರಣ್ಯದಲ್ಲಿ ಹರಡಿಕೊಂಡಿರುವ ನಕ್ಸಲ್ ಮತ್ತು ಮಾವೋ ಉಗ್ರಗಾಮಿಗಳು, ಇನ್ನೊಂದು, ಎರಡು ವರ್ಷಗಳ ಹಿಂದೆ ಇದೇ ಅರಣ್ಯ ಪ್ರದೇಶದಲ್ಲಿ ಆಗಿನ ಅಂಧ್ರ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ್ದು.
ಗೋಧೂಳಿ ಲಗ್ನ..!

ನಾನೇನೂ ಉಗ್ರನರಸಿಂಹನನ್ನು ನೋಡುವುದಕ್ಕೆಂದೇ ಹೋದವಳಲ್ಲ. ನನ್ನ ಗುರಿಯಿದ್ದುದು ಕದಳಿ. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯಗೊಂಡ ಆ ಜಾಗವನ್ನು ಬದುಕಿನಲ್ಲಿ ಒಮ್ಮೆಯಾದರೂ ಕಂಡು ಪುನೀತಳಾಗಬೇಕೆಂಬ ಮಹದಾಸೆಯನ್ನು ಹೊತ್ತು ನಾನು ಶ್ರೀಶೈಲಕ್ಕೆ ಹೋಗಿದ್ದೆ. ಚಾರಣದಲ್ಲಿ ಆಸಕ್ತಿಯಿದ್ದ ಒಂದಷ್ಟು ಮಹಿಳೆಯರು ಒಟ್ಟಾಗಿ ಸೇರಿ ಟ್ರಾವಲ್ಸ್ ಏಜನ್ಸಿಯೊಂದನ್ನು ಸಂಪರ್ಕಿಸಿ ನಾವಾಗಿ ಏರ್ಪಡಿಸಿಕೊಂಡ ಪ್ಯಾಕೇಜ್ ಟೂರಾಗಿತ್ತು ಅದು. ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಜಾಗಗಳಲ್ಲಿ ಚಾರಣಗಳನ್ನು ನಡೆಸಿದ ಅನುಭವಿಗಳಿದ್ದರು. ನಮಗಾಗಿಯೇ ರುಚಿಕಟ್ಟಾದ ಅಡುಗೆಯನ್ನು ತಯಾರಿಸುವ ಪಾಕ ಪಂಡಿತರಿದ್ದರು.
ಬೆಂಗಳೂರಿನಿಂದ ೫೮೦ ಕಿ.ಮೀ ದೂರದಲ್ಲಿರುವ ಶ್ರೀಶೈಲವನ್ನು ಹದಿಮೂರು ಘಂಟೆಗಳ ಪ್ರಯಾಣದ ನಂತರ ನಾವು ತಲುಪಿದ್ದೆವು.ನಮಗೆಲ್ಲಾ ಅಕ್ಕನ ಗುಹೆಯನ್ನು ಕಾಣುವ ತವಕ; ಕದಳಿಯನ್ನು ತಲುಪುವ ಹಂಬಲ. ಆದರೆ ನಮ್ಮ ಆಸೆಗೆ ಕರ್ನೂರು ಜಿಲ್ಲಾಡಳಿತ ತಣ್ಣೀರೆರಚಿತು. ಆ ಪ್ರದೇಶದಲ್ಲಿ ನಕ್ಸಲ್ ಮತ್ತು ಮಾವೋ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿವೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಕದಳಿ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದರು. ಅವರ ಮಾತುಗಳಿಂದ ನಮಗೆ ನಿಜವಾಗಿಯೂ ಅಘಾತವಾಯ್ತು. ಅಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕೆಂದು ನಮಗೆ ಗೊತ್ತಿತ್ತು. ಹಾಗಾಗಿ ನಮ್ಮ ಪ್ರವಾಸವನ್ನು ಆಯೋಜಿಸಿದವರಿಗೆ ನಾವು ಈ ಬಗ್ಗೆ ಮೊದಲೇ ಹೇಳಿದ್ದೆವು. ಅವರು ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದು ನಮಗೆ ಬೆಂಗಳೂರಿನಲ್ಲೇ ತಿಳಿಸಿದ್ದರು. ಹಾಗಾಗಿ ನಾವು ನಿಶ್ಚಿಂತೆಯಾಗಿದ್ದೆವು. ಇಲ್ಲಿ ಬಂದಾಗ ಅಕ್ಕನ ಗುಹೆಗೆ ಮತ್ತು ಕದಳಿಗೆ ಹೋಗುವ ಬಗ್ಗೆ ಇರುವ ಕಟ್ಟುನಿಟ್ಟಿನ ನಿರ್ಭಂದದ ಬಗ್ಗೆ ಅರಿವಾಯ್ತು. . ಆಗ ನನಗೆ ನೆನಪಿಗೆ ಬಂದದ್ದು, ನಾವು ಬೆಂಗಳೂರಿನಿಂದ ಶ್ರೀಶೈಲ ಮಾರ್ಗವಾಗಿ ಪಯಣಿಸುತ್ತಿದ್ದಾಗ ಮಧ್ಯರಾತ್ರಿಯಲ್ಲಿ ನಮ್ಮ ವಾಹನವನ್ನು ತಡೆದು ನಿಲ್ಲಿಸಿದ ಅರಣ್ಯ ಇಲಾಖೆಯವರು ನಮ್ಮನೆಲ್ಲಾ ಎಬ್ಬಿಸಿ ಕೈಯ್ಯಲ್ಲಿ ಲಿಸ್ಟ್ ಒಂದನ್ನು ಹಿಡಿದುಕೊಂಡು ಪ್ರತಿಯೊಭ್ಭರ ಹೆಸರು ಕರೆದು ನಮ್ಮ ಐಡೆಂಟಿಟಿಯನ್ನು ಪರಿಶಿಲಿಸಿದ್ದು. ಯಾಕೆ ಹೀಗೆ ಅಂತ ಅಲ್ಲಿ ಅವರನ್ನು ಪ್ರಶ್ನಿಸಿದಾಗ ’ನೀವು ಅರಣ್ಯ ಪ್ರದೇಶವನ್ನು ಪ್ರವೇಶಿಸುತ್ತಿದ್ದೀರಿ’ ಎಂಬ ಉತ್ತರ ಬಂದಿತ್ತು. ಈಗ ಅದು ನೆನಪಿಗೆ ಬಂದು ಅಕ್ಕನ ಗುಹೆವರೆಗಾದರೂ ಹೋಗಲು ಅನುಮತಿ ನೀಡಿ ಎಂದು ಅಂಗಲಾಚಿದೆವು. ಅವರು ಜಪ್ಪಯ್ಯ ಅನ್ನಲಿಲ್ಲ.
ಪಾತಾಳ ಗಂಗೆಯಿಂದ ಹತ್ತಿ ಬರುವುದು ಕಷ್ಟ...ಕಷ್ಟ...!

ಶ್ರೀಶೈಲದಲ್ಲಿರುವುದು ಅಕ್ಕ ಮಹಾದೇವಿಯ ಆರಾಧ್ಯ ದೈವ ಶ್ರೀ ಚೆನ್ನಮಲ್ಲಿಕಾರ್ಜುನ. ಅರ್ಥಾತ್ ಶಿವ. ೧೨ ಜೋತಿರ್ಲಿಂಗಳಲ್ಲಿ ಇದು ಎರಡನೆಯದು.. ಇದು ಶಕ್ತಿಪೀಠವೂ ಹೌದು. ಅಕ್ಕಾ ಇವನನ್ನೇ ಹುಡುಕಿಕೊಂಡು ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರ ಸಮೀಪವಿರುವ ಉಡುತಡಿಯಿಂದ ಬಿದರ್ ಜಿಲ್ಲೆಯ ಬಸವಕಲ್ಯಾಣದ ಮಾರ್ಗವಾಗಿ ಸ್ರೀಶೈಲವನ್ನು ತಲುಪಿದ್ದಳು. ಇಪ್ಪತ್ತೊಂದನೆಯ ಶತಮಾನದಲ್ಲಿರುವ ನಮಗೆ ಅದೇನು ಮಹಾ ಎಂದು ಅನ್ನಿಸಬಹುದು. ಆದರೆ ೧೨ನೇ ಶತಮಾನದಲ್ಲಿ ಇಪ್ಪತ್ತರ ಅಸುಪಾಸಿನ ಸುಂದರ ಯುವತಿಯೊಬ್ಬಳು ಸಾವಿರಾರು ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಅದೂ ಕೂಡಾ ದಟ್ಟವಾದ ಅರಣ್ಯಪ್ರದೇಶದಲ್ಲಿ ಕ್ರಮಿಸಿಸುವುದೆಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಮೆಚ್ಚಿದವನನ್ನು ಕೂಡಬೇಕೆಂಬ ಆಕೆಯ ಸಂಕಲ್ಪ ಶಕ್ತಿಯೇ ಆಕೆಯನ್ನು ಅಲ್ಲಿಯ ತನಕ ನಡೆಸಿರಬಹುದು !. ಹಾಗೆನ್ನಿಸಿದ್ದೇ ತಡ ನಾವು ಬೆಂಗಳುರಿನ ಪ್ರಭಾವಿ ವ್ಯಕ್ತಿಗಳನ್ನೆಲ್ಲಾ ಸಂಪರ್ಕಿಸಿದೆವು. ಹೇಗಾದರೂ ನಮಗೆ ಅನುಮತಿಯನ್ನು ದೊರಕಿಸಿಕೊಡಿ ಎಂದು ದುಂಬಾಲು ಬಿದ್ದೆವು. ಮಹಿಳಾಮಣಿಗಳ ಹಠ ತಾನೇ? ಅವರೂ ತಮ್ಮ ಕೈಲಾದ ಪ್ರಯತ್ನ ಮಾಡಿದರು. ಆದರೆ ಅಲ್ಲಿಯ ಜಿಲ್ಲಾಧಿಕಾರಿ, ಅರಣ್ಯಸಂರಕ್ಷಕರು ತಲೆಯಾಡಿಬಿಟ್ಟರು.
ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

ಶ್ರೀಶೈಲ ಅಂದ್ರಪ್ರದೇಶದಲ್ಲಿ ಇದೆಯಾದರೂ ಅಲ್ಲಿಗೆ ಬರುವವರಲ್ಲಿ ಮುಕ್ಕಾಲು ಭಾಗ ಜನರು ಕರ್ನಾಟಕದವರೇ ಆದ ಕಾರಣದಿಂದಾಗಿ ಅಲ್ಲಿ ಪೂರ್ತಿ ಕನ್ನಡದ ವಾತಾವರಣವಿದೆ. ಅಲ್ಲಿರುವ ಛತ್ರಗಳೆಲ್ಲ ಕನ್ನಡಿಗರು ಕಟ್ಟಿಸಿರುವುದೇ ಆಗಿವೆ. ನಾವು ಹೋದ ದಿನ ಮಲ್ಲಿಕಾರ್ಜುನನ ಪತ್ನಿಯೂ, ಅಲ್ಲಿಯ ಶಕ್ತಿ ದೇವತೆಯೂ ಆದ ಭ್ರಮರಾಂಬಿಕೆಯ ದರ್ಶನ ಮಾಡಿ ನಾಳೆ ಹೇಗಾದರೂ ಮಾಡಿ ಅಕ್ಕನ ಗುಹೆತನಕವಾದರೂ ಹೋಗಬೇಕೆಂದು ಕನಸು ಕಾಣುತ್ತಾ ಮಲಗಿದೆವು.
ಮರುದಿನ ಬೆಳಿಗ್ಗೆ ನಾವು ಸೀದಾ ಹೋಗಿದ್ದು ಪಾತಾಳಗಂಗೆ ನೋಡಲು. ಇದೇ ಪಾತಾಳಗಂಗೆಗೆ ಹೇಮರೆಡ್ಡಿ ಮಲ್ಲಮ್ಮನ ಕಣ್ಣಿಂದ ಹರಿದ ನೀರು ಬಂದು ಸೇರುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕೀ.ಮೀ ದೂರದಲ್ಲಿ ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನಿಗೆ ಆಲಯವನ್ನು ಕಟ್ಟಲಾಗಿದೆ. ಆಕೆಯ ವಿಗ್ರಹದ ಪಕ್ಕದಲ್ಲೇ ನಿರಂತರವಾಗಿ ಒಸರುವ ಜಲವಿದೆ. ಅದೇ ಮಲ್ಲಮ್ಮನ ಕಣ್ಣೀರು. ಇದನ್ನೇ  ಭಕ್ತರಿಗೆ ತೀರ್ಥವಾಗಿ ನೀಡುತ್ತಾರೆ. ಪಾತಾಳಗಂಗೆಯನ್ನು ನೋಡಲು  ಐನೂರು ಮೆಟ್ಟಲುಗಳನ್ನು ಇಳಿದು ಹೋಗಬೇಕು. ನಾವು ಬೆಂಗಳೂರಿಗರಲ್ಲವೇ ೫೦ ರೂಪಾಯಿ ಕೊಟ್ಟು ರೋಪ್ ವೇಯಲ್ಲಿ ಹೋದೆವು. ಅಲ್ಲಿ ಹರಿಯುತ್ತಾಳೆ ಕೃಷ್ಣೆ. ಇದೇ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ೧೫ ಕಿ.ಮೀ ಕ್ರಮಿಸಿ,ಕಾಡನ್ನು ಪ್ರವೇಶಿಸಿ ಎರಡು ಮೈಲಿ ನಡೆದರೆ ಅಕ್ಕನ ಗುಹೆಗಳು ಸಿಗುತ್ತವೆ. ಅಲ್ಲಿ ಒಟ್ಟು ಆರು ಗುಹೆಗಳಿವೆ. ಮಧ್ಯದ ಗುಹೆಯಲ್ಲಿ ಅಕ್ಕಾ ನೆಲೆಸಿದಳೆಂದು ನಂಬಲಾಗುತ್ತದೆ. ಇಲ್ಲಿಂದ ಹನ್ನೆರಡು ಮೈಲಿ ದಟ್ಟಾರಣ್ಯದಲ್ಲಿ ನಡೆದರೆ ಕದಳಿವನ ಸಿಗುತ್ತದೆ. ಅಲ್ಲಿ ಆಕೆ ತನ್ನ ಇಷ್ಟ ದೈವನಲ್ಲಿ ಐಕ್ಯವಾದಳೆಂಬುದು ಪ್ರತಿತಿ.
ಭವನಾಶಿನಿಯಲ್ಲಿ ಸ್ನಾನದ ಮೋಜು

ನಮ್ಮ ಕದಳಿಯ ಕನವರಿಕೆ ಕುಂದಿರಲಿಲ್ಲ. ಎಷ್ಟಾದರೂ ನಾವು ಬೆಂಗಳೂರಿಗರು. ವಿಧಾನಸೌಧಕ್ಕೆ ಹತ್ತಿರದಲ್ಲಿರುವವರು. ಹಾಗಾಗಿ ಪಾತಾಳಗಂಗೆಯಲ್ಲಿರುವ ಅಂಬಿಗರಿಗೆ ಲಂಚದ ಆಮೀಷವೊಡ್ಡಿ ’ಅಕ್ಕನ ಗುಹೆಗೆ ದೋಣಿ ಬಿಡಯ್ಯಾ’ ಎಂದು ಕೇಳಿಕೊಂಡೆವು. ಅವರು ತಲೆಯಾಡಿಬಿಟ್ಟರು. ಪೆಚ್ಚು ಮುಖದಿಂದ ತಲೆಯೆತ್ತಿ ನೋಡಿದರೆ ಪಾತಾಳಗಂಗೆಗೆ ಇಳಿದು ಬರುವ ಅಸಂಖ್ಯಾತ ಮೆಟ್ಟಲುಗಳು ನಮ್ಮನ್ನು ಅಣಕಿಸಿದಂತಾಯ್ತು. ಇದನ್ನು ಹತ್ತಿದ ಅನುಭವವಾದರೂ ದಕ್ಕಲಿ ಎಂದುಕೊಂಡು ಉತ್ಸಾಹದಿಂದ ಮೆಟ್ಟಲುಗಳನ್ನು ಹತ್ತಲಾರಂಭಿಸಿದೆವು.
ಅಲ್ಲಿ ಸುತ್ತಮುತ್ತ ಇದ್ದ ಕೆಲವು ಸ್ಥಳಗಳನ್ನು ನೋಡಿಕೊಂಡು ರಾತ್ರಿ ಚೆನ್ನಮಲ್ಲಿಕಾರ್ಜುನನಿಗೆ ಸಲ್ಲಿಸುವ ಏಕಾಂತ ಸೇವೆಯಲ್ಲಿ ಮೂಲ ಲಿಂಗಕ್ಕೆ ಹಣೆ ತಾಗಿಸಿ ಆ ತಣ್ಣನೆಯ ಅವರ್ಣನೀಯ ಅನುಭವವನ್ನು ನನ್ನದಾಗಿಸಿಕೊಂಡೆ. ಅ ಘಳಿಗೆಯಲ್ಲಿ ನನ್ನ, ಚೆನ್ನಮಲ್ಲಿಕಾರ್ಜುನನ ಮತ್ತು ಅಕ್ಕಮಹಾದೇವಿಯರ ತ್ರೀವೇಣಿ ಸಂಗಮವಾಯ್ತು ಎಂದು ಮನದಲ್ಲಿ ಅಂದುಕೊಂಡು ಭಾವಪರವಶಳಾದೆ.
ಜ್ವಾಲಾ ನರಸಿಂಹನ ಸನ್ನಿಧಿಗೆ ಡೋಲಿಯಲ್ಲಿ ಪಯಣ

