Friday, March 18, 2011

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ

[ಬಾಗಲಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಹಳ್ಳಿಯಲ್ಲಿ ೬ ವರ್ಷದ ಬಾಲಕನನ್ನು ಪ್ಯ್ಯಾಟೆ ಹುಡುಗಿಯರು ಚಡ್ಡಿ ಬಿಚ್ಚಿ ಅಹ್ಲೀಲವಾಗಿ ಲೇವಡಿ ಮಾಡಿದ್ದು ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ .ಸುವರ್ಣ ಚಾನಲ್ ಗಾಗಿ ಚಿತ್ರಿಕರಿಸಲಾಗುತ್ತಿದ್ದ ಈ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮೇಲಾಗುತ್ತಿರುವ ನಗರ ಸಂಸ್ಕೃತಿಯ ದಾಳಿ ಎಂದೇ ನಾನು ಪರಿಗಣಿಸುತ್ತೇನೆ.
ಕಳೆದ ವರ್ಷ ಸೆಪ್ಟಂಬರದಲ್ಲಿ ನಾನು ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬ್ಲಾಗಿಗೆ ಪೋಸ್ಟ್ ಮಾಡಿದ್ದೆ. ಅದು ಈಗಲೂ ಪ್ರಸ್ತುತವಾಗಬಹುದೆಂದು ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ]


ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.
ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

Sunday, March 13, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’




ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, "ಯಾನ್ ತುಳು ಆಣನೇ ಮದ್ಮೆ ಆಪಿನಿ" ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?

ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ....ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

Sunday, March 6, 2011

ಕಾಷ್ಠ ದೇವರಿಗೊಲಿದ ಕನ್ನೆಮನಸು



ಅಳು ಉಕ್ಕಿ ಬರುತ್ತಿತ್ತು
ಹೇಳಿಕೊಳ್ಳಲು ನೀನಾದರೂ ಇರುತ್ತಿದ್ದರೆ...?
ನೀನು ಕಿವಿಯಾಗುತ್ತಿದ್ದೆಯಾ? ಗೊತ್ತಿಲ್ಲ. ನನಗಾದರೋ ಹೇಳಲೇಬೇಕಾಗಿತ್ತು-

ಹದಿಹರೆಯವನ್ನು ಓದು ನುಂಗಿತು.
ಮದುವೆ ಮಬ್ಬಾಗಿಸಿತು ಯೌವನವನ್ನು
ಪ್ರೌಢತನದಲ್ಲಿ ಪ್ರೇಮಾನುಭೂತಿಯಾಯಿತು ; ಬದುಕು ತಲ್ಲಣಿಸಿತು
ಮೋಡಿಗಾರ ಅವನು, ಕಣ್ಣು ಕೀಳದಾದೆ
ಬದುಕಿನಾಚೆಗಿನ ಕನವರಿಕೆಗಳು;
ತಾಯಿಯಾದೆ, ಹಸ್ತ ಸಾಮುದ್ರಿಕಳಾದೆ, ತಲೆ ಮೊಟಕಿದೆ.
ಅಳುವ ಸಂಜೆಯಲಿ ಕಣ್ಣಿನಾರತಿಯ ಎತ್ತಿ ಬರಮಾಡಿಕೊಂಡೆ ಒಳಮನೆಗೆ
ಕನ್ನೆತನದಿಂದ ಎದೆಗೊರಗಿದೆ.
ಕರಸ್ಥಳದಲ್ಲಿ ಇಷ್ಟಲಿಂಗ; ಶುಕ್ರಸಂಗಮದ ಕನಸು
ಅರ್ಧದಲ್ಲಿ ಎದ್ದು ಹೊರಟ.ಶಿಖರದೆಡೆ ಕಣ್ಣು ನೆಟ್ಟಿತ್ತು.
ಮತ್ತೆ ಕನವರಿಕೆ; ಮಬ್ಬುಗತ್ತಲು
ಕಣ್ಣಿರ ಬಿಸಿಗೆ ಮೋಡ ಹೆಪ್ಪುಗಟ್ಟಿದೆ.
ಒಡಲ ತುಂಬಾ ಕನಸುಗಳ ಕಳ್ಳ ಬಸಿರು
ನಾ ಮಡಿಲಾದೆ; ನೀನು ಹೆಗಲಾಗಲಿಲ್ಲ
ಅವನು ಏಕಾಂಗವೀರ; ಇವಳು ಸಮರೋತ್ಸಾಹಿ.
ಬಸಿರನ್ನು ನೆತ್ತಿಯಲ್ಲಿ ಹೊತ್ತು ಅಷ್ಟ ಭುಜೆಯಾದಳು
ಅರೆದು, ಹುಡಿ ಹಾರಿಸಿ ಭೂಮಿಗೊರಗಿದಳು
ಬೇಡದ ಗರ್ಭಕ್ಕೆ ತಾಯಿಯಾಗುವ ಭಾಗ್ಯ!

ಎಲ್ಲಾ ವಿಪ್ಲವಗಳಾಚೆ ಹೊಸದೊಂದು ಕನಸು
ಬೆಳ್ಳಿರೇಖೆಯಂತೆ ಕುಣಿಕುಣಿದು ಇಳಿದು ಗರ್ಭದಾಳಕ್ಕೆ ಕನ್ನವಿಕ್ಕಿತು
ದ್ರಾವಿಡ ದೇವನವನು; ತಲೆಯಲಿ ಗಂಗೆ ಪಕ್ಕದಲಿ ಸತಿ
ಸುತ್ತೆಲ್ಲಾ ಗಂಧರ್ವ ಕನ್ಯೆಯರ ಲಾಸ್ಯ.
ಪದತಲದಲಿ ಕುಳಿತು ಬೊಗಸೆಯೊಡ್ಡಿ ಉಲಿದಳು
’ಕನ್ನೆಮನಸು ನನ್ನದು, ನಿನ್ನೊಳಗೆ ಐಕ್ಯಮಾಡಿಕೊ’
ಜೋಗಪ್ಪನವನು, ಕೈಗೆ ಕಪಾಲವನ್ನಿಟ್ಟು ಮಾಯವಾದ.

ಎದೆಗೆ ನಾಟಿದ ತ್ರಿಶೂಲ; ಕೈಯಲ್ಲಿ ಕಪಾಲ.
ಹಂಬಲದ ದೇವರಿಗೆ ಹೃದಯವಿಲ್ಲ!

[ ಕಾಲೇಜು ದಿನಗಳ ನಂತರ ಕವನ ಬರೆದಿರಲಿಲ್ಲ. ಮಹಿಳಾದಿನಕ್ಕೆಂದು ಬರೆಯಲು ಪ್ರಯತ್ನಿಸಿದೆ. ಇದು ಕವನವಾಗಿದೆಯೋ ಇಲ್ಲವೋ ನೀವು ಹೇಳಬೇಕು.]

Monday, February 28, 2011

ಹೇಮಳನ್ನು ’ದಡ್ಡಿ’ಯನ್ನಾಗಿ ಮಾಡಿದ್ದು ಯಾರು?




ಪತ್ರಿಕಾರಂಗ ಹೀಗಾಗಿ ಹೋಯ್ತಲ್ಲಾ... ಎಂದು ವ್ಯಥೆಪಡುತ್ತಿರುವ ಹೊತ್ತಿನಲ್ಲೇ ಮಾರ್ಚ್ ೩ರಂದು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಮಾಲಿನಿಯನ್ನು ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾಗಿರುವ ಧನಂಜಯಕುಮಾರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಹೈಕಮಾಂಡ್ ತನ್ನ ಅಬ್ಯರ್ಥಿ ಹೇಮಮಾಲಿನಿಯ ಹೆಸರನ್ನು ರಾಜ್ಯದ ಮೇಲೆ ಹೇರಿದೆ.

ಇದು ಬಿಜೆಪಿಯ ಆಂತರಿಕ ಭಿನ್ನಮತದ ಒಂದು ಝಳಕ್. ಅದು ನಮಗೆ ಬೇಕಾಗಿಲ್ಲ. ನಮ್ಮ ಮುಂದಿರುವ ಪ್ರಶ್ನೆ; ಆರು ಕೋಟಿ ಜನಸಂಖ್ಯೆಯಿರುವ ನಮ್ಮ ರಾಜ್ಯದಲ್ಲಿ ಒಬ್ಬ ಕನ್ನಡಿಗನಿಗೂ ಈ ಯೋಗ್ಯತೆಯಿರಲಿಲ್ಲವೇ?
ಕನ್ನಡನಾಡಿಗೆ ಇಷ್ಟೊಂದು ಬೌದ್ಧಿಕ ದಾರಿದ್ರ್ಯ ಅಡರಿದೆಯಾ? ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲೇ ಕನ್ನಡೇತರರೊಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ಕನ್ನಡ ನಾಡಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲವೇ? ಕನ್ನಡತನವೆಂಬುದು ಕೇವಲ ಉತ್ಸವಮೂರ್ತಿಯಾಗಿರಬೇಕೇ?

ವಿಧಾನಸಭೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಹೇಮಮಾಲಿನಿ, ”ನನಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಎಲ್ಲವನ್ನೂ ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಡುವೆ” ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ.
ಅಂದರೆ ಅದರ ಅರ್ಥ ಸ್ಪಷ್ಟ; ಒಂದು, ಆಕೆಗೇ ಈ ಆಯ್ಕೆ ಅನಿರೀಕ್ಷಿತವಾಗಿರಬೇಕು. ಧನಂಜಯಕುಮಾರ್ ಅವರನ್ನು, ಆ ಮೂಲಕ ಮುಖ್ಯಮಂತ್ರಿಗಳನ್ನು ಉಪೇಕ್ಷಿಸಲು ಹೇಮಮಾಲೀನಿಯವರನ್ನು ಬಿಜೆಪಿ ಹೈಕಮಾಂಡ್ ಇಲ್ಲಿ ದಾಳವಾಗಿ ಬಳಸಿಕೊಂಡಿದೆ. ಇನ್ನೊಂದು, ಆಕೆಗೆ ತಾನು ಪ್ರತಿನಿಧಿಸಲಿರುವ ಸ್ಥಾನಮಹತ್ವದ ಅರಿವಿಲ್ಲದಿರುವುದು ಅಥವಾ ಸ್ಥಾನ ಗೌರವದ ಅರಿವಿದ್ದೂ ಅದರ ಬಗ್ಗೆ ಉಡಾಫೆಯ ಭಾವ ಪ್ರದರ್ಶಿಸಿರುವುದು.
ಯಾಕೆಂದರೆ ಯಾವನೇ ಒಬ್ಬ ಮನುಷ್ಯ ತಾನು ಒಂದು ಕಾರ್ಯವನ್ನು ಕೈಗೊಳ್ಳುವ ಮುನ್ನ ಫೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಕಾರ್ಯದ ಗಂಭೀರತೆಯನ್ನು ಹೊಂದಿಕೊಂಡು ಪೂರ್ವಸಿದ್ದತೆಯ ತಯಾರಿ ಇರುತ್ತದೆ. ಅದರೆ ಹೇಮಮಾಲಿನಿಯ ಮಾತುಗಳಲ್ಲಿ ಯಾವುದೇ ಪೂರ್ವಸಿದ್ದತೆಯ ಸುಳಿವೂ ಇರಲಿಲ್ಲ. ಆಕೆಗೆ ಕರ್ನಾಟಕ ಎಂದರೆ ಶೋಲೆ ಸಿನೇಮಾದ ಶೂಟಿಂಗ್ ನೆನಪುಗಳು ಮಾತ್ರ.

ಹೇಮಮಾಲಿನಿಗೆ ವಿಶ್ವಪ್ರಸಿದ್ಧವಾದ ಶ್ರೀಗಂಧ ನೆನಪಿಗೆ ಬರುವುದಿಲ್ಲ. ಕೋಲಾರದ ಚಿನ್ನದ ಗಣಿ ನೆನಪಾಗುವುದಿಲ್ಲ. ಮೈಸೂರು ದಸರಾ ನೆನಪಾಗುವುದಿಲ್ಲ. ಇತಿಹಾಸ ಪ್ರಸಿದ್ಧವಾದ ಹಂಪಿ ನೆನಪಾಗುವುದಿಲ್ಲ. ನಮ್ಮ ನಾಡಿನ ಜೀವನದಿಗಳಾದ ಕೃಷ್ಣೆ-ಕಾವೇರಿಯರು ನೆನಪಾಗುವುದಿಲ್ಲ. ಶ್ರೀಮಂತ ಕಲೆಯಾದ ಯಕ್ಷಗಾನವೂ ನೆನಪಾಗುವುದಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಇದು ಗೊತ್ತಿರಲೇಬೇಕು. ಗೊತ್ತಿಲ್ಲವಾದರೆ ಅವರಿಗೆ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಖಂಡಿತಾ ಇಲ್ಲ. ಏಕೆಂದರೆ ಇವೆಲ್ಲಾ ಭಾರತದ ಮಟ್ಟಿಗೆ ಹೆಮ್ಮೆ ತರುವ ಏಕಮೇವಾದ್ವೀತಿಯಾಗಳೇ. ಒಬ್ಬ ನೃತ್ಯಗಾತಿ ಹೇಮಮಾಲಿನಿಗೆ, ಒಬ್ಬ ಸಿನೇಮಾ ನಟಿ ಹೇಮಮಾಲಿನಿಗೆ ಇವುಗಳ ಅರಿವಿಲ್ಲದಿದ್ದರೂ ನಡೆದೀತು. ಆದರೆ ಸಂಸತ್ತಿನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಲಿರುವ ಒಬ್ಬ ರಾಜಕಾರಣಿಗೆ ಇದೆಲ್ಲದರ ಅರಿವಿರಲೇಬೇಕು. ಯಾಕೆಂದರೆ ನಾಳೆ ಇವುಗಳ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಇವರು ಇವುಗಳೆಲ್ಲದರ ಪರವಾಗಿ ಧ್ವನಿ ಎತ್ತಬೇಕು. ಅದು ಹೇಮಮಾಲಿನಿಯೆಂಬ ಉತ್ತರ ಭಾರತೀಯ ನಟಿಯಿಂದ ಸಾಧ್ಯವೇ?

ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಅನ್ಯ ರಾಜ್ಯದವರಾದ ರಾಜೀವ ಚಂದ್ರಶೇಖರ್, ವೆಂಕಯ್ಯನಾಯ್ಡು, ಕನ್ನಡದವರಾಗಿದ್ದೂ ಕನ್ನಡ ಮಾತಾಡದ ವಿಜಯಮಲ್ಯ ಇವರೆಲ್ಲರ ಜೊತೆ ಈಗ ಹೇಮಮಾಲಿನಿ ಸೇರಿಬಿಡುತ್ತಾರೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಒಟ್ಟು ಹನ್ನೆರಡು ಸ್ಥಾನಗಳಲ್ಲಿ ನಾಲ್ಕು ಜನರಿಗೆ ಕನ್ನಡವೇಬಾರದು.
ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ೨೪೫. ಅದರಲ್ಲಿ ೨೩೩ ಸದಸ್ಯರನ್ನು ಅಯಾಯ ರಾಜ್ಯಗಳ ವಿಧಾನ ಸಭ ಸದಸ್ಯರು ಆರಿಸಿ ಕಳುಹಿಸುತ್ತಾರೆ. ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ಸೀಟು ನಿಗದಿಗೊಳಿಸಲಾಗುತ್ತದೆ. ಕರ್ನಾಟಕಕ್ಕೆ ನಿಗದಿಗೊಳಿಸಲಾದ ಸೀಟು ೧೨. ಉಳಿದ ೧೨ ಸದಸ್ಯರನ್ನು ಕಲೆ, ಸಾಹಿತ್ಯ, ವಿಜ್ನಾನ, ಸಮಾಜ ಸೇವೆಯಂತಹ ಮಾನವಿಕ ಕ್ಷೇತ್ರಗಳಿಂದ ರಾಷ್ಟ್ರಪತಿಗಳೇ ನೇರ ನೇಮಕಾತಿ ಮಾಡುತ್ತಾರೆ. ಹಾಗೆ ನೇಮಕಗೊಂಡವರೇ ನಮ್ಮ ನೆಚ್ಚಿನ, ಹೆಮ್ಮೆಯ ರಂಗ ನಟಿ ಬಿ. ಜಯಶ್ರೀ ಅವರು.
ಹೀಗೆ ಇವರು ನಮ್ಮವರೆಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ, ಕನ್ನಡ ಸಂಸ್ಕೃತಿ ತಿಳಿಯದ ಸಂಸದರಿಂದ ನಮಗೇನು ಪ್ರಯೋಜನವಿದೆ?

ಈ ಪ್ರಶ್ನೆ ನಮ್ಮ ನಾಡಿನ ಬುದ್ಧಿಜೀವಿಗಳಲ್ಲಿ, ವಿಚಾರವಂತರಲ್ಲಿ, ಕನ್ನಡದ ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರಲ್ಲಿ ಮೂಡಿದೆ. ಅವರ ಸ್ವಾಭಿಮಾನ ಕೆರಳಿದೆ. ಹಾಗಾಗಿ ನಾಡಿನ ಚಿಂತಕರಲ್ಲಿ ಒಬ್ಬರಾದ ಕೆ. ಮರುಳಸಿದ್ದಪ್ಪನವರನ್ನು ಹೇಮಮಾಲಿನಿಯ ವಿರುದ್ಧ ಕಣಕ್ಕಿಳಿಸಲಾಗಿದೆ. ’ಕನಸಿನ ಕನ್ಯೆ’ಯ ಅವಿರೋಧ ಆಯ್ಕೆಯ ಲೆಖ್ಖಾಚಾರ ಹಾಕಿದ್ದ ಬಿಜೆಪಿಗೆ ಸಣ್ಣದೊಂದು ತಡೆಗೋಡೆಯನ್ನು ಈ ನಾಡಿನ ಪ್ರಜ್ನಾವಂತರು ಸೃಷ್ಟಿಸಿದ್ದಾರೆ. ಪ್ರತಿಪಕ್ಷಗಳು ಅವರನ್ನು ಬೆಂಬಲಿಸಿವೆ.

’ಹೇಮಮಾಲಿನಿ ರಾಷ್ಟ್ರೀಯ ಆಸ್ತಿ. ಅವರನ್ನು ಯಾವುದೇ ರಾಜ್ಯಕ್ಕೆ ಸೀಮಿತಗೊಳಿಸಬಾರದು’ ಎಂದು ಬಿ.ಜೆ.ಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಆ ಮಾತು ನಿಜ. ಆದರೆ..ರಾಜ್ಯಸಭಾ ಸದಸ್ಯತನವೆಂಬುದು ಕೇವಲ ಅಲಂಕಾರಿಕಾ ಹುದ್ದೆ ಅಲ್ವಲ್ಲಾ..

ನನಗೊಂದು ಕುತೂಹಲವಿದೆ; ಜಗತ್ತಿಗೇ ನೀತಿಪಾಠವನ್ನು ಹೇಳುತ್ತಿರುವ, ಸೋನಿಯಾರ ರಾಷ್ಟ್ರೀಯತೆಯನ್ನು ಉಗ್ರವಾಗಿ ಪ್ರಶ್ನಿಸಿದ , ಮತಾಂತರವನ್ನು ಸದಾ ವಿರೋಧಿಸುತ್ತಿರುವ ಬಿಜೆಪಿ ಹೇಮಮಾಲಿನಿಯನ್ನು ಹೇಗೆ ತನ್ನ ಅಬ್ಯರ್ಥಿಯನ್ನಾಗಿ ಆಯ್ಕೆ ಮಾಡಿತು? ಆಕೆ ದರ್ಮೇಂದ್ರನನ್ನು ಮದುವೆಯಾಗುವ ಸಂದರ್ಭದಲ್ಲಿ ಅವರಿಬ್ಬರೂ ಮುಸ್ಲಿಂ ದರ್ಮಕ್ಕೆ ಮತಾಂತರಗೊಂಡಿದ್ದರು. ಯಾಕೆಂದರೆ ಹಿಂದು ಧರ್ಮದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನೊಂದು ಅಸಕ್ತಿಕರ ವಿಷಯ ಗೊತ್ತಾ? ಹೇಮಮಾಲಿನಿಯನ್ನು ಸಂಜೀವ್ ಕುಮಾರ್ ನಂತೆ ಹಲವಾರು ಜನರು ಉನ್ಮತ್ತರಂತೆ ಪ್ರೀತಿಸಿರಬಹುದು. ಆದರೆ ಈ ಕನಸಿನ ಕನ್ಯೆ ಯಾರಿಗೆ ಮನಸೋತಿದ್ದಳು ಗೊತ್ತೆ? ನಮ್ಮ ಕನ್ನಡದ ರಂಗಕರ್ಮಿ, ಜ್ನಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ. ಆದರೆ ಕಾರ್ನಾಡ್ ಆಕೆಯ ಪ್ರಪೋಸಲ್ ಅನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಅದಾಗಲೇ ಕಾರ್ನಾಡ್ ಅವರಿಗೆ ಡಾ.ಸರಸ್ವತಿಯವರೊಡನೆ ಮದುವೆ ನಿಶ್ಚಯವಾಗಿತ್ತು. ಮೊನ್ನೆ ತಾನೇ ಈ ಸಂಗತಿಯನ್ನು ಯಾವುದೋ ಪೇಪರಿನಲ್ಲಿ ಓದಿದ ನೆನಪು.

’ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸ್ವಾತಿಕ ಹಿನ್ನೆಲೆಯಿಂದ ಸ್ಪರ್ಧಿಸುತ್ತಿದ್ದೇನೆ. ಸೋಲು ಗೆಲುವಿನ ಬಗ್ಗೆ ನನಗೆ ಚಿಂತೆ ಇಲ್ಲ.’ ಎಂದಿದ್ದಾರೆ ರಂಗಭೂಮಿಯ ಹಿನ್ನೆಲೆಯುಳ್ಳ, ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು.

ನಿಜ. ತೋಳ್ಬಲ, ಹಣಬಲದ ರಾಜಕೀಯದ ಮುಂದೆ ಸ್ವಾತಿಕ ಹಿನ್ನೆಲೆಯ ಸಜ್ಜನನೊಬ್ಬ ಗೆಲ್ಲುವುದು ಕಷ್ಟ. ಪ್ರಗತಿಪರ ವಿಚಾರಧಾರೆಯ ಮರುಳಸಿದ್ದಪ್ಪನವರ ಬಂಧುವರ್ಗ ಕೂಡಾ ಶಕ್ತ ರಾಜಕಾರಣದ ಹೊರಗಿನ ವ್ಯಕ್ತಿಗಳೇ ಆಗಿದ್ದಾರೆ. ಅವರು ಸಮನ್ವಯ ಕವಿಯೆಂದೇ ಹೆಸರಾದ ರಾಷ್ಟ್ರಕವಿ ಶಿವರುದ್ರಪ್ಪನವರ ಅಳಿಯ. ಪತ್ನಿ ಜಯಂತಿ ಸುಪ್ರಸಿದ್ಧ ವಸ್ತ್ರವಿನ್ಯಾಸಕಿ. ಮಗ ಕೆ.ಎಂ.ಚೈತನ್ಯ ಸಿನೇಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕ.

ಹೇಮಮಾಲಿನಿ ಕೂಡಾ ಶ್ರೇಷ್ಠ ನಟಿ, ಅದಕ್ಕಿಂತಲೂ ಮಿಗಿಲಾಗಿ ಆಕೆಯೊಬ್ಬ ಅಪ್ರತಿಮ ನೃತ್ಯಗಾತಿ. ಆಕೆಗೆ ರಾಜ್ಯಸಭೆಯ ಸದಸ್ಯಳಾಗುವ ಎಲ್ಲಾ ಅರ್ಹತೆ ಇದೆ. ಈ ಹಿಂದೆಯೂ ಒಮ್ಮೆ ಆಕೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆಕೆ ಯಾವುದೇ ರಾಜ್ಯದ ಹೆಮ್ಮೆಯ ಆಯ್ಕೆಯೇ. ಆದರೆ...
ನಮ್ಮ ನಾಡು-ನುಡಿ, ನೆಲ-ಜಲಗಳ ಬಗ್ಗೆ ಪ್ರೀತಿ-ಕಾಳಜಿಗಳಿಲ್ಲದ ಸಂಸದರಿಂದ ನಮಗೇನು ಪ್ರಯೋಜನವಿದೆ?

ನಮ್ಮ ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ!
ನಿಜ, ನಾಡು, ನುಡಿ, ನೆಲ, ಜಲದ ಸಮಸ್ಯೆಗಳನ್ನು ನಾವು ಪರಸ್ಪರ ಸೌಹಾರ್ಧತೆಯಿಂದ ಮಾನವೀಯ ನೆಲೆಯಲ್ಲಿ ಪರಿಹರಿಸಿಕೊಳ್ಳಲು ಸಾಧ್ಯತೆಗಳಿವೆ.. ಆದರೆ ರಾಜಕಾರಣದೊಡನೆ ಸಂಲಗ್ನಗೊಂಡಿರುವ, ಮನುಕುಲವನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಮಸ್ಯೆಗಳ ವಿರುದ್ದ ಹೊರಾಡಲು ಶಕ್ತ ರಾಜಕಾರಣದ ನೆರವೇ ಬೇಕಾಗುತ್ತದೆ. ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪರಿಸರ ನಾಶ ಎಂಬುದು ಮುಂಬರುವ ದಿನಗಳಲ್ಲಿ ನಮ್ಮ ಸಹಜ ಜೀವನಕ್ರಮಕ್ಕೆ ಬಹು ದೊಡ್ಡ ಶಾಪವಾಗಿ ಪರಿಣಮಿಸಲಿದೆ. ಅಕ್ರಮ ಗಣಿಗಾರಿಕೆ, ಜಲ ಮಾಲಿನ್ಯ, ಗೊತ್ತು ಗುರಿಯಿಲ್ಲದ ಕೈಗಾರಿಕೀಕರಣ, ರೈತರ ನಿರಂತರ ಶೋಷಣೆ, ರಾಜ್ಯಕ್ಕೆ ರಕ್ಷಣ ಗೋಡೆಯಂತಿರುವ ಪಶ್ಚಿಮ ಘಟ್ಟ ಶ್ರೇಣಿಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ. ಇವುಗಳ ವಿರುದ್ಧ ಶಾಸನಸಭೆಗಳಲ್ಲಿ ಧ್ವನಿಯೆತ್ತುವ, ಹೋರಾಡುವ ವ್ಯಕ್ತಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅತೀ ತುರ್ತಾಗಿ ಬೇಕಾಗಿದೆ.

