Tuesday, March 27, 2012

ಪ್ರಭುತ್ವಕ್ಕೆ ಮಾತೃತ್ವದ ಸ್ಪರ್ಶವಿರಬೇಕು



ಅಂತೂ ಮಮತಾ ದೀದಿ ತಮ್ಮ ಹಠ ಸಾಧಿಸಿಯೇ ಬಿಟ್ಟರು.
ಮಮತಾ ಬ್ಯಾನರ್ಜಿಯದು ಸರ್ವಾಧಿಕಾರದ ಧೋರಣೆಯೇ?
ಹೌದು ಎನ್ನಲೇ ಬೇಕಾಗುತ್ತದೆ. ಆಕೆ ಹಾಗಿರಲಿಲ್ಲ. ಸರಳ ವ್ಯಕ್ತಿತ್ವದ, ಜನಪರ ಕಾಳಜಿಯ, ಎಲ್ಲರ ಬಾಯಿಯಿಂದ ’ದೀದಿ’ ಎಂದು ಕರೆಯಿಸಿಕೊಳ್ಳುತ್ತಿದ್ದ ಆಕೆ ತನ್ನ”ಪೊರೆಯುವ’ ಗುಣದಿಂದಾಗಿ. ರಾಜಕೀಯೇತರ ಕಾರಣಗಳಿಂದಲೂ ರಾಜಕೀಯದಲ್ಲಿ ಆಸಕ್ತಿ ಇರದವರ ಬಾಯಿಯಿಂದಲೂ ”ತಮ್ಮವಳು’ ಎಂದು ಅನ್ನಿಸಿಕೊಂಡಿದ್ದರು. ಆದರೆ….
ರೈಲ್ವೆ ಸಚಿವರಾಗಿದ್ದ ದಿನೇಶ್ ತ್ರಿವೇದಿ ಮಾಡಿದ್ದಾದರೂ ಏನು? ದೇಶದ ಹಿತದೃಷ್ಟಿಯಿಂದ, ನಷ್ಟದತ್ತ ಚಲಿಸುತ್ತಿರುವ ರೈಲ್ವೆ ಇಲಾಖೆಯನ್ನು ಲಾಭದತ್ತ ಮುನ್ನಡೆಸಲು ಕಿ.ಮೀ.ಗೆ ಹತ್ತು ಪೈಸೆ ದರವನ್ನು ಹೆಚ್ಚಿಸಿದ್ದು. ಇದನ್ನು ಜನಸಾಮಾನ್ಯರು ವಿರೋಧಿಸಲಿಲ್ಲ. ಆದರೆ ದೀದಿ ಕೆರಳಿ ಬಿಟ್ಟರು. ದಿನೇಶ್ ಗೆ ’ರಾಜೀನಾಮೆ ಬಿಸಾಕಯ್ಯ’ ಎಂದು ತಾಕೀತು ಮಾಡಿದರು. ಜನಸಾಮಾನ್ಯರಲ್ಲಿ ಇದ್ದ ದೂರದೃಷ್ಟಿ, ಉದಾರತೆ ಒಬ್ಬ ರಾಜಕಾರಣಿಯಲ್ಲಿ ಇರದಾಯಿತೇ? ಅಷ್ಟು ಸಂಕುಚಿತ ಮನಸ್ಸೇ ಆಕೆಯದೇ?
ಇಷ್ಟಕ್ಕೂ ದಿನೇಶ್ ತ್ರಿವೇದಿ ಯಾರು? ತಮ್ಮದೇ ಪಕ್ಷವಾದ ’ತೃಣಮೂಲ ಕಾಂಗ್ರೇಸ್’ ನ ಪ್ರತಿನಿಧಿಸುತ್ತಿರುವ ಸಚಿವರು. ಅಂತವರನ್ನು ನಿರ್ಧಾಕ್ಷಿಣ್ಯವಾಗಿ, ಯಾವುದೇ ಮುಲಾಜಿಲ್ಲದೆ ಕಿತ್ತೊಗೆಯಬೇಕೆಂದು ಆಕೆ ಬಯಸಿದಾಗ ನನಗೆ ನೆನಪಾಗಿದ್ದು ಅಡಿಗರ”ಭೂಮಿಗೀತ’ದ ಈ ಸಾಲುಗಳು.
’’ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;
ತಿರುತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;
ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು.”
ಪೊರೆಯುವ ತಾಯಿಯೇ ಹಿಂಸಿಸುವ ಕ್ರೂರಿಯೂ ಆದಲ್ಲಿ ಮಕ್ಕಳ ಪಾಡೇನು?
ಮಮತಾ ಬ್ಯಾನರ್ಜಿಯೆಂಬ ಒಬ್ಬ ಮಹಿಳಾ ರಾಜಕಾರಣಿಯ ಬಗ್ಗೆ ಸಂಬಂಧಿಸಿದಂತೆ ಈ ಮಾತನ್ನು ನಾನು ಹೇಳುತ್ತಿಲ್ಲ. ರಾಜಕೀಯ ರಂಗದಲ್ಲಿ ಮುಂಚೂಣಿಯಲ್ಲಿರುವ ಕೆಲವು ಮುಖ್ಯ ಮಹಿಳೆಯರು ಹೃದಯಹೀನರಂತೆ ವರ್ತಿಸುತ್ತಿರುವುದೇಕೆ?
ಮಮತಾ ಬ್ಯಾನರ್ಜಿ, ಮಾಯಾವತಿ, ಜಯಲಲಿತಾ, ಉಮಾಭರತಿ, ನಮ್ಮ ರಾಜ್ಯಕ್ಕೆ ಬಂದರೆ ಶೋಭಾ ಕರಂದ್ಲಾಜೆ- ಇವರೆಲ್ಲಾ ನನಗೆ ಮಹಿಳೆಯರಂತೆ ಕಾಣಿಸುವುದೇ ಇಲ್ಲಾ. ಯಾಕೆಂದರೆ ಇವರಲ್ಲಿ ಮಹಿಳಾ ಸಂವೇದನೆಯೇ ಇಲ್ಲಾ. ಇವರೆಲ್ಲಾ ಪುರುಷ ಮನಸ್ಥಿತಿಯ ಮಹಿಳಾ ರಾಜಕಾರಣಿಗಳು. ಹಾಗಾಗಿ ಇವರನ್ನು ಮಹಿಳಾ ರಾಜಕಾರಣಿಗಳೆಂದು ಪ್ರತ್ಯೇಕಿಸುವ ಅಗತ್ಯವೇ ಇಲ್ಲ. ಇವರು ರಾಜಕಾರಣಿಗಳು ಅಷ್ಟೇ.
ಮೇಲೆ ಪ್ರಸ್ತಾಪಿಸಿದ ಮಹಿಳೆಯರಲ್ಲಿ ಇರುವ ಒಂದು ಸಾಮ್ಯತೆಯನ್ನು ಗಮನಿಸಿದ್ದೀರಾ? ಅವರೆಲ್ಲಾ ಮದುವೆಯಾಗದವರು; ಕುಮಾರಿಯರು. ತಾಯ್ತನದ ಅನುಭವವಿಲ್ಲದವರು. ನಮ್ಮೆಲ್ಲರ ಗಮನಕ್ಕೆ ಬಂದಂತೆ ಮಮತಾ ಬ್ಯಾನರ್ಜಿಯನ್ನು ಹೊರತುಪಡಿಸಿ ಉಳಿದವರೆಲ್ಲಾ ಪುರುಷ ಸಂಪರ್ಕದಲ್ಲಿರುವವರು. ಆ ಸಂಪರ್ಕದ ಗೋಜಲುಗಳೇ ಅವರೆಲ್ಲರನ್ನು ಕಠಿಣ ಹೃದಯಿಗಳನ್ನಾಗಿ ಮಾಡಿರಬಹುದೇ? ಮಮತಾ ಬ್ಯಾನರ್ಜಿಯ ಮನದಲ್ಲಿ ಪ್ರೇಮದ ನವಿರು ಭಾವಗಳನ್ನು ಮೂಡಿಸಲು ಯಾವೊಬ್ಬ ಪುರುಷನಿಗೂ ಯಾಕೆ ಸಾಧ್ಯವಾಗಿಲ್ಲ? ಅಥವಾ ಅವರೂ ಕೂಡಾ ಪ್ರೇಮ ವಂಚಿತರಾಗಿ ಈ ಪರಿಯ ಕಾಠಿಣ್ಯಕ್ಕೆ ಪಕ್ಕಾಗಿರಬಹುದೇ?
ಒಟ್ಟಿನಲ್ಲಿ ಇವರೆಲ್ಲಾ ಸಂಸಾರವನ್ನು ಕಟ್ಟಿಕೊಂಡವರಲ್ಲಾ, ಮುನ್ನಡೆಸಿದವರಲ್ಲಾ. ಹಾಗಾಗಿಯೇ ಇವರಲ್ಲಿ ಮಾತೃತ್ವದ ಭಾವನೆಗಳು ಜಾಗೃತಗೊಳ್ಳಲಿಲ್ಲವೇ? ಬೇಕಾದರೆ ಇವರ ಭಾಷಣಗಳನ್ನು ಒಮ್ಮೆ ಕೇಳಿ ನೋಡಿ; ಏರುಧ್ವನಿಯಲ್ಲಿ ಕಿರುಚುವ, ಪ್ರತಿಸ್ಪರ್ಧಿಗಳನ್ನು ಮಾತುಗಳಲ್ಲೇ ರೊಚ್ಚಿಗೆಬ್ಬಿಸುವ ವೈಖರಿಯನ್ನು ನೋಡಿದರೆ ಇವರನ್ನು ಸ್ತ್ರೀಯರೆಂದು ಪರಿಗಣಿಸಲು ಸಾಧ್ಯವೇ?. ಜಯಲಲಿತಾ ಏರು ಧ್ವನಿಯಲ್ಲಿ ಕಿರುಚದಿದ್ದರೂ ಅವರ ಮಾತುಗಳು ಕತ್ತಿಯ ಅಲುಗಿನಂತೆ ಇರಿಯುವುದಿಲ್ಲವೇ? ಮಮತಾ ಬ್ಯಾನರ್ಜಿ ಸ್ವಕೇಂದ್ರಿತ ವ್ಯಕ್ತಿತ್ವ ಹೊಂದಿರುವುದು ಅವರ ಬಹುದೊಡ್ಡ ನೂನ್ಯತೆಯಾಗಿದ್ದರೆ ಉಳಿದವರೆಲ್ಲಾ ಭ್ರಷ್ಟಾಚಾರದ ಮೂಟೆಗಳೇ.
ಮೇಲಿನ ಮಹಿಳಾಮಣಿಗಳ ಮನೋಭಾವಕ್ಕೆ ಹೊಂದಿಕೊಳ್ಳುವ ಇನ್ನೊಬ್ಬ ಪ್ರಭಾವಿ ಮಹಿಳಾ ರಾಜಕಾರಣಿಯಿದ್ದಾರೆ. ಅವರೇ ಸುಷ್ಮಾ ಸ್ವರಾಜ್. ಅವರು ಸಂಸಾರವನ್ನು ಕಟ್ಟಿಕೊಂಡವರು. ಆದರೂ ಅವರು ಪುರುಷರಂತೆ ಯೋಚಿಸುವುದು ಮಾತ್ರವಲ್ಲ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪುರುಷ ಪರವಾಗಿ ಷಡ್ಯಂತರಗಳನ್ನೂ ಮಾಡಬಲ್ಲ ಶಕ್ತಳೀಕೆ.
ಇವರೆಲ್ಲರ ಮಧ್ಯೆ ಮಾತೃಹೃದಯದ ಇಬ್ಬರು ಮಹಿಳೆಯರು ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅವರು ಕಾಂಗ್ರೇಸಿನ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿಯ ಮುಖ್ಯಮಂತ್ರಿ ಶೀಲದೀಕ್ಷಿತ್. ಒಬ್ಬ ತಾಯಿಯಲ್ಲಿರಬೇಕಾದ ಸಹನೆಯ ಗುಣ ಇವರಲ್ಲಿದೆ. ಶೀಲ ದೀಕ್ಷಿತ್ ಸತತ ಮೂರನೆಯ ಬಾರಿ ದಿಲ್ಲಿಯ ಮುಖ್ಯಮಂತ್ರಿ ಗಾದಿಯನ್ನೇರಿದವರು. ಕಾಂಗ್ರೇಸಿನಲ್ಲಿ ಸೋನಿಯಾಗೆ ಪರ್ಯಾಯ ನಾಯಕರಿಲ್ಲ. ಇವರಿಬ್ಬರೂ ಸಂಸಾರವನ್ನು ಕಟ್ಟಿಕೊಂಡವರು ಎಂಬುದಿಲ್ಲಿ ಮುಖ್ಯವಾದುದು.
ಪ್ರಕೃತಿ ನಮ್ಮನ್ನು ಹೆಣ್ಣಾಗಿ ಸೃಷ್ಟಿಸಿದೆ. ಅದರ ಬಗ್ಗೆ ನಮಗೆ ಅಭಿಮಾನ ಗೌರವಗಳಿರಬೇಕು. ಪುರುಷ ಪ್ರಧಾನ ಸಮಾಜ ನಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ವಿರೋಧಿಸೋಣ. ಅದನ್ನು ಮೀರುವ ಪ್ರಯತ್ನ ಮಾಡೋಣ. ಆದರೆ ಪುರುಷರಂತೆ ಆಗಲು ಹೊರಟರೆ ಅವರಲ್ಲಿ ಮತ್ತು ನಮ್ಮಲ್ಲಿ ಏನು ವ್ಯತ್ಯಾಸ ಉಳಿಯುತ್ತದೆ?
ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಶೋಭಾ ಕರಂದ್ಲಾಜೆ ಕಳೆದ ವಾರ ತಾನೇ ’ನಾವೆಲ್ಲಾ ಸಂಗೊಳ್ಳಿ ರಾಯಣ್ಣ’ರಾಗಬೇಕು ಎಂದು ಗುಡುಗಿದ್ದರು. ಈಕೆಯಲ್ಲಿ ಮತ್ತು ಯಡಿಯೂರಪ್ಪನವರಲ್ಲಿ ಹೊರನೋಟದ ವ್ಯತ್ಯಾಸ ಬಿಟ್ಟರೆ ಇನ್ಯಾವ ವ್ಯತ್ಯಾಸವೂ ನನಗೆ ಕಾಣುತ್ತಿಲ್ಲ.
ಮೊನ್ನೆ ಮೊನ್ನೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂದು ಅವರು ದೃಷ್ಟಿಹೀನರಾದ ಮಕ್ಕಳಿಗೆ ಚಾಕುವಿನಲ್ಲಿ ಕೇಕ್ ತಿನ್ನಿಸಿದ ರೀತಿಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ ಒಂದು ಕ್ಷಣ ನಡುಗಿ ಹೋದೆ. ಹೆಣ್ಣಿನ ಅಂತಃಕರಣವಿಲ್ಲದ, ಮಾತೃತ್ವದ ಸ್ಪರ್ಶವಿಲ್ಲದ ಯಾವ ಅಧಿಕಾರವೂ ಎಂದಿದ್ದರೂ ಅಪಾಯಕಾರಿಯೇ.!