ಶ್ರೀಶೈಲವೆಂಬ ಶೈವಕ್ಷೇತ್ರದಿಂದ ನಾವು ಹೊರಟಿದ್ದು ಅಹೋಬಲವೆಂಬ ವಿಷ್ಣುಕ್ಷೇತ್ರಕ್ಕೆ. ದಾರಿಯ ಮಧ್ಯದಲ್ಲಿ ಎದುರಾಗುತ್ತದೆ, ಶಿವನ ವಾಹನವಾದ ಮಹಾನಂದಿ ಕ್ಷೇತ್ರ. ಅದನ್ನು ಸಂದರ್ಶಿಸಿ ಮುಂದುವರಿಯುತ್ತಿದ್ದಾಗ ನಮಗೆ ಅನಿರೀಕ್ಷಿತವಾಗಿ ಸಿಕ್ಕಿದ್ದೇ ಬೆಲ್ಲಂ ಕೇವ್ಸ್. ಮಿಲಿಯಾಂತರ ವರ್ಷಗಳ ಹಿಂದೆ ನೀರಿನ ಹರಿವು ಭೂಮಿಯಡಿಯಲ್ಲಿ ಮಣ್ಣನ್ನು ಕೊರೆಯುತ್ತಾ ಹೋದ ನಿಸರ್ಗ ನಿರ್ಮಿಸಿದ ಗುಹೆಯಿದು. ಮೂರೂವರೆ ಕಿ.ಮೀ ಉದ್ದವಿರುವ ಇದು ಭಾರತದ ಎರಡನೆಯ ಅತಿ ದೊಡ್ಡ ಮತ್ತು ಉದ್ದವಾಗಿರುವ ಗುಹೆ. ಇದರಲ್ಲಿ ಓಡಾಡಿ ಕದಳಿ ನೋಡಲಾಗದ ನಿರಾಶೆಯನ್ನು ಕಳೆದುಕೊಳ್ಳಲೆತ್ನಿಸಿದೆವು.
ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಶಿಖರಗಳನ್ನು ಹತ್ತಿ ಬಂದ ಆರೇಳು ಮಹಿಳೆಯರಿದ್ದರು. ಅವರಿಗೆಲ್ಲಾ ರೆಕ್ಕೆ ಬಂದಿದ್ದು ಅಹೋಬಲಕ್ಕೆ ಬಂದಾಗ. ಇಲ್ಲಿ ವಿಸ್ತಾರವಾಗಿ ಹರಡಿಕೊಂಡು ಅಲ್ಲಲ್ಲಿ ತಲೆಯೆತ್ತಿ ನಿಂತಿರುವ ಒಟ್ಟಾಗಿ ಗರುಡಾಚಲವೆಂದು ಕರೆಯಲಾಗುವ ವೇದಾಚಲ ಮತ್ತು ಶೇಷಾಚಲ ಬೆಟ್ಟಶ್ರೇಣಿಯನ್ನು ನೋಡಿದಾಗ. ಅಲ್ಲಿ ಒಂಬತ್ತು ಕಡೆ ಉಗ್ರನರಸಿಂಹನ ವಿವಿಧ ರೂಪಗಳ ದೇವಾಲಯಗಳಿವೆ. ಅದನ್ನು ಒಟ್ಟಾಗಿ ನವ ನರಸಿಂಹರೆಂದು ಕರೆಯಲಾಗುತ್ತದೆ. ಅಲ್ಲಿಗೆ ಚಾರಣ ಮಾಡುವುದು ನಮ್ಮ ಪ್ರವಾಸದ ಎರಡನೆಯ ಉದ್ದೇಶವಾಗಿತ್ತು.
ಉಗ್ರ ಸ್ತಂಭ-ಹಿರಣ್ಯಕಶಿಪನ ಅರಮನೆಯ ಕಂಬವಂತೆ ಇದು....

ಪುರಾತನ ರತ್ನಾವತಿ ಪುರವೇ ಇಂದಿನ ಅಹೋಬಲ. ಇನ್ನೂ ಹಳ್ಳಿಯ ಸೊಗಡುತನ್ನವನ್ನು ಉಳಿಸಿಕೊಂಡಿರುವ ಪುಟ್ಟ ಊರಿದು. ಆದರೆ ಇಲ್ಲಿ ನೆಲೆಸಿರುವ ದೇವ ಸಣ್ಣವನಲ್ಲ. ಆತ ಲಕ್ಷಿನರಸಿಂಹ.  ಆತ ಉಗ್ರನರಸಿಂಹನಾಗಿ ತನ್ನ ಉಗುರುಗಳಿಂದ ಹಿರಣ್ಯಕಸಿಪನ ಹೊಟ್ಟೆಯನ್ನು ಬಗೆದು ಆತನ ಕರುಳನ್ನು   ತನ್ನ ಕೊರಳಿಗೆ ಹಾಕಿಕೊಂಡು ಅಟ್ಟಹಾಸ ಮೆರೆದಾಗ ಅವನ ಸಾಮರ್ಥ್ಯವನ್ನು ನೋಡಿ ದೇವತೆಗಳು ’ ಅಹಾ...ಓಹೋ...ಎನ್ ಬಲಂ..!’ ಎಂದು ಉದ್ಘಾರವೆತ್ತಿದರಂತೆ. ಹಾಗಾಗಿಯೇ ಈ ಪ್ರದೇಶಕ್ಕೆ ’ಅಹೋಬಲ’ ಎಂಬ ಹೆಸರು ಬಂತು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇದು ಕೆಳಗಿನ ಅಹೋಬಿಲ..ಇಲ್ಲಿಂದ ಮೂರು ಮೈಲಿ ದೂರದಲ್ಲಿದೆ. ಮೇಲಿನ ಅಹೋಬಿಲ.
ಮೇಲಿನ ಅಹೋಬಲ

ನಮ್ಮ ಚಾರಣ ಆರಂಭವಾಗಿದ್ದು ಮೇಲಿನ ಅಹೋಬಿಲದಿಂದ. ಈ ದೇವಾಲಯದ ಪಕ್ಕದಲ್ಲೇ ಹರಿಯುತ್ತಾಳೆ ಭವನಾಶಿನಿ ಎಂಬ ನದಿ. ಗಂಗೆಯ ಇನ್ನೊಂದು ರೂಪವಿದು. ಉಗ್ರನರಸಿಂಹನನ್ನು ಶಾಂತಗೊಳಿಸಲು ಇವಳು ಸ್ವರ್ಗದಿಂದ ಧರೆಗವತರಿದಳಂತೆ. ಮೇಲಿನ ಅಹೋಬಲದಿಂದ ಚಾರಣ ಆರಂಭಿಸಿದರೆ ಅದು ಕೊನೆಯಾಗುವುದು ಉಗ್ರಸ್ತಂಭದಲ್ಲಿ. ಉಗ್ರಸ್ತಂಭವೆಂದರೆ ದೂರಕ್ಕೆ ಏಕಶಿಲಾ ಸ್ತಂಭವೆಂದು ಭಾಸವಾಗುವ ಎತ್ತರದ ಕಡಿದಾದ ಬೆಟ್ಟ. ಇದು ಹಿರಣ್ಯಕಸಿಪನ ಅರಮನೆಯ ಕಂಬವೆಂಬುದು ಆಸ್ತಿಕರ ನಂಬಿಕೆ. ಇದೇ ಕಂಭವನ್ನೊಡೆದು ನರಸಿಂಹ ಅವತರಿಸಿದನಂತೆ. ಅಲ್ಲಿಂದ ನರಸಿಂಹ ಹಿರಣ್ಯಕಸಿಪನೊಡನೆ ಕುಸ್ತಿಯಾಡುತ್ತಾ ಒಂದೂವರೆ ಕಿ.ಮೀ ಕೆಳಗಡೆ ಬರುತ್ತಾನೆ. ಆ ಜಾಗವೇ ಜ್ವಾಲಾನರಸಿಂಹ ಸನ್ನಿಧಿ. ಅಲ್ಲಿ ಉಗ್ರನರಸಿಂಹ ಆ ರಾಕ್ಷಸನನ್ನು ಕೊಂದು ಅಲ್ಲಿರುವ ಪುಟ್ಟ ಕೊಳದಲ್ಲಿ ತನ್ನ ರಕ್ತಸಿಕ್ತ ಕೈಗಳನ್ನು ತೊಳೆದುಕೊಂಡನಂತೆ. ಅದುವೇ ರಕ್ತಕೊಳ. ಆ ನೀರಿಗೆ ಈಗಲೂ ರಕ್ತ ಛಾಯೆಯಿದೆ. ಭಕ್ತರು ಆ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುವುದಿಲ್ಲ. ಆದರೆ ಅದರ ಪಕ್ಕದಲ್ಲೇ ಉಗ್ರಸ್ತಂಭದ ಶಿಖರದೆಡೆಗಳಿಂದ ಬಿಂದು ಬಿಂದುವಾಗಿ ಬೀಳುವ ಭವನಾಶಿನಿಗೆ ತಲೆಯೊಡ್ಡಿ ಭಕ್ತರು ಪುನೀತರಾಗುತ್ತಾರೆ.
ಪ್ರಹ್ಲಾದ ಸ್ಲೇಟ್


ನಲ್ಲ ಮಲ ಅರಣ್ಯ ಪ್ರದೇಶಗಳಲ್ಲಿ ನೆಲೆ ನಿಂತಿರುವ ನವ ನರಸಿಂಹರ ಹೆಸರುಗಳು ಇಂತಿವೆ.೧.ಜ್ವಾಲಾ ನರಸಿಂಹ ೨.ಮಾಲೋವ ನರಸಿಂಹ ೩. ವರಹಾ ನರಸಿಂಹ ೪. ಕಾರಂಜ ನರಸಿಂಹ ೫. ಭಾರ್ಗವ ನರಸಿಂಹ ೬ ಯೋಗಾನಂದ ನರಸಿಂಹ ೭ ಅಹೋಬಿಲದ ಲಕ್ಷ್ನಿ ನರಸಿಂಹ ೮ ಛತ್ರವಟ ನರಸಿಂಹ ೯.ಪಾವನ ನರಸಿಂಹ. ಹಿರಣ್ಯಕಶಿಪನನ್ನು ಕೊಂದಾಗ ಪ್ರಹ್ಲಾದನಿನ್ನೂ ಬಾಲಕ. ಹಾಗಾಗಿ ಅವನನ್ನ ಸಿಂಹಾಸನಕ್ಕೆ ಯೋಗ್ಯನನ್ನಾಗಿ ರೂಪುಗೊಳಿಸುವುದು ನರಸಿಂಹನ ಜವಾಬ್ದಾರಿಯಾಗಿತ್ತು. ಹಾಗಾಗಿ ಆತನೇ ಸ್ವತಹ ವಿದ್ಯಾಭ್ಯಾಸ ಹೇಳಿಕೊಡುತ್ತಾನೆ. ಅದುವೇ ಪ್ರಹ್ಲಾದ ಗುಹೆಗಳು. ಆ ಗುಹೆಯ ಎದುರುಗಡೆ ವಿಶಾಲವಾಗಿ ಹರಡಿಕೊಂಡಿರುವ ಹಾಸು ಬಂಡೆಯಿದೆ. ಅದರಲ್ಲಿ ಸ್ಥಳಿಯರು ಸಂಸ್ಕೃತವೆಂದು ಕರೆಯುವ ಅರ್ಥವಾಗ ಲಿಪಿಯ ಕುರುಹುಗಳಿವೆ.ಸ್ಲೇಟಿನಂತೆ ಅದನ್ನು ಆಯಾತಾಕಾರದಲ್ಲಿ ವಿಭಾಜಿಸಲಾಗಿದೆ. ಇದರಲ್ಲೇ ಬಾಲಕ ಪ್ರಹ್ಲಾದ ಅಕ್ಷರಗಳನ್ನು ತಿದ್ದುತ್ತ್ದ್ದನಂತೆ. ಇಲ್ಲಿ ನಿಂತು ನೋಡಿದರೆ ಅಹೋಬಲದ ಸುಂದರ ನೋಟ ಸಿಗುತ್ತದೆ.
ಪ್ರಕ್ಲಾದ ಗುಹೆಯಿಂದ ಮೇಲಿನ ಅಹೋಬಲದ ನೋಟ

 ನವನರಸಿಂಹರಲ್ಲಿ ನನಗೆ ವಾಸ್ತವಕ್ಕೆ ತೀರಾ ಹತ್ತಿರವೆನಿಸಿದ್ದು ಪಾವನ ನರಸಿಂಹ. ಇದರಲ್ಲಿ ನರಸಿಂಹನ ಎಡತೊಡೆಯ ಮೇಲೆ ಕುಳಿತ ಲಕ್ಷ್ಮಿ, ಆಕೆ ಚುಂಚ ಲಕ್ಷ್ಮಿ. ಸ್ಥಳಿಯ ಜಾನಪದದೊಡನೆ ಬೆಸೆದುಕೊಳ್ಳುವ ಅವಳ ಕಥೆ ಪುರಾಣದೊಡನೆ ಬೆಸೆದುಕೊಂಡು ಐತಿಹ್ಯದತ್ತ ಬೆಳಕು ಚೆಲ್ಲುತ್ತದೆ. ನಲ್ಲಮಲ ಅರಣ್ಯದಲ್ಲಿ ಚುಂಚರೆಂಬ ಬೇಡ ಜಾತಿಯವರಿದ್ದಾರೆ. ಈ ಬುಡಕಟ್ಟಿನವರ ಜೀವನ ವಿಧಾನವನ್ನು ಶ್ರೀಶೈಲದಲ್ಲಿರುವ ಮ್ಯೂಸಿಯಂನಲ್ಲಿ ಕಾಣಬಹುದು. ಆ ಕುಲದಲ್ಲಿ ಸಾಕ್ಷತ್ ಲಕ್ಷ್ಮಿ ಹುಟ್ಟುತ್ತಾಳೆ.ಆಮೇಲೆ ಆಕೆ ನರಸಿಂಹನನ್ನು ಮದುವೆಯಾಗುತ್ತಾಳೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕಾಡಿನ ಮಧ್ಯೆ  ಆಕೆ ವಾಸಿಸುತ್ತಿದ್ದಳೆನ್ನಲಾದ ಗುಹೆಯನ್ನು, ಮನೆಯನ್ನೂ ಸ್ಥಳಿಯರು ತೋರಿಸುತ್ತಾರೆ ಇಲ್ಲಿ ಉಗ್ರನರಸಿಂಹ ಸೌಮ್ಯಸ್ವರೂಪಿ. ಭಕ್ತರ ಸಕಲ ಇಷ್ಟಾರ್ಥಗಳನ್ನು ಪಾವನ ನರಸಿಂಹ ಈಡೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಕೆಳಗಿನ ಅಹೋಬಿಲದಿಂದ ಕಠಿಣವಾದ ೨೩ ಮೈಲಿಗಳ ಜೀಪಿನ ಹಾದಿಯಿದೆ. ಅಥವಾ ೬ ಮೈಲಿಯ ಚಾರಣ ಹಾದಿಯಿದೆ.
ಡೋಲಿ ಹೊರುವ ಅಣ್ಣಂದಿರು

ಬೆಟ್ಟ ಹತ್ತಲು ಊರುಗೋಲುಗಳ ಸಹಾಯವಿದ್ದರೆ ಚಾರಣದ ನಡಿಗೆ ಹಗುರವಾಗುತ್ತದೆ. ಅದನ್ನು ಮೇಲಿನ ಅಹೋಬಿಲದಲ್ಲಿ ಖರೀದಿ ಮಾಡಬಹುದು. ಒಂದು ಕೋಲಿಗೆ ಕೇವಲ ಐದು ರೂಪಾಯಿ. ಎರಡು ರೂಪಾಯಿಗೆ ಬಾಡಿಗೆಗೂ ಕೊಂಡುಕೊಳ್ಳಬಹುದು. ಇದಲ್ಲದೆ ಇಲ್ಲಿಂದ ಜ್ವಾಲಾ ನರಸಿಂಹನ ತನಕ ಹೋಗಲು ಡೋಲಿಯ ವ್ಯವಸ್ಥೆಯೂ ಇದೆ. ಒಬ್ಬರನ್ನು ಇಬ್ಬರು ವ್ಯಕ್ತಿಗಳು ಹೊರುತ್ತಾರೆ. ಇದಕ್ಕೆ ಅವರು ಕೇಳುವ ಹಣ ೧೮೦೦ ರೂಪಾಯಿಗಳು. 