ನಮ್ಮದು ಪ್ರಜಾಪ್ರಭುತ್ವ ದೇಶ. ಸಂಖ್ಯಾಬಲವೇ ಶಾಸನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಾಸನಸಭೆಗಳಲ್ಲಿ ರಾಜಕೀಯ ದೃಷ್ಟಿಕೋನವಿರುವ ಸಾಂಸ್ಕೃತಿಕ ಪ್ರತಿನಿಧಿಗಳ ಪ್ರಾತಿನಿಧ್ಯವಿರಬೇಕಾಗುತ್ತದೆ. ಆ ದೃಷ್ಟಿಕೋನವಿರುವ ವ್ಯಕ್ತಿಯೊಬ್ಬರು ಕೆಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆಯನ್ನು ವಿರೋಧಿಸಿ ಹೇಳಿದ ಮಾತುಗಳು ನನಗಿನ್ನೂ ನೆನಪಿವೆ; "ಈ ರಾಜಕಾರಣಿಗಳು ಬೇವಿನಸೊಪ್ಪು ಕಟ್ಟಿಕೊಂಡು ವಿಧಾನಸೌಧದ ಮುಂದೆ ಕುಣಿದಾಡಿದರೂ ಒಂದು ಚಿಕ್ಕ ಕಲ್ಲನ್ನಾದ್ರೂ ಬೆಳೆಯಲು ಸಾಧ್ಯವೇ" ಎಂದೂ ಪ್ರಶ್ನಿಸಿದ್ದರು. ಇದನ್ನು ಒಬ್ಬ ವೃತ್ತಿಪರ ರಾಜಕಾರಣಿಯೇ ಹೇಳಿರಬಹುದು. ಆದರೆ ಇದರಲ್ಲಿ ಎಷ್ಟೊಂದು ಸತ್ಯ ಅಡಗಿದೆ ಅಲ್ಲವೇ?ಮನಸ್ಸು ಮಾಡಿದರೆ ಕೇವಲ ಐವತ್ತು ವರ್ಷಗಳಲ್ಲಿ ನಾವು ಈ ಭೂಮಿಯಲ್ಲಿ ಮತ್ತೆ ದಟ್ಟವಾದ ಅರಣ್ಯ ಬೆಳೆಸಬಹುದು. ಆದರೆ ನೀರಿನ ಸೆಲೆಯನ್ನು ತನ್ನ ಹೊಟ್ಟೆಯಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಕಲ್ಲು ಬಂಡೆಗಳನ್ನು ಬೆಳೆಯಲು ಸಾಧ್ಯವೇ? ಅಂದು ಗಾಳಿಯಲ್ಲಿ ಹಾರಿ ಹೋದ ಆ ಮಾತುಗಳನ್ನು ಯಾರಾದರು ಬೆಂಬಲಿಸುವ ವಾತಾವರಣವಿದ್ದಿದ್ದರೆ....?

ಸಮಾಜದ ಸಾಕ್ಷಿ ಪ್ರಜ್ನೆಯಂತೆ ಕೆಲಸ ಮಾಡಬೇಕಾದ ವ್ಯಕ್ತಿಗಳು ವಿಧಾನ ಸೌಧದಲ್ಲಿ ಹುಟ್ಟುವುದಿಲ್ಲ. ಅವರನ್ನು ನಾವು ಜನಸಾಮಾನ್ಯರ ಮಧ್ಯೆಯೇ ಹುಡುಕಬೇಕಾಗಿದೆ.ಕಳೆದ ಬಾರಿ ರಾಜೀವ ಚಂದ್ರಶೇಖರ್ ಎಂಬ ಉದ್ಯಮಿ ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರತಿಪಕ್ಷಗಳು ಸಾಹಿತಿ ಅನಂತಮೂರ್ತಿಯವರನ್ನು ಕಣಕ್ಕಿಳಿಸಿದ್ದವು.

ಈ ಬಾರಿ ಮರುಳಸಿದ್ದಪ್ಪನವರ ಸರದಿ. ಅವರಿಗೆ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್, ಚಂಪಾ, ಶೂದ್ರ ಶ್ರೀನಿವಾಸ ಸೇರಿದಂತೆ ಕನ್ನಡ ಸಾರಸ್ವತ ಲೋಕ ಬೆಂಬಲ ನೀಡಿದೆ. ಆದರೆ ಗೆಲ್ಲುವ ಸಾಧ್ಯತೆಯೇ ಇಲ್ಲದಾಗ ಮಾತ್ರ ಪಕ್ಷ ರಾಜಕಾರಣ ತಮ್ಮನ್ನು ಬೆಂಬಲಿಸುತ್ತದೆ ಎಂದು ಸಾಹಿತಿಗಳು ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಶಾಸಕರು ಆತ್ಮಸಾಕ್ಷಿಯಿಂದ ಮತ ನೀಡಬೇಕೆಂದು ಅವರೆಲ್ಲ ಕೋರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಕಾರ್ನಾಡ್, ’ಹೇಮಾಗೆ ಜೀವನಾನುಭವ ಕಡಿಮೆ. ಜನಸ್ಪಂದನೆ ಗೊತ್ತಿಲ್ಲ. ಕಳೆದ ರಾಜ್ಯಸಭೆಯ ಆರು ವರ್ಷದ ಅವಧಿಯಲ್ಲಿ ಆಕೆ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಒಳ್ಳೆ ಹುಡ್ಗಿ.ಆದರೆ ದಡ್ಡಿ’ ಎಂದುಬಿಟ್ಟರು.

’ದಡ್ಡಿ’ ಎನ್ನುವ ಪದವನ್ನು ಯಾರೂ ವಾಚ್ಯಾರ್ಥದಲ್ಲಿ ತಗೊಳ್ಳಬೇಕಾಗಿಲ್ಲ. ಇಲ್ಲಿ ಅದು ಪ್ರೀತಿ, ಮಮತೆ ಮತ್ತು ಕಾಳಜಿಗಳಿಂದ ಕೂಡಿದ ಬೈಗಳ ಪದವಾಗಿದೆ. ಅದಕ್ಕೆ ಒಳ್ಳೆ ಹುಡ್ಗಿ ಎಂಬ ವಿಶೇಷಣ ಒತ್ತು ಕೊಡುತ್ತದೆ. ನಮ್ಮ ಅತೀ ಹತ್ತಿರದ ಪ್ರೀತಿಪಾತ್ರರ ಮೇಲೆ ಮಾತ್ರ ಈ ಪದವನ್ನು ಪ್ರಯೋಗಿಸುತ್ತೇವೆ. ಆಕೆ ನಮ್ಮೆಲ್ಲರಿಗೂ ಪ್ರೀತಿಪಾತ್ರಳೇ. ಆದರೆ ಆಕೆ ರಾಜಕಾರಣದಲ್ಲಿ ದಡ್ಡಿಯೇ. ಹಾಗಾಗಿಯೇ ಬಿಜೆಪಿ ಆಕೆಯ ತಾರಾವರ್ಚಸ್ಸನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ದಡ್ಡಿಯನ್ನಾಗಿ ಮಾಡಿದೆ.

ಪವಾಡಗಳೇನಾದರು ಸಂಭವಿಸದೆ ಇದ್ದಲ್ಲಿ ನಾಳೆ ಹೇಮಮಾಲಿನಿ ನಮ್ಮ ರಾಜ್ಯದ ಎಂಪಿಯಾಗುತ್ತಾಳೆ. ಚಿಂತಕರ ಮನೆಯೆಂದೇ ಹೆಸರಾದ ಮೆಲ್ಮನೆಯ ಸದಸ್ಯಳಾಗುತ್ತಾಳೆ. ಶಾಸನ ರಚನೆಯಲ್ಲಿ ತಾನೂ ಭಾಗಿಯಾಗುತ್ತಾಳೆ. ಆಕೆ ನಾಮಪತ್ರ ಸಲ್ಲಿಸಿದ ದಿನ ಪತ್ರಕರ್ತರೊಡನೆ ಮಾತಾಡುತ್ತಾ, "ರಾಜ್ಯ ಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚೆಗೆ ಬಂದಾಗ ನಾನೂ ಕೂಡಾ ಅದರ ಧ್ವನಿಯಾಗುತ್ತೇನೆ. ರಾಜ್ಯದಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ಗೊತ್ತಿಲ್ಲ.ತಿಳಿದುಕೊಂಡು ಆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸುತ್ತೇನೆ" ಎಂದು ಹೇಳಿದ್ದಾರೆ. ನುಡಿದಂತೆ ಆಕೆ ನಡೆದುಕೊಳ್ಳಲಿ ಎಂದು ಆಶಿಸೋಣ.

Monday, February 7, 2011

ಒಂದು ಪುಸ್ತಕವನ್ನು ಅರಸುತ್ತಾ.......


.


ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ ಪುಸ್ತಕವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಕೆಲ ಸಮಯದ ಹಿಂದೆ ಅಂಕಿತಾ, ಸ್ವಪ್ನ, ನವಕರ್ನಾಟಕ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ನವೆಂಬರಿನಲ್ಲಿ ಪ್ರತಿ ಬಾರಿ ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲೂ ಸಿಕ್ಕಿರಲಿಲ್ಲ.

ಪ್ರಸ್ತುತ ವರ್ಷ ರಹಮತ್ ತರಿಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆಯಲ್ಲ ಹಾಗಾಗಿ ಅವರ ಕೃತಿಗಳೆಲ್ಲಾ ಸಮ್ಮೆಳನದಲ್ಲಿ ದೊರಕಬಹುದೆಂಬ ನಿರೀಕ್ಷೆಯಿತ್ತು.

ಆದರೆ ಶುಕ್ರವಾರ ಟೀವಿ ಮುಂದೆ ಕುಳಿತೆ ನೋಡಿ, ಸಮ್ಮೆಳನಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಕನ್ನಡದ ನ್ಯೂಸ್ ಚಾನಲ್ ಗಳು ಪೈಪೋಟಿಗೆ ಬಿದ್ದವರಂತೆ ಸಮ್ಮೇಳನದ ಲೈವ್ ಕವರೇಜ್ ಗಳನ್ನು ನೀಡತೊಡಗಿದವು. ಹಿಂದೆ ಒಂದೆರಡು ಸಮ್ಮೇಳನದಲ್ಲಿ ಭಾಗವಹಿಸಿದ್ದ ನನಗೆ ಗೊತ್ತಿತ್ತು. ಸಮ್ಮೇಳನದ ಎಲ್ಲಾ ಸೂಕ್ಷ ವಿವರಗಳನ್ನು ನಮಗೆ ಕಾಣಲು ಸಾಧ್ಯವಿಲ್ಲವೆಂದು. ಆದರೆ ಕ್ಯಾಮರ ಕಣ್ಣುಗಳ ವ್ಯಾಪ್ತಿ ದೊಡ್ಡದು. ಅವು ಯಾವುದೇ ವ್ಯಾಖ್ಯಾನವಿಲ್ಲದೆ ಸಮಸ್ತ ವಿವರಗಳನ್ನು ಬಹು ಸುಲಭವಾಗಿ ವಿಕ್ಷಕರಿದ್ದೆಡೆಗೇ ತಲುಪಿಸಬಲ್ಲವು.
ಇದಲ್ಲದೆ ಸಮ್ಮೇಳನದ ವರದಿಗೆಂದೇ ’ಅವಧಿ’ ಯ ಸಹಯೋಗದಲ್ಲಿ ’ನುಡಿಮನ’ ಎಂಬ ಬ್ಲಾಗ್ ಹುಟ್ಟಿಕೊಂಡಿತ್ತು. ಅದು ಸಚಿತ್ರ ವರದಿಯೊಂದಿಗೆ ಸದಾ ಅಪ್ಡೇಟ್ ಆಗುತ್ತಲಿತ್ತು. ಜನಜಂಗುಳಿಯಿಂದ ಸದಾ ದೂರವಿರಲು ಇಷ್ಟಪಡುವ ನನಗಿದು ಸಾಕಾಗಿತ್ತು.

ಹಾಗೆ ಕುಳಿತವಳನ್ನು ಮತ್ತೆ ಎಬ್ಬಿಸಿ ಸಮ್ಮೇಳನಕ್ಕೆ ದೂಡಿದ್ದು ಇದೇ ಮಾದ್ಯಮಗಳೇ!. ಅದು ಹೇಗಂತೀರಾ? ಭಾನುವಾರ ಮಧ್ಯಾಹ್ನ ’ಸಮಯ’ ಸುದ್ದಿ ಚಾನಲ್ ’ಸಮ್ಮೇಳನದ ಕಾರ್ಯಕ್ರಮಗಳಲ್ಲಿ ನೂಕುನುಗ್ಗಲು’ ’ ಪುಸ್ತಕ ಮಳಿಗೆಗಳಲ್ಲಿ ಜನ ಸಾಗರ’ ಎಂದು ಬ್ರೇಕಿಂಗ್ ನ್ಯೂಸ್ ಪ್ರಸಾರಿಸತೊಡಗಿತ್ತು. ಅದೇ ಚಾನಲ್ ಸಾಹಿತ್ಯ ಸಮ್ಮೇಳನವನ್ನು ’ಸಾಹಿತ್ಯ ಸಂತೆ’ ಎಂದು ಕರೆದಿತ್ತು. ಹಾಗಾಗಿ ಸಂತೆಗೆ ಹೋಗೋಣ, ಸಂಬ್ರಮದಲ್ಲಿ ಭಾಗಿಯಾಗೋಣ ಎಂದುಕೊಂಡು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದುಬಿಟ್ಟೆ.

ಅಬ್ಬಾ! ಅಲ್ಲಿ ನಿಜಕ್ಕೂ ಸಂತೆ ಹಾಗೂ ಜಾತ್ರೆಯ ಸಂಬ್ರಮವಿತ್ತು. ಎಲ್ಲಾ ಜಿಲ್ಲೆಗಳಿಂದ ಬಂದ ಕನ್ನಡದ ಬಂಧುಗಳು ಬ್ಯಾಡ್ಜ್ ಧರಿಸಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದರು. ಬೀದಿ ಬದಿಯ ವ್ಯಾಪಾರಿಗಳು ಪುಸ್ತಕ ಮಳಿಗೆಗಳು ಮತ್ತು ಸಮ್ಮೇಳನದ ಮುಖ್ಯದ್ವಾರವಾದ ನಾಡಪ್ರಭು ಕೆಂಪೇಗೌಡ ದ್ವಾರದ ನಡುವಿನ ಸ್ವಲ್ಪ ಜಾಗದಲ್ಲೇ ವ್ಯಾಪಾರ ಶುರುವಿಟ್ಟುಕೊಂಡಿದ್ದರು.