[ ವಿಜಯಕರ್ನಾಟಕದ ’ಅನುರಣನ’ ಕಾಲಂನಲ್ಲಿ ಪ್ರಕಟವಾದ ಲೇಖನ ]

Sunday, March 25, 2012

ಹೊಸ ಪ್ರಯತ್ನದಲ್ಲಿ ’ಮನ್ವಂತರ’



ಕಲ್ಪನೆ ಇತಿಹಾಸವಾಗಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಅದನ್ನು ದಾಖಲೆಯಾಗಿಸುವುದು ಹೇಗೆ? ಈ ಪ್ರಶ್ನೆ ಕಾಡಿದ್ದು ಮೊನ್ನೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಪ್ರದಶನಗೊಂಡ ’ಮನ್ವಂತರ’ ಎಂಬ ನಾಟಕ ನೋಡಿದ ಮೇಲೆ.
ಆ ನಾಟಕ ಕುತೂಹಲ ಮೂಡಿಸಲು ಕಾರಣವಿತ್ತು; ಕನ್ನಡದಲ್ಲಿ ಹೊಸ ನಾಟಕ ಕೃತಿಗಳು ಬರುತ್ತಿಲ್ಲ ಎಂಬುದು ಹಳೆಯ ಕೂಗು. ಹಾಗಾಗಿ ಆಗಾಗ ನಾಟಕ ರಚನಾ ಕಮ್ಮಟಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಅಲ್ಲಿ ಬಂದ ನಾಟಕಗಳು ಆಮೇಲೆ ಏನಾಗುತ್ತವೆಯೋ ಅದು ಅದರ ಸೃಷ್ಠಿಕರ್ತರಿಗಷ್ಟೇ ಗೊತ್ತಿರುವ ಸತ್ಯ. ಸ್ವತಃ ನಾಟಕ ಅಕಾಡಮಿಯೇ ಇಂಥ ಹಲವಾರು ನಾಟಕ ರಚನಾ ಶಿಬಿರಗಳನ್ನು ರಚಿಸಿದೆ. ಅಲ್ಲಿ ರಚನೆಗೊಂಡ ನಾಟ್ಕಗಳು ಅಕಾಡಮಿಯ ಶೆಲ್ಫ್ ಗಳಲ್ಲಿ ದೂಳು ಹಿಡಿಯುತ್ತಾ ಮಲಗಿವೆ ಎಂಬುದನ್ನು ಅಕಾಡಮಿಯ ರಿಜಿಸ್ಟ್ರಾರ್ ಆಗಿರುವ ನರಸಿಂಹಮೂರ್ತಿಯವರೇ ಒಪ್ಪಿಕೊಳ್ಳುತ್ತಾರೆ. ಹಾಗಿರುವಾಗ…
ಕಳೆದ ವರ್ಷ ಆದಿಚುಂಚನಗಿರಿಯಲ್ಲಿ ’ಸಮಾನ ಮನಸ್ಕರು’ ವೇದಿಕೆಯು ನಾಟಕ ರಚನಾ ಚಿಂತನಾ ಶಿಬಿರವೊಂದು ನಡೆದಿತ್ತು. ಅದರಲ್ಲಿ ೨೩ ಜನ ಭಾಗವಹಿಸಿದ್ದರು. ಅಲ್ಲಿ ಮೂಡಿ ಬಂದ ನಾಟಕವೇ ’ಮನ್ವಂತರ’ ಇದನ್ನು ರಚಿಸಿದವರು ಎಚ್ ಎ.ಎಲ್ ನಲ್ಲಿ ಉದ್ಯೋಗಿಯಾಗಿರುವ ರಾಜು ಭಂಡಾರಿ ಎಂಬ ಯುವಕ. ಆ ನಾಟಕವನ್ನು ಬಹು ಅಕ್ಕರೆಯಿಂದ ಪ್ರದರ್ಶನಕ್ಕೆ ಕೈಗೆತ್ತಿಕೊಂಡದ್ದು ರಂಗಸುಗ್ಗಿ ಟ್ರಸ್ಟ್ ಎಂಬ ಸಾಂಸ್ಕೃತಿಕ ಸಂಘಟನೆ. ನಿರ್ದೇಶನದ ಜವಾಬ್ದಾರಿಯನ್ನು ಹೊತ್ತವರು ಕೆ. ಪ್ರಭಾಕರ ಬಾಬು. ಮತ್ತು ಇದೆಲ್ಲದರ ಸೂತ್ರದಾರಿ ತುಮಕೂರು ಶಿವಕುಮಾರ್. ಇಷ್ಟು ಮಾತ್ರವಲ್ಲಾ ಆ ನಾಟಕ ಮುದ್ರಣಗೊಂಡು ಅಂದೇ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಅವರ ಸಮ್ಮುಖದಲ್ಲಿಯೇ ಬಿಡುಗಡೆಯನ್ನೂ ಕಂಡಿತು!
ಧಾರ್ಮಿಕ ಭಯೋತ್ಪಾದನೆ ಎಂಬುದು ಇಂದು ಜಾಗತಿಕ ಸಮಸ್ಯೆ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಮರಳುಮಾಡಿ ಉಗ್ರಗಾಮಿಗಳನ್ನಾಗಿ ಪರಿವರ್ತಿಸುವ ಜಾಲ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಸರ್ವಧರ್ಮ ಸಮಾನತೆಯ ವಾತಾವರಣದಲ್ಲಿ ಬೆಳೆದ ಸಮೀರನೆಂಬ ಯುವಕ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅಮೃತಾಪುರವೆಂಬ ಹೆಸರಿನ ಆ ದೇಶದ ರಾಜ ಆದಿದೇವರಾಯ ಅವರ ಪ್ರೀತಿಯನ್ನು ಗೌರವಿಸುತ್ತಾನೆ. ಆದರೆ ಬಿಲಾಲ್ ಖಾನ್ ಎಂಬ ಉಗ್ರಗಾಮಿ ಸಮೀರನ ಮನಸ್ಸಿನಲ್ಲಿ ಹಿಂದು ವಿರೋಧಿ ಭಾವನೆಗಳನ್ನು ಬಿತ್ತಿ ಆದಿದೇವರಾಯನ ಕೊಲೆಗೆ ಆತನನ್ನು ಸಿದ್ಧಗೊಳಿಸುತ್ತಾನೆ. ಆಗ ಸಮೀರ ದ್ವಂದಕ್ಕೆ ಬೀಳುತ್ತಾನೆ. ಕೊನೆಯಲ್ಲಿ ಆತನಿಗೆ ತನ್ನ ತಪ್ಪಿನ ಅರಿವಾಗಿ ರಾಜನಿಗೆ ಶರಣಾಗುತ್ತಾನೆ. ರಾಜ ಕ್ಷಮಿಸುತ್ತಾನೆ. ಅಪ್ಪ, ಅಬ್ದುಲ್ಲಾನ ಆಸೆಯಂತೆ ತನ್ನ ಮಗ ಖ್ಯಾತ ಕೊಳಲುವಾದಕನಾಗುವ ಸಮೀರನ ಕನಸಿನೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
ಬಹುಶಃ ಇಂಥ ಒಂದು ವಿವಾದಾತ್ಮಕ ವಸ್ತುವನ್ನು ಎತ್ತಿಕೊಂಡ ಕಾರಣದಿಂದಲೇ ಇರಬಹುದು ಕೃತಿಕಾರರು ಈ ನಾಟಕವನ್ನು ’ಕಾಲ್ಪನಿಕ ಐತಿಹಾಸಿಕ’ ಎಂದು ಕರೆದಿದ್ದಾರೆ. ಈ ಆಬಾಸವನ್ನು ಹೊರತು ಪಡಿಸಿ ನೋಡಿದರೆ ಈ ಪ್ರದರ್ಶನವನ್ನು ಹೊಸಬರ ಒಳ್ಳೆಯ ಪ್ರಯತ್ನ ಎನ್ನಬಹುದು.
”ಚಂದ್ರನಲ್ಲಿ ಮಿನಾರ್ ಗಳು ಮಾತ್ರ ಮಿನುಗುತ್ತಿರಬೇಕು, ರಕ್ತ ಬಿದ್ದರೂ ಪರವಾಗಿಲ್ಲ; ಕಣ್ಣೀರು ಬೀಳಬಾರದು”ಎಂದು ಹೇಳುತ್ತಾ ಸಮೀರನ ಕಯ್ಯಲ್ಲಿ ಕತ್ತಿಯನ್ನು ಕೊಟ್ಟು ’ನೀನು ದೈವ ಸೈನಿಕನಾಗು’ ಎನ್ನುವ ಉಗ್ರಗಾಮಿ ಬಿಲಾಲ್ ಖಾನ್ ಪಾತ್ರದಲ್ಲಿ ಕೃತಿಕಾರ ರಾಜು ಭಂಡಾರಿ ಲವಲವಿಕೆಯಿಂದ ನಟಿಸಿದ್ದಾರೆ. ಕೃತಿಕಾರನೊಭ್ಭ ಸ್ವತಃ ನಟನೂ ಆದಾಗ ಆತನಿಗೆ ಪಾತ್ರ ಪೋಷಣೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಸಮೀರನ ಪಾತ್ರ ನಿರ್ವಹಿಸಿದ ಮಧುಸೂದನರಿಗೆ ಇನ್ನೂ ಹೆಚ್ಚಿನ ಎನರ್ಜಿಯ ಅವಶ್ಯಕತೆಯಿತ್ತು. ಆತನ ಮಾನಸಿಕ ತುಮುಲಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರೆ ನಾಟಕದ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದು ಕಡೆ ತಾನೊಬ್ಬ ಉತ್ತಮ ಕೊಳಲುವಾದಕನಾಗಬೇಕೆಂದು ಕನಸು ಕಾಣುತ್ತಿರುವ ಅಪ್ಪ. ಇನ್ನೊಂದೆಡೆ ತಾನು ಪ್ರೀತಿಸಿ ಮದುವೆಯಾದ ಅನ್ಯಧರ್ಮೀಯ ಹುಡುಗಿ ಮೃದುಲಾದೇವಿಯೆಡೆಗಿನ ಸೆಳೆತ, ಉಗ್ರಗಾಮಿಗಳ ಹಿಡಿತ ಇವುಗಳೆಲ್ಲವನ್ನು ಬಿಂಬಿಸಲು ಈ ಪಾತ್ರಕ್ಕೆ ಅವಕಾಶವಿತ್ತು.
ಸಮೀರನ ತಂದೆ ಅಬ್ದುಲ್ಲಾನ ಪಾತ್ರದಲ್ಲಿ ಹಿರಿಯ ನಟರಾದ ಆಲೆಮನೆ ಸುಂದರಮೂರ್ತಿಯವರ ಆಂಗಿಕ ಅಭಿನಯ ಕಂಪೆನಿ ನಾಟಕಗಳನ್ನು ನೆನಪಿಸಿಸುತ್ತಿತ್ತು. ಅದು ಸಹಕಲಾವಿದರ ಅಭಿನಯಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಮೃದುಲಾದೇವಿಯ ಪಾತ್ರದಲ್ಲಿ ನಯನ ಜೆ. ಸೂಡ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಜ ಆದಿದೇವನ ಪಾತ್ರಕ್ಕೆ ನಟ ಮಹದೇವ ಗಾಂಭೀರ್ಯ ತುಂಬಿದ್ದಾರೆ. ನಾಟಕದಲ್ಲಿ ದೃಶ್ಯ ಮತ್ತು ಮೂಡ್ ಬದಲಾವಣೆಗೆ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಹಾಡುಗಳನ್ನು ಬರೆದ ವಿ.ವಿ.ಗೋಪಾಲ್ ವಸ್ತುವಿನ ಗಂಭೀರತೆಯನ್ನು ಮನನ ಮಾಡಿಕೊಂಡಿದ್ದರೆ ಅವರಿಂದ ಒಳ್ಳೆಯ ರಚನೆಗಳು ಬಂದು ನಾಟಕಕ್ಕೆ ಪೂರಕವಾಗುತ್ತಿತ್ತೆನೋ! ನಾಟಕಕ್ಕೆ ಬೆಳಕು ನೀಡಿದವರು ಕೆ.ಪ್ರಭಾಕರಬಾಬು. ಅವರು ಕೆಲವು ಕಡೆಗಳಲ್ಲಿ ಅದ್ಬುತವೆನಿಸುವ ಬೆಳಕು ನೀಡಿದ್ದಾರೆ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಬದುಕಲ್ಲೂ ಅಂಧಕಾರ ತುಂಬುತ್ತಿದೆಯಲ್ಲಾ ಎಂದು ರೋದಿಸುತ್ತಾ ’ಇಷ್ಟು ಚಿಕ್ಕ ಬೆಳಕಿಗೆ ಇಷ್ಟು ದೊಡ್ಡ ಕತ್ತಲನ್ನು ಬೆಳಗಿಸುವ ಶಕ್ತಿ ಇದೆಯಾ?’ ಎನ್ನುವಲ್ಲಿ ಹಣತೆಯ ಸಹಜ ಬೆಳಕನ್ನು ವಿನ್ಯಾಸ ಮಾಡಿದ್ದು ಪರಿಣಾಮಕಾರಿಯಾಗಿತ್ತು. ಆದರೆ ನಾಟಕದುದ್ದಕ್ಕೂ ಬಳಸಿದ ಪ್ಲಡ್ ದೀಪಗಳು ಪ್ರೇಕ್ಷಕರ ಏಕಾಗ್ರತೆಯನ್ನು ಭಂಗಗೊಳಿಸುತ್ತಿದ್ದವು.
ನಾಟಕದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಗಳು ಕರಾರುವಾಕ್ಕಾಗಿರಲಿಲ್ಲ; ಗೊಂದಲಗಳಿದ್ದವು. ನಿರ್ದೇಶಕರು ಸ್ವಲ್ಪ ಮುತುವರ್ಜಿ ವಹಿಸಿದ್ದರೆ ನಾಟಕವನ್ನು ಇನ್ನಷ್ಟು ಪಾಲೀಶ್ ಮಾಡಬಹುದಿತ್ತು. ಮುಖ್ಯವಾಗಿ ಉದ್ದುದ್ದ ಡೈಲಾಗ್ ಗಳನ್ನು ತುಂಡರಿಸಿ ಮೌನಕ್ಕೆ ಮತ್ತು ಸಂಗೀತಕ್ಕೆ ಒತ್ತು ಕೊಡಬೇಕಾಗಿತ್ತು.
ಹಳೆಯ ನಟರೊಡನೆ ಹೊಸಬರು ಕೂಡಾ ಕಾಣಿಸಿಕೊಂಡು ಲವಲವಿಕೆಯಿಂದ ನಟಿಸಿದ್ದಾರೆ. ರಂಗಭೂಮಿಗೆ ಒಳ್ಳೆಯ ಕಲಾವಿದರು ಕೆಲವರಾದರೂ ದೊರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದ ಪ್ರದರ್ಶನವಿದು.
[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ ]