ಹಿರಣ್ಯಕಶಿಪುವಿನ ರಾಜ್ಯ ನಲ್ಲಮಲ ಅರಣ್ಯಪ್ರದೇಶದಲ್ಲಿತ್ತು. ಹಾಗಾಗಿ ಅವನ ಮಗ ಪ್ರಹ್ಲಾದ ಇಲ್ಲೇ ರಾಜ್ಯವಾಳಿರಬಹುದು. ಆದರೆ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಎಲ್ಲಿ ರಾಜ್ಯಭಾರ ಮಾಡಿದ?ಅವನು ಪ್ರಜಾರಕ್ಷಕನಾಗಿದ್ದ, ಧರ್ಮಾತ್ಮನಾಗಿದ್ದ, ಅವನ ನಾಡು ಸುಭೀಕ್ಷವಾಗಿತ್ತು. ಶ್ರೀಹರಿಯೇ ಅವನ ಬಳಿ ವಾಮನನಾಗಿ ಬಂದು ಮೂರು ಹೆಜ್ಜೆ ನೆಲವನ್ನು ಬೇಡಿದ ಎಂದು ನಮ್ಮ ಪುರಾಣಗಳು ಬಣ್ಣಿಸುತ್ತವೆ. ಆದರೆ ಅವನು ಯಾವ ಪ್ರದೇಶದಲ್ಲಿ ರಾಜ್ಯಭಾರ ಮಾಡಿರಬಹುದು ಎಂಬುದು ಸಧ್ಯ ನನ್ನನ್ನು ಕಾಡುತ್ತಿರುವ ಪ್ರಶ್ನೆ. ವಾಮನ ಅವನನ್ನು ಪಾತಾಳಕ್ಕೆ ತಳ್ಳಿದ ಎಂದು ಪುರಾಣ ಹೇಳುತ್ತದೆ. ಸಾಮಾನ್ಯವಾಗಿ ನಾವು ಪಾತಾಳಲೋಕ ಎಂದು ಗುರುತಿಸುವುದು ಕರಾವಳಿ ಸೀಮೆಗಳಾದ ತುಳುನಾಡು ಮತ್ತು ಕೇರಳವನ್ನು. ಅದು ನಾಗರಾಧನೆಯ ನಾಡೂ ಹೌದು
ರಕ್ತ ಕೊಳ
. ರಾಕ್ಷಸರು ವಾಸಿಸುತ್ತಿದ್ದುದು ದಟ್ಟಾರಣ್ಯಗಳಲ್ಲಿ. ಹಿರಣ್ಯಕಶಿಪು ರಾಜ್ಯವಾಳುತ್ತಿದ್ದು ಅಂಧ್ರದ ನಲ್ಲ ಮಲದಲ್ಲಿ. ’ನಲ್ಲ’ ಅಂದ್ರೆ ತೆಲುಗಿನಲ್ಲಿ ಕಪ್ಪು ಎಂದು ಅರ್ಥ. ಮಲ ಅಂದರೆ ಕಾಡು. ಕಪ್ಪು ಕಾಡು ಅಂದ್ರೆ ದಟ್ಟ ಅರಣ್ಯ. ಕೇರಳದಲ್ಲಿಯೂ ಜಗತ್ಪ್ರಸಿದ್ಧಿಯಾದ ನಿತ್ಯಹರಿದ್ವರ್ಣದ ’ಸೈಲೆಂಟ್ ವ್ಯಾಲಿ’ ಎಂಬ ವಿಸ್ತಾರವಾದ ದಟ್ಟಾರಣ್ಯವಿದೆ. ವಾಮನ ನಲ್ಲಮಲದಿಂದ ಮೌನ ಕಣಿವೆಗೆ ಬಲಿಯನ್ನು ತಳ್ಳಿರಬಹುದೇ? ಅನಂತರದಲ್ಲಿ ಅಲ್ಲೇಲ್ಲಾದರೂ ಬಲಿ ಚಕ್ರವರ್ತಿ ರಾಜ್ಯವಾಳಿರಬಹುದೇ? ಈ ಸಂಶಯಕ್ಕೆ ಇನ್ನೂ ಒಂದು ಸಮರ್ಥನೆಯಿದೆ. ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬಲಿ ಚಕ್ರವರ್ತಿ ತನ್ನ ಪ್ರಜೆಗಳು ಹೇಗಿದ್ದಾರೆಂದು ನೋಡುವುದಕ್ಕಾಗಿಯೇ ಮೂರು ದಿನದ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ ಎಂಬುದು ಎಲ್ಲಾ ಭಾರತೀಯರ ನಂಬುಗೆ. ಇದೇ ಬೆಳಕಿನ ಹಬ್ಬ ದೀಪಾವಳಿ. ಇದನ್ನು ಕೇರಳಿಗರು ’ಓಣಂ’ ಎಂದು ಆಚರಿಸುತ್ತಾರೆ.  ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಈ ಹಬ್ಬವನ್ನು ನಾಡಿನಾಧ್ಯಂತ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸುತ್ತಾರೆ.
ಅಶಕ್ತರಿಗೆ ಚಾರಣಿಗರ ನೆರವು.

  ಹಾಗಾಗಿಯೇ ಬಲಿಚಕ್ರವರ್ತಿ ಕೇರಳದಲ್ಲಿ ರಾಜ್ಯವಾಳಿರಬಹುದೇ ಎಂಬ ಸಂಶಯದ ಹುಳುವನ್ನು ತಲೆಗೆ ಬಿಟ್ಟುಕೊಂಡಿದ್ದೇನೆ.ನನ್ನ ಈ ಸಂಶಯವನ್ನು ಆಲಿಸಿದ ಗೆಳೆಯರೊಬ್ಬರು ಅದನ್ನು ಪುಷ್ಟಿಕರಿಸುವಂತೆ ಹೌದು ಬಲಿ ಕೇರಳದಲ್ಲಿ ಮತ್ತೆ ರಾಜ್ಯಕಟ್ಟಿ ಅದನ್ನು ನಲ್ಲಮಲದ ತನಕ ವಿಸ್ತರಿಸಿದ್ದ. ಅಲ್ಲಿ ಆತನನ್ನು ಕುತಂತ್ರದಿಂದ ಹತ್ಯೆ ಮಾಡಲಾಯ್ತು.  ಈಗ ಪ್ರಸಿದ್ದ ಕ್ಷೇತ್ರವಾಗಿರುವ ತಿರುಪತಿಯೇ ಅವನ ಸಮಾಧಿ ಸ್ಥಳವಾಗಿತ್ತು.ಕೇರಳದ ಭಕ್ತರು ಅಲ್ಲಿಗೆ ಬೆಲೆಬಾಳುವ ಕಾಣಿಕೆಗಳನ್ನು ಅರ್ಪಿಸಿ ಅದು ಶ್ರೀಮಂತವಾಯ್ತು. ಎಂದು ಹೇಳಿದರು ಇದು ನಿಜವಿರಬಹುದೇ?.
ಇದರ ನೆರವಿಲ್ಲದೆ ಪಾವನ ನರಸಿಂಹನನ್ನು ಕಾಣುವುದು ಕಷ್ಟ..
.ಬಹುಶಃ ನನ್ನ ಮುಂದಿನ ಪ್ರವಾಸ ಕೇರಳದ ಮೌನಕಣಿವೆಯೆಡೆಗೆ..!


Sunday, November 25, 2012

ಕತ್ತಲಲ್ಲಿ ಬದುಕು ಅರಳಲು ಸಾಧ್ಯವೇ?

§»gÀ0UÀªÁV ºÉýPÉÆ¼Àî®Ä ¸ÁzsÀåªÁUÀzÀ0vÀºÀ ºÀ®ªÁgÀÄ ¸ÀªÀĸÉåUÀ¼ÀÄ ºÉtÄÚªÀÄPÀ̼À°èªÉ. CzÀÄ UÀ0qÀÄ ¥Àæ¥À0ZÀPÉÌ CxÀðªÁUÀ®Ä ¸ÁzsÀåªÉà E®è. CxÀðªÁUÀ¨ÉÃPÉ0zÀÄ £ÁªÀÅ ºÀoÀ ªÀiÁqÀĪÀÅzÀÄ PÀÆqÁ CxÀð«®èzÀÄÝ.
£ÀªÀÄä UÁæªÀiÁ0vÀgÀ ¥ÀæzÉñÀzÀ ±Á¯ÉUÀ½UÉ «±Á®ªÁzÀ DlzÀ ªÉÄÊzÁ£À«gÀÄvÀÛzÉ. PÉÆoÀrUÀ¼À ¸À0SÉå PÀrªÉĬÄzÀÝgÀÆ PÀlÖqÀPÉÌ ºÉ0a£À ªÀiÁrgÀÄvÀÛzÉ. ªÉÄÊzÁ£ÀzÀ vÀÄ¢AiÀÄ°è ¨Á«¬ÄgÀÄvÀÛzÉ. ±Á¯ÉAiÀÄ ¸ÀÄvÀÛ®Æ £À¼À£À½¸ÀĪÀ PÉÊzÉÆÃl«gÀÄvÀÛzÉ.
ºÀ½îUÁr£À ±Á¯ÉUÀ¼À°è PÀlÖqÀ, ¥Àj¸ÀgÀ J¯Áè JµÉÖà ZÉ£ÁßVzÀÝgÀÆ ±ËZÁ®AiÀÄzÀ ªÀåªÀ¸ÉÜ EgÀĪÀÅ¢®è. ºÉtÄÚ ªÀÄPÀ̼À0vÀÆ ªÀÄÆvÀæ «¸Àdð£ÉUÁV¥ÀqÀĪÀ ¥ÁqÀÄ CvÀå0vÀ ªÀÄÄdÄUÀgÀzÀÄÝ. §ºÀıÀB ±Á¯Á PÀlÖqÀUÀ¼À£ÀÄß PÀlÄÖªÀªÀgÀÄ, CzÀgÀ ªÉÄîĸÀÄÛªÁj £ÉÆÃrPÉÆ¼ÀÄîªÀªÀgÀÄ, ¸ÀgÀPÁgÀ J®èzÀgÀ®Æè UÀ0qÀ¸ÀgÀzÉà ¥Áæ¨sÀ®å. ¥Áæ¨sÀ®åªÉãÀÄ §0vÀÄ? CzÀgÀ°è ¨sÁVAiÀiÁUÀĪÀªÀgɯÁè CªÀgÉÃ. JµÁÖzÀgÀÆ ¥ÀæPÀÈw PÀgÉUÉ ªÉÆÃlÄUÉÆÃqÉAiÀÄ£ÀÄß CªÀ®0©¸ÀĪÀªÀgÀÄ vÁ£ÉÃ!
ºÁUÁV CªÀjUÉ ºÉ0UÀ¸ÀgÀ ¸À0PÀl, ¸ÀªÀĸÉåUÀ¼ÀÄ CxÀðªÁUÀĪÀÅzÉà E®è. zÀÆgÀ ¥ÀæAiÀiÁtzÀ gÁwæ §¸ÀÄìUÀ¼À°è ¸ÀÄ®¨sÀ ±ËZÁ®AiÀÄ EgÀĪÉqÉUÀ¼À°è qÉæöʪÀgï J0zÀÆ §¸ÀÄì ¤°è¸ÀĪÀÅzÉà E®è. UÀ0qÀ¸ÀjUÉ §AiÀÄ®Ä ¥ÀæzÉñÀªÉà ¨ÉÃPÀÄ vÁ£ÉÃ?
£ÁªÀÅ ±Á¯ÉUÉ ºÉÆÃUÀĪÀ PÁ®zÀ¯ÁèzÀgÉ ±ËZÁ®AiÀÄ E®è¢gÀĪÀÅzÀÄ C0vÀºÀ ¸ÀªÀĸÉåAiÉÄãÀÆ C¤ß¸ÀÄwÛgÀ°®è. AiÀiÁPÉ0zÀgÉ ±Á¯ÉAiÀÄ ¸ÀÄvÀÛªÀÄÄvÀÛ JvÀÛgÀªÁV ¨É¼ÉzÀ ¥ÉÇzÉ VqÀUÀ¼À ªÀÄgɬÄvÀÄÛ. E®èªÁzÀgÀÆ zÉúÀ¨ÁzsÉAiÀÄ£ÀÄß vÀqÉzÀÄPÉÆ¼ÀÄîªÀÅzÀÄ ºÉtÄÚªÀÄPÀ̽UÉ ¸ÁªÀiÁ£Àå vÁ£ÉÃ?
FUÀ F «ZÁgÀ CµÀÄÖ ¸ÀgÀ¼ÀªÁV®è.
¥Àæ¥À0ZÀzÁzÀå0vÀ FUÀ ºÉtÄÚªÀÄPÀ̼ÀÄ zÉÊ»PÀªÁV §ºÀĨÉÃUÀ£Éà ¥ÀæªÀzsÀðªÀiÁ£ÀPÉÌ §gÀÄwÛzÁÝgÉ. »0zɯÁè ¸ÀgÁ¸Àj ºÀ£ÉßgÀqÀj0zÀ ºÀ¢£ÁgÀÄ ªÀµÀðPÉÌ IÄvÀÄZÀPÀæ DgÀ0¨sÀªÁUÀÄwÛvÀÄÛ. CzÀÄ FUÀ J0lPÉÌ E½¢zÉ J0zÀÄ aãÁzÀ°è £ÀqɹzÀ ¸À«ÄÃPÉëAiÉÆ0zÀÄ ºÉüÀÄwÛzÉ. ²ÃvÀ ¥ÀæzÉñÀQÌ0vÀ GµÀÚªÀ®AiÀÄzÀ°è ºÀÄqÀÄVAiÀÄgÀÄ §ºÀĨÉÃUÀ£Éà P˪ÀiÁAiÀÄðªÀ£ÀÄß zÁn §gÀÄvÁÛgÉ.
£Á®Ì£Éà PÁè¹£À°è NzÀÄwÛzÀÝ ¨Á¯ÉAiÉÆ§â¼ÀÄ IÄvÀĪÀÄwAiÀiÁVzÀݼÀÄ. CªÀ¼À CªÀÄä ¢PÀÄÌ vÉÆÃZÀzÉ C¼ÀÄvÁÛ PÀĽvÀzÀÄÝ, D ºÀÄqÀÄV ¦½¦½ PÀtÄÚ ©qÀÄvÁÛ "£À¤ß0zÀ K£ÀÄ vÀ¥ÁàVzÉ" J0zÀÄ vÉÆÃZÀzÉà UÀ°©°AiÀiÁzÀzÀÄÝ EwÛÃZÉUÉ £À£Àß UÀªÀÄ£ÀPÉÌ §0zÀ «ZÁgÀ.
ºÉtÄÚ ªÀÄPÀ̽UÉ E0vÀºÀÄzÉÆ0zÀÄ ¸ÀÆPÀë÷ä ¸ÀªÀÄAiÀÄzÀ¯ÁèzÀgÀÆ wÃgÁ SÁ¸ÀV ¥Àj¸ÀgÀ ¨ÉÃPÀÄ. ¤©üðÃw¬Ä0zÀ AiÀiÁªÀÅzÉà C¼ÀÄPÀÄ E®èzÉà CzÀPÉÌ vÀPÀÌ ªÀåªÀ¸ÉÜAiÀÄ£ÀÄß ªÀiÁrPÉÆ¼ÀÄîªÀ ªÁvÁªÀgÀt ¨ÉÃPÀÄ. DzÀgÉ C0vÀºÀ ¥Àj¸ÀgÀ £ÀªÀÄä UÁæªÀiÁ0vÀgÀ ±Á¯ÉUÀ¼À°è J°èzÉ?
£ÀªÀÄä PÁ®zÀ¯ÁèzÀgÉ ªÁgÀUÀlÖ¯É ±Á¯ÉUÉ ¨ÁgÀ¢zÀÝgÀÆ AiÀiÁgÀÆ PÉüÀÄwÛgÀ°®è. FV£À PÀ°PÁ «zsÁ£À, ¨sÉÆÃzsÀ£Á PÀæªÀÄ J®èªÀÇ ©ü£Àß. ºÁUÁV £Á¯ÉÌöÊzÀÄ ¢ªÀ¸À gÀeÉ ºÁPÀĪÀ0w®è. ¸Áå¤lj £Áå¥ïQ£ïUÀ¼ÀÄ zÀĨÁj. CªÀÅ £ÀUÀgÀ ¥ÀæzÉñÀzÀ ºÉtÄÚªÀÄPÀ̽UÉ ªÀiÁvÀæ JlÄPÀ§®èªÀÅ.
£ÀUÀgÀ ¥ÀæzÉñÀzÀ°è NzÀÄwÛgÀĪÀ ºÉtÄÚªÀÄPÀ̼ÀÄ F «ZÁgÀzÀ°è ¥ÀÅtåªÀ0vÀgÀÄ. C°è ±Á¯ÉUÀ¼À°è ºÀÄqÀÄVAiÀÄjUÉ0zÉà ¥ÀævÉåÃPÀ ±ËZÁ®AiÀÄUÀ½gÀÄvÀÛªÉ. PÉ®ªÀÅ ±Á¯Á PÁ¯ÉÃdÄUÀ¼À°è ªÀÄ»¼ÉAiÀÄjUÁVAiÉÄà «±Áæ0w PÉÆoÀrUÀ½gÀÄvÀÛªÉ. CzÀÆ C®èzÉà PÉ®ªÀÅ ±Á¯ÉUÀ¼À°è ºÀÄqÀÄVAiÀÄjUÉ vÀÄvÀÄð ¸À¤ßªÉñÀUÀ¼À°è ¸Áå¤lj ¥ÁåqïUÀ¼À£Éßà MzÀV¸ÀĪÀ ªÀåªÀ¸ÉÜ EzÉ. CzÀPÁÌVAiÉÄà ¤¢ðµÀÖ ªÀÄ»¼Á nÃZÀgïUÀ½gÀÄvÁÛgÉ.
SÁ¸ÀV ±Á¯ÉUÀ¼À°è ªÀÄ»¼Á ²PÀëQAiÀÄgÉà C¢üPÀ ¸À0SÉåAiÀİègÀÄvÁÛgÉ. ºÁUÁV CªÀgÀÄ PÉ®ªÀÅ ¸À0zÀ¨sÀðUÀ¼À°è D¥ÀÛ ¸À®ºÉUÁgÀgÁVAiÀÄÆ PÁAiÀÄ𠤪Àð»¸ÀÄvÁÛgÉ. UÀÄt£ÀqÀvÉUÀ½0zÀ »rzÀÄ §mÉÖ§gÉAiÀÄ vÀ£ÀPÀ CPÀÌ£À0vÉ, UɼÀwAiÀÄ0vÉ, vÁ¬ÄAiÀÄ0vÉ ªÀiÁUÀðzÀ±Àð£À ¤ÃqÀÄvÁÛgÉ. F ¨sÁUÀå UÁæªÀiÁ0vÀgÀ ±Á¯ÉAiÀÄ ªÀÄPÀ̽UÉ J°è0zÀ §gÀ¨ÉÃPÀÄ?
£ÀªÀÄä ²PÀët ¥ÀzÀÞwAiÀÄ°è ¥ÁæxÀ«ÄPÀ ²PÀëtªÀ£ÀÄß AiÀiÁgÀÆ UÀ0©üÃgÀªÁV vÉUÉzÀÄPÉÆ0qÉà E®è. ªÀÄPÀ̼À ªÀÄ£À¸ÀÄì aUÀÄgÉÆqÉAiÀÄĪÀ PÁ® CzÀÄ. CzÀÄ QüÀjªÉĬÄ0zÀ ªÀÄÄzÀÄqÀĪÀ0vÉ ªÀiÁqÀ¨ÁgÀzÀÄ. ªÀÄÄPÀÛªÁV ºÁgÁqÀ®Ä K£É¯Áè ªÀåªÀ¸ÉÜ ªÀiÁqÀ¨ÉÃPÉÆÃ CzÀ£ÀÄß ªÀiÁqÀ¯ÉèÉÃPÀÄ.
±Á¯ÉUÉÆ0zÀÄ ±ËZÁ®AiÀÄ PÀlÄÖªÀÅzÀPÉÌ ®PÀëUÀlÖ¯É ºÀtªÉãÀÆ ¨ÉÃPÁUÀĪÀÅ¢®è. Hj£À UÀtå ªÀåQÛAiÉÆ§â vÀ£Àß ªÉÊAiÀÄQÛPÀ ºÀt¢0zÀ¯Éà EzÀ£ÀÄß ªÀiÁqÀ§ºÀÄzÀÄ. ZÉ£ÁßV ¸À0¥ÁzÀ£É¬ÄgÀĪÀ, «zÉñÀUÀ¼À°è ªÁ¹¸ÀÄwÛgÀĪÀ ºÀ¼É «zÁåyðAiÉÆ§â£ÀÆ EzÀ£ÀÄß ªÀiÁqÀ§ºÀÄzÀÄ CxÀªÁ Hj£À AiÀÄĪÀPÀ ªÀÄ0qÀ® - AiÀÄĪÀw ªÀÄ0qÀ®zÀvÀºÀ ¸ÁªÀiÁ£Àå ¸À0WÀl£É PÀÆqÁ F ªÉZÀѪÀ£ÀÄß ¨sÀj¸À§ºÀÄzÀÄ. Hj£À°è AiÀiÁgÁzÀgÀÆ ¸ÀvÁÛUÀ CxÀªÁ zsÁ«ÄðPÀ PÁAiÀÄðUÀ¼À£ÀÄß £ÀqɸÀĪÁUÀ ªÀiÁqÀĪÀ C£Àß ¸À0vÀ¥ÀðuÉAiÀÄ°è «¤AiÉÆÃUÀªÁUÀĪÀ ºÀtzÀ°è M0zÀ0±ÀªÀ£ÀÄß G¥ÀAiÉÆÃV¹PÉÆ0qÀgÀÆ ±ËZÁ®AiÀÄ ¤ªÀiÁðtªÁUÀÄvÀÛzÉ. ªÀÄzÀĪÉUÉ RZÁðUÀĪÀ ºÀtzÀ°è ±Á¯É PÀlÖqÀªÉà ¤ªÀiÁðtªÁUÀ§ºÀÄzÀÄ. CzÀÄ ¨ÉÃgÉ «µÀAiÀÄ.
"£ÀªÀÄä ±Á¯ÉAiÀÄ°è ±ËZÁ®AiÀÄ EzÉ ©ræ" J0zÀÄ PÉ®ªÀgÀÄ C£Àß§ºÀÄzÀÄ. DzÀgÉ CªÀÅUÀ½UÉ ¤Ãj£À ªÀåªÀ¸ÉÜ EzÉAiÀiÁ?£ÉÆÃr. R0rvÀªÁVAiÀÄÆ EgÀĪÀÅ¢®è. £ÀªÀÄä°è ±ËZÁ®AiÀÄ ¤«Äð¸ÀĪÀ «£Áå¸ÀªÉà «avÀæ. ªÉÄïÁÒªÀt E®èzÀ CzsÀð JvÀÛj¹zÀ UÉÆÃqÉUÀ¼ÀÄ. CzÀgÉÆ¼ÀUÉ GzÀÝ£ÉAiÀÄ eÁUÀªÀ£Éßà ªÉÆÃlÄ UÉÆÃqÉUÀ½0zÀ «0UÀr¹ ¸Àé®à JvÀÛj¹zÀ eÁUÀ. £ÀqÉzÁqÀ®Ä QgÀĺÁ¢.
M¼ÀUÉ ¥ÀæªÉò¹zÉÆqÀ£É «¸Àdð£ÉAiÀÄ£ÀÄß ªÀiÁqÀ®Ä PÀÆvÀªÀgÀ »0§¢ PÀtÂÚUÉ ©Ã¼ÀÄvÀÛzÉ. ¥ÉæöʪÉùAiÉÄà E®èzÀ ªÁPÀjPÉ §gÀĪÀ eÁUÀ.
E0vÀºÀ ¥Àj¸ÀgÀzÀ°è vÀªÀÄä ºÉtÛ£ÀªÀ£ÀÄß PÁ¥ÁrPÉÆ0qÀÄ £ÀªÀÄä ºÀÄqÀÄVAiÀÄgÀÄ ¨É¼ÉAiÀĨÉÃPÀÄ. ºÀÄqÀÄVAiÀÄgÀ ºÉtÛ£ÀzÀ «µÀAiÀÄzÀ°è £ÀªÀÄä ¸ÀªÀiÁd PÀtÄÚ ªÀÄÄaÑ PÀÆwzÉ. CxÀªÁ C¸ÀqÉØ¬Ä0zÀ ªÀwð¹zÉ!!!
§ºÀıÀB £ÀªÀÄä UÀ0qÀ¸ÀjUÉ ªÀÄ»¼ÉAiÀÄgÀ M¼À dUÀvÀÄÛ CxÀðªÁUÀĪÀÅzÉà E®èªÉÃ£ÉÆÃ?
¸ÁߣÀPÁÌV, §»zÉð±ÉUÉ PÀvÀÛ¯ÁUÀĪÀÅzÀ£Éßà PÁAiÀÄÄvÀÛ PÀĽwgÀĪÀ JµÉÆÖ0zÀÄ ªÀÄ»¼ÉAiÀÄgÀÄ £ÀªÀÄä ¸ÀÄvÀÛªÀÄÄvÀÛ®Æ EzÁÝgÉ. ¸Àé®à ¥ÀæAiÀÄvÀß ¥ÀlÖgÉ EªÀgÀ §zÀÄPÀÄ ºÀ¸À£ÀÄUÉÆ¼Àî®Ä ¸ÁzsÀå«®èªÉÃ?