ಸಭಾಂಗಣದಲ್ಲಿ ಖುರ್ಚಿ ಖಾಲಿಯಿರುವುದಿರಲಿ ಇಕ್ಕೆಲಗಳಲ್ಲಿ ನಿಂತು ನೋಡುವುದಕ್ಕೂ ಜಾಗವಿರಲಿಲ್ಲ. ಪರಿಚಿತ ಮುಖಗಳೇನಾದರೂ ಕಾಣಿಸುತ್ತದೆಯೇನೋ ಎಂದು ಅತ್ತಿತ್ತ ಕಣ್ಣಾಡಿಸುತ್ತಾ ಪುಸ್ತಕ ಮಳಿಗೆಯತ್ತ ಕಾಲು ಹಾಕಿದರೆ ಪ್ರವೇಶ ದ್ವಾರದಲ್ಲೇ ಒಳಗೆ ಹೆಜ್ಜೆ ಇಡಲಿಕ್ಕೂ ಆಗದಷ್ಟು ಜನಸಂದಣಿ, ಒಮ್ಮೆ ಹಿಂದಿರುಗೋಣವೆಂದುಕೊಂಡೆ. ಆದರೆ ನಾಳೆ ಭಾನುವಾರ ಇದಕ್ಕಿಂತಲೂ ಹೆಚ್ಚು ಜನದಟ್ಟಣೆ ಇರುತ್ತದೆ ಎಂದುಕೊಂಡು ಒಳನುಗ್ಗಿದೆ.

ನನಗೆ ಅಗತ್ಯವಾಗಿ ಬೇಕಾಗಿದ್ದ ರಹಮತ್ ತರಿಕೆರೆಯವರ ’ ಕರ್ನಾಟಕದಲ್ಲಿ ನಾಥಪಂಥ’ ಅವರದೇ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ದೊರೆಯಬಹುದೆಂದು ಹಂಪೆ ವಿಶ್ವ ವಿದ್ಯಾಲಯದ ಮಳಿಗೆಗೆ ಹೋದೆ. ಅಲ್ಲಿರಲಿಲ್ಲ. ಅನಂತರ ನವಕರ್ನಾಟಕಕ್ಕೆ ಹೋದೆ. ಅಂಕಿತಕ್ಕೆ ಹೋದೆ. ಅಲ್ಲಿಂದ ಸ್ವಪ್ನಕ್ಕೆ ಬೇಟಿಯಿತ್ತೆ. ಕೊನೆಗೆ ಅಭಿನವದಲ್ಲಿ ಸಿಗಬಹುದೆಂದು ಅಲ್ಲಿಗೂ ಪಾದ ಬೆಳೆಸಿದೆ. ಅಲ್ಲಿ ಅದರ ಮಾಲೀಕ ರವಿಕುಮಾರ್ ಹೇಳಿದರು; ಅದರ ಪ್ರತಿಗಳು ಮುಗಿದಿವೆ. ಬಹುಶಃ ಪುನರ್ ಮುದ್ರಣ ಮಾಡಬೇಕಾಗುತ್ತೆ.

ಅಲ್ಲಿಗೆ ನನ್ನ ನಾಥಪಂಥದ ಬಗೆಗಿನ ಪುಸ್ತಕದ ಹುಡುಕಾಟ ನಿಲ್ಲಿಸಿ ನನಗೆ ಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿದೆ. ಮಳಿಗೆಗಳಲ್ಲಿನ ಹುಡುಕಾಟ ನನಗೇನೂ ಬೇಸರ ತರಿಸಲಿಲ್ಲ. ಯಾಕೆಂದರೆ ಕೆಲವು ಮಳಿಗೆಗಳಲ್ಲಿ ಸ್ವತಃ ಲೇಖಕರೇ ಕುಳಿತು ಸಾಹಿತ್ಯಾಸಕ್ತರೊಡನೆ ಉಭಯ ಕುಶಲೋಪರಿ ನಡೆಸುವುದನ್ನು ಕಂಡೆ. ನಾಗತಿಹಳ್ಳಿ ’ಅಭಿವ್ಯಕ್ತಿ’ಮಳಿಗೆಯಲ್ಲಿ ಕುಳಿತು ಸಾಹಿತಾಸಕ್ತರಿಗೆ ಸಹಿ ಹಾಕಿ ಪುಸ್ತಕ ನೀಡುತ್ತಿದ್ದರು., ’ಎನ್ ಗುರು ಕಾಫಿ ಆಯ್ತಾ’ ಬ್ಲಾಗ್ ನಡೆಸುತ್ತಿರುವ ಬನವಾಸಿ ಬಳಗದ ಐಟಿ-ಬಿಟಿ ಹುಡುಗರು, ಛಂದ ಪ್ರಕಾಶನದ ವಸುಧೇಂದ್ರ, ಪತ್ರಿಕೆ ಪ್ರಕಾಶನದಲ್ಲಿ ಗೌರಿ ಲಂಕೇಶ್ ಅವರನ್ನೆಲ್ಲ ನೋಡಿಕೊಂಡು ಮುಂದೆ ಬರುತ್ತಿರುವಾಗ ಸಂಕ್ರಮಣ ಮಳಿಗೆಯಲ್ಲಿ ಚಂಪಾ ಕಂಡರು. ಎದುರಲ್ಲಿ ’ಕನ್ನಡ ಸಾಹಿತಿಗಳ ಮಾಹಿತಿ’ ಪುಸ್ತಕ ಇತ್ತು. ಅವರು ಮೊದಲು ತಂದ ಲೇಖಕರ ವಿಳಾಸ ಪುಸ್ತಕ ನನ್ನಲಿತ್ತು. ಅದನ್ನು ಎರವಲು ತೆಗೆದುಕೊಂಡು ಹೋದ ಯಾರೋ ಹಿಂದಿರುಗಿಸಿರಲಿಲ್ಲ. ಹಾಗಾಗಿ ಅದನ್ನು ಕೊಂಡುಕೊಳ್ಳೋಣವೆಂದು ’ಎಷ್ಟು ಸರ್ ಬೆಲೆ’ ಅಂದೆ. ೩೬೦ ಎಂದರು. ಇವ್ರು ಒಂಚೂರು ರಿಯಾಯಿತಿ ಕೊಡೊಲ್ಲ ಎಂದುಕೊಳ್ಳುತ್ತಲೇ ಪುಸ್ತಕ ಕೊಂಡೆ. ಜೋರಾಗಿ ಹೇಳಲಿಲ್ಲ. ಹೇಳಿದ್ದರೆ ಅವರ ಧಾರವಾಡದ ಗಂಡು ಭಾಷೆಯ ಚಾಟಿಯೇಟನ್ನು ಮಂತ್ರಮುಗ್ದಳಾಗಿ ನಾನು ಕೇಳಿಸ್ಕೋಬೇಕಾಗಿತ್ತು. ಆ ಭಾಷೆಯ ಬಗ್ಗೆ ನಂಗೆ ಒಂಥರಾ ಮೋಹ!

ಸಾಹಿತ್ಯ ಸಮ್ಮೇಳನಕ್ಕೆ ಐಟಿ ಬಿಟಿ ಕಡೆಯಿಂದ ಯಾವ ನೆರವು ಬರಲಿಲ್ಲ ಎಂಬುದರಿಂದ ವ್ಯಗ್ರಗೊಂಡ ಪರಿಷತ್ತಿನ ಅಧ್ಯಕ್ಷ ನಲ್ಲೂರಪ್ರಸಾದ್ ’ಸಮ್ಮೇಳನ ನಡೆಸಲು ನಾವು ಕಸ ಗುಡಿಸೋರ ಹತ್ರ ಕೈ ಚಾಚುತ್ತೇವೆಯೇ ಹೊರತು ಅವರತ್ರ ಕೈ ಚಾಚೋದಿಲ್ಲ. ಅವರು ನಮ್ಮಿಂದ ಬದುಕಬೇಕೆ ಹೊರತು ಅವರಿಂದ ನಾವಲ್ಲ.ಅವರ ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಗಳಿಂದ ಭತ್ತ, ಬದನೆ, ಬೂದುಗುಂಬಳಕಾಯಿ ಬೆಳೆಯಕ್ಕಾಗಲ್ಲ. ಕನ್ನಡಿಗರು ಅಭಿಮಾನಿಗಳು, ಅತ್ಯುಗ್ರರು ಎಂದು ಸಮಾರೋಪ ಸಮಾರಂಭದಲ್ಲಿ ಗುಡುಗಿದಾಗ ನನಗೆ ಮಳಿಗೆಯೊಂದರಲ್ಲಿ ಕನ್ನಡದ ಕವಿಗಳ, ಸಾಹಿತಿಗಳ ಮಾತುಗಳನ್ನು ಟೀಶರ್ಟ್ ಗಳಲ್ಲಿ ಮುದ್ರಿಸಿ ಅಭಿಮಾನದಿಂದ ಮಾರುತ್ತಿದ್ದ ಒಂದಷ್ಟು ಐಟಿ-ಬಿಟಿ ಹುಡುಗರ ಚಿತ್ರ ಕಣ್ಮುಂದೆ ಬಂತು.

ಕವಿಗೋಷ್ಟಿಯಲ್ಲಿ ಭಾಗವಹಿಸಲು ಸಚಿವರ, ಶಾಸಕರ ಶಿಪಾರಸ್ಸು ಪತ್ರ ತಂದವರಿಗೆ ಆದ್ಯತೆಯನ್ನು ನೀಡಲಾಗಿದೆ. ಅದನ್ನು ವಿರೋಧಿಸಿ ಪರ್ಯಾಯ ಕವಿಗೋಷ್ಟಿ ನಡೆಸುವುದಾಗಿ ಎಲ್.ಎನ್.ಮುಕುಂದರಾಜ್ ಘೋಷಿಸಿದ್ದಾರೆ ಎಂದು ಯಾರೋ ಹೇಳಿದ್ದರು. ಅದನ್ನು ಕೇಳೋಣವೆಂದು ಅವರನ್ನು ಹುಡುಕಿಕೊಂಡು ಮಳಿಗೆ ೩೩೨ಕ್ಕೆ ಹೋದೆ. ಆದರೆ ಅಲ್ಲಿ ಮುಕುಂದರಾಜು ಸಿಗಲಿಲ್ಲ. ಆದರೆ ಆ ಸ್ಟಾಲಿನಲ್ಲಿಯೇ ಕರಿಸ್ವಾಮಿಯವರ ’ಉಕ್ಕೆಕಾಯಿ’ ಬಿಡುಗಡೆಯಾದ ಮಾಹಿತಿ ದೊರೆಯಿತು.

ಈ ಸಮ್ಮೇಳನ ಹಲವಾರು ಕಾರಣಗಳಿಗಾಗಿ ನನಗೆ ಮುಖ್ಯವೆನಿಸಿತು.
ಸಮ್ಮೇಳನದ ಅಧ್ಯಕ್ಷರಾದ ಕನ್ನಡದ ಕಟ್ಟಾಳು, ನಿಘಂಟು ತಜ್ನ ವೆಂಕಟಸುಬ್ಬಯ್ಯನವರು ಉದ್ಘಾಟನಾ ಭಾಷಣದಲ್ಲಿ, ಮುಖ್ಯಮಂತ್ರಿಗಳನ್ನು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ, ಗೃಹಸಚಿವರೂ ಆದ ಅರ್. ಅಶೋಕ್ ಮತ್ತುಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡೇ ಸರಕಾರವನ್ನು ಹಿಗ್ಗಾಮುಗಾ ಝಾಡಿಸಿ ಪ್ರತಿಭಟನೆಯ ಮುನ್ನುಡಿಯನ್ನು ಬರೆದುಬಿಟ್ಟರು. ಹಿರಿಯ ಸಂಶೋದಕ ಚಿದಾನಂದಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದ ಗೌರವ ಡಾಕ್ಟರೇಟ್ ಅನ್ನು ಅವರು ಕೋಮುವಾದಿ ಎಂಬ ಕಾರಣವನ್ನು ನೀಡಿ ರಾಜ್ಯಪಾಲರು ತಡೆಹಿಡಿದದ್ದು ವೇಗವರ್ಧಕವಾಗಿ ಕೆಲಸ ಮಾಡಿತು. ಹಾಗಾಗಿ ಅದಕ್ಕೆ ಅನಂತಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ಶಿವರುದ್ರಪ್ಪ, ಚಂಪಾ, ಎಂ. ಎಂ. ಕಲ್ಬುರ್ಗಿ, ಕೆ.ಮರುಳಸಿದ್ದಪ್ಪ, ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ ಮುಂತಾದವರು ಅಧ್ಯಾಯಗಳನ್ನು ಸೇರಿಸುತ್ತಾ ಹೋದರು. ಅದಕ್ಕೆ ಬೆನ್ನುಡಿಯನ್ನು ಬರೆದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್; ಇದು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂದಪಟ್ಟಿದ್ದು. ಅದರಲ್ಲಿ ಕೈಹಾಕಲು ಅವರ್ಯಾರೋ ನಂಗೊತ್ತಿಲ್ಲ. ’ಆಜ್ನೆ ಮಾಡೋ ಐಗೋಳ್ ಎಲ್ಲಾ....’ಎಂದು ರತ್ನನ ಪದ ಉದಾಹರಿಸಿ ಕನ್ನಡದ ಸುದ್ದಿಗೆ ಬಂದ್ರೆ ಸಾಹಿತ್ಯ ಪರಿಷತ್ತು ಸುಮ್ಮನಿರೊಲ್ಲ. ಎಂದು ಎಚ್ಚರಿಕೆಯ ಸಂದೇಶವನ್ನು ಗವರ್ನರಿಗೆ ರವಾನಿಸಿಬಿಟ್ಟರು. ಸಮರ್ಥ ಮುನ್ನುಡಿ ಮತ್ತು ಬೆನ್ನುಡಿಗಳೊಂದಿಗೆ ಈ ಪುಸ್ತಕ ಸಾಹಿತ್ಯಾಭಿಮಾನಿಗಳ ಕೈಗೆ ಸಿಕ್ಕಿತು.
ಇದೆಲ್ಲದರ ಫಲಶ್ರುತಿಯಾಗಿ೭೭ನೇ ಸಾಹಿತ್ಯ ಸಮ್ಮೇಳನವು ರಾಜ್ಯಪಾಲರ ವಿರುದ್ದ ಖಂಡನಾ ನಿರ್ಣಯ ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು.