Sunday, March 18, 2012

’ನಮ್ಮ ಸೀತಾರಾಮ್’-ನಮ್ಮವರೇ ಆಗಿ ಉಳಿಯಲಿ



ಟಿ.ಎನ್. ಸೀತಾರಾಮ್ ಅವರು ವೈರಾಗ್ಯದ ಮಾತುಗಳನ್ನಾಡುತ್ತಿದ್ದಾರೆ- ಹಿನ್ನೆಲೆಯಲ್ಲಿ ಐದಾರು ವರ್ಷಗಳಹಿಂದೆನಾನು ಅವರ ಬಗ್ಗೆ ಬರೆದ ಬರಹ "ನಮ್ಮ ಸೀತಾರಾಮ್’. ಈಗ ಅದು ಪ್ರಸ್ತುತವಾಗಬಹುದೆಂದು ಭಾವಿಸಿ ಪೋಸ್ಟ್ ಮಾಡುತ್ತಿದ್ದೇನೆ.


ÁªÀÅ K£À£ÉÆßà "PÀ¼ÉzÀÄPÉƼÀÄîwÛzÉÝêÉ" J0zÀÄ ¨sÁ¸ÀªÁUÀÄwÛgÀĪÀ ¸ÀªÀÄAiÀÄzÀ¯Éèà E£ÁågÉÆà CzÀ£ÀÄß PÀnÖPÉÆqÀÄwzÁÝgÉ J0zÀÄ £ÀªÀÄUÀ¤¹zÀgÉ, D C¤¹PÉUÉ PÁgÀt£ÁzÀ ªÀåQÛ £ÀªÀÄUÉ D¥ÀÛ£ÁV ©qÀÄvÁÛ£É. "£ÀªÀÄäªÀ£ÀÄ" C¤ß¹©qÀÄvÁÛ£É. £ÀªÀÄä¯ÉÆè0zÀÄ D±Á¨sÁªÀ£É aUÀÄjPÉƼÀÄîvÀÛzÉ.
FUÀ ¸ÀzÀåzÀ ªÀÄnÖUÉ QgÀÄvÉgÉAiÀÄ ªÀÄÆ®PÀ C0vÀºÀzÉÆ0zÀÄ ¨sÀgÀªÀ¸ÉAiÀÄ£ÀÄß ºÀÄnÖ¸ÀÄwÛgÀĪÀªÀgÀÄ n. J£ï. ¹ÃvÁgÁªÀiï.
zÀȱÀå ªÀiÁzsÀåªÀÄQÌgÀĪÀ C¥ÁgÀ ¸ÁzsÀåvÉUÀ¼À CjªÀÅ ¹ÃvÁgÁªÀiï CªÀjVzÉ. CªÀgÉà ¸À0zÀ±Àð£ÀªÉÇ0zÀgÀ°è ºÉýPÉÆ0qÀ0vÉ, "QgÀÄvÉgÉ PÉêÀ® M0zÀÄ J0lgïmÉÊ£ïªÉÄ0mï «ÄÃrAiÀiÁ C®è; CzÀÄ d£ÀgÀ Cj«£À ªÀÄlÖªÀ£ÀÄß «¸ÀÛj¸ÀĪÀ M0zÀÄ ¸ÁzsÀ£À".
zÉÆqÀا¼Áî¥ÀÅgÀzÀ vÀqÀªÁUÀgÀzÀ°è ºÀÄnÖzÀ n. J£ï. ¹ÃvÁgÁªÀiï CªÀjUÉ C«¨sÀPÀÛ PÀÄlÄ0§zÀ §UÉUÉ M0zÀÄ jÃwAiÀÄ ªÉÆúÀ, ¸É¼ÉvÀ EzÉ J0§ÄzÀgÀ°è ¸À0±ÀAiÀÄ«®è. CzÀÄ CªÀgÀ J®è zsÁgÁªÁ»UÀ¼À ¸ÁܬÄèsÁªÀ. ¸ÀÈd£À²Ã® ZÀlĪÀnPÉUÀ¼À°è vÉÆqÀVPÉÆ0qÀ ªÀåQÛAiÉƧâ vÀ£Àß PÉ®¸À PÁAiÀÄðUÀ¼À ªÀÄÆ®PÀ ªÀiÁw£À ºÀ0V®èzÉà vÁ£ÀÄ K£ÀÄ J0§ÄzÀ£ÀÄß ¸ÀàµÀÖUÉƽ¸ÀÄvÁÛ ºÉÆÃUÀÄvÁÛ£É.
"ªÀÄÄSÁªÀÄÄT" AiÀÄ£ÀÄß ºÉÆgÀvÀÄ¥Àr¹zÀgÉ G½zÀ ªÀÄÆgÀÄ zsÁgÁªÁ»UÀ¼ÁzÀ "ªÀiÁAiÀiÁªÀÄÈUÀ", "ªÀÄ£Àé0vÀgÀ", "ªÀÄÄPÀÛ"UÀ¼À°è C«¨sÀPÀÛ PÀÄlÄ0§zÀ £ÉÆêÀÅ - £À°ªÀÅ, DzÀ±Àð, PÀ£À¸ÀÄUÀ¼À avÀæt«zÉ. "ªÀÄÄSÁªÀÄÄT" AiÀÄ°è gÁdQÃAiÀÄ «qÀ0§£ÉAiÀÄ eÉÆvÉAiÀÄ zÉÆqÀتÀgÀ ¸ÀtÚvÀ£À, C¸ÀºÁAiÀÄPÀvÉAiÀÄ avÀæt«vÀÄÛ.
C«¨sÀPÀÛ PÀÄlÄ0§zÀ°è ¨É¼ÉzÀ ªÀåQÛAiÉƧâ AiÀiÁªÁUÀ®Æ ¸ÀªÀiÁdªÀÄÄTAiÀiÁV AiÉÆÃa¸ÀÄvÁÛ£É. D ¥Àj¸ÀgÀ CªÀ£À°è C¥ÁgÀªÁzÀ fêÀ£À ¦æÃwAiÀÄ£Éßà vÀÄ0©gÀÄvÀÛzÉ. CdÓ CfÓ, CPÀÌ vÀ0V, aPÀÌ¥Àà, aPÀ̪ÀÄä CvÉÛ - EªÀgÉ®ègÀ §¹gÀÄ ¨Át0vÀ£À, ºÀ§â DZÀgÀuÉUÀ½0zÀ ªÀÄ£É ¸ÀzÁ UÀ®UÀ® C£ÀÄßwÛgÀÄvÀÛzÉ. E°èAiÀĪÀgÀ ªÀÄ£À¸ÀÄì SÁ°AiÀiÁV EgÀĪÀÅzÉà E®è. ¸ÀtÚ¥ÀÅlÖ £ÉÆêÀÅ, vÉÆ0zÀgÉ, ¸À0PÀl, dUÀ¼ÀUÀ¼ÀÄ JzÀÄgÁzÀgÀÆ ¸Á0vÀé£ÀzÀ ºÀ¸ÀÛªÉÇ0zÀÄ ¸ÀzÁ ºÉUÀ® ªÉÄðgÀÄvÀÛzÉ. T£ÀßvÉUÉ E°è CªÀPÁ±À PÀrªÉÄ.
C£ÀĪÀiÁ£ÀªÉà E®è; FUÀ C«¨sÀPÀÛ PÀÄlÄ0§ J0§ÄzÀÄ M0zÀÄ DzÀ±Àð, CzÀÄ ªÁ¸ÀÛªÀªÀ®è. CzÀ£Éßà PÀ¼ÉzÀÄPÉƼÀÄîwÛzÉÝÃªÉ J0§ £ÉÆêÀÅ £ÀªÀÄVzÉ. ºÁUÉ0zÀÄPÉÆ0qÀÄ CzÀ£Éßà ªÁ¸ÀÛªÀQ̽¸À¨ÉÃPÉ0§ ºÀ0§® PÀÆqÁ £ÀªÀÄV®è. AiÀiÁPÉ0zÀgÉ £ÀªÀÄäzÀÄ ªÀåQÛ PÉÃ0¢ævÀ §zÀÄPÀÄ. ºÁUÁV ¹ÃvÁgÁ0 PÀnÖPÉÆqÀĪÀ dUÀwÛ£À°è £ÁªÀÅ M0zÀµÀÄÖ PÁ® «ºÀj¹ ¸À0vÉÆõÀ¥ÀqÀÄvÉÛêÉ. £ÀªÀÄUÀµÀÄÖ ¸ÁPÀÄ. EzÀÄ M0zÀÄ jÃwAiÀÄ°è £ÀUÀgÀªÁ¹UÀ½UÉ ºÀ½î §zÀÄQ£ÉqÉUÉ EgÀĪÀ ¸É¼ÉvÀzÀ0vÉ!
C«¨sÀPÀÛ PÀÄlÄ0§ªÉÇ0zÀgÀ £ÉÆêÀÅ - £À°ªÀÅ, ¦æÃw - zÉéõÀ EµÀÖ£Éßà vÀªÀÄä zsÁgÁªÁ»UÀ¼À°è ¹ÃvÁgÁªÀiï PÀnÖPÉÆnÖzÀÝgÉ CªÀgÀÄ PÀÆqÁ EvÀgÀ ¤zÉðñÀPÀgÀ ¸Á°£À°è ¸ÉÃjºÉÆÃUÀÄwÛzÀÝgÉãÉÆÃ? DzÀgÉ E°è CªÀgÀÄ ªÀÄ£ÀĵÀå ¸À0§0zsÀUÀ¼À ºÀÄqÀÄPÁlzÀ £É¯ÉUÀ¼À£ÀÄß C«¨sÀPÀÛ PÀÄlÄ0§UÀ¼À°è PÀ0qÀÄPÉƼÀî®Ä ¥ÀæAiÀÄvÀߥÀqÀÄvÁÛgÉ. vÁªÉà M0zÀÄ ¥ÁvÀæªÁV ºÀÄqÀÄPÁl DgÀ0©ü¸ÀÄvÁÛgÉ. ºÁUÉ ªÀiÁqÀĪÀÅzÀgÀ ªÀÄÄSÁ0vÀgÀ QjAiÀÄ «ÃPÀëPÀjUÉ ªÀiÁzÀjUÀ¼À£ÀÄß (ªÀiÁqɯï) ¸ÀȶָÀÄvÁÛgÉ. EzÀÄ M0zÀÄ jÃwAiÀÄ ¤Ãw ¥ÁoÀ.
ªÀiÁ£À«ÃAiÀÄ ªÀiË®åUÀ¼ÀÄ ªÀÄvÀÄÛ ªÀÄ£ÀĵÀå ¸À0§0zsÀUÀ¼À ºÀÄqÀÄPÁl ªÀiÁzÀjUÀ¼À ¸À馅 ¸ÁªÀiÁ£ÀåªÁV J¯Áè zsÁgÁªÁ»UÀ¼À°è EzÉÝà EgÀÄvÀÛzÉ. DzÀgÉ CzÉ®èzÀgÀ°è EgÀĪÀ E£ÉÆß0zÀÄ ªÉʲµÀÖ÷å ¹ÃvÁgÁªÀiï zsÁgÁªÁ»UÀ¼À°ègÀÄvÀÛzÉ. CzÀÄ ¸ÀºÀdvÉ. CªÀgÀ zsÁgÁªÁ»UÀ¼À J¯Áè ¥ÁvÀæUÀ¼ÀÄ £ÀªÀÄä ¸ÀÄvÀÛªÀÄÄvÀÛ°£À d£ÀgÉà DVgÀÄvÁÛgÉ. CzÀgÀ®Æè ªÀÄzsÀåªÀÄ ªÀUÀðzÀ ¨sÀ«µÀåzÀ°è ¨sÀgÀªÀ¸É¬ÄlÖ d£ÀgÀÄ. ªÀiÁ£ÀªÀ ¸ÀºÀdªÁzÀ z˧ð®åUÀ¼ÀÄ, ¸ÀtÚvÀ£ÀUÀ¼ÀÄ EªÀgÀ°ègÀÄvÀÛzÉ.
DzÀgÉ E£ï mÉʪÀiï£À°è C0zÀgÉ ¸À0¢UÀÞ ¸ÀªÀÄAiÀÄzÀ°è CªÀÅ ªÀiÁ£À«ÃAiÀĪÁV ªÀwð¹©qÀÄvÀÛªÉ. PÀ¼ÉzÀ w0UÀ¼À ¸À0aPÉAiÀÄ°è "ªÀÄÄPÀÛ" zsÁgÁªÁ»AiÀÄ°è £À0dÄ0qÀ¤UÉ mÉÆæ ±ÉõÀ¥Àà eÁ«ÄãÀÄ ¤ÃrzÀ ºÁUÉ. ¨sÀæµÀÖ ¥ÉÇðøï E¯ÁSÉAiÀÄ°è ¥ÁæªÀiÁtÂPÀ ¥ÉÇðøÀgÀÆ EgÀÄvÁÛgÉ. ªÀiÁzsÀ« ¥ÀmÉïïUÉ F ªÀiÁvÀÄ C£Àé¬Ä¸ÀĪÀÅ¢®è. DPÉ ¹ÃvÁgÁªÀiï CªÀgÀ vÁwéPÀ §zÀÞvÉAiÀÄ ¥ÀæwgÀÆ¥ÀªÁVgÀ§ºÀÄzÉÃ?