[ ’ಹಂಗಾಮ’ ನಿಯತಕಾಲಿಕದಲ್ಲಿ ಪ್ರಕಟವಾದ ಬರಹ ]
 

Friday, November 9, 2012

ಉಂಗುರದೊಳಗಿನ ಬ್ರಹ್ಮಾಂಡ..!



ಚಿಕ್ಕಂದಿನಿಂದ ನನಗೊಂದು ಕನಸಿತ್ತು; ನನ್ನ ಬೆರಳಿಗೊಂದು ಉಂಗುರ ಹಾಕಿಕೊಳ್ಳಬೇಕೆಂದು. ಆ ಕನಸು ಹುಟ್ಟಲು ಕಾರಣವಿದೆ.ನನ್ನ ಅಮ್ಮನ ಬಳಿ ಒಂದು ಉಂಗುರವಿತ್ತು. ನನ್ನ ಅಜ್ಜ ತಕ್ಕಮಟ್ಟಿಗೆ ಶ್ರೀಮಂತರಾದ ಕಾರಣದಿಂದ ಮಗಳಿಗೆ ಒಂದಷ್ಟು ಒಡವೆಗಳನ್ನು ಮಾಡಿಸಿಕೊಟ್ಟಿದ್ದರು. ಅವರು ದೇಶ ಪ್ರೇಮಿಯಾಗಿದ್ದರಿಂದ ರಾಷ್ಟ್ರ ಲಾಂಛನವಿದ್ದ ಒಂದು ಸುಂದರ ಉಂಗುರವನ್ನು ಅಮ್ಮನಿಗೆ ಬಳುವಳಿಯಾಗಿ ನೀಡಿದ್ದರು. ಆ ಉಂಗುರದ ಮೇಲ್ಪದರಿಗೆ ಕಡು ನೀಲಿ ಬಣ್ಣದ ಚೌಕಾಕಾರದ ಮೆಲ್ವಾಸು ಇತ್ತು., ಆ ಮೇಲ್ವಾಸಿನ ಮೇಲೆ ವಿರಾಜಮಾನವಾಗಿರುವ ಮೂರು ಮುಖದ ಸಿಂಹ. ಆ ಉಂಗುರದ ಮೇಲೆ ನನಗೆ ಹುಚ್ಚು ವ್ಯಾಮೋಹ. ಪ್ರತಿ ಸರ್ತಿ ಅಮ್ಮ ಒಡವೆಗಳನ್ನಿಟ್ಟಿರುವ ಪುಟ್ಟ ಕರಡಿಗೆಯನ್ನು ತೆಗೆದಾಗಲೆಲ್ಲಾ ನಾನದನ್ನು ಸವರಿ ಸವರಿ ನೋಡುತ್ತಿದ್ದೆ. ಅಮ್ಮ ಅದನ್ನು ನನ್ನ ಕೈಯಿಂದ ಕಿತ್ತುಕೊಂಡು ಮತ್ತೆ ಕರಡಿಗೆಯೊಳಗೆ ಭದ್ರವಾಗಿ ಇಡುತ್ತಿದ್ದರು.
ನನಗೆ ಆಗಲೂ ಹಾಗೆಯೇ.. ಚಿನ್ನದ ಮೇಲೆ ಅಂತಹ ಮೋಹವೇನೂ ಇರಲಿಲ್ಲ. ಆದರೆ ಆ ಉಂಗುರದ ಮೇಲೆ ಒಂದು ಕಣ್ಣು ಇದ್ದೇ ಇತ್ತು.ಸ್ವಲ್ಪ ದೊಡ್ಡವರದಂತೆಲ್ಲಾ ನಮ್ಮೂರು ಕಡೆ ಅಂದರೆ ದ.ಕ ಜಿಲ್ಲೆಯಲ್ಲಿ ಅಥವಾ ಎಲ್ಲಾ ಕಡೆಯೂ ಇರಬಹುದು ಚೂರು ಚೂರೇ ಚಿನ್ನ ಮಾಡಿಸಲು ಆರಂಭಿಸುತ್ತಾರೆ. ಹೆಣ್ಣು ಹುಡುಗಿ ನಾಳೆ ಮದುವೆಯಾಗುವವಳು ತಾನೇ? ಗಂಡಿನ ಕಡೆಯವರು ಹುಡುಗಿ ನೋಡುವುದಕ್ಕಿಂತ ಮೊದಲೇ ಕೇಳುವ ಪ್ರಶ್ನೆ ’ಹುಡುಗಿಗೆ ಎಷ್ಟು ಬಂಗಾರ ಕೊಡ್ತೀರಿ? ಎಷ್ಟು ವರದಕ್ಷಿಣೆ ಕೊಡ್ತೀರಿ? ಎಂಬುದೇ ಆಗಿರುತ್ತದೆ. ಹಾಗೆ ನನಗೆ ಕೂಡಾ ಕಿವಿಗೊಂದು ಚಿಕ್ಕ ಓಲೆ ಅದಕ್ಕೊಂದು ಲೋಲಾಕು ಬಂತು. ಕೊರಳಿಗೊಂದು ಚೈನ್ ಬರಬಹುದೆಂದು ಕಾಯುತ್ತಾ ಹೋದೆ. ಯಾಕೆಂದರೆ ಚೈನ್, ನಂತರ ಕೈಗಳಿಗೆ ಬಳೆ, ಕೊನೆಯದಾಗಿ ಬೆರಳಿಗುಂಗುರ ಬರುತ್ತದೆ. ಆ ಉಂಗುರ ಮಾಡಿಸುವ ಘಳಿಗೆ ಬಂದಾಗ  ನನ್ನ ಮನವನ್ನಪಹರಿಸಿದ ಉಂಗುರಕ್ಕಾಗಿ ಬೇಡಿಕೆಯಿಡಬಹುದೆಂಬುದು ನನ್ನ ಮಹದಾಸೆಯಾಗಿತ್ತು. ಆದರೆ ಆ ಶುಭ ಘಳಿಗೆ ಕೂಡಿ ಬರಲೇ ಇಲ್ಲ. ಯಾಕೆಂದರೆ.....
ಅವಿಭಕ್ತ ಕುಟುಂಭದಲ್ಲಿ ಹುಟ್ಟಿದ ನನ್ನಪ್ಪ ಶ್ರೀಮಂತರಾಗಿದ್ದರೂ ಅವರಿಗೆ ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಪ್ರತಿಷ್ಠ ಮನೆತನದ ಗಂಡು ಎಂಬ ಕಾರಣಕ್ಕೆ, ಮೇಲಾಗಿ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ತಬ್ಬಲಿ, ಚಿಕ್ಕಮ್ಮನ ಕೈಯ್ಯಲ್ಲಿ ನಲುಗಿದ ಆತ ಸಹೃದಯಿಯಾಗಿದ್ದಾನು..ಗಂಡು ಮಕ್ಕಳಿಲ್ಲದ ತಮಗೂ ಮುಪ್ಪಿನಲ್ಲಿ ಆಸರೆಯಾಗಿದ್ದಾನು ಎಂಬ ದೂರದೃಷ್ಟಿ ಅಜ್ಜನಿಗಿತ್ತೋ ಎನೋ ಅಂತೂ ತಮ್ಮ ಮಗಳನ್ನು ವಯಸ್ಸಿನ ಅಂತರವಿದ್ದರೂ ನಮ್ಮಪ್ಪನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಕುಟುಂಬದ ಆಸ್ತಿ ವಿಂಗಡಣೆಯಾದಾಗ ನಮ್ಮಪ್ಪ ಬರಿಗೈ ದಾಸ...ಹಾಗಾಗಿ ಅಪ್ಪ ನಮಗೆ ಬಂಗಾರ ಮಾಡಿಸುವ ಯೋಚನೆಯನ್ನೇ ಮಾಡಿಸಲಿಲ್ಲ. ಆದರೆ ನನಗಾ ಉಂಗುರದ ಮೋಹ ಹೋಗಲೇ ಇಲ್ಲ.
ನಾನೊಬ್ಬ ಹುಡುಗನನ್ನು ಮೆಚ್ಚಿಕೊಂಡೆ. ಆತನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಮನೆಯಲ್ಲಿ ಹೇಳಿದೆ. ಆತ ಅನ್ಯ ಜಾತಿಯವನಾದರೂ ಮನೆಯಲ್ಲಿ ಒಪ್ಪಿಕೊಂಡರು. ಮದುವೆಗೆ ಅಂತಹ ತಯಾರಿಯೇನೂ ನಡೆಯದೇ ಇದ್ದರೂ ನನ್ನ ಕಿವಿಗೊಂದು ಓಲೆ ಮತ್ತು ಕೊರಳಿಗೊಂದು ಸರ ಬಂತು. ಉಂಗುರದ ಸುದ್ದಿಯೇ ಇಲ್ಲ. ಮದುವೆಯಲ್ಲಿ ತನಗಿಂಥ ಒಡವೆ ಬೇಕೆಂದು ಕೇಳುವುದು ಹುಡುಗಿಯರ ಹಕ್ಕು. ಆದರೆ ನಾನು ಅವರು ಆಯ್ಕೆ ಮಾಡಿರುವ ಹುಡುಗನನ್ನು ಒಪ್ಪಿಕೊಂಡಿಲ್ಲವಲ್ಲ. ಹಾಗಾಗಿ ಹಕ್ಕಿನಿಂದ ಏನನ್ನೂ ಕೇಳುವಂತಿರಲಿಲ್ಲ. ಹಾಗಾಗಿ ಹಿಂಜರಿಯುತ್ತಲೇ ಅಮ್ಮನತ್ರ, ನನಗಾ ರಾಷ್ಟ್ರ ಲಾಂಛನದ ಉಂಗುರ ಕೊಡ್ತೀರಾ? ಎಂದು ಕೇಳಿದೆ. ಅಮ್ಮ ಒಂದೇ ಮಾತಿನಲ್ಲಿ ನಿರಾಕರಿಸಿ ಬಿಟ್ಟರು, ’ಅದು ನನ್ನಪ್ಪ ನನಗೆ ಕೊಟ್ಟಿರುವ ಉಂಗುರ. ನಿಂಗೆ ಬೇಕಾದರೆ ನಿನ್ನಪ್ಪನತ್ರ ಕೇಳು’ ನಾನು ಅಪ್ಪನತ್ರ ಕೇಳಲಿಲ್ಲ. ನನಗೆ ಉಂಗುರ ಸಿಗಲಿಲ್ಲ.
ನನಗೊಂದು ದೂರದ ಆಸೆಯಿತ್ತು; ನನ್ನನ್ನು ಮೆಚ್ಚಿದ ಹುಡುಗ ನನಗೊಂದು ಉಂಗುರ ಕೊಡಬಹುದೆಂದು. ಅದಕ್ಕಾಗಿ ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಎಲ್ಲಾ ಹುಡುಗಿಯರು ಕನಸು ಕಾಣುವಂತೆ ನಾನೂ ಕನಸು ಕಂಡಿದ್ದೆ. ಒಂದು ದಿನ ಆತ ನನ್ನೆದುರು ಬಂದು ನಿಲ್ಲುತ್ತಾನೆ. ಒಂದೂ ಮಾತಾಡದೆ ನನ್ನ ಮುಂದೆ ಮಂಡಿಯೂರಿ ಕುಳಿತು  ತನ್ನ ಅಂಗೈನಲ್ಲಿ ಮುಚ್ಚಿಟ್ಟುಕೊಂಡಿದ್ದ ಉಂಗುರಕ್ಕೊಮ್ಮೆ ಮುತ್ತಿಟ್ಟು ನನ್ನ ಕಣ್ಣುಗಳನ್ನೇ ನೋಡುತ್ತಾ ನನ್ನ ಎಡಗೈಯನ್ನು ಹಿಡಿದು ನನ್ನ ಉಂಗುರದ ಬೆರಳಿಗೆ ಉಂಗುರವನ್ನು ತೊಡಿಸುತ್ತಾನೆ...!
ಆದರೆ ವಾಸ್ತವದಲ್ಲಿ ಆತ ನನಗೆಂದೂ ಉಂಗುರ ತೊಡಿಸಲಿಲ್ಲ.. ಕೊಡಿಸಲೂ ಇಲ್ಲ...ಆದರೆ ನಾನವನಿಗೊಂದು ಉಂಗುರ ಮಾಡಿಸಿಕೊಟ್ಟಿದ್ದೆ. ಅವನದೇ ದುಡ್ಡಿನಲ್ಲಿ ತಾನೇ? ಎಂದು ನೀವು ಕೊಂಕು ತೆಗೆಯಬಹುದು. ಹೌದು ಸ್ವಾಮಿ, ಅವನದೇ ದುಡ್ಡಿನಲ್ಲಿ ನಾನವನಿಗೆ ಉಂಗುರ ಮಾಡಿಸಿಕೊಟ್ಟೆ. ಯಾಕೆ ಹೇಳಿ, ಆಗ ನಮ್ಮಿಬ್ಬರಿಗೂ ಮದುವೆಯಾಗಿತ್ತಲ್ಲ. ಅಂದರೆ ನಾನವನಿಗೆ ಹೆಂಡತಿಯಾಗಿದ್ದೆ. ಗಂಡ ದುಡಿದಿದ್ದನ್ನು ಖರ್ಚು ಮಾಡಲು ಪ್ರಥಮಾಧಿಕಾರ ಇರುವುದು ಪತ್ನಿಗೆ ತಾನೇ?
ನನ್ನ ಗಂಡ ಒಬ್ಬ ಪತ್ರಕರ್ತ. ಹಾಗಾಗಿ ಆತ ಆಗಾಗ ಕೆಲಸ ಬದಲಿಸುತ್ತಿದ್ದ. ನಾನು ಭವಿಷ್ಯದ ಬಗ್ಗೆ ಸದಾ ಅಸ್ಥಿರತೆಯಲ್ಲಿರುತ್ತಿದ್ದೆ. ಅದನ್ನು ಮನಗಂಡ ನನ್ನ ಆತ್ಮೀಯ ಗೆಳತಿಯೊಬ್ಬಳು, ನಿನ್ನ ಗಂಡನಿಗೆ ಬರ್ತ್ ಸ್ಟೋನಿನ ಉಂಗುರ ಹಾಕೋಕೆ ಹೇಳು. ಅದರಿಂದ ಅವರ ಅದೃಷ್ಟ ಖುಲಾಯಿಸುತ್ತದೆ ಎಂದಳು. ನಾನದನ್ನು ನನ್ನ ಗಂಡನಿಗೆ ಹೇಳಿದೆ. ಆತ ಹೇಳಿದ, ತನಗೆ ಅದರಲೆಲ್ಲಾ ನಂಬಿಗೆಯಿಲ್ಲ. ನೀನು ಬೇಕಾದರೆ ಹಾಕಿಕೋ ಎಂದು ಹೇಳಿದ್ದಲ್ಲದೆ, ನೀನೆ ತಾನೇ ಈ ಮನೆಯ ನಿಜವಾದ ಯಜಮಾನಿ ಎಂದು ಒಗ್ಗರಣೆ ಸೇರಿಸಿದ. ನಾನಾಗಲೇ ಎರಡು ಮಕ್ಕಳಾಗಿದ್ದವು. ಈ ವ್ಯಂಗ್ಯವನ್ನೆಲ್ಲಾ ಧೂಳಿಪಟ ಮಾಡುವ ಶಕ್ತಿ ನನ್ನ ಗೊಣಗಾಟದಲ್ಲಿತ್ತು.
ಛಲ ಬಿಡದ ತ್ರಿವಿಕ್ರಮನಂತೆ ನನ್ನ ಕಾಯಕವನ್ನು ಮುಂದುವರಿಸಿ ನನ್ನ ಗಂಡನ ಬರ್ತ್ ಸ್ಟೋನ್ ಹವಳ ಎಂಬುದನ್ನು ಕಂಡುಕೊಂಡು ಅದನ್ನೇ ಆತನ ಮುಂದೆ ಅರುಹಿದೆ. ಆತ  ಹಿಂದೆ ಹೇಳಿದ್ದನ್ನೇ ಮತ್ತೆ ಕಂಚಿನ ಮಂಡೆಗೆ ಬಡಿದಂತೆ ನೀ ಬೇಕಾದರೆ ಹಾಕಿಕೋ’ ಎಂದ.ನನ್ನ ಬತ್ತಳಿಕೆಯಲ್ಲಿ ಸಿದ್ಧ ಉತ್ತರವಿತ್ತು. ನನ್ನದು ಕೃತ್ತಿಕಾ ನಕ್ಷತ್ರವಲ್ವಾ,ನನ್ನ ಬರ್ತ್ ಸ್ಟೋನ್ ವಜ್ರ ಅಂತೆ ಮಾಡ್ಸಿಕೊಳ್ಲಾ ಅಂದೆ. ಆತ ಹೌಹಾರಿದ. ವಾಗ್ವಾದ ನಡೆಯಿತು. ಕೊನೆಗೆ ಉಂಗುರ ಹಾಕಿಕೊಳ್ಳಲು ಆತ ಒಪ್ಪಿಕೊಂಡ.
ನನ್ನ ತವರು ಮನೆಯವರು ಬಂಗಾರ ಮಾಡಿಸುವುದು ಪುತ್ತೂರಿನಲ್ಲಿ. ಅಲ್ಲಿನ ಕೋರ್ಟ್ ರೋಡಿನಲ್ಲಿ ಹಲವಾರು ಬಂಗಾರದ ಅಂಗಡಿಗಳಿವೆ.ಅಲ್ಲಿ ಅಣ್ಣಿ ಆಚಾರಿ ಎಂಬವರ ಅಂಗಡಿಯೊಂದಿದೆ. ನನ್ನ ಬದುಕಿನಲ್ಲಿ ನಾನು ಮಾಡಿಸುತ್ತಿರುವ ಮೊದಲ ಆಭರಣವನ್ನು ಅಲ್ಲೇ ಮಾಡಿಸೋಣವೆಂದುಕೊಂಡು ನನ್ನ ತವರಿಗೆ ಪೋನ್ ಮಾಡಿದರೆ ನನ್ನ ಅಮ್ಮಾ, ಅಷ್ಟು ದೂರ ಯಾಕೆ ಹೋಗ್ತೀಯಾ? ಇಲ್ಲೇ ಸುಳ್ಯದಲ್ಲಿ ಮುಳಿಯದವರ ಚಿನ್ನದ ಅಂಗಡಿ ಆರಂಭವಾಗಿದೆ. ಅಲ್ಲೇ ಮಾಡಿಸ ಎಂದರು. ನನಗೂ ಸರಿಯೆಂದು ಮುಕ್ಕಾಲು ಪವನಿನ ಸುಂದರವಾದ ಒಂದು ಹವಳದ ಉಂಗುರ ಮಾಡಿಸಿದೆ. ಅದಕ್ಕೆ ಅಳತೆ ತಗೊಂಡು ಹೋಗಲು ನಾನು ಪಟ್ಟ ಪಾಡು ಅದೊಂದು ದೊಡ್ಡ ಕಥೆ..ಅದನ್ನಾತ ನಿಗೂಡ ಮೌನದ, ಗಾಢ ಅಂದಕಾರದ ಒಂದು ರಾತ್ರಿಯಲ್ಲಿ ಚಾರ್ಮಡಿ ಘಾಟಿನ ತಿರುವಿನಲ್ಲಿ ಕಳೆದುಕೊಂಡದ್ದು ಇನ್ನೊಂದು ಕಥೆ. ಆಮೇಲೆ ಇನ್ನೆಂದೂ ಉಂಗುರ ಮಾಡಿಸುವ ಅಥವಾ ಖರೀದಿಸುವ ಗೋಜಿಗೆ ನಾನು ಹೋಗಲಿಲ್ಲ. ಆದರೆ ಅವನು ಸುದ್ದಿ ಚಾನಲ್ಲೊಂದರ ಮುಖ್ಯಸ್ಥನಾಗಿದ್ದಾಗ ಹಲವಾರು ಜನ ಜ್ಯೋತಿಷಿಗಳು ಅವನ ಬೆರಳುಗಳಿಗೆ ಉಂಗುರ ಹಾಕಲು ಪ್ರಯತ್ನಿಸಿದ್ದುಂಟು..ಆದರೆ ಅವನು ಮುಷ್ಟಿಯಲ್ಲಿ ಪಂಚತತ್ವವನ್ನು ಕಂಡುಕೊಂಡವನು..!