ಈ ಬರಹವನ್ನು ಪೋಸ್ಟ್ ಮಾಡುವ ಹೊತ್ತಿಗೆ ಘನತೆವೆತ್ತ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರಿಂದ ಚಿದಾನಂದ ಮೂರ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಒಪ್ಪಿಗೆಯ ಮುದ್ರೆ ದೊರಕಿದೆಯೆಂದು ಗೊತ್ತಾಗಿದೆ.
ಕಲೆ ಮತ್ತು ಸಂಸ್ಕೃತಿಯ ಮುಂದೆ ಪ್ರಭುತ್ವ ಕೂಡಾ ಒಮ್ಮೊಮ್ಮೆ ತಲೆಬಾಗುತ್ತದೆ

೯೮ ಹರೆಯದ ನವ ಯುವಕ ಜಿ. ವೆಂಕಟಸುಬ್ಬಯ್ಯನವರ ಸಮರ ಸ್ಫೂರ್ತಿಗೆ ನಿಜಕ್ಕೂ ಹ್ಯಾಟ್ಸಪ್. ಅವರು ಸದಾ ಕಾಲ ನಮಗೆಲ್ಲಾ ಸ್ಫೂರ್ತಿಯ ಚಿಲುಮೆಯಾಗಿರಲಿ ಎಂಬುದೇ ಎಲ್ಲಾ ಕನ್ನಡಿಗರ ಆಶಯ.


Saturday, February 5, 2011

ಪ್ರತ್ಯೇಕ ಕೃಷಿ ಬಜೆಟ್ ಬೇಕು



ನನಗೊಂದು ಕನಸಿದೆ; ಹಣಕಾಸು ಸಚಿವರು ಮತ್ತು ರೈಲ್ವೆ ಸಚಿವರ ಮಾದರಿಯಲ್ಲೇ ನಮ್ಮ ಕೃಷಿ ಸಚಿವರು ಕೂಡಾ ಕೈಯಲ್ಲಿ ಕೃಷಿ ಬಜೆಟಿನ ಬ್ರಿಫ್ ಕೇಸ್ ಹಿಡಿದು ಸಂಸತ್ ಮತ್ತು ವಿಧಾನ ಸೌಧದ ಮೆಟ್ಟಲುಗಳನ್ನು ಏರುವುದು. ಇದು ರೈತರ ಕನಸು ಕೂಡಾ ಹೌದು. ಯಾಕೆಂದರೆ ನಮ್ಮ ದೇಶದ ಮುಕ್ಕಾಲು ಪಾಲು ಜನರು ರೈತರು. ಈ ಕನಸನ್ನು ವಾಸ್ತವವಾಗಿಸಿಕೊಳ್ಳುವುದು ಅವರ ಹಕ್ಕು.

ಕೇಂದ್ರದಲ್ಲಿ ಸಧ್ಯಕ್ಕೆ ಈ ಕನಸು ನನಸಾಗಲಾರದು.ಆದರೆ ರಾಜ್ಯದಲ್ಲಿ ಇದು ನನಸಾಗುವ ಸಾಧ್ಯತೆಯಿದೆ. ಯಾಕೆಂದರೆ ನಮ್ಮ ಮುಖ್ಯಮಂತ್ರಿಗಳು ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆ ಮಾಡಿದರೆ ದೇಶದಲ್ಲೇ ಮೊತ್ತಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಯಡಿಯೂರಪ್ಪನವರು ಪಾತ್ರ್ರರಾಗಬಹುದು. ಆದರೆ ಅದು ಪೂರ್ಣ ಪ್ರಮಾಣದ ಬಜೆಟ್ ಆಗಿರುವ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ ಅದಕ್ಕೆ ಬೇಕಾದ ಪೂರ್ವಸಿದ್ದತೆಯನ್ನು ಅವರು ಇನ್ನೂಮಾಡಿಕೊಂಡ ಹಾಗಿಲ್ಲ.

ಸಂಕಷ್ಟಗಳ ಸರಮಾಲೆಗಳ ಕುಣಿಕೆಗಳು ರೈತರ ಕೊರಳನ್ನು ಬಿಗಿಯುತ್ತಲಿದೆ. ಪ್ರಕೃತಿ ವಿಕೋಪಗಳು, ವಿಶೇಷ ಅರ್ಥಿಕ ವಲಯದ ಹೆಸರಲ್ಲಿ ರೈತರ ಭೂಕಬಳಿಕೆ, ಆನೆ, ಜಿಂಕೆ, ಕೋತಿ ಮುಂತಾದ ಕಾಡು ಪ್ರಾಣಿಗಳ ದಾಂಧಲೆ, ಕೃಷಿ ಕಾರ್ಮಿಕರ ಕೊರತೆ-ಇವುಗಳೆಲ್ಲದರ ಜೊತೆ ಹೋರಾಡುತ್ತಲೇ ಸಾಲ ಸೋಲ ಮಾಡಿ ಏನನ್ನಾದರೂ ಬೆಳೆದರೂ ಅದಕ್ಕೆ ಯೋಗ್ಯ ಬೆಲೆ ಸಿಗದೆ ರೈತ ಕಂಗಾಲಾಗುತ್ತಿದ್ದಾನೆ; ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾನೆ.

gÉÊvÀgÀ DvÀäºÀvÉå ¸ÀªÀÄÆºÀ ¸À¤ßAiÀÄ gÀÆ¥À ¥ÀqÉAiÀÄÄvÀÛ°zÉ. »AzÉ®è ªÉÆzÀ® ¥ÀÅlzÀ°è ªÀgÀ¢AiÀiÁUÀÄwÛzÀÝ, ºÉqï ¯ÉÊ£ïì £À°è ¥Àæ¸ÁgÀªÁUÀÄwÛzÀÝ gÉÊvÀgÀ CvÀäºÀvÉåUÀ¼ÀÄ FUÀ M¼À¥ÀÅlUÀ¼ÀvÀÛ ¸ÀjAiÀÄÄvÀÛ°ªÉ. ªÀÄÄAzÉÆAzÀÄ ¢£À ¥ÉÃeï wæAiÀÄ®Æè §gÀ§ºÀÄzÀÄ.

CAzÀgÉ gÉÊvÀgÀ DvÀäºÀvÉå ¥ÀæAiÀÄvÀßUÀ¼ÀÄ ¸ÁªÀiÁ£Àå WÀl£ÉUÀ¼ÁUÀÄwÛªÉ. CzÀÄ d£ÀvÉAiÀİè AiÀiÁªÀ vÀ®ètªÀ£ÀÆß GAlÄ ªÀiÁqÀÄwÛ®è. CªÀgÀÄ ¸ÀAªÉÃzÀ£Á±ÀÆ£ÀågÁUÀÄwÛzÁÝgÉ..

EAvÀºÀzÉÆÝAzÀÄ ¸ÀA¢UÀÞ¹ÜwAiÀįÉèà £ÀªÀÄUÉ CjªÁUÀĪÀÅzÀÄ: PÀȶPÉëÃvÀæzÀ ¸ÀªÀĸÉåUÀ¼À D¼À-CjªÀÅ ºÉÆA¢gÀĪÀ ªÀåQÛAiÉÄà PÀȶ ªÀÄAwæAiÀiÁVgÀ¨ÉÃPÉAzÀÄ. DzÀgÉ £ÀªÀÄä zÉñÀzÀ EwºÁ¸ÀzÀ¯Éèà ±ÀgÀzï ¥ÀªÁgï M§âgÀ£ÀÄß ©lÖgÉ PÀȶ SÁvÉ vÀ£ÀUÉà ¨ÉÃPÉAzÀÄ PÉý ¥ÀqÉzÀÄPÉÆAqÀ ಇನ್ನೊಂದು GzÁºÀgÀuÉ E®è. AiÀiÁPÉAzÀgÉ CzÀgÀ°è AiÀiÁªÀÅzÉà ¥Á¬ÄzÉ E®è.

gÉÊvÀgÀ ¸ÀªÀĸÉåUÀ¼À£Éßà NlÄ ¨ÁåAPï UÀ¼À£ÁßV¹PÉÆAqÀÄ C¢üPÁgÀzÀ UÀzÀÄÝUÉ »rAiÀÄĪÀ ªÀÄtÂÚ£À ªÀÄPÀ̽UÉ PÀAzÁAiÀÄ, UÀtÂ, PÉÊಗಾjPÉ, ¯ÉÆÃPÉÆÃ¥ÀAiÉÆÃV,, ¨ÉAUÀ¼ÀÆgÀÄ £ÀUÀgÁ©üªÀ¢Þ SÁvÉUÀ¼Éà ¨ÉÃPÀÄ. d£À¸ÉêÉUÉ EzÀĪÉà ªÉÆÃPÀë¥ÀxÀ!

£ÀªÀÄUÉ UÉÆwÛzÉ, ªÀÄÄPÀÛ CyðPÀ ¤Ãw¬ÄAzÁV £ÀªÀÄä gÉÊvÀ C©üªÀæ¢Þ²® zÉñÀUÀ¼À gÉÊvÀgÉÆqÀ£É £ÉÃgÀ ¸ÀàzÉðAiÀÄ£ÀÄß JzÀÄj¸À¨ÉÃPÁVzÉ. CAzÀgÉ ªÀiÁgÀÄPÀmÉÖAiÀİè C¸ÉÖðAiÀÄzÀ ¸ÉçÄ, CªÉÄÃjPÀzÀ UÉÆÃ¢, aãÁzÀ gÉñÉä EvÁå¢UÀ¼À eÉÆvÉ £ÀªÀÄä gÉÊvÀ ¥ÉÊ¥ÉÇÃn JzÀÄj¸À¨ÉÃPÁVzÉ. C°è PÀȶUÉ PÉÊUÁjPÉAiÀÄ ¸ÁÜ£ÀªÀiÁ£À ¹QÌ zÉÆqÀØ ¥ÀæªÀiÁtzÀ°è GvÁàzÀ£ÉAiÀiÁUÀÄwÛgÀĪÀÅzÀjAzÀ GvÁàzÀ£À ªÉZÀÑ PÀrªÉÄAiÀiÁUÀÄvÀÛzÉ.ºÁUÁV «zÉò GvÀà£ÀßUÀ¼ÀÄ £ÀªÀÄä ªÀiÁgÀÄPÀmÉÖAiÀİè PÀrªÉÄ ¨É¯ÉUÉ ¹UÀÄvÀÛªÉ. d£À CzÀPÉÌ ªÀÄÄV©Ã¼ÀÄvÁÛgÉ. ಇಂತಹ ಸ್ಥಿತಿಯಲ್ಲಿ £ÀªÀÄä gÉÊvÀ K£ÀÄ ªÀiÁqÀ¨ÉÃPÀÄ?

E°è ¸ÀgÀPÁgÀ 'vÁ¬Ä'AiÀÄ ºÁUÉ ªÀwð¸À¨ÉÃPÀÄ. zÀħð®jUÉ «±ÉñÀ PÁ¼Àf CUÀvÀå. ಆದರೆ ಪರಿಹಾರ ಧನವನ್ನು ಬಿಸಾಕಿ ಇಲ್ಲವೆ ಸೀರೆ ಹಂಚಿಕೆಯಂತ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ನಮ್ಮ ರೈತರನ್ನು ಯಾಚಕರನ್ನಾಗಿ ಮಾಡುತ್ತಿದೆ ಸರಕಾರ. ಹಾಗೆ ಮಾಡಬಾರದು. ಅವರು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬದುಕಲು ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಬೇಕು.

«±Àé¨ÁåAPï ¸ÀàµÀÖªÁV ºÉýzÉ: gÉÊvÀjUÉ AiÀiÁªÀÅzÉà vÉgÀ£ÁzÀ ¸À©ìr ¤qÀ¨ÁgÀzÀÄ. EzÀÄ ¸ÀgÀPÁgÀPÀÆÌ UÉÆwÛzÉ. ºÁUÀVAiÉÄà ರೈತರ ಸಾಲ, ಸಬ್ಸಿಡಿ, ರಸಗೊಬ್ಬರ, ಕೀಟನಾಶಕ, ವಿದ್ಯುತ್ ಸರಬರಾಜು,ನೀರಾವರಿಗೆ ಸಂಬಂದಿಸಿದಂತೆ M¨ÉÆâ§â ¸ÀaªÀgÀÄ ©£Àß ©ü£Àß ºÉýPÉ ¤qÀÄwÛzÁÝgÉ. ¥ÀæuÁ½PÉAiÀÄ°è ºÉýzÉÝ®èªÀ£ÀÆß eÁjAiÀİè vÀgÀĪÀÅzÀÄ PÀµÀÖªÉAzÀÄ CªÀjUÀÆ UÉÆwÛzÉ.