ªÀÄvÉÛ ªÀÄvÉÛ ¹ÃvÁgÁªÀiï EvÀgÀ ¤zÉðñÀPÀjV0vÀ ºÉÃUÉ ©ü£Àß J0§°èUÉ F ¯ÉÃR£À §0zÀÄ ¤®ÄèvÀÛzÉ. CªÀgÀ ¤zÉðñÀ£ÀzÀ zsÁgÁªÁ»UÀ¼À°è PÀxÉ ªÀÄvÀÄÛ avÀæPÀxÉ CªÀgÀzÉÃ. CªÀgÀÄ PÀxÉUÁV E£ÉÆߧâgÀ£ÀÄß CgÀ¹ ºÉÆÃUÀĪÀÅ¢®è. C®èzÉà zsÁgÁªÁ»AiÀÄ ªÀÄÄRå ¨sÀÆ«ÄPÉAiÉÆ0zÀgÀ°è CªÀjgÀÄvÁÛgÉ. CªÀgÀÄ ¸ÀévÀB ¯Á ¥ÀzÀ«ÃzsÀgÀgÁzÀ PÁgÀt¢0zÀ¯ÉÆà CxÀªÁ C£ÁåAiÀÄzÀ «gÀÄzÀÞ ¸ÀtÚzÉÆ0zÀÄ ¥Àæw¨sÀl£ÉAiÀÄ ¥ÀzÀ«AiÀiÁzÀgÀÆ EgÀ° J0§ PÁgÀt¢0zÀ¯ÉÆÃ, ªÀQîgÀ ¥ÀgÀªÀ£Éßà DAiÀÄÄÝPÉƼÀÄîvÁÛgÉ. (F ªÀQî¤UÉÆ0zÀÄ ¸ÀvÀå¨sÁªÉÄAiÀÄ0vÀºÀ ¥ÀwßAiÀÄÆ EgÀÄvÁÛ¼É) DzÀ PÁgÀt¢0zÀ¯Éà CªÀgÀ PÉÆÃmïð ¹Ã£ïUÀ¼À°è £ÉÊdvÉ EgÀÄvÀÛzÉ. ºÉÆÃ0 ªÀPïð JzÀÄÝ PÁtÄvÀÛzÉ.
("ªÀÄÄPÀÛ" zsÁgÁªÁ»AiÀÄ ¯ÁAiÀÄgï ¥ÁvÀæPÉÌ ¨ÉÃ0zÉæAiÀĪÀgÀ PÀªÀ£ÀzÀ vÀÄtÄPÉÆ0zÀÄ ¨ÉÃPÁVvÀÛ0vÉ. CzÀPÁÌV ±ÀÆn0Uï ¸ÀܼÀ¢0zÀ vÁªÉà ¸ÀévÀB "C0QvÀ" ¥ÀŸÀÛPÀ C0UÀrUÉ §0zÀÄ CzÀ£ÀÄß PÉÆ0qÉÆAiÀÄÝgÀ0vÉ. ¥Àgï¥sÉPÀë£ï C0zÀgÉ CzÀÄ. jÃ®Ä ¸ÀÄvÀÄÛªÀÅzÀ®è) CzÀÄ ¸ÀPÀì¸ï PÀ0qÀ PÁgÀt¢0zÀ¯ÉÃ, EvÀgÀ ¤zÉðñÀPÀgÀ zsÁgÁªÁ»UÀ¼À°è ¸À0zÀ¨sÀðPÉÌ ¨ÉÃQgÀ° - ¨ÉÃqÀzÉà EgÀ° PÉÆÃmïð ¹Ã£ïUÀ¼ÀÄ AiÀÄxÉÃZÀÒªÁV §gÀÄvÀÛ°ªÉ.
¹ÃvÁgÁªÀiï CªÀjUÉ M¼ÉîAiÀÄ ºÁ¸Àå¥ÀæeÉÕ÷EzÉ. CªÀgÀÄ ®0PÉÃ±ï ¥ÀwæPÉAiÀÄ°è ¸ÉÆUÀ¸ÁzÀ «qÀ0§£ÉUÀ¼À£ÀÄß §gÉAiÀÄÄwÛzÀÝgÀÄ. CªÀgÀÄ "ªÀÄÄSÁªÀÄÄT" AiÀÄ°è ¸ÀȶֹzÀ J0. §lªÁqÉPÀgï ¥ÁvÀæ CzÀ£ÀÄß ªÀÄÄRåªÀÄ0wæ ZÀ0zÀÄæ ¤«Äð¸ÀÄwÛzÀÝgÀÄ. EµÀÄÖ ªÀµÀðUÀ¼À £À0vÀgÀªÀÇ «ÃPÀëPÀgÀ ªÀÄ£À¹ì£À°è ºÀ¹gÁVzÉ. PÉ®ªÉÇ0zÀÄ «®PÀët ªÀåQÛvÀézÀ ¥ÁvÀæUÀ¼ÀÄ CªÀgÀ J¯Áè zsÁgÁªÁ»UÀ¼À°ègÀÄvÀÛªÉ. "ªÀiÁAiÀiÁªÀÄÈUÀ" zÀ°è ªÀiÁ¼À«PÁ£À C¥Àà£À ¥ÁvÀæ. "ªÀÄ£Àé0vÀgÀ" zÀ°è "EzÀ£Éßà £ÀªÀÄä ¸Áé«ÄUÀ¼ÀÄ ºÉüÉÆÃgÀÄ...... d0UÀªÀÄAiÀÄå£ÉÆÃgÀÄ" J0zÀÄ ªÀiÁvÀĪÀiÁwUÀÆ ºÉüÀĪÀ C£ÀĨsÁ«AiÀÄ0wgÀĪÀ ¥ÀÅlÖzÉÆ0zÀÄ ¥ÁvÀæ, "ªÀÄÄPÀÛ" zÀ°è mÉÆæ ±ÉõÀ¥Àà. EªÀgÉ®è M0zÀÄ jÃwAiÀÄ°è zsÁgÁªÁ»UÀ¼ÉƼÀV£À «ªÀıÀðPÀgÀÄ.
¹ÃvÁgÁªÀiï CªÀgÀ zsÁgÁªÁ»UÀ¼À mÉÊl¯ï ¸Á0Uï AiÀiÁªÁUÀ®Æ £ÉÃgÀªÁV ºÀÈzÀAiÀÄPÉÌ vÁPÀÄvÀÛzÉ. ¸ÀĪÀiÁgÀÄ ºÀvÀÄÛ ªÀ±ÀðUÀ¼À »0zÉ "ªÀiÁAiÀiÁªÀÄÈUÀ" zsÁgÁªÁ» ¥Àæ¸ÁgÀªÁUÀÄwÛzÀÝ ¸À0eÉ £Á®ÄÌ UÀ0mÉ ªÉüÉAiÀÄ°è ¥Àæw ªÀÄ£ÉAiÀÄ°èAiÀÄÆ "ªÀiÁAiÀiÁªÀÄÈUÀ.... ªÀiÁAiÀiÁªÀÄÈUÀ...... ªÀiÁAiÀiÁªÀÄÈUÀªÉ°è" J0§ ºÁqÉà j0UÀt¸ÀÄvÁÛ EvÀÄÛ.
¨ÉÃgÉ ¨ÉÃgÉ bÁ£À¯ïUÀ¼À°è CzÀÄ ªÀÄgÀÄ¥Àæ¸ÁgÀ PÀ0qÀgÀÆ E0¢UÀÆ CzÀPÉÌ «ÃPÀëPÀjzÁÝgÉ. F nëAiÀÄ°è CzÀÄ gÁwæ ºÀ£ÉÆß0zÀÄ UÀ0mÉUÉ FUÀ®Æ ¥Àæ¸ÁgÀUÉƼÀÄîwÛzÉ.
M0zÀÄ zsÁgÁªÁ»UÉ EzÀQÌ0vÀ d£À¦æAiÀÄvÉ ¨ÉÃPÉÃ?
mÉÊl¯ï ¸Á0Uï ªÀÄvÀÄÛ CzÀPÉÌ zÀȱÀåUÀ¼À£ÀÄß PÀ0¥ÉÇÃ¸ï ªÀiÁrzÀ jÃw¬Ä0zÀ¯Éà M0zÀÄ zsÁgÁªÁ»AiÀÄ »0zÉ J0vÀºÀ ªÀÄ£À¸ÀÄìUÀ¼ÀÄ PÉ®¸À ªÀiÁrªÉ J0§ÄzÀÄ UÉÆvÁÛUÀÄvÀÛzÉ.
"ªÀÄÄPÀÛ" zsÁgÁªÀ»AiÀÄ°è mÉÊl¯ï ¸Á0Uï vÀÄ0¨Á CzÀÄãvÀªÁVzÉ J0zÀÄ ¨sÁ¸ÀªÁUÀÄwÛzÉ. CzÀPÉÌ PÁgÀt CzÀ£ÀÄß ºÁrzÀ jÃw, ¨É¼ÀQ£À «£Áå¸À, CzÀPÉÌ ¤ÃrzÀ ¸À0VÃvÀ ªÀÄvÀÄÛ zÀȱÀå eÉÆÃqÀuÉ. F ªÉʨsÀªÀzÀ°è ¸ÁªÀiÁ£Àå ¸Á»vÀå PÀÆqÁ CzÀÄãvÀªÉ¤¸ÀÄvÀÛzÉ. CªÀgÀ J®è zsÁgÁªÁ»UÀ¼À°è ¸À0VÃvÀzÀ°è C©ügÀÄa¬ÄgÀĪÀ ¥ÁvÀæªÉÇ0zÀÄ EgÀÄvÀÛzÉ J0§ÄzÀÄ UÀªÀÄ£ÁºÀ9.
ºÁUÉAiÉÄà «®PÀët ªÀåQÛvÀézÀ C£ÀĨsÁ«AiÀÄ0wgÀĪÀ ¥ÁvÀæ. (F ¥ÁvÀæUÀ¼À°è ¹ÃvÁgÁªÀiï EgÀ§ºÀÄzÉÃ?!) zÀȱÀåUÀ¼À£ÀÄß PÀ0¥ÉÇÃ¸ï ªÀiÁqÀĪÀ jÃw, ¥ÁvÀæzsÁjUÀ¼À DAiÉÄÌ, ¸À0¨sÁµÀuÉAiÀÄ°è£À ©V ªÀÄvÀÄÛ D¼À, ªÀiË£À¢0zÀ®Æ ºÀ®ªÀÅ CxÀðUÀ¼À£ÀÄß vÉUÉAiÀÄĪÀ ¸ÁªÀÄxÀåð - EªÉ®èªÀÇ ¹ÃvÁgÁªÀiï zsÁgÁªÁ»UÀ¼À°è PÀgÁgÀĪÀPÁÌV £ÀqÉAiÀÄÄvÀÛzÉ. EzÉ®ègÀ eÉÆvÉUÉ, ¹ÃvÁgÁªÀiï ¸ÀzÁ CzsÀåAiÀÄ£À ²Ã®gÀÄ. ¸ÀªÀÄPÁ°Ã£À ¸ÀªÀĸÉåUÀ½UÉ vÀPÀët ¸Àà0¢¸ÀĪÀ UÀÄt CªÀgÀ°èzÉ.
¤dfêÀ£ÀzÀ°è £ÀqÉAiÀÄĪÀ WÀl£ÉUÀ¼À£ÀÄß C®à¸Àé®à §zÀ¯ÁªÀuÉUÀ¼ÉÆ0¢UÉ CªÀgÀÄ vÀªÀÄä zsÁgÁªÁ»UÀ¼ÉƼÀUÉ vÀ0zÀÄ ©qÀÄvÁÛgÉ. CzÀÄ gÉÊvÀgÀ DvÀäºÀvÉå, ¸Áé«ÄÃfAiÉƧâgÀ ªÀÄzÀĪÉ, gÉÊvÀgÀ°ègÀĪÀ ªÉ¤¯Á PÉæÃeóï, ¹. E. n. UÉÆ0zÀ® »ÃUÉ. EªÉ®èªÀÇ ¸ÀªÀÄPÁ°Ã£À ¸ÀªÀĸÉåUÀ½UÉ dªÁ¨ÁÝjAiÀÄÄvÀ £ÁUÀjPÀ£ÉƧ⠥Àæw¸Àà0¢¸ÀĪÀ jÃw.
¹ÃvÁgÁªÀiï M¼ÉîAiÀÄ ¤zÉðñÀPÀgÉ0zÀÄ ºÉüÀĪÀÅzÀÄ F ¯ÉÃR£ÀzÀ GzÉÝñÀªÀ®è; CªÀgÀÄ ºÉÃUÉ EvÀgÀ ¤zÉðñÀPÀj0zÀ ©ü£ÀߪÁVzÁÝgÉ. CzÀPÉÌ PÁgÀtUÀ¼ÉägÀ§ºÀÄzÀÄ J0§ PÀÄvÀƺÀ®.
n. J£ï. ¹ÃvÁgÁªÀiï ªÀÄÆ®vÀB §gÀºÀUÁgÀgÀÄ, gÀ0UÀ¨sÉÆ«ÄAiÀÄ »£À߯ÉAiÀÄļÀîªÀgÀÄ, gÁdQÃAiÀÄ ¥ÀæeÉÕAiÀÄļÀîªÀgÀÄ, ®0PÉñÀgÀ MqÀ£ÁrAiÀiÁVzÀݪÀgÀÄ. J0¨sÀvÀÛgÀ zÀ±ÀPÀzÀ°è ¸ÀªÀiÁdªÁ¢ UɼÉAiÀÄjUÉ K£ÉãÀÄ vɪÀ®ÄUÀ½zÀݪÉÇà CzÉ®èªÀ£ÀÄß ¨ÁaPÉÆ0qÀÄ, ºÉƸÀzÀ£ÀÄß ¤ÃqÀĪÀ PÀ£À¸ÀÄ PÀ0qÀªÀgÀÄ. PÁ® GgÀĽzÉ, ¹ÃvÁgÁªÀiï PÀÆqÀ §zÀ¯ÁVzÁÝgÉ. DzÀgÉ vÀÄ0¨Á C®è.