ಉಂಗುರದ ಗುಂಗಿಗೆ ಜಗತ್ತು ಮರುಳಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ನಮ್ಮ ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಒಂದು ಕವನ ಸಂಕಲನದ ಹೆಸರೇ ’ಉಂಗುರ’ ಅದರಲ್ಲಿ ಹಲವಾರು ಒಲವಿನ ಕವನಗಳಿವೆ. ’ಬೇಡಿ ಬಂದವಳು’ ಸಿನೇಮಾಕ್ಕಾಗಿ ಆರ್. ಎನ್.ಜಯಗೋಪಾಲ್ ಬರೆದ ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲ ಹಾಡಿರುವ ’ನೀರಿನಲ್ಲಿ ಅಲೆಯ ಉಂಗುರ..’ಎಲ್ಲಾ ಕಾಲದಲ್ಲೂ ರಸಿಕರು ಗುನುಗುನಿಸುವ ಹಾಡು. ಇಂಗ್ಲೀಷನಲ್ಲಿ ಅಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದ’  ಲಾರ್ಡ್ಸ್ ಅಫ್ ದಿ ರಿಂಗ್ಸ್’ ಕಥೆ ಹೇಳುವುದೂ ಉಂಗುರದ ಕಥೆಯನ್ನೇ..
ಸಂಸ್ಕೃತದಲ್ಲಿ  ಉಂಗುರದ ಬೆರಳಿಗೆ ಅನಾಮಿಕಾ ಬೆರಳು ಎಂದು ಹೇಳುತ್ತಾರೆ. ಇದಕ್ಕೆ ಇಂಗ್ಲಿಷನಲ್ಲಿ ಮಾಂತ್ರಿಕ ಬೆರಳು-ಮ್ಯಾಜಿಕ್ ಫಿಂಗರ್’ ಎಂದೂ ಕರೆಯುತ್ತಾರೆ. ಕೈಯ ಬೆರಳುಗಳು ನಮ್ಮ ಹತ್ತಿರದ ಬಂಧುಗಳ ಜೊತೆಗಿನ ಬಂಧುತ್ವವನ್ನು ಹೇಳುತ್ತದೆಯಂತೆ. ಹೆಬ್ಬೆರಳು ಹೆತ್ತವರನ್ನೂ, ತೋರು ಬೆರಳು ಅಕ್ಕ-ತಂಗಿ, ಅಣ್ಣ-ತಮ್ಮರನ್ನೂ, ಉಂಗುರ ಬೆರಳು ಬಾಳ ಸಂಗಾತಿಯನ್ನೂ, ಕಿರುಬೆರಳು ಮಕ್ಕಳನ್ನೂ ಸೂಚಿಸುತ್ತದೆಯಂತೆ. ಉಂಗುರದ ಬೆರಳು ಗ್ರೀಕ್ ದೇವರು ಅಪೋಲೋ ಜೋತೆ ಸಾಂಗತ್ಯ ಹೊಂದಿದೆ. ಆತ ನಮ್ಮ ಸೂರ್ಯನಂತೆ ಬೆಳಕಿನ ದೇವತೆ. ಈ ಬೆರಳಿನ ಗುಣ ಲಕ್ಷಣಗಳು ಕಲೆ, ಸಂಗೀತ, ಸೌಂದರ್ಯಶಾಸ್ತ್ರ, ಕೀರ್ತಿ, ಸಂಪತ್ತು ಮತ್ತು ಸಾಮರಸ್ಯದ ವಿಷಯ ನಿರ್ವಹಣೆಯೊಂದಿಗೆ ಬಂಧವನ್ನು ಹೊಂದಿದೆಯಂತೆ.. ನನಗೊಂದು ಕುತೂಹಲ..ಕೈಯ ನಾಲ್ಕನೇ ಬೆರಳಿಗೇ ಉಂಗುರದ ಬೆರಳು ಎಂದು ಯಾಕೆ ಹೇಳುತ್ತಾರೆ? ನಿಶ್ಚಿತಾರ್ಥದಲ್ಲಿ ಹುಡುಗರ ಬಲಗೈಗೆ ಮತ್ತು ಹುಡುಗಿಯ ಎಡಗೈಗೆ ಮಾತ್ರ ಯಾಕೆ ಉಂಗುರ ತೊಡಿಸುತ್ತಾರೆ?ಅದಕ್ಕೆ ಉತ್ತರ ಹುಡುಕುತ್ತಾ ಹೊರಟಾಗ ನನಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಸಿಕ್ಕವು. ಅದು ನನ್ನನ್ನು ವೈದ್ಯಜಗತ್ತಿನೊಡನೆಯೂ ಅಧ್ಯಾತ್ಮಿಕತೆಯೊಡನೆಯೂ ಬೆಸೆಯುವ ಪ್ರಯತ್ನ ಮಾಡಿತು.
ಈ ಭೂಮಿ ಪಂಚ ತತ್ವಗಳಿಂದ ರೂಪುಗೊಂಡಿದೆ ಎಂಬುದು ಎಲ್ಲರೂ ಒಪ್ಪಿಕೊಂಡ ಮಾತು. ಹಾಗೆಯೇ ನಮ್ಮ ಭೌತಿಕ ಶರೀರ ಕೂಡಾ ಪಂಚತತ್ವಗಳಿಂದಲೇ ರಚಿತವಾಗಿದೆ. ನಮ್ಮ ಕೈ ಬೆರಳುಗಳು ಇದೇ ತತ್ವಗಳನ್ನು ಪ್ರತಿಪಾದಿಸುತ್ತವೆ. ಹೆಬ್ಬೆರಳು ಅಗ್ನಿಯನ್ನೂ, ತೋರು ಬೆರಳು ವಾಯುವನ್ನೂ, ಮಧ್ಯದ ಬೆರಳು ಆಕಾಶವನ್ನೂ, ಉಂಗುರ ಬೆರಳು ಪೃಥ್ವಿಯನ್ನೂ, ಕಿರು ಬೆರಳು ಜಲ ತತ್ವವನ್ನೂ ಪ್ರತಿನಿಧಿಸುತ್ತವೆ. ಅಂದರೆ ನಮ್ಮ ಒಂದು ಮುಷ್ಠಿಯೊಳಗೆ ಪಂಚತತ್ವಗಳ ಮರ್ಮ, ಸೃಶ್ಟಿಯ ರಹಸ್ಯವೇ ಅಡಿಗಿದೆಯೆಂದಾಯ್ತು.
ನಾವು ಪ್ರೇಮ ಬಂಧನವನ್ನು,ನಿಶ್ಚಿತಾರ್ಥವನ್ನು ಬೆರಳಿಗೆ ಉಂಗುರವನ್ನು ತೊಡಿಸುವುದರ ಮುಖಾಂತರ ತೋರ್ಪಡಿಸುತ್ತೇವೆ.ತನ್ನ ವಧು ಶಿಲ್ಪಶೆಟ್ಟಿಗೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ನಿಶ್ಚಿತಾರ್ಥದ ಉಂಗುರವನ್ನು ರಾಜ್ ಕುಂದ್ರಾ ತೊಡಿಸಿದ್ದನ್ನು ಕೀಳಿದರೆ ಅದಕ್ಕಿರುವ ವೈಭವದ ಮುಖವೂ ಅನಾವರಣಗೊಳ್ಳುತ್ತದೆ.
 ಉಂಗುರದ ಆಕಾರವನ್ನು ನೋಡಿ. ಅದು ದುಂಡಗೆ ಮನಮೋಹಕವಾಗಿದೆ. ಸೊನ್ನೆಯ ಆಕಾರದಲ್ಲಿದೆ. ಭೂಮಿಯೂ ಗುಂಡಗಿದೆ. ಜಗತ್ತಿನಲ್ಲಿ ಎಲ್ಲವೂ ಸೊನ್ನೆಯ ಆಕಾರದಲ್ಲಿದೆ ಎಂದು ತತ್ವಜ್ನಾನಿಗಳು ಹೇಳುತ್ತಾರೆ. ಬೀಜ ಗಣಿತದಲ್ಲಿ ಸೊನ್ನೆಗೆ ವಿಶೇಷ ಸ್ಥಾನವಿದೆ. ಅದನ್ನು ಜಗತ್ತಿಗೆ ಕೊಟ್ಟವರು ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಷ್ಟು ಮಾತ್ರವಲ್ಲ. ಬೆರಳುಗಳಿಗೂ ಹಾರ್ಮೋನ್ ಗಳಿಗೂ ನೇರ ಸಂಬಂಧವಿದೆಯೆಂದು ವೈದ್ಯವಿಜ್ನಾನ ಹೇಳುತ್ತದೆ. ಅದು ದೇಹದಲ್ಲಿರುವ ಟೆಸ್ಟೋಸ್ಟೇರನ್ ಪ್ರಮಾಣವನ್ನು ಸೂಚಿಸುತ್ತದೆಯಂತೆ. ಇನ್ನು ಕೆಲವರು ಹೇಳುತ್ತಾರೆ; ಈ ಬೆರಳುಗಳಿಗೆ ಹೊಂದಿಕೊಂಡಿರುವ ರಕ್ತನಾಳಗಳು ನೇರವಾಗಿ ಹೃದಯಕ್ಕೆ ಸಂಬಂಧ ಕಲ್ಪಿಸುತ್ತದೆಯೆಂದೂ ಇದರಿಂದ ಪ್ರೀತಿಯ ಭಾವನೆಗಳು ಸ್ಪುರಿಸುತ್ತವೆಯೆಂಬುದು ಅವರ ಕಲ್ಪನೆ. ರೇಖಿ ಚಿಕಿತ್ಸೆಯಲ್ಲಿ ಕೈಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.
ಆದರೆ ನನಗನ್ನಿಸುತ್ತದೆ,ಉಂಗುರ ಎನ್ನುವುದು ಕೇವಲ ಒಂದು ಒಡವೆಯಲ್ಲ. ಸೌಂಧರ್ಯವರ್ಧಕ ಅಲ್ಲ. ಅದು ಬದ್ಧತೆಯ ಲಕ್ಷಣ. ಎರಡು ಹೃದಯಗಳ ಅಥವಾ ಒಂದು ಸಿದ್ದಾಂತದ,ಒಂದು ನಂಬಿಕೆಯೆಡೆಗಿನ ಬದ್ಧತೆಯಾಗಿರುತ್ತದೆ. ಅದು ನಮ್ಮ ಮತ್ತು ಅದರೆಡೆಗೆ ಒಂದು ಗೆರೆಯನ್ನು ಎಳೆದು ಬಿಡುತ್ತದೆ. ಅದರಲ್ಲೂ ಗಂಡಸೊಬ್ಬನ ಉಂಗುರ ಬೆರಳಿನಲ್ಲಿ ಉಂಗುರ ಕಂಡರೆ, ಹೆಣ್ಣೊಬ್ಬಳ ಕೊರಳಿನಲ್ಲಿ ಮಂಗಲಸೂತ್ರವನ್ನು ಕಂಡಾಗ ಉಂಟಾಗುವ ಭಾವನೆಯೇ ನನ್ನಲ್ಲಿ ಉಂಟಾಗುತ್ತದೆ. ಶಕುಂತಲೆ ಧರಿಸಿದ, ದುಷ್ಯಂತ ಮರೆತ ಉಂಗುರದ ಕಥೆ ಲೋಕ ಪ್ರಸಿದ್ಧ. ಲಂಕೆಯ ಅಶೋಕವನದಲ್ಲಿ ಶ್ರೀರಾಮ ದೂತ ಹನುಮಂತ ತನ್ನ ಗುರುತಿಗಾಗಿ ಸೀತೆಗೆ ರಾಮ ಕೊಟ್ಟ ಮುದ್ರೆಯುಂಗರವನ್ನು ತೋರಿಸಿದ ಪ್ರಸಂಗ ಎಲ್ಲರಿಗೂ ಗೊತ್ತಿರುವಂಥದೇ.  ಪುರಾಣದಲ್ಲಿ, ಇತಿಹಾಸದಲ್ಲಿ, ರಾಜರ ಆಳಿಕೆಯಿದ್ದ ಎಲ್ಲಾ ಕಾಲಘಟ್ಟದಲ್ಲಿ ಮುದ್ರೆಯುಂಗರಕ್ಕೆ ಎಂತಹ ಮಹತ್ವವಿತ್ತು ಎಂಬುದು ಗೊತ್ತಾಗುತ್ತದೆ. ಅದು ಸ್ವತಃ ರಾಜನನ್ನು ಪ್ರತಿನಿಧಿಸುತ್ತಿತ್ತು. ಪಟ್ಟದ ಕತ್ತಿ ಮತ್ತು ಪಟ್ಟದುಂಗುರ ರಾಜ ಚಿಹ್ನೆಗಳೇ ಆಗಿದ್ದವು.
ಇನ್ನು ಜ್ಯೋತಿಷಿಗಳ, ಮಾಟಗಾತಿಯರ, ಇನ್ಯಾವುದರದ್ದೋ ಸಾಧನೆಯಲ್ಲಿ ತೊಡಗಿರುವವರ ಬೆರಳುಗಳಲ್ಲಿ ಕಂಡು ಬರುವ ಉಂಗುರಗಳ ಬಗ್ಗೆ ನನಗೆ ಸದಾ ಕುತೂಹಲ ಇದ್ದೇ ಇದೆ. ಅವುಗಳ ಗಾತ್ರ, ಆಕಾರ, ಹರಳುಗಳ ಬಣ್ಣ ವೈವಿಧ್ಯ ಮತ್ತು ಅದನ್ನು ಧರಿಸಿರುವ ವ್ಯಕ್ತಿಯ ವಸ್ತ್ರ ವಿನ್ಯಾಸ ಇವು ಯಾವತ್ತಿಗೂ ನನಗೆ ಅಧ್ಯಯನದ ವಿಷಯಗಳೇ. ಇವರೆಲ್ಲರ ಜೊತೆ ಭೂಗತ ಜಗತ್ತಿನ ಖ್ಯಾತ ನಾಮರು, ರಿಯಲ್ ಎಸ್ಟೇಟ್ ಕುಳಗಳು ಸ್ಪರ್ಧೆಗೆ ನಿಲ್ಲಬಲ್ಲರು. ಈ ಅದೃಷ್ಟದ ಹರಳುಗಳುಳ್ಳ ಉಂಗುರದೆಡೆಗೆ ರಾಜಕಾರಣಿಗಳಿಗೂ ಸಿನೇಮಾ ಜಗತ್ತಿನ ಸೆಲೆಬ್ರಿಟಿಗಳಿಗೂ ಸೆಳೆತವಿದೆ. ಒಟ್ಟಿನಲ್ಲಿ ಈ ಉಂಗುರ ಉಂಗುರಾಕಾರವಾಗಿ ಜಗತ್ತೇಲ್ಲವನ್ನೂ ಸುತ್ತುವರಿದಿದೆ, ಬಂಧಿಸಿದೆ. ಜಗತ್ತನ್ನು ಸುತ್ತವರಿದಿದೆ ಎಂದಾಗ ನಮ್ಮ ಸೌರಮಂಡಲದಲ್ಲಿರುವ ಅತ್ಯಂತ ಸುಂದರ ಗ್ರಹ ಶನಿಯನ್ನು ಹೇಗೆ ಮರೆಯಲಾದೀತು? ಆತನ ಸುತ್ತ ಸುಮಾರು ಒಂದು ಲಕ್ಷ ಉಂಗುರಗಳಿವೆಯೆಂದು ಭೌತ ವಿಜ್ನಾನಿಗಳು ಅಂದಾಜು ಮಾಡಿದ್ದಾರೆ. ಕೆಲವೊಮ್ಮೆ ಸೃಷ್ಟಿ ವೈಚಿತ್ರ್ಯದ ಫಲವಾಗಿ ಸೂರ್ಯ, ಚಂದ್ರರಿಗೂ ಉಂಗುರ ಧರಿಸುವ ಸೌಭಾಗ್ಯ ಸಂಭವಿಸುವುದುಂಟು.
ಉಂಗುರದ ಬಗ್ಗೆ ಇಷ್ಟೆಲ್ಲಾ ಬರೆಯುವಾಗ ನನ್ನಲ್ಲಿ ಸುಖದ ಅಲೆಯೊಂದು ಮೂಡಿ ಅದು ಶರೀರವನ್ನೆಲ್ಲಾ ವ್ಯಾಪಿಸುತಾ, ಉಂಗುರ, ಉಂಗುರಕಾರವಾಗಿ ಮೇಲೆರುತ್ತಾ ಅಂತರಿಕ್ಷವನ್ನೆಲ್ಲಾ ತುಂಬುತ್ತಿದೆ. ಅದು ಆಗ ನಿರಾಕಾರವಾಗುತ್ತದೆ. ಅದರ ಕ್ಷಣಭಂಗುರತೆಯ ಅರಿವಾಗುತ್ತದೆ. ಆಗ ನನ್ನ ಮನಸ್ಸಿಗೆ ಬರುವುದು ಎ.ಕೆ ರಾಮಾನುಜನ್ ಬರೆದ ’ಅಂಗುಲ-ಹುಳುವಿನ ಪರಕಾಯ ಪ್ರವೇಶ’ ಎಂಬ ಕವನದ ಸಾಲುಗಳು. ಅದರಲ್ಲಿ ಅಂಗುಲ ಹುಳ ಕೋಗಿಲೆಯ ಹಾಡನ್ನು ಅಳೆಯುತ್ತದೆ. ಅದು ಹೇಗೆ ಅಳೆಯುತ್ತದೆ ಎಂದರೆ;
”ಅಂಗುಲ ಅಂಗುಲ ಅಂಗುಲ
ಮುಖವೊತ್ತಿ ಮೈಯೆತ್ತಿ ಹತ್ತಿ ಇಳಿದು ಹೊಳೆದು ಸುಳಿದು ಒತ್ತಿ ಎತ್ತಿ
ಉಂಗುರ ಗುಂಗುರು ಉಂಗುರದೊಳಗೇ ತೂರಿ ತೂರಿ ಅಪ್ಪಿ ತಪ್ಪಿ
ಅಂಗುಲ ಅಂಗುಲ ಅಳೆಯಿತು.”
ನಾನು ಉಂಗುರವನ್ನು ಅಳೆಯಲು ಹೋಗುವುದಿಲ್ಲ.ನನಗೆ ಪೃಥ್ವಿಯ ಜೊತೆ ಸಂಬಂಧ ಬೇಕಾಗಿದೆ. ಈಗಲೂ ನನ್ನ ಮನದ ಮೂಲೆಯಲ್ಲೊಂದು ಆಸೆ ಜೀವಂತವಾಗಿದೆ; ಯಾರಾದರೂ ನನ್ನ ಬೋಳು ಬೆರಳಿಗೊಂದು ಉಂಗುರ ತೊಡಿಸಬಾರದೇ? ಆ ಹಂಬಲದಿಂದಲೇ ನಾನು ಬರೆದೆ;
”’ಅಂದು ಘಟಿಸಿದ ಕಂಕಣ ಸೂರ್ಯನ  ಬೆಳಕಿನುಂಗರಕ್ಕಾಗಿ
ಇಂದು ಹಂಬಲಿಸುತ್ತಿದೆ ನನ್ನ ಬೋಳು ಬೆರಳು..
ಅಂದು-ಇಂದುಗಳ ಬೆಸೆಯಬಲ್ಲ ಬಂಧು..
ನೀನೆಲ್ಲಿರುವೆ ಹೇಳು?’’
ಹೀಗೊಂದು ಸಂದೇಶವನ್ನು ಪೇಸ್ ಬುಕ್ ಮುಖಾಂತರ  ಬ್ರಹ್ಮಾಂಡಕ್ಕೆ ಹರಿಯಬಿಟ್ಟಿದ್ದೇನೆ. ಇದನ್ನು ಯಾರಾದರೂ ರಿಸಿವ್ ಮಾಡಬಲ್ಲರೇ? ನನ್ನ ಕಣ್ಣಿನುಂಗರ ಅದಕ್ಕಾಗಿ ಹಂಬಲಿಸುತ್ತಿದೆ.