£ÀªÀÄäzÀÄ PÀȶ¥ÀæzsÁ£À zÉñÀ. E°èAiÀÄ ±ÉÃ. 70gÀµÀÄÖ d£À PÀȶPÀgÀÄ. ºÁUÁV PÀæ¶PÉëÃvÀæªÀ£ÀÄß UÀA©ÃgÀªÁV ¥ÀjUÀt¸À¨ÉÃPÁVzÉ. F zÉñÀPÉÆÌAzÀÄ §eÉmï EzÉ.¸ÀA¥ÀPÁðPÁæAwAiÀÄ ºÉ¸Àj£À°è ©ænñÀgÀ PÀÄgÀĺÁV G½zÀÄPÉÆArgÀĪÀ ¥ÀævÉåÃPÀ gÉʯÉé §eÉmï EzÉ. DzÀgÉ §ºÀĸÀASÁåvÀ d£ÀgÀ£ÀÄß ¥Àæw¤¢ü¸ÀĪÀ PÀȶ PÉëÃvÀæPÉÌ ¥ÀævÉåÃPÀ §eÉmï ®è. CzÀÄ EA¢£À CªÀಶ್ಯPÀvÉAiÀiÁVzÉ. ºÀtPÁ¸ÀÄ ¸ÀaªÀgÀÄ, gÉʯÉé ¸ÀaªÀgÀÄ ©æÃ¥sï PÉÃ¸ï »rzÀÄ ¸ÀA±Àvï ¥ÀæªÉò¹ §eÉmï ªÀÄAr¸ÀĪÀÅzÀ£Éßà d£À PÁvÀgÀ¢AzÀ PÁAiÀÄÄvÁÛgÉ. D AiÉÆÃUÀåvÉ PÀȶ ¸ÀaªÀjUÉ §gÀ¨ÉÃPÁVzÉ.

¥ÀævÉåÃPÀ PÀȶ §eÉmï ªÀÄAqÀ£É¬ÄAzÀ K£ÁUÀÄvÀÛzÉ?

'¤ªÉÆäqÀ£É £Á«zÉÝêÉ. DvÀ䫱Áé¸À PÀ¼ÉzÀÄPÉÆ¼Àî¨ÉÃr' JA§ ¸ÀàµÀÖ ¸ÀAzÉñÀªÀ£ÀÄß ¸ÀgÀPÁgÀ gÀªÁ¤¹zÀAvÁUÀÄvÀÛzÉ. ªÀÄÄRåªÁV D SÁvÉUÉÆAzÀÄ UËgÀªÀ §gÀÄvÀÛzÉ.CzÀgÀ vÀÆPÀ ºÉZÀÄÑvÀÛzÉ. vÀªÀÄä£ÀÄß UÀA©üÃgÀªÁV ¥ÀjUÀt¹zÁÝgÉ,DqÀ½vÀ AiÀÄAvÀæzÀ°è vÁªÀÇ PÀÆqÀ ¥Á®ÄzÁgÀgÀÄ JAzÀÄ PÀȶPÀ ºÉªÉÄä ¥ÀqÀÄvÀÛ£É.CªÀ£À DvÀ䫱Áé¸À ºÉZÀÄÑvÀÛzÉ.

PÀȶ §eÉmï EA¢£À vÀÄvÀÄð CªÀಶ್ಯPÀvÉ. zÉÆqÀØ ¸ÀªÀÄĺÀzÀ zÉÆqÀØ dªÁ¨ÁÝj PÀȶ ¸ÀaªÀgÀ ºÉUÀ® ªÉÄðzÉ. CªÀgÀÄ C¤ªÁðAiÀĪÁV §Ä¢Þ ªÀÄvÀÄÛ ºÀæzÀAiÀÄzÀ ªÀÄzsÉå ¸ÀªÀÄ£ÀéAiÀÄ ¸Á¢ü¸À¯ÉèÉÃPÁUÀÄvÀÛzÉ. ¥ÀjtÂvÀgÀ eÉÆvÉ ZÀZÉð,¸ÀAªÁzÀ,CzsÀåAiÀÄ£À £ÀqɸÀ¯Éà ¨ÉÃಕಾಗುತ್ತದೆ. ಬುದ್ದಿಪೂರ್ವಕವಾಗಿ ಯೋಜನೆಗಳನ್ನು ರೂಪಿಸಿ ಹೃದಯವಂತಿಕೆಯಿಂದ ಅದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು.

PÀȶ §eÉmï JgÀqÀÄ ºÀAvÀUÀ¼À°è eÉÆvÉ eÉÆvÉAiÀiÁV eÁjUÉ §gÀ¨ÉÃPÀÄ

ªÉÆzÀ®£ÉAiÀÄzÁV gÉÊvÀgÀ£ÀÄß JdÄåPÉÃmï ªÀiÁqÀĪÀÅzÀÄ.CAzÀgÉ CªÀgÀ£ÀÄß ªÀæwÛ¥ÀgÀ §Äå¹£É¸ï ªÉÄ£ï DV ¥ÀjªÀwð¸ÀĪÀÅzÀÄ. ಅವರು ಬೆಳೆದ ಬೆಳೆಯನ್ನು ಮಾರ್ಕೇಟ್ ಮಾಡುವುದನ್ನು ಅವರಿಗೆ ಕಲಿಸಿಕೊಡಬೇಕು. ಇಲ್ಲಿ ಸರಕಾರದ ಕೃಷಿ ನೀತಿ ಏನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಸರಕಾರಕ್ಕಿರಬೇಕು; ರೈತನಿಗೂ ಅದರ ಅರಿವಿರಬೇಕು.

¥ÀgÀA¥ÀgÁUÀvÀªÁV ರೈvÀ£À£ÀÄß C£ÀßzÁvÀ,£ÉÃV®AiÉÆÃV, zÉñÀzÀ ¨É£Éß®Ä§Ä JAzÉ®è PÀgÉAiÀįÁUÀÄwÛvÀÄÛ.DUÀ CzÀÄ DvÀ£À vÁåUÀ,¸ÉêÉ, ¸ÀºÀ£ÉUÉ ¸ÀAzÀ ªÀÄ£ÀßuÉAiÀiÁVvÀÄÛ. DzÀgÉ FUÀ CzÀgÀ°è ªÀåAUÀå zsÀ餸ÀÄvÀÛzÉ. »A¢¤AzÀ®Æ £ÀªÀÄä gÉÊvÀ ¸ÁéªÀ®A©.DvÀ ©Ãd, UÉÆ§âgÀ, QÃl£Á±ÀPÀOµÀ¢ü, ¤ÃgÀÄ, zÀÄqÀÄØ AiÀiÁªÀÅzÀPÀÆÌ AiÀiÁgÀ£ÀÆß CªÀ®A©¹zÀªÀ£À®è ¥Àæw gÉÊvÀ M§â PÀȶ «eÁߤAiÉÄÃ. DvÀ¤UÉ vÀ£Àß d«Ä£Éà ¥ÀæAiÉÆÃUÀ±Á¯É. ºÁUÁV CPÀÌ ¥ÀPÀÌzÀ ªÀÄ£ÉUÀ¼À®Æè ©ü£Àß ©ü£ÀߪÁzÀ PÀȶ ¥ÀzÀÝw¬ÄvÀÄÛ.

gÉÊvÀ ¥ÀæAiÉÆÃUÀUÀ½UÉ ªÀÄÄPÀÛªÀÄ£À¸ÀÄì¼ÀîªÀ£ÁVzÀÝ£É JA§ÄzÀPÉÌ ¥Á¼ÉÃPÀgï ªÀiÁzÀj PÀȶ «zsÁ£ÀPÉÌ d£À ªÀÄÄV©Ã¼ÀÄwÛgÀĪÀÅzÉà ¸ÁQëAiÀiÁVzÉ. JgÀqÀÄ £ÁnzÀ£À«zÀÝರೂ ¸ÁPÀÄ, ಜೀವಾಮೃತ ತಯಾರಿಸಿ ರಾಸಾಯನಿಕಗಳನ್ನು ಶಾಶ್ವತವಾಗಿ ದೂರವಿಡಬಹುದು. PÀȶ vÁådåªÀ£Éßà §¼À¹ CvÀÄåvÀÛªÀÄ ¥sÀ¸À®Ä vÉUÉAiÀħºÀÄzÀÄ.EAvÀºÀ ¸ÁªÀAiÀĪÀ PÀȶ GvÀà£ÀßUÀ¼À£ÀÄß PÉÆ¼ÀÄîªÀAvÉ 'UÁæºÀPÀ eÁUÀæw' DAzÉÆÃ®£ÀªÀ£ÀÄß ºÀ«ÄäPÉÆ¼Àî¨ÉÃPÀÄ. gÁ¸ÁAiÀĤPÀ UÉÆ§âgÀ, QÃl£Á±ÀPÀUÀ¼À£ÀÄß §¼À¹ ¨É¼ÉzÀ GvÀà£ÀßUÀ½UÀÆ ಸಾವಯವ ಉತ್ಪನ್ನಗಳಿಗೂ EgÀĪÀ ªÀåvÁå¸ÀªÀ£ÀÄß d£ÀjUÉ w½¹PÉÆqÀ¨ÉÃPÀÄ. PÁVð¯ï,PÉAlQ,j¯ÉAiÀÄ£ïì eÉÆvÉUÉ ¸ÀàzÉð ¤ÃqÀĪÀAvÉ £ÀªÀÄä gÉÊvÀgÀ£ÀÄß vÀAiÀiÁgÀÄ ªÀiÁqÀ¨ÉÃPÀÄ. DgÉÆÃUÀå PÁ¼Àf J£ÀÄߪÀÅzÀÄ £ÀUÀgÀ¸ÀA¸ÀÌçwAiÀÄ EwÛÃZÉV£À VüÀÄ. ºÁUÁV ¸ÁªÀAiÀĪÀ GvÀà£ÀUÀ½UÉ ¨sÀ«µÀå EzÉÝÃEzÉ.

JgÀqÀ£ÉAiÀÄzÁV ªÀiÁgÀÄPÀmÉÖ «¨sÁUÀ. ªÉÆvÀ󻃮zÀ®£ÉAiÀÄzÁV zÀ¯Áè½UÀ¼À£ÀÄß,ªÀÄzsÀåªÀwðUÀ¼À£ÀÄß zÀÆgÀ«qÀ¨ÉÃPÀÄ J.¦.JªÀiï.¹AiÀįÁèzÀ ªÉÊ¥À®åUÀ¼ÀÄ E°è ªÀÄgÀÄPÀ½¸À¨ÁgÀzÀÄ. ¸ÀgÀPÁgÀªÉà ªÀÄzsÉå ¥ÀæªÉò¹ GvÀà£ÀßUÀ¼À£ÀÄß Rjâ ªÀiÁqÀ¨ÉÃPÀÄ. CzÀPÁÌV §ºÀ¼À ªÀåªÀ¹ÜvÀªÁzÀ ªÀiÁgÀÄPÀmÉÖ eÁ®ªÀ£ÀÄß £ÉÃAiÀĨÉÃPÁUÀÄvÀÛzÉ. CzÀÄ §ºÀ¼À zÉÆqÀتÀÄlÖzÀ GzÉÆåÃUÀ¸Àæ¶ÖUÀÆPÁgÀtªÁUÀÄvÀÛzÉ. PÀȶ ¥ÀzsÀ«zÀgÀgÀ£ÀÄß EzÀgÀ°è vÉÆqÀV¹PÉÆ¼ÀÀÄzÀÄ. gÉÊvÀgÀ §UÉÎ ¤dªÁzÀ PÁ¼Àf EgÀĪÀ aAvÀPÀgÀÄ, ¸ÀªÀiÁd ¸ÉêÀPÀgÀÄ,gÉÊvÀªÀÄÄRAqÀgÀ zÉÆqÀØ ¥ÀqÉAiÉÄà EzÉ. CªÀgÀ£ÀÄß EzÀgÀ UËgÀªÀ PÀuÁΪÀ®Ä ¥ÀqÉAiÀÄ£ÁßV £ÉëĹPÉÆ¼ÀÀÄzÀÄ. EzÀgÀ eÉÆvÉUÉ ªÀiË®åªÀzsÀðPÀ GvÀà£ÀßUÀ¼À vÀAiÀiÁjPÉAiÀİè [£ÀA¢¤ GvÀà£ÀßUÀ¼ÀAvÉ] ¸ÀgÀPÁgÀªÉà £ÉÃgÀªÁV ¨sÁVAiÀiÁUÀ¨ÉÃPÀÄ. mÉÆªÉÄÃlªÀ£ÀÄß gÀ¸ÉÛUÉ ¸ÀÄjAiÀÄĪÀÅzÀgÀ §zÀ®Ä PÉZÀ¥ï vÀAiÀiÁjPÁ WÀlPÀUÀ¼À£ÀÄß ¸Áܦ¸À°. PÉÆ¯ïØ ¸ÉÆÖgÉÃeï UÀ¼À£ÀÄß ºÉaѸÀ°.