J0¨sÀvÀÛgÀ zÀ±ÀPÀªÉ0§ÄzÀÄ PÀ£ÀßqÀ ¸Á»vÀå, ¸À0¸ÀÌöÈw ºÁUÀÆ gÁdQÃAiÀÄ dUÀwÛUÉ vÀÄ0¨Á ªÀĺÀvÀéªÉ¤¸ÀĪÀ PÁ®WÀlÖ; gÀ0UÀ¨sÀÆ«Ä ºÁUÀÆ d£À¥ÀgÀ ZÀ¼ÀĪÀ½UÀ¼ÀÄ QæAiÀiÁ²Ã®ªÁVzÀÝ PÁ®.
80 gÀ zÀ±ÀPÀzÀ D¢AiÀÄ°è ¸ÀªÀiÁdªÁ¢ a0vÀ£ÉAiÀÄ°è ªÀÄÄ0ZÀÆtÂAiÀÄ°èzÀÝ eÁeïð ¥sÀ£Áð0r¸ïgÀÄ ªÉÄ®èªÉÄ®è£É CzÀj0zÀ «ªÀÄÄRgÁUÀvÉÆqÀVzÀgÀÄ. EzÀ£Éßà DzsÀj¹ "D¸ÉÆáÃl" £ÁlPÀ gÀZÀ£ÉAiÀiÁ¬ÄvÀÄ. CzÀgÀ E£ÉÆß0zÀÄ gÀÆ¥À "£ÀªÀÄä¼ÀUÉƧ⠣ÁdÆPÀAiÀÄå"; F £ÁlPÀªÀ£ÀÄß §gÉzÀzÀÄÝ ªÀiÁvÀæªÀ®è; CzÀgÀ ªÀÄÄRå ¨sÀÆ«ÄPÉAiÀÄ£ÀÄß PÀÆqÁ ¹ÃvÁgÁªÀiï ¤ªÀð»¹zÀÝgÀÄ.
EzÀPÉÌ ªÉÆzÀ¯Éà "§zÀÄPÀ ªÀĤ߸ÉÆà ¥Àæ¨sÀĪÉ" J0§ £ÁlPÀªÀ£ÀÄß §gÉzÀÄ £ÁlPÀ PÉëÃvÀæPÉÌ C¢üPÀÈvÀªÁV ¥ÀæªÉñÀ ¥ÀqÉzÁVvÀÄÛ.
FUÀ®Æ "£ÀªÉÆä¼ÀUÉƧ⠣ÁdÆPÀAiÀÄå" £ÁlPÀzÀ°è ªÀÄÄRå ¥ÁvÀæªÀ£ÀÄß ¹ÃvÁgÁªÀiï vÁªÉà ¤ªÀð»¸ÀÄvÁÛgÉ. "D¸ÉÆáÃl" £ÁlPÀzÀ°è PÉÃ0zÀæ¥ÁvÀæªÀ£ÀÄß ¹ÃvÁgÁªÀiï ªÀÄvÀÄÛ ¸ÀÆvÀæzsÁgÀ gÁªÀÄAiÀÄå E§âgÀÆ ªÀiÁqÀÄwÛzÀÝgÀÄ. F £ÁlPÀ ¢°è, ªÀÄÄ0§¬Ä, PÀ®ÌvÁÛUÀ¼À°è µÉÆà PÀ0rvÀÄÛ. EzÀgÀ eÉÆvÉUÉ ¥ÀæwªÀiÁ£ÁlPÀ vÀ0qÀ PÀnÖ "AiÀĪÀļÀ¥Àæ±Éß", n. ¥Àæ¸À£ÀߣÀ "UÀȺÀ¸ÁܱÀæªÀÄ" ªÀÄÄ0vÁzÀ £ÁlPÀUÀ¼À£ÀÄß gÀ0UÀPÉÌ vÀ0zÀgÀÄ.
£ÁlPÀzÀ UÀÄ0VUÉ ¸À0¥ÀÇtðªÁV ©Ã¼ÀĪÀ ªÉÆzÀ®Ä ¹ÃvÁgÁªÀiï, CªÀgÀÄ ¹£ÉªÀiÁzÀ PÀqÉAiÀÄÆ ªÀÄÄR ªÀiÁrzÀÝgÀÄ. ¥ÀÅlÖtÚ£ÀªÀgÀ eÉÆvÉ ¸Àé®àPÁ® PÉ®¸À ªÀiÁrzÀÝgÀÄ. "ªÀiÁ£À¸À ¸ÀgÉÆêÀgÀ", "ªÀĸÀtzÀ ºÀƪÀÅ", ¹£ÉªÀiÁUÀ¼À vÀAiÀiÁjPÉ PÁ®zÀ°è ¥ÀÅlÖtÚ£ÀªÀjUÉ ¹ÃvÁgÁªÀiï ºÀwÛgÀzÀªÀgÁVgÀÄwÛzÀÝgÀÄ. £ÁUÁ¨sÀgÀt ¤zÉðñÀ£ÀzÀ "¨Áå0PÀgï ªÀiÁUÀðAiÀÄå" avÀæPÉÌ ¸À0¨sÁµÀuÉ §gÉzÀªÀgÀÄ ¹ÃvÁgÁªÀiï.
DV£À PÁ®zÀ°è ¹£ÉªÀiÁ¢0zÀ ¹ÃvÁgÁªÀiï C0xÀªÀjUÉ zÀÄqÀÄØ ºÀÄlÄÖwÛgÀ°®è. gÀ0UÀ¨sÀÆ«ÄAiÀÄ0vÀÆ EªÀj0zÀ¯Éà zÀÄqÀÝ£ÀÄß ¨ÉÃqÀÄwÛvÀÄÛ. ºÁUÁV fêÀ£À ¤ªÀðºÀuÉUÉ K£ÀÄ ªÀiÁqÀĪÀÅzÀÄ? CzÀPÉÌ EªÀgÀÄ PÀ0qÀÄPÉÆ0qÀ zÁj J0zÀgÉ UËj©zÀ£ÀÆj¤0zÀ gÁªÀÄ£ÀUÀgÀPÉÌ mÉ0¥ÉÇà Nr¸ÀĪÀÅzÀÄ. gÁªÀÄ£ÀUÀgÀzÀ gÉõÉäUÀÆrUÉ UËj©zÀ£ÀÆj£À°è ªÀiÁgÀÄPÀmÉÖ; F ¸ÁºÀ¸ÀPÉÌ CªÀgÀ eÉÆvÉAiÀiÁzÀªÀgÀÄ E£ÉÆߧâ gÀ0UÀ¨sÀÆ«Ä UɼÉAiÀÄ £ÀgÀ¹0ºÀ£ï.
¹£ÉªÀiÁ, gÀ0UÀ¨sÀÆ«ÄAiÀÄ eÉÆvÉUÉ ¹ÃvÁgÁªÀiï CªÀjUÉ E£ÉÆß0zÀÄ DPÀµÀðuÉAiÀiÁVvÀÄÛ. CzÀÄ ¥ÀwæPÉÆÃzÀåªÀÄ. ¹ÃvÁgÁªÀiï vÀÄ0¨Á ¸ÀÄ0zÀgÀªÁV PÀªÀ£ÀUÀ¼À£ÀÄß ªÁa¸ÀÄwÛzÀÝgÀ0vÉ. ¸ÀévÀB ®0PÉñï vÀªÀÄä PÀªÀ£ÀUÀ¼À£ÀÄß ¹ÃvÁgÁªÀiï CªÀj0zÀ N¢¸ÀÄwÛzÀÝgÀ0vÉ. (§ºÀıÀB FUÀ ªÀÄÄPÀÛ zsÁgÁªÁ»AiÀÄ ¯ÁAiÀÄgï ZÀ0zÀæ±ÉÃRgï ¥Àæ¸Ázï ªÀiÁqÀĪÀÅzÀÄ CzÀ£ÉßÃ!). ®0PÉñï eÉÆvÉ r. Dgï. £ÁUÀgÁeï, J£ï. PÉ. ªÉÆúÀ£ÀgÁªÀiï, ©. «. PÁgÀ0vï, £ÀgÀ¹0ºÀªÀÄÆwð ªÀÄÄ0vÁzÀªÀgÀÄ ¹ÃvÁgÁªÀiï CªÀgÀ ºÀgÀmÉAiÀÄ ªÀÄvÀÄÛ ¨Ë¢ÞPÀ UɼÉAiÀÄgÁVzÀÝgÀÄ. EªÀgÉ®ègÀ ¸ÀÆáwðAiÉÆà K£ÉÆà "ªÀÄÄPÀÛ" J0§ ¥ÀwæPÉAiÀÄ£ÀÄß PÀÆqÁ ¹ÃvÁgÁªÀiï £ÀqɸÀÄwzÀÝgÀÄ.
¹£ÉªÀiÁ, gÀ0UÀ¨sÀÆ«Ä, ¸Á»vÀå, ¥ÀwæPÉÆÃzÀåªÀÄzÀ eÉÆvÉ gÁdQÃAiÀÄ E®è¢zÀÝgÉ ºÉÃUÉ? ºËzÀÄ....... ¹ÃvÁgÁªÀiï CªÀjUÉ gÁdQÃAiÀÄzÀ §UÉÎ «±ÉõÀ M®ªÀÅ. CªÀgÀÄ d£ÀvÁ ¥ÀjªÁgÀPÉÌ ºÀwÛgÀzÀªÀgÁVzÀÝgÀÄ. 1983 gÀ°è UËj©zÀ£ÀÆj¤0zÀ ZÀÄ£ÁªÀuÉUÉ ¸Àà¢üð¹zÀgÀÄ. DzÀgÉ UÉ®è¯ÁUÀ°®è. 1999 gÀ°è £ÁªÀÄ¥ÀvÀæ ¸À°è¹zÀÝgÀÄ.
PÉÆ£ÉUÉ F gÁdQÃAiÀÄ KPÉÆà vÀªÀÄUÉ M°AiÀÄÄwÛ®è J0zÀÄ ªÀÄ£ÀUÀ0qÀÄ "ªÀÄvÀzÁ£À" ¹£ÉªÀiÁ ªÀiÁrzÀgÀÄ. C0vÀºÀ AiÀıÀ¸ÉìãÀÆ PÁt¢zÀÝgÀÆ CzÉÆ0zÀÄ ¸ÀzÀ©ügÀÄaAiÀÄ avÀæ. PÁè¸ï ¥ÉæÃPÀëPÀgÀÄ CzÀ£ÀÄß ªÉÄaÑPÉÆ0rzÁÝgÉ.
FUÀ0vÀÆ n. J£ï. ¹ÃvÁgÁªÀiï C0zÀgÉ AiÀıÀ¹é zsÁgÁªÁ»UÀ¼À ¤zÉðñÀPÀgÉzÉà ¥Àæ¹zÀÞ. DzÀgÉ CªÀgÀÄ vÀªÀÄä ¦æÃwAiÀÄ ºÀªÁå¸ÀUÀ¼À°è AiÀiÁªÀÅzÀ£ÀÆß ©nÖ®è. gÁdPÁgÀtÂUÀ¼À ¸À0¥ÀPÀð ElÄÖPÉÆ0rzÁÝgÉ. "D¸ÉÆáÃl" £ÁlPÀªÀ£ÀÄß FV£À PÁ®PÉÌ C£ÀÄUÀÄtªÁUÀĪÀ0vÉ ªÀÄvÉÛ §gÉzÀÄ, gÀ0UÀPÉÌ vÀgÀ¨ÉÃPÉ0§ D¸É CªÀjUÉzÉAiÀÄ0vÉ. ¥ÀwæPÉÆÃzÀåªÀÄ ªÀÄvÀÄÛ ¸Á»vÀå ¸ÀªÀiÁgÀ0¨sÀUÀ¼À°è PÁt¹PÉƼÀÄîwÛzÁÝgÉ. eÉÆvÉUÉ "¸ÀªÀiÁdªÁ¢ AiÀÄĪÀd£À ¸À¨sÁ" ZÀlĪÀnPÉUÀ¼À°è FUÀ®Æ CªÀgÀÄ ¸ÀQæAiÀÄ; £À0dÄ0qÀ¸Áé«Ä, vÉÃd¹é, ®0PÉñï, C£À0vÀªÀÄÆwð ªÀÄÄ0vÁzÀªÀgÀÄ EzÀgÀ°è vÉÆqÀVPÉÆ0rzÀÝgÀÄ.
EµÉÖ¯Áè §zÀÄPÀÄ PÀ0qÀ ªÀåQÛAiÉƧâ¤UÉ, D C£ÀĨsÀªÀ ªÀÄvÀÄÛ PÀ£À¸ÀÄUÀ¼À£ÀÄß vÀ£Àß ªÀiÁzsÀåªÀÄzÀ°è »r¢qÀ®Ä ¸ÁzsÀåªÁV, CzÀPÉÆÌ0¢µÀÄÖ PÀ¯ÁvÀäPÀvÉ ªÀÄvÀÄÛ gÀ0d£ÉAiÀÄ C0±À ¨ÉgɹzÀgÉ AiÀıÀ¸ÀÄì ¤²ÑvÀ. CzÀ£ÀÄß ¹ÃvÁgÁªÀiï ¸Á¢ü¹zÁÝgÉ.
’ಹಂಗಾಮ’ದಲ್ಲಿ ಪ್ರಕಟವಾದ ಬರಹ