[ಉದಯವಾಣಿಯ  ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಪ್ರಬಂಧ ]

   

Saturday, October 20, 2012

ಮಲಾಲ; ಸ್ವಾತ್ ಕಣಿವೆಯ ಮೇರು ದನಿ




 ಸ್ವಾತ್ ಕಣಿವೆ ಪ್ರದೇಶ..!

ಹಿಂದು ಕುಶ್ ಪರ್ವತಶ್ರೇಣಿಯಿಂದ ಸುತ್ತುವರಿದಿರುವ ಸುಂದರ ನಾಡು, ಅದು ಪಾಕಿಸ್ತಾನದ ಸ್ವಿಝರ್ ಲ್ಯಾಂಡ್.
ಹಾಗೆಂದರೆ ಬಹುಜನರಿಗೆ ಪಕ್ಕನೆ ಅರ್ಥವಾಗಲಾರದು. ಆದರೆ ಅದು ಗಾಂಧಾರ ನಾಡು.  ನಮ್ಮ ಮಹಾಭಾರತದ ಗಾಂಧಾರಿ ಆ ದೇಶಕ್ಕೆ ಸೇರಿದವಳು ಎಂದರೆ ಹೆಚ್ಚು ಅರ್ಥವಾದೀತು.ಅದು ಆರ್ಯಾವರ್ತದ ಒಂದು ಭಾಗವಾಗಿತ್ತು. ಬಾರತದ ಮೇಲೆ ಧಾಳಿ ಮಾಡಿದ ಎಲ್ಲಾ ಆಕ್ರಮಣಕಾರರು ಇದೇ ಸ್ವಾತ್ ಕಣಿವೆಯನ್ನು ಹಾದು ಬಂದವರೇ ಆಗಿದ್ದರು. ಒಂದು ರೀತಿಯಲ್ಲಿ ಇದ ಭಾರತ ಪ್ರವೇಶದ ಹೆದ್ದಾರಿ.  ವಜ್ರಯಾನ ಬುದ್ಧಿಸಂ ಇಲ್ಲೇ ಹುಟ್ಟಿತೆಂದು ಹೇಳಲಾಗುತ್ತಿದೆ.  ಒಂದು ಕಾಲದಲ್ಲಿ ಅದು ಭೂಲೋಕದ ಸ್ವರ್ಗ. ಈಗ ಅದು ತಾಲಿಬಾನಿಗಳ ಅಡೊಂಬೊಲ.

ಅಂತಹ ಸ್ವಾತ್ ಕಣಿವೆ ಜಗತ್ತಿನಾದ್ಯಂತ ಈಗ ಸುದ್ದಿಯಲ್ಲಿದೆ. ಅದಕ್ಕೆ ಕಾರಣವಾಗಿದ್ದು ಮಲಾಲ ಯೂಸಫ್ ಝಾಯಿ ಎಂಬ ಹದಿನಾಲ್ಕು ವರ್ಷದ ಬಾಲೆ. ನಮ್ಮ ಗಾಂಧಾರಿಯದ್ದು ಮೌನ ಪ್ರತಿಭಟನೆಯಾಗಿತ್ತು.ಅದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಾಗಿತ್ತು. ಆದರೆ ಮಲಾಲ ಎಂಬ ಈ ಬಾಲೆಯದು ಎತ್ತರದ ಧ್ವನಿ. ಅದು ರಕ್ತ ಪಿಪಾಸು ತಾಲಿಬಾನಿಗಳ ವಿರುದ್ಧ ಎತ್ತಿದ ಧ್ವನಿ. ಆ ದ್ವ್ಹನಿಯೀಗ ಹಿಂದೂ ಕುಶ್ ಪರ್ವತಗಳನ್ನಪ್ಪಳಿಸಿ ಜಗತ್ತಿನಾದ್ಯಂತ ಮೊಳಗುತ್ತಿದೆ.
ಅದು ಅಕ್ಟೋಬರ್ ೯ನೇ ತಾರೀಖ್. ಆಕೆ ಎಂದಿನಂತೆ ಭಯಪಡುತ್ತಲೇ ಶಾಲೆಗೆ ಹೋಗಿದ್ದಳು. ಮತ್ತೇ ಅದೇ ಭಯದಿಂದಲೇ ಮನೆತಲುಪಿಕೊಳ್ಳುವ ಧಾವಂತದಲ್ಲಿ ಶಾಲಾ ವಾಹನವೇರಿದ್ದಳು. ಆದರೆ ಅವಳನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ ತಾಲಿಬಾನಿ ಉಗ್ರಗಾಮಿಗಳು ಆ ವಾಹನವನ್ನು ಅಡ್ಡಗಟ್ಟಿ ಆಕೆಯನ್ನು ಹುಡುಕಿ ಅವಳ ಮೇಲೆ ಗುಂಡಿನ ಮಳೆಗೆರೆದರು. ಆಕೆಯ ಕತ್ತು, ತಲೆಗೆ ಹೊಕ್ಕ ಗುಂಡು ಅವಳನ್ನು ಪ್ರಜ್ನೆ ತಪ್ಪಿಸಿ ಧರೆಗುರುಳಿಸಿತು. ಅವಳ ಜೊತೆಗಿದ್ದ ಇಬ್ಬರು ಬಾಲಕಿಯರೂ ಮರಣಾಂತಿಕವಾಗಿ ಗಾಯಗೊಂಡರು.

 ಆಕೆಯನ್ನು ಉಳಿಸಿಕೊಳ್ಳಲು ಒಂದು ವಾರಗಳ ಕಾಲ ಪರಿಶ್ರಮ ಪಟ್ಟ ಪಾಕಿಸ್ತಾನ ಸರಕಾರ ಅ. ೧೫ರ ಸೋಮವಾರದಂದು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ನಿಗೆ ಕಳುಹಿಸಿದೆ. ಅಲ್ಲಿಯ ಕ್ವೀನ್ ಎಲಿಜಬೆತ್  ಆಸ್ಪತ್ರೆಯಲ್ಲಿ ದಾಖಲಾಗಿರುವ ಆಕೆಯ ಚೇತರಿಕೆಯ ಬಗ್ಗೆ ಅವಳನ್ನು ನೋಡಿಕೊಳ್ಳುತ್ತಿರುವ ಡಾಕ್ಟರ್ ಡೇವ್ ರೋಸರ್ ಭರವಸೆಯ ಹೇಳಿಕೆಯನ್ನು ನೀಡಿದ್ದಾರೆ. ಅವರು ಬ್ರಿಟೀಷ್ ಸರಕಾರದಲ್ಲಿ ಹತ್ತು ವರ್ಷಗಳ ಕಾಲ ಮಿಲಿಟಿರಿಯ ಕ್ಯಾಷವಲ್ಟಿಯಲ್ಲಿ ಸೇವೆ ಸಲ್ಲಿಸಿದ ಅನುಭವಿರುವವರು.
ತಾಲಿಬಾನಿಗಳಂತಹ... ತಾಲಿಬಾನಿ ಉಗ್ರರು ಇನ್ನೂ ಹಾಲುಗಲ್ಲ ಮಾಸದ ಆ ಪುಟ್ಟ ಹುಡುಗಿಯ ಮೇಲೆ ಯಾಕೆ ಗುಂಡಿನ ಮಳೆಗೆರೆದರು? ಅದಕ್ಕೆ ಅವಳ ಜೀವನಗಾಥೆಯನ್ನು ನಾವು ಓದಬೇಕು.

ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದು ಹಳೆಯ ಮಾತು. ಮತ್ತು ಅದು ಸತ್ಯಕ್ಕೆ ಹತ್ತಿರವಾದ ಮಾತು.
ಮಲಾಲ ಹುಟ್ಟಿದ್ದು ೧೯೯೭ರ ಜುಲೈ ೧೧ರಂದು. ಸ್ವಾತ್ ಜಿಲ್ಲೆಯ ಮಿಂಗೋರಾ ಎಂಬ ಸಣ್ಣ ಪಟ್ಟಣ ಅವಳ ಹುಟ್ಟೂರು. ತಾಲಿಬಾನಿಗಳ ಹುಟ್ಟೂರಾದ ಅಫಘಾನಿಸ್ತಾನಕ್ಕೆ ಹೊಂಡಿಕೊಂಡತಿರುವ ಪ್ರದೇಶವದು. ಪಾಕಿಸ್ತಾನದ ರಾಜಧಾನಿ ಇಸ್ಲಾಂಬಾದಿನಿಂದ ಅಪ್ಘಾನಿಸ್ತಾನಕ್ಕಿರುವ ದೂರ ೨೪೯ಕಿ.ಮೀ. ಇದರ ಮಧ್ಯೆ ಸಿಗುತ್ತದೆ ಸ್ವಾತ್ ಕಣಿವೆ. 
ಮಲಾಲ ಹುಟ್ಟುವುದಕ್ಕೆ ಒಂದು ವರ್ಷದ ಮೊದಲು ಅಂದರೆ ೧೯೯೬ರಲ್ಲಿ ತಾಲಿಬಾನಿಗಳು ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡು ಇಸ್ಲಾಮಿಕ್ ಎಮಿರೆಟ್ಸ್ ಅಫ್ ಅಫ್ಘಾನಿಸ್ತಾನ್ ಎಂಬ ಹೆಸರಿನಲ್ಲಿ ಸರಕಾರ ರಚಿಸಿಕೊಂಡರು. ಆದರೆ ಪಾಕಿಸ್ತಾನ, ಸೌದಿ ಅರೇಭಿಯಾ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ಹೊರತುಪಡಿಸಿ ಜಗತ್ತಿನ ಉಳಿದ ಯಾವ ರಾಷ್ಟ್ರಗಳೂ ಅದಕ್ಕೆ ಮಾನ್ಯತೆ ನೀಡಲಿಲ್ಲ.

ತಾಲಿಬಾನಿಗಳು ಹೊರಗಿನಿಂದ ಬಂದವರೇನೂ ಅಲ್ಲ. ಅವರು ಅಫಘನಿಸ್ತಾನದ ಮೂಲನಿವಾಸಿಗಳಾದ ಪುಸ್ತೂನ್ ಬುಡಕಟ್ಟಿಗೆ ಸೇರಿದವರು. ಮುಜಾಯಿದ್ ಎಂಬ ಸಂಘಟನೆಯಡಿ ಅವರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅಖಂಡ ರಷ್ಯಾ ಅವರ ಪಕ್ಕದ ದೇಶವಾಗಿತ್ತು. ಈ ಸಂಘಟನೆ ಅವರ ಜೊತೆ ಆಗಾಗ ಗೇರಿಲ್ಲಾ ಯುದ್ಧ ಮಾಡುತ್ತಿತ್ತು. ೧೯೭೮ರಲ್ಲಿ ರಷ್ಯಾ ಇವರ ಮೇಲೆ ಯುದ್ಧ ಸಾರಿತು. ನಿರಂತರ ಒಂಬತ್ತು ವರ್ಷಗಳ ಕಾಲ ಶೀತಲ ಯುದ್ಧ ನಡೆಯಿತು.. ಆಫ್ಘಾನ್ ನಲುಗಲು ಆರಂಭವಾಗಿದ್ದು ಆಗಲೇ. ಆಗ ರಷ್ಯದ ಸಂಪ್ರದಾಯಿಕ ಎದುರಾಳಿ ಅಮೇರಿಕಾ  ಮುಜಾಹಿದ್ದಿನರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ರಷ್ಯನ್ನರ ವಿರುದ್ಧ ಹೊರಾಡಲು ಹುರಿದಿಂಬಿಸಿತು.. ಅದೇ ಶಸ್ತ್ರಾಸ್ತ್ರ ಮತ್ತೆ ತಿರುಗಿ ಪ್ರಯೋಗವಾಗಿದ್ದು ಅಮೇರಿಕಾದ ವಿರುದ್ಧವೇ.  ಅದು ಪರಾಕಾಸ್ಟೆಯನ್ನು ತಲುಪಿದ್ದು ೨೦೦೧ ರಲ್ಲಿ.ಅಮೇರಿಕಾದ ಅವಳಿ ಕಟ್ಟಡವನ್ನು ಒಸಮಾ ಬಿನ್ ಲಾಡೆನ್ ಉರುಳಿಸಿದಾಗ. ಆತ ”ಅಲ್ ಖೈದಾ’ ಎಂಬ ಮುಸ್ಲೀಂ ಉಗ್ರಗಾಮಿ ಸಂಘಟನೆಯ ನೇತಾರ. ಜಗತ್ತಿನ ಎಲ್ಲಾ ಮುಸ್ಲೀಂ ಉಗ್ರಗಾಮಿ ಸಂಘಟನೆಗಳು ’ತಾಲಿಬಾನಿ’ ಗಳೆಂಬ ಏಕನಾಮದಲ್ಲಿ ಜಗತ್ತಿಗೇ ಭಯೋತ್ಪದಾನೆ ಮಾಡತೊಡಗಿತು. ಅಪ್ಘಾನಿಸ್ತಾನ ಅವರಿಗೆ ಆಶ್ರಯ ತಾಣವಾಯ್ತು. ಪಾಕಿಸ್ತಾನ ಅವರಿಗೆ ಕುಮ್ಮಕ್ಕು ನೀಡಲಾರಂಬಿಸಿತು. ಎಲ್ಲಾ ಉಗ್ರಗಾಮಿಗಳ ಅನಭಿಷಿಕ್ತ ನಾಯಕ  ಒಸಾಮಾಬಿನ್ ಲಾಡೆನ್ ನನ್ನು ಇದೇ ಪಾಕಿಸ್ತಾನದ ಅಬೊಟಾಬಾದಿನಲ್ಲಿ ಅಮೇರಿಕಾದ ಸೇನೆ ಹೊಡೆದುರುಳಿಸಿತ್ತು.

ತನ್ನ ಪಕ್ಕದ ದೇಶದಲ್ಲಿ ಹುಟ್ಟಿದ ತಾಲಿಬಾನಿಗಳ ಕೈ ಪಾಕಿಸ್ತಾನದೆಡೆಗೂ ಚಾಚಿ ಇಲ್ಲಿಯ ಅಮಾಯಾಕರ ಜನರ ಕತ್ತು ಹಿಸುಕುತ್ತಿದ್ದುದ್ದನ್ನು ಅ ಪುಟ್ಟ ಪೋರಿ ಮಲಾಲ ಹುಟ್ಟಿನಿಂದಲೂ ಗಮನಿಸುತ್ತಲೇ ಬಂದಿದ್ದಳು. ಬೀದಿ ಬೀದಿಯಲ್ಲಿ ಉರುಳಾಡುತ್ತಿದ್ದ ರುಂಡ-ಮುಂಡವಿಲ್ಲದ ಹೆಣಗಳನ್ನು ಕಣ್ಣಾರೆ ಕಾಣುತ್ತಿದ್ದಳು. ತಾಲಿಬಾನಿಗಳು ಒತ್ತಾಯಪೂರ್ವಕವಾಗಿ ಹೇರುತ್ತಿದ್ದ ಶೇರಿಯತ್ ಕಾನೂನುಗಳ ಅವಾಂತರಗಳು, ಅದು ಮಹಿಳೆಯರ ಮೇಲಾಗುತ್ತಿದ್ದ ಪರಿಣಾಮಗಳು ಆ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿದ್ದವು.

ಅದು ಆಕೆಯ ಹೊರಜಗತ್ತು ಆಗಿದ್ದರೆ ಅವಳ ಮನೆಯ ಪರಿಸರ ಹೀಗಿತ್ತು; ತಂದೆ-ತಾಯಿ ಮತ್ತು ಇಬ್ಬರು ತಮ್ಮಂದಿರ ಪುಟ್ಟ ಪ್ರಪಂಚವದು. ತಂದೆ ಜಿಯಾಯುದ್ದಿನ್ ಕವಿಯಾಗಿದ್ದ. ಜೊತೆಗೆ ಶಿಕ್ಷಕ. ಆತ ತನ್ನದೇ ಆದ ’ಖುಷಾಲ್ ಪಬ್ಲಿಕ್ ಸ್ಕೂಲ್’ ಎಂಬ ಹೆಣ್ಣುಮಕ್ಕಳ ಶಾಲೆ ನಡೆಸುತ್ತಿದ್ದ. ಶೈಕ್ಷಣಿಕ ಹೊರಾಟಗಾರ ಎಂದು ಸುತ್ತಮುತ್ತಲಲ್ಲಿ ಪರಿಚಿತನಾಗಿದ್ದ. ಇಂತಹ ತಂದೆಯೊಬ್ಬ ಮಾತ್ರ ತನ್ನ ಮಗುವಿಗೆ ’ಮಲಾಲ’’ ಎಂದು ಹೆಸರಿಡಲು ಸಾಧ್ಯ. ಆ ಹೆಸರಿನ ಅರ್ಥ.ದುಃಖವನ್ನು ಹುದುಗಿಟ್ಟುಕೊಂಡವಳು. ಅದು ಸ್ಫುರಿಸುವ ಹಲವು ಅರ್ಥಗಳಲ್ಲಿ ’ದೇವರ ಸ್ವತ್ತು’ ಗಟ್ಟಿಗಿತ್ತಿ,ಧೈರ್ಯವಂತೆಯೂ ಸೇರಿತ್ತು ಆ ಹೆಸರು ಆಕೆಗೂ ಇಷ್ಟವಾಗಿತ್ತು. ಆಕೆ ಅದನ್ನು  ಬಿಬಿಸಿಯಲ್ಲಿ ಬರೆಯುತ್ತಿದ್ದ ತನ್ನ ಡೈರಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಗೆ ಡಾಕ್ಟರ್ ಆಗುವ ಬಯಕೆಯಿತ್ತು. ಆದರೆ ಆಕೆಯ ತಂದೆ ಅವಳಲ್ಲಿ ಭವಿಷ್ಯದ ರಾಜಕಾರಣಿಯನ್ನು ಕಾಣುತ್ತಿದ್ದರು. ಡಾಕ್ಟರ್ ಯಾರೂ ಬೇಕಾದರೂ ಆಗಬಹುದು ಆದರೆ ನನ್ನ ದೇಶಕ್ಕೆ ದೂರದರ್ಶಿತ್ವವುಳ್ಳ ರಾಜಕಾರಣಿಗಳ ಅವಶ್ಯಕತೆಯಿದೆಯೆಂದು ಅವರ ನಂಬಿಕೆ. ಮಲಾಲ ಅವರ ಕನಸನ್ನು ನನಸು ಮಾಡುವ ಹಾದಿಯಲ್ಲಿದ್ದಳು.

ಆಕೆಗೆ ಬಿಬಿಸಿಯಲ್ಲಿ ಡೈರಿ ಬರೆಯಲು ಅವಕಾಶ ಸಿಕ್ಕಿದ್ದು ಹೇಗೆ? ಅದಕ್ಕೂ ಒಂದು ಹಿನ್ನೆಲೆಯಿದೆ.
ಹೊರಜಗತ್ತಿನ ಕ್ರೌರ್ಯ, ಮನೆಯೊಳಗಿನ ಮಮತೆ, ಅವಳ ಒಳಜಗತ್ತನ್ನು ವಿಸ್ತಾರಗೊಳಿಸುತ್ತಿತ್ತು.
ಅದು ೨೦೦೮ ರ ಸಪ್ಟಂಬರ್. ಪೇಶಾವರದ ಪ್ರೆಸ್ಸ್ ಕ್ಲಬ್ ನಲ್ಲಿ ಆಕೆ ಮೊದಲ ಬಹಿರಂಗ ಭಾಷಣ ಮಾಡಿದಳು. ವಿಷಯ; ’ನನ್ನ ಮೂಲಭೂತ ಶಿಕ್ಷಣದ ಹಕ್ಕುಗಳನ್ನು ಕಸಿಯಲು ತಾಲಿಬಾನಿಗಳಿಗೆಷ್ಟು ಧೈರ್ಯ?’.ಆಗ ಅವಳ ವಯಸ್ಸು ಕೇವಲ ಹನ್ನೊಂದು. ಆ ಬಾಲಕಿಯ ಅಸ್ಖಲಿತ ಭಾಷಣವನ್ನು ಎಲ್ಲಾ ಪತ್ರಿಕೆಗಳು ಪ್ರಮುಖವಾಗಿ ಬರೆದವು, ಟೀವಿ ಚಾನಲ್ ಗಳು ನಾಡಿನಾದ್ಯಂತ ಪ್ರಸಾರ ಮಾಡಿದವು. ಆ ತಂದೆ-ಮಗಳನ್ನು ಜನ ಗುರುತಿಸತೊಡಗಿದರು.

೨೦೦೯ರಲ್ಲಿ ಮಲಾಲಳಿಗೆ ಬಿಬಿಸಿಯ ಉರ್ದು ಪತ್ರಿಕೆಗೆ ಡೈರಿ ಬರೆಯುವ ಅವಕಾಶ ಸಿಕ್ಕಿತ್ತು. ಅದಕ್ಕೂ ಒಂದು ಕಾರಣವಿತ್ತು.  ಸ್ವಾತ್ ಕಣಿವೆಯಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಹಿಂಸೆಯ ಬಗ್ಗೆ ಬಿಬಿಸಿ ಸವಿವರವಾಗಿ ಬರೆಯುತ್ತಿತ್ತು. ಆದರೆ ಅಲ್ಲಿನ ಜನಸಾಮಾನ್ಯರ ಬದುಕು-ಬವಣೆಯ ಬಗ್ಗೆ ಬರೆಯಲಾಗುತ್ತಿರಲಿಲ್ಲ. ಅದನ್ನು ಬರೆಯುವವರಿಗಾಗಿ ಅದು ಹುಡುಕಾಟ ನಡೆಸಿತ್ತು. ಅದು ಮಲಾಳ ಅಪ್ಪನನ್ನು ಸಂಪರ್ಕಿಸಿ ಅವರ ಸ್ಕೂಲಿನ ಹೆಣ್ಣು ಮಕ್ಕಳ್ಯಾರಾದರೂ ಬರೆಯಲು ಸಾಧ್ಯವೇ? ಎಂದು ಕೇಳಿತ್ತು. ಆಗ ಆಯೇಷಾ ಎಂಬಾಕೆ ಬರೆಯಲು ಒಪ್ಪಿಕೊಂಡಳು . ಆದರೆ ಆಕೆಯ ಹೆತ್ತವರು ತಾಲಿಬಾನಿಗಳ ಭಯಕ್ಕೆ ಅನಂತರದಲ್ಲಿ ನಿರಾಕರಿಸಿದಳು. ಆಗ ಅದನ್ನು ದೈರ್ಯದಿಂದ ಒಪ್ಪಿಕೊಂಡವಳು ಮಲಾಲ. ಆದರೆ ಆಗ ಬಿಬಿಸಿಯ ಸಂಪಾದಕರಾಗಿದ್ದ ಮಿರ್ಜಾ ವಾಹಿದ್ ಆಕೆಯ ಸುರಕ್ಷತೆಯ ದೃಷ್ಟಿಯಿಂದ ಅವಳಿಗೆ ’ಗುಲ್ ಮಕಾಯಿ’ ಎಂಬ ಗುಪ್ತನಾಮವನ್ನು ನೀಡಿದರು. ಅದರ ಅರ್ಥ ಮೆಕ್ಕೆ ಜೋಳದ ಹೂ.

೨೦೦೯ರ ಜನವರಿ ೩ರಿಂದ ಗುಲ್ ಮಕಾಯಿಯ ಡೈರಿ ಬಿಬಿಸಿಯಲ್ಲಿ ಪ್ರಕಟವಾಗತೊಡಗಿತು. ಇದೇ ಸಮಯದಲ್ಲಿ ಸ್ವಾತ್ ಕಣಿವೆಯ ಹೆಣ್ಣುಮಕ್ಕಳಿಗೆ ಬರಸಿಡಿಲಿನಂತೆ ಬಂದೆರಗಿತು ಒಂದು ಸುದ್ದಿ, ಅದು, ಜನವರಿ ೧೫ರಿಂದ ಸ್ವಾತ್ ಕಣಿವೆಯಲ್ಲಿರುವ ಯಾವ ಹೆಣ್ಣುಮಕ್ಕಳೂ ಶಾಲೆಗಳಿಗೆ ಹೋಗಬಾರದೆಂದು ತಾಲಿಬಾನಿಗಳು ಕಟ್ಟಪ್ಪಣೆ ಹೊರಡಿಸಿದ್ದು. ಅವರು ಹೇಗೆ ಅಪ್ಪಣೆ ಕೊಡುತ್ತಾರೆಂದು ನಿಮಗನ್ನಿಸಬಹುದು? ಸ್ವಾತ್ ಕಣಿವೆ ಪಾಕಿಸ್ತಾನದಲ್ಲೇ ಇದೆಯಾದರೂ ಅಲ್ಲಿ ನಡೆಯುತ್ತಿರುವುದೆಲ್ಲಾ ತಾಲಿಬಾನಿಗಳ ಆಡಳಿತವೇ. ಒಂದು ರೇಡಿಯೋ ಸ್ಟೇಶನ್ ಇಟ್ಟುಕೊಂಡೇ ಅವರು ಇಡೀ ಸ್ವಾತ್ ಕಣಿವೆಯನ್ನು ನಿಯಂತ್ರಿಸುತ್ತಿದ್ದರು. ಜನ ರಾತ್ರಿಯಾಗುವುದನ್ನೇ ಕಾಯುತ್ತಿದ್ದರು. ರಾತ್ರಿ ತಾಲಿಬಾನಿಗಳು ರೇಡಿಯೋದ ಮುಖಾಂತರ ತಮ್ಮ ಹುಕುಂ ನೀಡುತ್ತಿದ್ದರು. ಜನ ಅದನ್ನು ಪಾಲಿಸಲೇ ಬೇಕಾಗುತ್ತಿತ್ತು.