EzÀgÀ eÉÆvÉUÉ gÉÊvÀjUÉ PÉ®ªÀÅ ¸ÉêÉUÀ¼À£ÀÄß ¸ÀgÀPÁgÀ MzÀV¸À¨ÉÃPÀÄ. gÁdPÁgÀtÂUÀ½UÉ «zsÁ£À¸ËzsÀ EzÉ,±Á¸ÀPÀgÀ ¨sÀªÀ£À EzÉ. C¢üPÁgÀ±Á»UÀ½UÉ «PÁ¸À¸ËzsÀ EzÉ. §ºÀĪÀĺÀr PÀlÖqÀ EzÉ. gÉÊvÀjUÉ K¤zÉ? ¨ÉAUÀ¼ÀÆj£À°è MAzÀÄ gÉÊvÀ¨sÀªÀ£ÀzÀ CªÀ¸ÀåPÀvÉ EzÉ. J¯Áè f¯ÉèUÀ¼À gÉÊvÀgÀÆ E°è §AzÀÄ ¤¢üðµÀÖ CªÀ¢üUÉ vÀAUÀĪÀ ªÀåªÀ¸ÉܬÄgÀ°. ¥Àæw f¯ÉèAiÀÄ ¨É¼É ªÉÊ«zÀåvÉAiÀÄ£ÀÄß vÉÆÃj¸ÀĪÀ JPïì ©üµÀ£ï , ©üwÛavÀæUÀ¼À r¸ï ¥Éèà EgÀ°. UÀÄ®âUÀð f¯ÉèAiÀÄ PÀȶ C£ÀĨsÀªÀªÀ£ÀÄß ªÉÄʸÀÄgÀÄ f¯ÉèAiÀÄ gÉÊvÀ ºÀAaPÉÆ¼Àî°. ºÁUÉ ªÀiÁqÀĪÀÅzÀjAzÀ ¨ÁAzsÀªÀå ¨É¼ÉAiÀÄÄvÀÛzÉ. PÁªÉÃj-PÀæµÉÚAiÀÄgÀÄ MAzÁUÀÄvÁÛgÉ. CzÀgÀ¯ÉÆèAzÀÄ ¸É«Ä£Ágï ºÁ¯ï EgÀ°. ¤gÀAvÀgÀ ZÀZÀðUÉÆÃ¶ÖUÀ¼ÀÄ, ¸ÀAªÁzÀUÀ¼ÀÄ C°è £ÀqÉAiÀÄÄwÛgÀ°. zÉñÀzÀ J¯Áè ¨sÁUÀzÀ gÉÊvÀgÀÄ C°è MlÄÖ ¸ÉÃj «ZÁgÀ «¤ªÀÄAiÀÄ ªÀiÁrPÉÆ¼Àî°. PÉ.J.J¸ï UÉæÃr£À C¢üPÁjAiÉÆ§âgÀÄ CzÀgÀ G¸ÀÄÛªÁj £ÉÆÃrPÉÆ¼Àî°. EµÀÖ£ÀÄß ªÀiÁrPÉÆlÖgÀÆ ¸ÁPÀÄ gÉÊvÀ RĶ ¥ÀqÀÄvÁÛ£É. 'gÉÊvÀ¨sÀªÀ£À' vÀ£ÀßzÉAzÀÄ ºÉªÉÄä¬ÄAzÀ ºÉýPÉÆ¼ÀÄîvÁÛ£É.

CgÀĪÀvÀÄÛ ªÀµÀð ªÉÄ®àlÖ gÉÊvÀ¤UÉ ªÀiÁ±Á¸À£À PÉÆqÀÄvÀÛzÉAiÉÄAzÀÄ ¸ÀgÀPÁgÀ ¥ÀæPÀn¹zÉ. CzÀgÀ eÉÆvÉUÉ J¯ï.n¹ ¸Ë®¨sÀå zÉÆgÀPÀ°. ಹೇರಳ ದುಡ್ಡು ಖರ್ಚು ಮಾಡಿ ರೈತರನ್ನು ಚೈನ, ಕ್ಯೂಬಾ ಮುಂತಾದ ದೇಶಗಳಿಗೆ ಕಳುಹಿಸುವ ಬದಲು ಭಾರತ ಪ್ರವಾಸ ಮಾಡಿಸಿದರೆ ತಮ್ಮದೇ ನೆಲ-ಜಲ-ಗಂಧದ ಸ್ಪರ್ಶದಿಂದ ಮಾನವೀಯ ಸಂಬಂಧಗಳು ಗಟ್ಟಿಯಾಗಬಹುದು.

EwÛÃZÉUÉ PÀȶ¨sÀÆ«ÄAiÀİè GvÁàzÀ£É PÀÄAnvÀUÉÆArzÉ. ªÀÄÄA¢£À ¢£ÀUÀ¼À°è ;DºÁgÀ §zsÀævÉ' JA§ÄzÀÄ zÉÆqÀØ ¸ÀªÀ¯ÁV PÁqÀ°zÉ. ºÁUÁV PÀȶPÉêÃvÀæªÀ£ÀÄß 'EAqÀ¹Öç' JAzÀÄ ¥ÀjUÀt¹, PÉÊUÁjPÉUÉ PÉÆqÀĪÀJ®è ¸ÀªÀ®vÀÄÛUÀ¼À£ÀÄß ¤Ãr PÀÄlÄA§ªÀ£ÀÄß PÉÊUÁjPÉAiÀÄ PÀ¤µÀÖ WÀlPÀ JAzÀÄ WÉÆÃ¶¸À¨ÉÃPÀÄ,PÀæ¶AiÀÄ°è ªÀiÁvÀæ DºÁgÀ §zsÀævÉ ªÀÄvÀÄÛ GzÉÆåÃUÀ §zsÀævÉ JgÀqÀÆ EzÉ. F ¸ÁéªÀ®A© PÉëÃvÀæªÀ£ÀÄß ¸Àé®à MvÀÄÛ PÉÆlÄÖ ªÉÄïÉwÛzÀgÉ £ÀªÀÄä gÉÊvÀgÀ ºÀ¹gÀÄ ±Á®Ä PÀÄwÛUÉUÉ PÀÄtÂPÉAiÀiÁUÀĪÀÅzÀgÀ §zÀ®Ä AiÀıÀ¹ì£À ¥ÀvÁPÉAiÀÄUÀÄvÀÛzÉ JAzÀÄ gÉÊvÀ ªÀÄÄRAqÀgÁzÀ PÉ.n.UÀAUÁzsÀgï ºÉüÀÄvÁÛgÉ.

¥ÉÇæÃ.£ÀAdÄAqÀ¸Áé«ÄAiÀĪÀgÀÄ gÉÊvÀgÀÄ «zÁ£À¸À¨sÉAiÉÆ¼ÀUÉ PÀĽvÀÄPÉÆ¼ÀÄîªÀ PÀ£À¸ÀÄ PÀArzÀÝgÀÄ . £ÁªÀÅ PÀȶUÉ ¸ÁéAiÀÄvÀÛvÉ §gÀĪÀ PÀ£À¸À£ÀÄß PÁtÄwÛzÉÝêÉ. £ÀªÀÄä PÀȶ ¸ÀaªÀgÀÄ PÀȶ §eÉÃmï £À ©æÃ¥sï PÉÃ¸ï »rzÀÄ «zÁ£À¸ËzsÀzÀ ªÉÄlÖ®ÄUÀ¼À£ÉßgÀĪÀ PÀ£À¸ÀÄ PÁtÄwÛzÉÝêÉ. gÉÊvÀgÀ ºÉ¸Àj£À°è ¥ÀæªÀiÁtªÀZÀ£À ¹éÃPÀj¹zÀ ªÀÄÄRåªÀÄAwæUÀ¼ÀÄ CzÀ£ÀÄß £À£À¸ÀÄ ªÀiÁqÀ°.

[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ]

Saturday, January 29, 2011

ನಿಮ್ಮ ಪ್ರೀತಿಗೆ ನನ್ನನ್ನು ಖರೀದಿಸುವ ಶಕ್ತಿಯಿದೆ!




[೨೦೦೫ರಲ್ಲಿ ’ಓ ಮನಸೇ’ ಪಾಕ್ಷಿಕದಲ್ಲಿ ನಾನೊಂದು ಫ್ರೀಸ್ಟೈಲ್ ಲೇಖನ ಬರೆದಿದ್ದೆ. ಅಂತರ್ಜಾಲದಲ್ಲಿ ’ಹರಾಜು’ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸ್ತುತವಾಗಬಹುದೆಂದು ಭಾವಿಸಿ ಅದನಿಲ್ಲಿ ಪೋಸ್ಟ್ ಮಾಡುತ್ತಿದ್ದೇನೆ.]

ಮೊನ್ನೆ ನಾನೊಂದು ಹೊಸ ಮೊಬೈಲ್ ಸೆಟ್ ಕೊಂಡುಕೊಂಡೆ. ತುಂಬಾ ಮುದ್ದಾಗಿದೆ. ಆ ಮಾದರಿಯ ಹ್ಯಾಂಡ್ ಸೆಟ್ಟನ್ನು ನಾನು ಯಾರದೋ ಕೈಯಲ್ಲಿ ನೋಡಿದ್ದೆ. ನನಗದು ತುಂಬಾ ಇಷ್ಟವಾಗಿತ್ತು. ಮುಂದೆಂದಾದರೂ ಸೆಟ್ ಕೊಳ್ಳಬೇಕೆನಿಸಿದಾಗ ಇಂತಹದ್ದನ್ನೇ ಕೊಳ್ಳಬೇಕೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡಿದ್ದೆ.

ಹಾಗೊಂದು ಸಂದರ್ಭ ಮೊನ್ನೆ ಒದಗಿ ಬಂದಿತ್ತು. ನನ್ನ ಸಂಬಂದಿಯೊಬ್ಬರ ಮೊಬೈಲ್ ಸೆಟ್ ನಿಷ್ಕ್ರೀಯಗೊಂಡಿತು. ಎಲೆಕ್ಟ್ರಾನಿಕ್ ವಸ್ತುಗಳ ಹಣೆಬರಹವೇ ಅಷ್ಟು. ಇದ್ದಕ್ಕಿದ್ದಂತೆ ಅವುಗಳ ಉಸಿರು ನಿಂತು ಬಿಡುತ್ತೆ. ಖಾಯಿಲೆ ಏನು ಎಂದು ಕಂಡು ಹಿಡಿದು ಪರ್ಸ್ ಖಾಲಿ ಮಾಡಿಕೊಳ್ಳುವುದಕ್ಕಿಂತ ಹೊಸದನ್ನು ಖರೀದಿಸುವುದೇ ಸೂಕ್ತವೆನಿಸುತ್ತದೆ. ನನ್ನ ಸಂಬಂದಿಗೆ ನನ್ನ ಸೆಟ್ ಇಷ್ಟವಾಗಿದ್ದ ಕಾರಣ ನಾನವಳಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟೆ. ನಾನು ಈ ಹಿಂದೆಯೇ ಮೋಹಗೊಂಡಿದ್ದ ಸೆಟ್ಟನ್ನು ಖರೀದಿ ಮಾಡಿದೆ.

ನಾವು ಏನನ್ನಾದರೂ ಕೊಂಡುಕೊಂಡರೆ ಅದನ್ನು ಇನ್ನೊಬ್ಬರೆದುರು ಪ್ರದರ್ಶಿಸಲೇ ಬೇಕು. ಸಾಧ್ಯವಾದರೆ ಅವರ ಹೊಟ್ಟೆಗಿಷ್ಟು ಕಿಚ್ಚು ಸುರಿಯಲೇ ಬೇಕು! ಇದು ಹ್ಯೂಮನ್ ಸೈಕಲಾಜಿ.
ನಾನು ಕೂಡಾ ಹುಲುಮಾನವಳಲ್ಲವೇ? ನಾನು ಮೋಹಗೊಂಡ ವಸ್ತು ನನ್ನ ಕೈ ಸೇರಿದುದರ ಬಗ್ಗೆ ಪುಳಕಿತಗೊಂಡು ನನ್ನ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ. ಆದರೆ ಅವನಿಗದು ’ಎನೂ’ ಆಗಿರಲಿಲ್ಲ.
ಆದರೂ ನಾನೂ ಉತ್ಸಾಹದಿಂದಲೇ ಆ ಸೆಟ್, ಅದರಲ್ಲಿರುವ ಸವಲತ್ತುಗಳ ಬಗೆಗೆ ವಿವರಿಸುತ್ತಲೇ ಹೋದೆ...’ನಿನ್ನ ಪೋಟೋವನ್ನು ನಿನ್ನ ನಂಬರಿನೊಡನೆ ಜೋಡಿಸಿದ್ದೇನೆ. ನೀನು ಪೋನ್ ರಿಸೀವ್ ಮಾಡದಿದ್ದರೂ ಒಂದಷ್ಟು ಹೊತ್ತು ನಿನ್ನ ಪೋಟೋ ನೋಡ್ತಾ ಕಳೆದೋಗ್ತೀನಿ...’ ಎಂದೆಲ್ಲಾ ಕೀಟಲೆ ಮಾಡಿದೆ. ನನ್ನ ಬಗ್ಗೆ ಕೊಚ್ಚಿಕೊಳ್ಳುತ್ತಾ, ’ನಾನು ಯಾವಾಗಲೂ ಅತ್ಯುತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಿನ್ನನ್ನು ನನ್ನ ಗೆಳೆಯನನ್ನಾಗಿ ಆಯ್ದುಕೊಂಡ ಹಾಗೆ’ ಎಂದೆ. ತಕ್ಷಣ ಆತ ”ನನ್ನನ್ನ ಎಷ್ಟಕ್ಕೆ ಪರ್ಚೇಸ್ ಮಾಡಿದ್ದೆ?” ಎಂದ.
ನಾನು ಒಂದು ಕ್ಷಣ ಅವಕ್ಕಾದೆ. ಎನೋ ಮಾತಾಡಿ ಪೋನ್ ಇಟ್ಬಿಟ್ಟೆ. ಆದರೆ ಆ ಪ್ರಶ್ನೆ ನನ್ನ ಮನಸ್ಸಿನಲ್ಲಿ ರಿಜಿಸ್ಟರ್ ಆಗಿಬಿಡ್ತು.