Monday, March 12, 2012

ಪ್ರಕೃತಿ ಸಂಸ್ಕೃತಿಗಳ ನಡುವಿನ ವಿಕೃತಿ



ಪ್ರಕೃತಿಯಿಂದ ಸಂಸ್ಕೃತಿಯೆಡೆಗಿನ ಮಾನವನ ಪಯಣಕ್ಕೆ ಸುದೀರ್ಘವಾದ ಇತಿಹಾಸವಿದೆ. ಅದು ನಾಗರೀಕತೆಯ ಇತಿಹಾಸ. ಪ್ರಕೃತಿ ಎಂದರೆ ”ಇರುವುದು’.ಅದು ನೈಜವಾದುದು,ಸಹಜ ಸ್ಥಿತಿಯಲ್ಲಿರುವುದು. ಸಂಸ್ಕೃತಿ ಎಂದರೆ ’ಆಗುವುದು’ ಅದು ಬುದ್ಧಿವಿಕಾಸಕ್ಕೆ ಸಂಬಂಧಿಸಿದ್ದು. ಅದು ಮಾನಸಿಕ ಪಕ್ವತೆ. ಪ್ರಕೃತಿಯಲ್ಲಿದ್ದಾಗ ಮನುಷ್ಯನಿಗೆ ಮಾನದ ಕಲ್ಪನೆ ಇರಲಿಲ್ಲ. ಹಾಗಾಗಿ ಅವನಿಗೆ ಮುಚ್ಚಿಕೊಳ್ಳುವುದರ ಅವಶ್ಯಕತೆ ಕಾಣಲಿಲ್ಲ. ಆದರೆ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾ ಹೋದ ಮಾನವ ತನ್ನ ದೇಹದ ಕೆಲವು ಅಂಗಗಳನ್ನು ಮುಚ್ಚಿಕೊಳ್ಳುತ್ತಾ ಹೋದ. ಅದು ಮತ್ತೆ ಪ್ರದೇಶ ಮತ್ತು ಕಾಲಕ್ಕನುಗುಣವಾಗಿ ಬದಲಾಗುತ್ತಾ ಹೋಗಿದೆ. ಹಾಗಾಗಿಯೇ ಅವರು ರೂಪಿಸಿಕೊಂಡ ಸಂಸ್ಕೃತಿ ಕೂಡಾ ಭಿನ್ನಭಿನ್ನವಾಗಿಯೇ ಇರುವುದನ್ನು ನಾವಿಂದಿಗೂ ಕಾಣಬಹುದು.
ಕೆಲವು ಧರ್ಮ ಸಂಸ್ಕೃತಿಗಳಲ್ಲಿ ಮುಚ್ಚಿಕೊಳ್ಳುವುದೇ ಶ್ರೇಷ್ಟತೆಯೆನಿಸಿದರೆ ಇನ್ನು ಕೆಲವು ಸಂಸ್ಕೃತಿಯಲ್ಲಿ ಬಿಚ್ಚಿಕೊಳ್ಳುವುದು ಅಂದರೆ ನಿರ್ವಾಣವೂ ಪೂಜನೀಯ.ಹಾಗೆಯೇ ಬಿಚ್ಚಿದ್ದನ್ನು ಕಲೆಯ ಹೊದಿಕೆಯಡಿ ತೋರಿಸಿದರೆ ಅದು ಸೌಂದರ್ಯೋಪಾಸನೆ.
ಇಷ್ಟಕ್ಕೂ ಸಂಸ್ಕೃತಿ ಅಂದ್ರೆ ಏನು? ಸಂಸ್ಕೃತಿ ಅಂದ್ರೆ ನಾವು ಬದುಕುವ ವಿಧಾನ; ನಮ್ಮ ನಡೆ-ನುಡಿ, ಆಚಾರ-ವಿಚಾರ,ನಂಬಿಕೆ-ಮೌಲ್ಯಗಳು ಇವೆಲ್ಲವುಗಳ ಒಟ್ಟು ಮೊತ್ತವೇ ಸಂಸ್ಕೃತಿ ಆಗಿರುತ್ತದೆ. ಆದಿಮಾನವನನ್ನು ಕೃಷಿಯ ಕೈಂಕರ್ಯಕ್ಕೆ ಹಚ್ಚಿ ಅವನನ್ನು ಕುಟುಂಬಕ್ಕೆ ಬಂದಿಸಿ ಅವನಿಗೆ ನಾಗರೀಕತೆಯನ್ನು ಕಲಿಸಿ ಸಮಾಜದ ಮೌಲ್ಯ ವಿನ್ಯಾಸ ಮಾಡಿದಾಕೆ ಮಹಿಳೆ. ಅಂಥ ಮಹಿಳೆ ಎಂದೂ ಕೂಡಾ ತನ್ನ ಅಂಗಾಂಗಗಳನ್ನು ಪ್ರದರ್ಶನಕ್ಕಿಟ್ಟವಳಲ್ಲ. ಬಲಾತ್ಕಾರದಿಂದ ಆಕೆಯನ್ನು ಬೆತ್ತಲೆಗೊಳಿಸಿದವನು ಪುರುಷ. ಅದಕ್ಕೆ ಮೊದಲ ಉದಾಹರಣೆ ನಮಗೆ ಸಿಗುವುದು ಮಹಾಭಾರತದಲ್ಲಿ.
ಅದು ಹಸ್ತಿನಾಪುರದ ರಾಜಸಭೆ.. ದ್ರೌಪದಿಯನ್ನು ದುಶ್ಯಾಸನ ಬೆತ್ತಲೆಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ದುರ್ಯೋಧನ ಆಕೆಯತ್ತ ನೋಡಿ ತನ್ನ ತೊಡೆಯನ್ನು ತೋರಿಸಿ’ ಬಾ ಇಲ್ಲಿ ಕುಳಿತುಕೋ’ ಎಂದು ಕುಹಕವಾಡುತ್ತಾನೆ. [ಆತ ತೋರಿಸಿದ್ದು ತೊಡೆಯನ್ನಲ್ಲ ಇನ್ನೇನನ್ನೋ.. ಎಂಬ ವಾದವೂ ಇದೆ.] ಭೀಷ್ಮ, ದ್ರೋಣ, ಕೃಫ, ಶಕುನಿ, ವಿಧುರ ಮುಂತಾದವರೆಲ್ಲಾ ಷಂಡರಂತೆ ತಲೆ ತಗ್ಗಿಸಿಕೊಳ್ಳುತ್ತಾರೆ. ಕುರುಡ ಧೃತರಾಷ್ಟ್ರ ’ಇಲ್ಲೇನಾಗುತ್ತಿದೆ, ಇಲ್ಲೇನಾಗುತ್ತಿದೆ’ ಎನ್ನುತ್ತಾ ತಡಬಡಾಯಿಸುತ್ತಾನೆ. ದೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುವವರು ಯಾರು?
ಈಗಲೂ ಅಷ್ಟೇ. ಅಂದಿನ ರಾಜಸಭೆಯ ಹಾಗೆ ಪೋಲಿಸರು, ವಕೀಲರು ಮತ್ತು ಮಾಧ್ಯಮಗಳು ಒಟ್ಟಾಗಿ ಕನ್ನಡದ ಸಂಸ್ಕೃತಿಯ ಮಾನಬಂಗ ಮಾಡುತ್ತಿದ್ದಾರೆ. ರಾಜಕಾರಣಿಗಳು ತೊಡೆ ತಟ್ಟಿ ನಗುತ್ತಿದ್ದಾರೆ. ಮುಖ್ಯಮಂತ್ರಿಗಳು ದೃತರಾಷ್ಟ್ರನ ರೀತಿಯಲ್ಲಿ ಕಕ್ಕಾಬಿಕ್ಕಿಯಾಗಿದ್ದಾರೆ.
ಇದನ್ನು ಸಂಸ್ಕೃತಿಯೊಡನೆ ವಿಕೃತಿಯ ಮುಖಾಮುಖಿ ಎನ್ನಬಹುದು. ಇಲ್ಲಿ ವಿಕೃತಿ ಸಮೂಹದೊಂದಿಗೆ ಬಂದಿದೆ ಅದರ ಪರಾಕಾಷ್ಠೆಯನ್ನು ಯೂಟ್ಯುಬ್ ನ ವಿಡಿಯೋ ತುಣುಕೊಂದರಲ್ಲಿ ಕಂಡೆ. ಅದರಲ್ಲಿ ದೃಶ್ಯ ಮಾಧ್ಯಮದ ಪೋಟೋಗ್ರಾಪರ್ ಒಬ್ಬ ಒಂದು ಕೈಯ್ಯಲ್ಲಿ ಚಾನಲ್ ಲೋಗೋ ಹಿಡಿದುಕೊಂಡು ಇನ್ನೊಂದು ಕೈಯ್ಯಲ್ಲಿ ಪ್ಯಾಂಟಿನ ಜಿಪ್ ಎಳೆದು ತನ್ನ ಗುಪ್ತಾಂಗವನ್ನು ತೋರಿಸಲೆತ್ನಿಸುತ್ತಾ ಎದುರಿಗಿದ್ದವರನ್ನು ರೊಚ್ಚಿಗೆಬ್ಬಿಸುವ ರೀತಿಯಲ್ಲಿ ಏನನ್ನೋ ಹೇಳುತ್ತಿದ್ದಾನೆ. ಆತನ ಹಿಂದೆ ಕ್ಯಾಮಾರಮ್ಯಾನ್ ಗಳ ದಂಡೇ ಇದೆ. ಅದನ್ನು ಯೂ ಟ್ಯೂಬ್ ಗೆ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಅಲ್ಲಿ ವ್ಯಕ್ತವಾಗುತ್ತಿರುವ ಭಾವ ಯಾವುದು ಎಂಬುದು ಮುಖ್ಯ.
ಯಾವಾಗಲೂ ಅಷ್ಟೆ. ಸಂಸ್ಕೃತಿ ಮತ್ತು ವಿಕೃತಿ ಮುಖಾಮುಖಿಯಾದಾಗ ಸಂಸ್ಕೃತಿಯೇ ಮುಖ ತಿರುಗಿಸಿಕೊಳ್ಳುತ್ತದೆ. ಇಲ್ಲಿ ಆತ ಯಾರ ಎದುರಿಗೆ ನಿಂತು ಹಾಗೆ ವರ್ತಿಸಿದನೋ ಅವರನ್ನು ನಾನು ಸಂಸ್ಕೃತಿಯ ನೆಲೆಯಲ್ಲಿಟ್ಟು ತೂಗುತ್ತಿಲ್ಲ. ಸಂಸ್ಕೃತಿಯ ನೆಲೆಯಲ್ಲಿರುವವರು ನಾವು ಜನಸಾಮಾನ್ಯರು; ಮತದಾರರು. ಇದಕ್ಕೊಂದು ಉದಾಹರಣೆಯನ್ನು ಕೊಡುತ್ತೇನೆ. . ನಮ್ಮ ಊರಿನಲ್ಲಿ ಗದ್ದೆಗೆ ನೀರುಣಿಸಲು ಪಕ್ಕದ ಹೊಳೆಯೊಂದಕ್ಕೆ ಊರವರೆಲ್ಲಾ ಸೇರಿ ಕಟ್ಟ ಅಂದ್ರೆ ಚೆಕ್ ಡ್ಯಾಂ ನಿರ್ಮಿಸಿಕೊಂಡಿದ್ದರು. ನೀರು ಹರಿದು ಬರುವ ಕಾಲುವೆಯ ಬದಿಯ ಮೊದಲ ಗದ್ದೆ ಒಬ್ಬ ಶ್ರೀಮಂತನದಾಗಿತ್ತು. ಆತ ಸರದಿಯನ್ನೂ ಮೀರಿ ತನ್ನ ಗದ್ದೆಗೆ ನೀರುಣಿಸಿಕೊಳ್ಳುತ್ತಿದ್ದುದರಿಂದ ಕಾಲುವೆಯ ಕೊನೆಯಲ್ಲಿರುವ ಮೋನಪ್ಪನ ಗದ್ದೆಗೆ ಸರಿಯಾಗಿ ನೀರೇ ಬರುತ್ತಿರಲಿಲ್ಲ. ಆತ ತನ್ನ ಗದ್ದೆಗೆ ನೀರು ಸಾಕಾಗುತ್ತಿಲ್ಲ ಎಂದು ಹೇಳಿದರೂ ಶ್ರೀಮಂತ ಕ್ಯಾರೇ ಅನ್ನುತ್ತಿರಲಿಲ್ಲ.. ಒಂದು ದಿನ ಬೆಳಿಗ್ಗೆ ಆತ ಆ ಶ್ರೀಮಂತ ಬರುವುದನ್ನೇ ಕಾದು ಕುಳಿತ. ದೂರದಲ್ಲಿ ಶ್ರೀಮಂತ ಬರುವುದನ್ನು ಕಂಡ ಈತ ತನ್ನ ಕೌಪೀನವನ್ನು ಬಿಚ್ಚಿ ಚೆಕ್ ಡ್ಯಾಂನ ಕಿಂಡಿಯಲ್ಲಿ ನಿಂತ. ಅಲ್ಲಿ ಮೋನಪ್ಪನನ್ನು ಆ ಸ್ಥಿತಿಯಲ್ಲಿ ಕಂಡ ಆ ಶ್ರೀಮಂತ ಮತ್ತೆಂದೂ ನೀರು ಬಿಡಲು ಬರಲೇ ಇಲ್ಲ. ಇದನ್ನು ನಾನು ಚಿಕ್ಕಂದಿನಲ್ಲಿ ಮೋನಪ್ಪನ ಬಾಯಿಂದಲೇ ಕೇಳಿದ್ದೇನೆ.
ಅಂದು ಆ ಅನಕ್ಷರಸ್ತ ಮೋನಪ್ಪ ಮಾಡಿದ್ದಕ್ಕೂ ಇಂದು ಈ ಮಾಧ್ಯಮದ ವ್ಯಕ್ತಿ ತನ್ನಂಗವನ್ನು ತೋರಿಸಿದ್ದಕ್ಕೂ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಪರಿಣಾಮ ಒಂದೇ. ಸಂಸ್ಕೃತಿಯೆದುರಿಗೆ ವಿಕೃತಿಯ ವಿಜೃಂಬಣೆ. ಇಲ್ಲಿ ಒಂದು ಮಾತನ್ನು ಹೇಳಬೇಕು. ಸಂಸ್ಕೃತಿಯನ್ನು ವಿರೋಧಿಸುವವನಿಗೆ ಸೈದ್ಧಾಂತಿಕ ತಳಹದಿ ಇದ್ದರೆ ಅದು ಬಂಡಾಯ ಎನಿಸಿಕೊಳ್ಳುತ್ತದೆ. ಅದನ್ನು ಸಮಾಜ ಕ್ರಮೇಣ ಮಾನ್ಯ ಮಾಡುತ್ತದೆ. ಆದರೆ ಹುಂಬತನದಿಂದ ಮಾಡಿದ್ದರೆ ಅದನ್ನು ಸಮಾಜ ತಕ್ಷಣ ತಿರಸ್ಕರಿಸುತ್ತದೆ. ಮೋನಪ್ಪನದು ಬಂಡಾಯ. ಆ ಮಾಧ್ಯಮದ ವ್ಯಕ್ತಿಯದು ಹುಂಬತನ.
ಶಬ್ದವೊಂದು ನಮ್ಮ ಕಿವಿಗೆ ಬಿದ್ದೊಡನೆ ಅದಕ್ಕೆ ಸಂಬಂಧಿಸಿದ ಚಿತ್ರಗಳು ಚಿತ್ತಭಿತ್ತಿಯಲ್ಲಿ ಹಾದು ಹೋಗುವುದು ಸಾಮಾನ್ಯ. ಇಲ್ಲಿಯವರೆಗೂ ಬಿಚ್ಚುವುದು ಎಂದರೆ ಕೆಲವು ಬಿಚ್ಚಮ್ಮ ಸೆಲೆಬ್ರಿಟಿಗಳ ಚಿತ್ರ ನನ್ನ ಕಣ್ಮುಂದೆ ಬರುತ್ತಿತ್ತು. ಈಗ ನನ್ನ ಕಣ್ಮುಂದೆ ಚಾನಲ್ಲೊಂದರ ಲೋಗೋ ಹಿಡಿದು ಪ್ಯಾಂಟ್ ಜಿಪ್ ಬಿಚ್ಚುತ್ತಿರುವ ಆ ಕ್ಯಾಮಾರ ಮ್ಯಾನ್ ಕಣ್ಮುಂದೆ ಬರುತ್ತಾನೆ. ಇದು ಸಂಸ್ಕೃತಿಯೋ ವಿಕೃತಿಯೋ ಅರ್ಥವಾಗದ ಗೊಂದಲದಲ್ಲಿ ನಾನಿದ್ದೇನೆ.
[ ವಿಜಯಕರ್ನಾಟಕದ ನನ್ನ ಕಾಲಂ ’ಅನುರಣನ’ದಲ್ಲಿ ಪ್ರಕಟವಾದ ಲೇಖನ ]