ಸ್ವಾತ್  ಕಣಿವೆಯಲ್ಲಿ ದೀಪಾವಳಿಯ ಪಟಾಕಿಗಳಂತೆ ಬಂದೂಕುಗಳು ಗರ್ಜಿಸುತ್ತಿದ್ದವು. ಹಕ್ಕಿಗಳ ಗುಂಪಿನಂತೆ ಯುದ್ದ ವಿಮಾನಗಳು, ಹೆಲಿಕಾಪ್ಟರಗಳು ಆಕಾಶದಲ್ಲಿ ಹಾರಾಡುತ್ತಿದ್ದವು. ರುಂಡ-ಮುಂಡವಿಲ್ಲದ ಹೆಣಗಳು ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿರುತ್ತಿದ್ದವು. ಜನಗಳು ನರಿ-ನಾಯಿಗಳ ಹೆಣಗಳಂತೆ ಬಿದ್ದಿರುವ ಇವುಗಳನ್ನು ದಾಟಿಕೊಂಡು ಮುನ್ನಡೆಯಬೇಕಾಗಿತ್ತು. ಶರಿಯತ್ ನಿಯಮಗಳನ್ನು ಉಲ್ಲಂಘಿಸಿದವರನ್ನು ಬೀದಿಯಲ್ಲಿ ಸಾರ್ವಜನಿಕರ ಎದುರಲ್ಲೇ ಅಮಾನುಷವಾಗಿ ಹಿಂಸಿಸಿ ಕೊಲ್ಲುತ್ತಿದ್ದರು. ಹೆಣ್ಣುಮಕ್ಕಳ ಬದುಕಂತೂ ನರಕ ಸದೃಶ್ಯವಾಗಿತ್ತು. ಇದೆಲ್ಲಾ ಮಲಾಳ್ ಡೈರಿಯಲ್ಲಿ ದಾಖಲಾಗುತ್ತಾ ಜಗತ್ತಿನೆದುರು ಬಯಲಾಗುತ್ತಾ ಬಂತು.

ಮಲಾಲ ಶಾಂತಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಪ್ರೆಸ್ ಕಾನ್ಪೆರ್ನ್ಸಗಳಲ್ಲಿ ದಿಟ್ಟತನದಿಂದ ಮಾತಾಡುತ್ತಿದ್ದಳು. ಜಗತ್ತಿನ ಎಲ್ಲಾ ಮಕ್ಕಳು ಖುಷಿಯಿಂದ ನಿರ್ಭಯವಾಗಿ ಶಾಲೆಗೆ ಹೋಗುತ್ತಾರೆ ಆದರೆ ನಾವು..? ತಾಲಿಬಾನಿಗಳು ನಮ್ಮನ್ನು ಕೊಲ್ಲುತ್ತಾರೆ ಎಂಬ ಭಯದಲ್ಲಿ ಸದಾ ಬದುಕುತ್ತಿರುತ್ತೇವೆ. ಯಾಕೆ ಹೀಗೆ ಎಂದು ಪ್ರಶ್ನಿಸುತ್ತಿದ್ದಳು. ಆಕೆ ವಿದೇಶಿ ರಾಜತಾಂತ್ರಿಕರನ್ನು ಬೇಟಿಯಾಗುತ್ತಿದ್ದಳು. ಆಕೆಯಲ್ಲಿ ವಯಸ್ಸಿಗೆ ಮೀರಿದ ಪ್ರಭುದ್ಧತೆ ಎದ್ದು ಕಾಣುತ್ತಿತ್ತು. ಪರಿಣಾಮ ತಾಲಿಬಾನಿನ ಬಂದೂಕಿನ ನಳಿಗೆ ಮಲಾಲಳತ್ತ ತಿರುಗಿತು.
ಗುಂಡಿಗೆ ಎದೆಯೊಡ್ಡಿ ನಿಂತ ಈ ಬಾಲಕಿಯ ತಲೆಗೆ ಮೊನ್ನೆ ಗುಂಡೇಟು ಬಿದ್ದೇ ಬಿಟ್ಟಿತ್ತು.

ಆಕೆ ಡೈರಿ ಬರೆಯುತ್ತಿದ್ದ ಕಾಲದಲ್ಲೇ ಆಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ’ನ್ಯೂಯಾರ್ಕ್ ಟೈಮ್ಸ್’ ಮಾಡಿತು. ಅದು ಆಕೆಯ ಬಗ್ಗೆ ಅರ್ಧ ಘಂಟೆಯ ಒಂದು ವಿಡಿಯೋ ಡಾಕ್ಯುಮೆಂಟರಿಯನ್ನು ತಯಾರಿಸಿತು. ಅದರಲ್ಲಿ ಆಕೆ ತನ್ನ ಕನಸು, ಗುರಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾಳೆ. ಇದು ಅವಳನ್ನು ಮತ್ತಷ್ಟು ಜನಪ್ರಿಯಗೊಳಿಸಿತು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಪ್ರಚಾರ ಆಕೆಯನ್ನು ಸ್ವಾತ್ ಜಿಲ್ಲೆಯ ಮಕ್ಕಳ ಅಸೆಂಬ್ಲಿಯ ಅಧ್ಯಕ್ಷ ಗಿರಿಗೆ ಏರಿಸಿತು. ಇದಲ್ಲದೆ ಪಾಕಿಸ್ತಾನದ ಪ್ರಥಮ ನ್ಯಾಷನಲ್ ಯೂತ್ ಶಾಂತಿ ಪ್ರಶಸ್ತಿ ಇವಳ ಮಡಿಲಿಗೇ ಬಂತು.ದ ಅಪ್ರಿಕಾದ ಸಾಮಾಜಿಕ ಹೋರಾಟಗಾರ ಡೆಸ್ಮಂಡ್ ಟೂಟೋ ಹೆಸರಿನಲ್ಲಿ ಕೊಡುವ ಇಂಟರ್ ನ್ಯಾಷನಲ್ ಚಿಲ್ಡ್ರನ್ ಶಾಂತಿ ಪ್ರಶಸ್ತಿಗೂ ಆಕೆಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಬ್ರಿಟನಿನ ಮಾಜಿ ಪ್ರಧಾನಿ ಗೋಲ್ಡನ್ ಬ್ರೌನ್ ಮಲಾಲ ಹೆಸರಿನಲ್ಲಿ ’ನಾನು ಮಲಾಲ’ ಎಂಬ ಘೋಷಣೆಯೊಂದನ್ನು ವಿಶ್ವ ಸಂಸ್ಥೆಯ ಮುಂದಿಟ್ಟಿದ್ದಾರೆ.  ೨೦೦೧೫ನೇ ಇಸವಿಗೆ ಜಗತ್ತಿನಾದ್ಯಂತ ಎಲ್ಲಾ ಮಕಳಿಗೂ ಶಿಕ್ಷಣ ದೊರಕಬೇಕೆಂಬುದು ಇದರ ಅಶಯವಾಗಿದೆ.
ಪ್ರಖ್ಯಾತ ಪಾಪ್ ತಾರೆ ಮಡೊನ್ನಾ ಕಳೆದ ವಾರ ತುಂಬಿದ ಸಭೆಯಲ್ಲಿ ತನ್ನ ಅಭಿಮಾನಿಗಳ ಮಧ್ಯೆ ಗದ್ಗದಿತಳಾಗಿ ತನ್ನ ಬಹುಜನಪ್ರಿಯ ಹಾಡು ’ಹ್ಯೂಮನ್ ನೇಚರ್’ ಅನ್ನು ಮಲಾಳಿಗೆ ಅರ್ಪಿಸಿದ್ದಾಳೆ.

ನ್ಯೂಯರ್ಕ್ ಟೈಮ್ಸ್ ಗೆ ಮಲಾಲ ಇಂಟರ್ವ್ಯು ಕೊಡುತ್ತಿರುವಾಗ ಆಕೆ ಒಂಚೂರು ತಡವರಿಸಿದ್ದಳು. ಆಗ ಆಕೆಯ ಅಪ್ಪನ ಕೈಯಿ ಅವಳ ನೆತ್ತಿಯನ್ನು ಸವರಿ ಉತ್ತೇಜನವನ್ನು ನೀಡಿತ್ತು. ಅದೇ ಸಮಯಕ್ಕೆ ಅವಳ ತೊಡೆಯ ಮೇಲಿದ್ದ ಪುಸ್ತಕದ ಮೇಲೆ ಕ್ಯಾಮಾರ ಪೋಕಸ್ ಆಗಿತ್ತು, ಅಲ್ಲಿತ್ತು, ಗಾಂದೀಜಿಯವರ ಬಾಯಿಯಿಂದ ’ಗುರುದೇವ್’ ಎಂದು ಕರೆಸಿಕೊಂಡಿದ್ದ  ಭಾರತಕ್ಕೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕವಿ ರವೀಂದ್ರನಾಥ್ ಠಾಕೂರ್ ಅವರ ಪುಸ್ತಕ. ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಧುಮುಕಿ ಹೋರಾಟಕ್ಕೆ ಸ್ಫೂರ್ತಿ ನೀಡುವಂತ ಕವನಗಳನ್ನು ಬರೆದ ಇವರು ಆಗ ತಮ್ಮನ್ನಾಳುತ್ತಿದ್ದ ಬ್ರಿಟೀಶ್ ಸರಕಾರ ಪಂಜಾಬ್ ಗಲಭೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದಾಗ ತಮಗೆ ಈ ಹಿಂದೆ ಅದೇ ಸರಕಾರ ಕೊಟ್ಟಿದ್ದ ’ನೈಟ್” ಪದವಿಯನ್ನು ಹಿಂದುರುಗಿಸಿದ ದೇಶಾಭಿಮಾನಿ ಅವರು. ಅವಳಿಗೆ ಸ್ಫೂರ್ತಿ ಕೊಟ್ಟಿರಬಹುದಾಗಿದ್ದ ಮತ್ತು ಸ್ವಾತಂತ್ರ್ಯವನ್ನು ಬಯಸುವ, ಗೌರವಿಸುವ ಎಲ್ಲರೂ ಪ್ರೀತಿಸುವ ’ಗಿತಾಂಜಲಿ’ಯ ಸಾಲುಗಳಿವು;

” ಎಲ್ಲಿ ಮನ ಭಯರಹಿತ, ಎಲ್ಲಿ ತಲೆಯೆತ್ತಿ ನಿಲ್ಲಲು ಸಾಧ್ಯ, ಎಲ್ಲಿ ವಿಧ್ಯೆಗೆ ಮುಕ್ತ ಅವಕಾಶವೋ
ಎಲ್ಲಿ ಸಣ್ಣ ಸಣ್ಣ ಗೋಡೆಗಳಿಂದ ಜಗತ್ತು ಸಣ್ಣ ಸಣ್ಣ ತುಂಡುಗಳಾಗಿ ಒಡೆದಿಲ್ಲವೋ
ಎಲ್ಲಿ ಮಾತುಗಳು ಸತ್ಯದಾಳದಿಂದ ಎದ್ದು ಬರಬಲ್ಲವೋ
ಎಲ್ಲಿ ದಣಿವಿರದ ಹೋರಾಟ ಪರಿಪೂರ್ಣತೆಯ ಕಡೆ ತನ್ನ ತೋಳುಗಳನ್ನು ಚಾಚುತ್ತಿರುವುದೋ
ಎಲ್ಲಿ ವಿವೇಕದ ಅಚ್ಚ ತೊರೆ ಸಂಪ್ರದಾಯದ ಹಾಳು ಮರುಭೂಮಿ ಮರಳಲ್ಲಿ ಲುಪ್ತವಾಗುವುದಿಲ್ಲವೋ
ಎಲ್ಲಿ ನೀನು ಮನಸ್ಸನ್ನು ಸತತ ನಡೆಸುತ್ತಿಯೋ ನಿರಂತರವಾಗಿ ವಿಸ್ತರಿಸುತ್ತಲೇ ಇರುವ ವಿಚಾರಗಳಾಚಾರಗಳ ಕಡೆ-
ಆ ಅಂಥ ಸ್ವಾತಂತ್ರ್ಯ ಸ್ವರ್ಗಕ್ಕೆ, ಓ ತಂದೆ, ಎದ್ದೇಳಲಯ್ಯ ಈ ನನ್ನ ದೇಶ!” [ಗೋಪಾಲಕೃಷ್ಣ ಅಡಿಗರ ಅನುವಾದ]

ಇದರ ಜೊತೆ ಆಕೆ ಜಗತ್ತಿನೆದುರು ಮಾಡಿಕೊಂಡ ಮನವಿಯನ್ನು ಹೋಲಿಸಿ ನೋಡಿ; 
ಸ್ವಾತ್ ಕಣಿವೆ ಒಂದು ಕಾಲದಲ್ಲಿ ಭೂಲೋಕದ ಸ್ವರ್ಗವಾಗಿತ್ತು. ಈಗ ಅದು ಹೊತ್ತಿ ಉರಿಯುತ್ತಿದೆ. ನಾವು ಮುಗ್ಧರು; ಶಾಂತಿಪ್ರಿಯರು. ನನ್ನ  ಸ್ವರ್ಗ ಕಳೆದು ಹೋಗಿದೆ.
ಜಗತ್ತಿನೆದುರು ನನ್ನ ಮನವಿಯಿದು;
ನನ್ನ ಶಾಲೆಯನ್ನು ಉಳಿಸಿ, ನನ್ನ ಸ್ವಾತ್ ಕಣಿವೆಯನ್ನು ಉಳಿಸಿ, ನನ್ನ ದೇಶವನ್ನು ಉಳಿಸಿ

ಸಮಸ್ತ ಭಾರತ ನವರಾತ್ರಿಯನ್ನು ಆಚರಿಸುತ್ತಿದೆ. ತಾಯಿ ದುರ್ಗಾಮಾತೆಯನ್ನು ಪೂಜಿಸುತ್ತಿದೆ. ಪಾಕಿಸ್ತಾನದ ಆ ಪುಟ್ಟ ದುರ್ಗೆ ಬಹು ಬೇಗನೆ ಗುಣ ಮುಖಳಾಗಿ ಶಿಷ್ಟ ಸಂರಕ್ಷಕಿಯಾಗಿ, ದುಷ್ಟ ಸಂಹಾರಕ್ಕೆ ಮುಂದಾಗಲಿ ಎಂದು ಇಡೀ ಭಾರತ ಹಾರೈಸುತ್ತಿದೆ..

[ಉದಯವಾಣಿ ಸಾಪ್ತಾಹಿಕದಲ್ಲಿ ಇಂದು ಪ್ರಕಟವಾದ ಲೇಖನ]


Saturday, October 6, 2012

ಪ್ರತೀಕ್ಷೆ

                

ಬಂದು ಬಿಡು ಗೆಳೆಯಾ...ನಾನಿಲ್ಲಿ ಒಬ್ಬಂಟಿ.
ಭಯ ಬೀಳಿಸುವ ಕಾರಿರುಳು; ಅಲ್ಲಿ ಬೆಳದಿಂಗಳ ಜೊನ್ನ ಮಳೆ. 
ಕೋಳಿ ಕೂಗುವ ಮುನ್ನ ನಾವಲ್ಲಿರಬೇಕು. 
ಸುಮ್ಮನೆ ಬಂದು ನನ್ನೆದುರು ನಿಂತುಬಿಡು.

ನಿನ್ನ ಕಿರುಬೆರಳಿನಲ್ಲಿದೆ ಗೋವರ್ಧನಗಿರಿಯನೆತ್ತುವ ಸ್ಫೂರ್ತಿ
ಅಂಗ ಭಂಗಿತಳು ನಾನು, ಬಾಳಹಾದಿಗೆ ಬೇಕೆನಗೆ ಕಿರುಬೆರಳ ಕೊಂಡಿ.


ಕಾಡು ಹಾದಿಯ ಕಳೆದು, ಬೆಟ್ಟಗುಡ್ಡವನೇರಿಳಿದು
ಕೊಂಚ ದೂರ ನಡೆದರೆ ಅಲ್ಲೊಂದು ಮಡಿಲು.
ಅಂಚಿಲ್ಲದ ನೀಲ ಬಾನಿನ ಕೆಳಗೆ, ಅಂಚಿರುವ ಕಡಲು
ರುದ್ರಪಾದೆಯ ಅಂಚು; ನಾವಲ್ಲಿ ಜೋಡಿ ಮಿಂಚು

ನಿನ್ನ ಹೆಗಲಿಗೊರಗಿ ನಾ ಕಣ್ಮುಚ್ಚಿದ ಹೊತ್ತು,ನೀ ತುಟಿ ಬಿಚ್ಚದಿರು.
ಕಾಡುವ ಕಡಲಿನ ಮುಂದೆ ಕಣ್ಣೀರ ಕಡಲಿಡಬೇಕು.
ನಾ ಬರಿದಾಗಬೇಕು, ನಿನ್ನ ಒಲವಲ್ಲಿ ಅಕ್ಷಯ ಪಾತ್ರೆ.

ನಾ ಕಣ್ತೆರೆದಾಗ, ನಿನ್ನ ಕೈಯ್ಯಲ್ಲಿ ಕಪ್ಪೆಚಿಪ್ಪಿನ ಮಾಲೆ.
ನನ್ನೆದೆಯ ಕಂಪನಕ್ಕೆ ಶರಧಿ ನಾಚಿ ಹಿಂದೋಡಬೇಕು.
ಆ ರಸಘಳಿಗೆ ಸ್ಥಾಯಿಯಾಗಿ ಕಾಲ ಸ್ತಬ್ದಗೊಳ್ಳಲಿ.

ಬಣ್ಣ ಬಣ್ಣದ ಏಡಿಗಳೆಲ್ಲಾ ಸರಸರನೆ ಮರಳೆದೆಗೆ ಇಳಿಯುವ ಹೊತ್ತು
ಮತ್ತೊಮ್ಮೆ ಮಗುತನದಲ್ಲಿ ಮರಳಮನೆ ಕಟ್ಟಬೇಕು
ಮತ್ತೆ ಮತ್ತೆ ಸೇರುವ ಹಂಬಲಕ್ಕೆ ಜಗಳದ ಆವರ್ತನ..!
ಚಿರಂತನ ಹಂಬಲವಿದು; ಚಿರಾಯುವಾಗಲಿ ಗೆಳೆಯನೇ

ನನ್ನ ಪಂಚೇಂದ್ರಿಯಗಳ ಹಸಿವು ತಣಿಯಬೇಕು
ಪಡುವಣದ ಸೂರ್ಯನಂತೆ ಬಣ್ಣದೋಕುಳಿಯಾಡಬೇಕು.
ಎಲ್ಲಾ ಬಂಧನಗಳ ಕಿತ್ತೊಗೆದು..
ಕ್ಷಣಕಾಲ ಮಿಂಚಾಗಿ ನನ್ನೊಳಗೆ ಹರಿದುಬಿಡು ಗೆಳೆಯಾ...!