Saturday, March 3, 2012

ವಿಸರ್ಜನೆಯ ಸುಖಕ್ಕೆ ಅಡ್ಡಿಯಾದರೆ ಹೊಡೆತ ಗ್ಯಾರಂಟಿ..!



ಮನುಷ್ಯನಿಗೆ ಅತ್ಯಂತ ಸುಖದ ಕ್ಷಣ ಯಾವುದು? ಬಲ್ಲವರು ಹೇಳುತ್ತಾರೆ, ಅದು ವಿಸರ್ಜನೆಯ ಸುಖ. ಅದಕ್ಕವರು ಉದಾಹರಣೆಯಾಗಿ ಕೊಡುವುದು ಮಲಬದ್ಧತೆಯನ್ನು. ಮಲಬದ್ದತೆಯ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಗೊತ್ತಿದೆ ಅದರ ಕಷ್ಟ. ಬೆಳಿಗ್ಗೆ ಎದ್ದೊಡನೆ ಸಲೀಸಾಗಿ ವಿಸರ್ಜನೆಯ ಕ್ರಿಯೆಗಳೆಲ್ಲಾ ನಡೆದರೆ ಆ ದಿನವೆಲ್ಲಾ ಲವಲವಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಎಡವಟ್ಟಾಯ್ತೋ ಒಂಥಾರ ಅಸಹನೆ..ಚಡಪಡಿಕೆ..ಆಲಸ್ಯ.
ಮೂತ್ರ ವಿಸರ್ಜನೆ ಕೂಡಾ ಹಾಗೆಯೇ. ಅದನ್ನು ಬಹಳ ಹೊತ್ತು ತಡೆ ಹಿಡಿದುಕೊಂಡರೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವುದರ ಮೇಲೂ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಜೋರಾಗಿ ನಗುವ ಹಾಗಿಲ್ಲ. ನಕ್ಕರೆ ನಿಯಂತ್ರಣ ತಪ್ಪಿ ಮೂತ್ರ ಹರಿದು ಬಿಡಬಹುದೆಂಬ ಭಯ!
ಇಷ್ಟೆಲ್ಲಾ ಪೀಠೀಕೆ ಹಾಕಲು ಕಾರಣವಿದೆ. ಮೊನ್ನೆ ಶುಕ್ರವಾರ ಹುಬ್ಬಳಿಯ ಕಾಳಮ್ಮ ಅಗಸಿ ಪ್ರದೇಶದಲ್ಲಿ ಒಂದು ಘಟನೆ ನಡೆಯಿತು. ಇಲ್ಲಿಯ ಕಾಳಮ್ಮ ದೇವಸ್ಥಾನದ ಕಾಂಪೌಂಡ್ ಬಳಿ ರಾಜಸ್ಥಾನ ಮೂಲದ ಮನೋಜ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅದನ್ನು ನೋಡಿದ ಮಹಾನಗರಪಾಲಿಕೆ ಸದಸ್ಯ ನಿಂಗಪ್ಪ ಬಡಿಗೇರ್,”ಇದು ಪವಿತ್ರ ಜಾಗ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಬುದ್ಧಿವಾದ ಹೇಳಲೆತ್ನಿಸಿದರು. ತನ್ನ ವಿಸರ್ಜನೆಯ ಸುಖಕ್ಕೆ ಅಡ್ಡಿಯಾದ ಇವನ್ಯಾವ ದೊಣ್ಣೆನಾಯಕ ಎಂದು ಅಂದುಕೊಂಡ ಮನೋಜ್, ಬಡಿಗೇರ್ ವಿರುದ್ಧ ತಿರುಗಿ ಬಿದ್ದ. ಮಾತಿಗೆ ಮಾತು ಬೆಳೆಯಿತು. ಸುತ್ತ ಜನ ಸೇರಿದರು. ವಿಸರ್ಜನೆ ಸುಖದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. [ ಅಲ್ಲವೇ ಮತ್ತೆ, ಸ್ವಲ್ಪ ನಮ್ಮ ಬೆಂಗಳೂರಿನ ಮಾರ್ಕೇಟ್ ಏರಿಯಾದಲ್ಲೊಮ್ಮೇ ಸುತ್ತು ಹಾಕಿ ಬನ್ನಿ.] ಎಲ್ಲರೂ ಸೇರಿ ಬಡಿಗೇರ್ ಅವರಿಗೆ ಬಡಿದರು. ಅವರ ತಲೆ, ಕುತ್ತಿಗೆ ಮತ್ತು ಸೊಂಟಕ್ಕೆ ಏಟುಗಳು ಬಿದ್ದವು. ಕೊನೆಗೆ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರ್ಗೆ ಸೇರಿಸ್ಬೇಕಾಯ್ತು.
ಇದು ಸುಳ್ಳಲ್ಲಾ ಮಾರಾಯ್ರೇ.. ಬೇಕಾದ್ರೆ ಪೆಬ್ರವರಿ ೨೫ ರ ’ವಿಜಯ ಕರ್ನಾಟಕ’ ನೋಡಿ, ಅಲ್ಲಿ ೧೦ನೇ ಪುಟದಲ್ಲಿ ’ಪಾಲಿಕೆ ಸದಸ್ಯನಿಗೆ ಬಡಿದ ಮೂತ್ರವಾದಿಗಳು’ ಎಂಬ ಶೀರ್ಷಿಕೆಯಡಿ ಈ ಸುದ್ದಿ ಪ್ರಕಟವಾಗಿದೆ.
ಮನೋಜ್ ಅಂತವರ ಕಷ್ಟ, ಪಾಪ ಬಡಿಗೇರ್ ಅವರಿಗೆ ಹೇಗೆ ಗೊತ್ತಾಗಬೇಕು.?
’ನೀವು ಈ ವಿಚಾರದಲ್ಲಿ ಕಟ್ಟಿನಿಟ್ಟಾಗಿ ನಡೆದುಕೊಂಡರೆ ನನ್ನಂತಹ ಮುದುಕ ಅದರಲ್ಲೂ ಡಯಾಬಿಟಿಕ್ ಪೇಷಂಟ್ ಏನು ಮಾಡಬೇಕು? ನಮ್ಮನ್ನು ಸ್ವಲ್ಪ ಗಮನದಲ್ಲಿಟ್ಟುಕೊಳ್ಳಿ’ ಎಂದು ದಿ. ಎಚ್. ನರಸಿಂಹಯ್ಯನವರು ವಾಚಕರವಾಣಿಗೆ ಪತ್ರ ಬರೆದಿರುವುದು ನನಗೆ ನೆನಪಿದೆ!
ಈ ಮೂತ್ರ ವಿಸರ್ಜನೆಯ ಪುರಾಣ ಕೇಳುತ್ತಿರುವಾಗ ನಿಮ್ಮ ಚಿತ್ತಭಿತ್ತಿಯಲ್ಲಿ ವಿಧಾನ ಸೌಧದಲ್ಲಿ ಮೂವರು ಸಚಿವರು ಸೆಕ್ಸ್ ವಿಡಿಯೊ ವೀಕ್ಷಿಸುತ್ತಿದ್ದ ದೃಶ್ಯಗಳು ನೆನಪಿಗೆ ಬಂದರೆ ನಾನು ಜವಾಬ್ದಾರಳಲ್ಲ! ಮನೋಜ್ ಗೆ ದೇವಸ್ಥಾನದ ಕಾಂಪೌಂಡ್ ಮೋಟು ಗೋಡೆಯಂತೆ ಕಂಡರೆ ಸಚಿವರಿಗೆ ವಿಧಾನ ಸೌಧ ಇನ್ನೇನೋ ಆಗಿ ಕಾಣಿಸಿರಬಹುದು. ’ಅವರವರ ಭಾವಕ್ಕೆ ಅವರವರ ಭಕುತಿಗೆ’
ನೀವು ರೈಲಿನಲ್ಲಿ ಪಯಣಿಸುವವರಾಗಿದ್ದರೆ ಈ ದೃಶ್ಯವನ್ನು ನೋಡಿಯೇ ಇರುತ್ತೀರಿ. ಬೆಳಿಗ್ಗೆ ಹಳಿಗಳುದ್ದಕ್ಕೂ ಜನರು ಕುಳಿತಿರುತ್ತಾರೆ. ಅವರ ಹಿಂಬದಿಯ ಉಚಿತ ದರ್ಶನ ನಿಮಗಾಗುತ್ತಿರುತ್ತದೆ. ಅವರಿಗೆ ಈ ರೀತಿ ಸಾರ್ವಜನಿಕವಾಗಿ ಬಹಿರ್ದೆಶೆಗೆ ಕುಳಿತುಕೊಳ್ಳಲು ನಾಚಿಕೆ, ಮುಜುಗರಗಳಾಗುವುದಿಲ್ಲವೇ? ಹೀಗೆಂದು ನಾನು ಯಾರಲ್ಲಿಯೋ ಕೇಳಿದ್ದೆ. ಅದಕ್ಕವರು ಉತ್ತರಿಸಿದ್ದರು, ’ಅವರಿಗದು ಅನಿವಾರ್ಯ.ಪ್ರಕೃತಿ ಕರೆ. ಅದನ್ನವರು ಇಳಿಸಿಕೊಳ್ಳಲೇ ಬೇಕು,ನಮಗದನ್ನು ನೋಡಿದರೆ ನಾಚಿಕೆ, ಮುಜುಗರ. ಹಾಗಾಗಿ ನಾವೇ ಮುಖ ತಿರುಗಿಸಿಕೊಳ್ಳುತ್ತೇವೆ’ ಎಂದಿದ್ದರು. ಎಷ್ಟು ಸತ್ಯ ಅಲ್ಲವೇ?
ಮೂತ್ರ ವಿಸರ್ಜನೆ ಎಂದೊಡನೆ ನನಗೆ ನೆನಪಾಗುವುದು ಕನ್ನಡದ ಉಟ್ಟು ಹೋರಾಟಗಾರ ವಾಟಾಳ್ ನಾಗರಾಜ್. ಅವರು ೨೦೦೮ರ ನವಂಬರ್ ತಿಂಗಳಿನಲ್ಲಿ ಒಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ನವೆಂಬರ್ ತಿಂಗಳಿಗೂ ವಾಟಾಳ್ ನಾಗರಾಜ್ ಗೂ ಇರುವ ನಂಟನ್ನು ನೀವೆಲ್ಲಾ ಬಲ್ಲವರೇ ಆಗಿದ್ದೀರಿ!. ಅಂದು ಅವರೊಂದು ಚಳುವಳಿಯ ಘೋಷಣೆಯನ್ನು ಮಾಡಿದ್ದರು. ಆ ಚಳುವಳಿಯ ಹೆಸರು ’ಉಚ್ಚೆ ಹೊಯ್ಯುವ ಚಳುವಳಿ’ ಆ ಚಳುವಳಿಯ ಘೋಷಣೆ ಮಾಡಲು ಕಾರಣ; ಸರಕಾರವು ರಾಜ್ಯದಲ್ಲಿ ಹೆಚ್ಚೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು. ಒಂದು ವೇಳೆ ಸರಕಾರವು ನಿಗದಿತ ಅವಧಿಯೊಳಗೆ ಶೌಚಾಲಯಗಳನ್ನು ನಿರ್ಮಿಸದಿದ್ದರೆ ತಾವು ಮತ್ತು ತಮ್ಮ ತಂಡ ರಾಜಭವನದೆದುರು ’ಉಚ್ಚೆ ಹೊಯ್ಯುವ ಚಳುವಳಿ’ಯನ್ನು ಕಾರ್ಯರೂಪಕ್ಕೆ ತರುವುದಾಗಿ ಘೋಷಿಸಿದ್ದರು ಮಾತ್ರವಲ್ಲ ಮುಂದೆ ಅದನ್ನು ಮುಖ್ಯಮಂತ್ರಿ, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಮತ್ತು ಐಎ ಎಸ್ ಅಧಿಕಾರಿಗಳ ಮನೆಗಳಿಗೆ ವಿಸ್ತರಿಸುವುದಾಗಿ ಹೇಳಿದ್ದರು. ಅವರಿಗೆ ಈ ಪತ್ರಕರ್ತರ ಬಗ್ಗೆ ಸಂಶಯ. ಹಾಗಾಗಿಯೇ ಅವರಿಗೆ ತಾಕೀತು ಮಾಡಿದ್ದರು,’ನೀವೆಲ್ಲಾ ಮೂತ್ರ ವಿಸರ್ಜನೆ ಎಂದು ಬರೆಯಬಾರದು. ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯತಕ್ಕದ್ದು’
ಆಗಲೂ ಸಚಿವ ಸಂಪುಟದಲ್ಲಿದ್ದದ್ದು ಒಬ್ಬರೇ ಮಹಿಳೆ, ಶೋಭಾ ಕರಂದ್ಲಾಜೆ. ಅವರ ಮನೆಯೆದುರು ವಾಟಾಳ್ ನಾಗರಾಜ್ ಉಚ್ಚೆ ಹೊಯ್ಯುವ ದೃಶ್ಯವನ್ನು ನಾನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಬಿದ್ದು ಬಿದ್ದು ನಕ್ಕಿದ್ದೆ.
ಆಮೇಲೆ ಅವರ ಈ ಚಳುವಳಿ ಎಲ್ಲಿ ಹಳ್ಳ ಹಿಡಿಯಿತೋ ಗೊತ್ತಿಲ್ಲ!
ವಿಸರ್ಜನೆಯ ಸುಖವನ್ನು ಅನುಭವಿಸುವವರು ಗಂಡಸರು ಮಾತ್ರ. ಯಾಕೆಂದರೆ ಅವರಿಗೆ ಎಲ್ಲೆಲ್ಲೂ ಮೋಟು ಗೋಡೆಗಳೇ ಕಾಣಿಸುತ್ತವೆ. ವಿಸರ್ಜನೆಯ ಕಷ್ಟವನ್ನು ಅನುಭವಿಸುವವರು ಮಹಿಳೆಯರು. ಅವರು ಪ್ರಕೃತಿಯ ಕರೆಗಳನ್ನು ಕೂಡಾ ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕಾದ ಹೀನಾಯ ಸ್ಥಿತಿ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಬೆಳಕು ಹರಿಯುವ ಮುನ್ನವೇ, ಗಂಡಸರೆಲ್ಲಾ ಇನ್ನೂ ಮಲಗಿರುವಾಗಲೇ ಊರ ಹೊರಗೆ ಹೋಗಿ ತಮ್ಮ ಪ್ರಾರ್ತವಿಧಿಗಳನ್ನು ಪೂರೈಸಿಕೊಂಡು ಬರಬೇಕಾದ ಸ್ಥಿತಿ ಇನ್ನೂ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿದೆ. ತಮ್ಮ ’ಆ ದಿನಗಳಲ್ಲಿ’ ಆ ಮಹಿಳೆಯರು ತಮ್ಮ ಮೈ ಮನಸ್ಸುಗಳನ್ನು ಹೇಗೆ ಮುದುಡಿಸಿಕೊಂಡು ಬದುಕುತ್ತಿರಬಹುದು ಎಂಬುದನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಅದಕ್ಕೇ ಇರಬೇಕು, ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಮಹಿಳೆಯರು ತಮಗೆ ಅಧಿಕಾರ ಸಿಕ್ಕ ಒಡನೆಯೇ ಶೌಚಾಲಯ ಮತ್ತು ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆಯನ್ನು ನೀಡಿದ್ದು.
ಅವರೆಲ್ಲರ ಮಾತು ಬಿಡಿ.ನಾನು ಕೂಡಾ ಈ ವಿಸರ್ಜನೆಯ ಕಷ್ಟವನ್ನು ಅನುಭವಿಸಿದವಳೇ. ಎಲ್ಲಿ ಅಂತಿರಾ? ನನ್ನ ವಯ್ಯಕ್ತಿಕ ಕೆಲಸದ ಮೇಲೆ ತಿಂಗಳಲ್ಲಿ ಮುರ್ನಾಲ್ಕು ಬಾರಿ ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತೇನೆ. ಆಗೆಲ್ಲಾ ಪ್ರಯಾಣ ಸುರಕ್ಷಿತವಾಗಿರಲಿ ಎಂದುಕೊಂಡು ರಾಜಹಂಸ ಇಲ್ಲವೇ ಐರಾವತದಲ್ಲಿ ಪಯಣಿಸುತ್ತೇನೆ. ಮಧ್ಯರಾತ್ರಿಯಲ್ಲಿ ಡ್ರೈವರು ಯಾವುದೋ ಡಬ್ಬಾ ಹೋಟೇಲ್ ಎದುರುಗಡೆ ಬಸ್ ನಿಲ್ಲಿಸಿ, ’ಕಾಫಿ ತಿಂಡಿಗೆ ಹತ್ನಿಮಿಷ ಟೈಮಿದೆ’ ಎಂದು ಇಳಿದು ಬಿಡುತ್ತಾನೆ. ಯಾಕೆಂದರೆ ಅವನಿಗೆ ಮತ್ತು ಕಂಡಕ್ಟರ್ ಗೆ ಅಲ್ಲಿ ಪುಕ್ಕಟೆಯಾಗಿ ಎಲ್ಲವೂ ಸಿಗುತ್ತದೆ. ನಮ್ಮಂತವರು ಅಲ್ಲೆಲ್ಲಿ ಮರೆಯಿದೆ ಎಂದುಕೊಂಡು ಗಿಡ, ಮರ, ಪೊದೆಗಳನ್ನು ಹುಡುಕುತ್ತೇವೆ. ಇಂತಹದೇ ಒಂದು ಸಂದರ್ಭದಲ್ಲಿ ನಮ್ಮ ಹಿರಿಯ ನಟಿ ಪಂಡರಿಬಾಯಿಯವರು ರಸ್ತೆ ದಾಟುವಾಗ ಆದ ಅಪಘಾತದಲ್ಲಿ ತಮ್ಮ ಒಂದು ಕೈ ಕಳೆದುಕೊಂಡಿದ್ದರು.
ಕಳೆದ ವಾರ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದನ್ನು ಪಿಟಿಐ ವರಧಿ ಮಾಡಿತ್ತು. ಅಲ್ಲಿನ ಜೇತುದಾನ ಗ್ರಾಮಕ್ಕೆ ಬುಡಕಟ್ಟು ಜನಾಂಗಕ್ಕೆ ಸೇರಿದ ಅನಿತಾ ಎಂಬ ಮಹಿಳೆ ಮದುವೆಯಾಗಿ ಬಂದಿದ್ದಳು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಅವಳು ಎರಡನೇ ದಿವಸಕ್ಕೇ ತವರು ಮನೆಗೆ ಹಿಂದಿರುಗಿದ್ದಳು. ಈ ಘಟನೆಯಿಂದ ಪ್ರಭಾವಿತವಾದ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಶೌಚಾಲಯ ನಿರ್ಮಾಣಕ್ಕೆ ಜೇತು ಗ್ರಾಮವನ್ನು ದತ್ತು ತೆಗೆದುಕೊಂಡಿತ್ತಲ್ಲದೆ, ಇತರ ಮಹಿಳೆಯರನ್ನು ಪ್ರೇರಿಸಬಲ್ಲ ಆಕೆಯ ದೃಢ ನಿರ್ಧಾರವನ್ನು ಪ್ರಶಂಸಿಸಿ ಆಕೆಗೆ ಐದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿತ್ತು. ಸರಕಾರವೂ ಅವಳ ಧೈರ್ಯಕ್ಕೆ ಮೆಚ್ಚಿಗೆ ಸೂಚಿಸಿತು. ಹಳ್ಳಿಗಳಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಅನಿತಾಳನ್ನು ಪ್ರಚಾರ ರಾಯಭಾರಿಯಾಗಿ ಬೆತುಲ್ ಜಿಲ್ಲಾಧಿಕಾರಿ ನೇಮಿಸಿದರು. ಇದು ಒಂದು ಘಟನೆಗೆ ಸರಕಾರ ಸಮಾಜಮುಖಿ ನಿರ್ಧಾರ ತೆಗೆದುಕೊಂಡ ರೀತಿ.
. ನಮ್ಮ ಸರಕಾರವೂ ಸಾರ್ವಜನಿಕ ಸ್ಥಳಗಳ ನೈರ್ಮಲ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲವೇ? ಮುಖ್ಯವಾಗಿ ಜನರ ಮನಸ್ಥಿತಿ ಬದಲಾಗಬೇಕು. ಇಲ್ಲವಾದರೆ ನಮ್ಮ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಸದಸ್ಯ ನಿಂಗಪ್ಪ ಬಡಿಗೇರನಂತೆ ಮೈಕೈಗೆ ಚಚ್ಚಿಸಿಕೊಂಡು ಆಸ್ಪತ್ರೆ ಸೇರುವ ಸಂದರ್ಭ ಬರಬಹುದು.!
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]