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಖರೀದಿ ಮಾಡಲು ಸಾಧ್ಯವೇ?
ನಾವು ಇತಿಹಾಸದಲ್ಲಿ ಓದಿದ್ದೇವೆ; ಗುಲಾಮಗಿರಿ ಪದ್ಧತಿ ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಮನುಷ್ಯರನ್ನು ವಸ್ತುಗಳಂತೆ ಮಾರಾಟ ಮಾಡುವ ಮತ್ತು ಖರೀದಿಸುವ ವ್ಯವಹಾರ ನಡೆಯುತ್ತಿತ್ತು. ಖರೀದಿಸುವುದೆಂದರೆ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆದುಕೊಳ್ಳುವುದು. ನಾನು ಹಣ ನೀಡಿ ನನ್ನ ಇಷ್ಟದ ಮೊಬೈಲ್ ಸೆಟ್ ಖರೀದಿ ಮಾಡಿದೆ. ಅದನ್ನು ನನ್ನದನ್ನಾಗಿ ಮಾಡಿಕೊಂಡೆ. ಹಾಗೆ ಏನನ್ನು ಕೊಟ್ಟು ಒಬ್ಬ ಮನುಷ್ಯನನ್ನು ನನ್ನವನನ್ನಾಗಿ/ನನ್ನವಳನ್ನಾಗಿ ಮಾಡಿಕೊಳ್ಳಬಹುದು?

ಒಂದು ವೇಳೆ ಹಾಗೆ ಖರೀದಿ ಮಾಡಲು ಸಾಧ್ಯವಾಗುವುದಾರೆ, ಖರೀದಿಗೆ ಸಿಗುವಂತಿದ್ದರೆ ಆತ ನಮಗೆ ಪ್ರೀತಿ ಪಾತ್ರನಾಗಬಲ್ಲನೇ? ದುಡ್ಡು ಬಿಸಾಕಿ ಖರೀದಿಸುವ ಯಾವುದೇ ವಸ್ತುವಿನ ಬಗ್ಗೆ ನಮಗೆ ಯಾವತ್ತಿಗೂ ಒಂದೇ ಭಾವವಿರಲು ಸಾಧ್ಯವೇ? ವಸ್ತುಗಳನ್ನಾದರೆ ಒಂದಷ್ಟು ಕಾಲ ಉಪಯೋಗಿಸಿ ನಂತರ ಬಿಸಾಕಿ ಬಿಡುತ್ತೇವೆ. ಹಾಗೆ ಜೀವಂತ ಮನುಷ್ಯರನ್ನು ಬಿಸಾಡಲು ಸಾಧ್ಯವೇ?

ಬಂದುತ್ವವನ್ನು ಬೆಸೆಯುವ ವಿವಾಹ, ಈಗ ವ್ಯವಹಾರದ ಮಟ್ಟಕ್ಕಿಳಿದಿರುವ ಈ ಸಂದರ್ಭದಲ್ಲಿ ವಧುವಿನ ಮನೆಯವರು ದುಡ್ಡು, ಬಂಗಾರ,ಕಾರು, ಬಂಗ್ಲೆ ಮುಂತಾದ ಸುಖಭೋಗದ ವಸ್ತುಗಳನ್ನು ನೀಡಿ ಒಂದು ಗಂಡನ್ನು ಖರೀದಿ ಮಾಡುತ್ತಾರೆ. ಆದರೆ ಮನಸ್ಸನ್ನು ಖರೀದಿಸಲು ಸಾಧ್ಯವೇ?

ನನ್ನ ಗೆಳೆಯ ಕೀಟಲೆಗೆ ಪ್ರತಿ ಕೀಟಲೆಯಂತೆ ಸಹಜವಾಗಿ ಕೇಳಿದ ಒಂದು ಪ್ರಶ್ನೆ ನನ್ನಲ್ಲಿ ಇಷ್ಟೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಯ್ತು.

ನಮ್ಮ ದೈಹಿಕ ಸಾಮರ್ಥ್ಯವನ್ನು ಖರೀದಿ ಮಾಡುವವರಿದ್ದಾರೆ. ನಮ್ಮನ್ನು ಬೌದ್ಧಿಕ ಗುಲಾಮರನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಖರೀದಿ ಎಂಬ ಶಬ್ದದಲ್ಲೇ ವಾಣಿಜ್ಯದ ಉದ್ದೇಶವೂ ಅಡಗಿಕೊಂಡಿದೆ. ವಾಣಿಜ್ಯ ಅಂದ ಮೇಲೆ ಲಾಭ-ನಷ್ಟದ ಪ್ರಶ್ನೆ ಇದ್ದಿದ್ದೇ.

ಖರೀದಿದಾರನು ತಾನು ಖರೀದಿಸಲ್ಪಟ್ಟ ವಸ್ತುವಿನಿಂದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಆತನಲ್ಲಿರುವುದು ಅಹಂ; ಮಾಲೀಕನ ದರ್ಪ. ಖರೀದಿಗೆ ಒಳಪಟ್ಟವನಲ್ಲಿರುವುದು ಕೀಳರಿಮೆ.
ಕೆಲವೊಮ್ಮೆ ಈ ಅಹಮಿಕೆ ಮತ್ತು ಕೀಳರಿಮೆಯ ಮನಸ್ಥಿತಿ ಒಂದೇ ವ್ಯಕ್ತಿಯಲ್ಲಿ ಇರುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಈ ಮನಸ್ಥಿತಿ ಹೆಚ್ಚು. ಇಬ್ಬರಲ್ಲೂ ಪರಸ್ಪರ ಖರೀದಿಸಿದ ಮನಸ್ಥಿತಿ ಇರುವ ಕಾರಣದಿಂದಲೇ ಪರಸ್ಪರ ಹಕ್ಕು ಸ್ಥಾಪನೆ ಮಾಡಲು ಸದಾ ಹವಣಿಸುತ್ತಿರುತ್ತಾರೆ.
ಗಂಡ-ಹೆಂಡತಿಯರಲ್ಲೂ ಇದೇ ರೀತಿಯ ಮನಸ್ಥಿತಿ ಕೆಲಸ ಮಾಡುತ್ತಿರುತ್ತದೆ. ಆದರೆ ವರದಕ್ಷಿಣೆ ಕೊಟ್ಟು ಹುಡುಗಿಯೊಬ್ಬಳು ಗಂಡನನ್ನು ಖರೀದಿ ಮಾಡಿದ್ದರೂ ಅವಳಲ್ಲಿರುವುದು ಖರೀದಿಗೆ ಒಳಪಟ್ಟ ಕಿಳರಿಮೆಯೇ. ಸ್ವತಃ ಖರೀದಿಗೊಳಪಟ್ಟಿದ್ದರೂ ಭಾರತೀಯ ಪರಂಪರೆಯಲ್ಲಿ ಗಂಡನಲ್ಲಿರುವುದು ಖರೀದಿದಾರನ ಮನಸ್ಥಿತಿಯೇ.

ರಾಜಕಾರಣದಲ್ಲಿ ’ಕುದುರೆ ವ್ಯಾಪಾರ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಆಡಳಿತ ಪಕ್ಷದವರು ಇಲ್ಲವೇ ವಿರೋಧ ಪಕ್ಷದವರು ತಮ್ಮ ಸಂಖ್ಯಾಬಲವನ್ನು ವೃದ್ದಿಸಿಕೊಳ್ಳುವುದರ ಸಲುವಾಗಿ ಎಂ.ಪಿಗಳನ್ನು ಅಥವಾ ಎಂ.ಎಲ್.ಎಗಳನ್ನು ಖರೀದಿ ಮಾಡುತ್ತಾರೆ. ಇದು ವಸ್ತುಗಳ ಖರೀದಿಗೆ ಹತ್ತಿರವಾದುದೇ.

ಪಶುಗಳಂತೆ ಖರೀದಿ ಮತ್ತು ಮಾರಾಟ ಜಾಲದಲ್ಲಿ ಆಗಾಗ ಸಿಕ್ಕಿ ಬೀಳುವವವರೆಂದರೆ ನಮ್ಮ ಹೆಣ್ಣುಮಕ್ಕಳು. ಇವರನ್ನು ವೇಶ್ಯಾವೃತ್ತಿಗೆ ಸರಬರಾಜು ಮಾಡುವ ದೊಡ್ಡ ಪಡೆಗಳೇ ಅಸ್ತಿತ್ವದಲ್ಲಿದೆ. ಅಲ್ಲದೆ ಅರಬ್ ರಾಷ್ಟ್ರಗಳಲ್ಲಿ ಬಹು ಜನಪ್ರಿಯವಾದ ಶ್ರೀಮಂತರ ಮೋಜಿನ ಕ್ರೀಡೆಯಾದ ಒಂಟೆ ಓಟಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಪುಟ್ಟ ಪುಟ್ಟ ಮಕ್ಕಳನ್ನು ಖರೀದಿ ಮಾಡಲಾಗುತ್ತದೆ. ಒಂಟೆಯ ಹೊಟ್ಟೆಗೆ ಕಟ್ಟಿದ ಮಕ್ಕಳು ಪ್ರಾಣ ಭಯದಿಂದ ಕಿರುಚಾಡುತ್ತಿದ್ದರೆ ಅಥವಾ ಒಂಟೆಯ ಕಾಲಕೆಳಗೆ ಬಿದ್ದು ನರಳಿ ಸತ್ತರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಇಂಥ ಸ್ಯಾಡಿಸ್ಟ್ ಮನೋಭಾವ ಮನುಷ್ಯನ ಮನಸ್ಸಿನಾಳದಲ್ಲಿ ಗುಪ್ತವಾಗಿ ಅವಿತಿರುತ್ತದೆ.

ಕಳೆದ ವರ್ಷ ಅಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿದ ಮಕ್ಕಳ ಮಾರಾಟ ಜಾಲ ಅದರ ವಿಕೃತ ಮುಖಗಳನ್ನು ತೆರೆದಿಟ್ಟಿತು. ವಿವಿಧ ದಂದೆಗಳಲ್ಲಿ ಅಪ್ರಾಪ್ತ ಬಾಲಕ ಬಾಲಕಿಯರನ್ನು ತೊಡಗಿಸಿಕೊಳ್ಳುವ ಸಮಾಜ ವಿರೋದಿ ಚಟುವಟಿಕೆಗಳಲ್ಲಿ ಹಲವು ಬಾರಿ ಗಣ್ಯ ವ್ಯಕ್ತಿಗಳ ಕೈವಾಡವೂ ಇರುತ್ತದೆ.

ತಾನು ಖರೀದಿಸಲ್ಪಟ್ಟಿದ್ದೇನೆ ಎಂಬುದು ಕೆಲವು ಬಾರಿ ಖರೀದಿಗೊಳಗಾದವನ ಅರಿವಿಗೇ ಬರುವುದಿಲ್ಲ. ಉದಾಹರಣೆಗೆ ಕಾರ್ಪೋರೇಟ್ ವಲಯ ತನ್ನ ನೌಕರರಿಗೆ ಆಕರ್ಷಕವಾದ ವೇತನ, ಸವಲತ್ತುಗಳನ್ನು ನೀಡಿ ದಿನಕ್ಕೆ ಕನಿಷ್ಟ ಹದಿನೆಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತದೆ.
ಇದೆಲ್ಲಕ್ಕಿಂತಲೂ ವಿಸ್ಮಯದ ಸಂಗತಿಯೆಂದರೆ ಸಾಂಸ್ಕೃತಿಕ ಲೋಕದಲ್ಲಿ ನಡೆಯುವ ಬೌದ್ಧಿಕ ಖರೀದಿ. ಮುಂದೆ ಬರೆಯಲಿರುವ ಪುಸ್ತಕಕ್ಕಾಗಿ ಲಕ್ಷಾಂತರ ಡಾಲರ್ ಹಣ ಮುಂಗಡ ಪಡೆಯುವ ಬರಹಗಾರರು ನಮ್ಮ ನಡುವಿನಲ್ಲಿಯೇ ಇದ್ದಾರೆ. ಆಧುನಿಕ ಜಗತ್ತಿನಲ್ಲಿ ಎಲ್ಲೆಲ್ಲೂ ವರ್ತಕರ ವರ್ತುಲವೇ ಕಂಡುಬರುತ್ತಿದೆ!

ನಮ್ಮ ಪುರಾಣಗಳ ಒಳಹೊಕ್ಕು ನೋಡಿದರೆ ದಾನದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ನ್ಯಾಸ[ಅಡವಿಡುವುದು]ದ ಸಂದರ್ಭಗಳೂ ಸಿಗುತ್ತವೆ. ಆದರೆ ಖರೀದಿ ಮತ್ತು ಮಾರಾಟದ ಉದಾಹರಣೆಗಳು ಕಡಿಮೆ. ಸೂರ್ಯವಂಶದ ದೊರೆ ರಾಜಾ ಹರಿಶ್ಚಂದ್ರನು ಸತ್ಯಕ್ಕಾಗಿ ಹೆಂಡತಿ ಮಗನನ್ನು ಮಾರಿ, ಕೊನೆಗೆ ತನ್ನನ್ನು ತಾನೇ ಹರಾಜಿಗಿಟ್ಟುಕೊಂಡದ್ದು ಲೋಕಪ್ರಸಿದ್ಧ ಕಥೆ. ಅಂಥಹ ರಾಜನನ್ನು ಖರೀದಿಸಲು ಸಾಕ್ಷಾತ್ ಯಮಧರ್ಮರಾಯನೇ ಭೂಮಿಗಿಳಿದು ಬಂದಿದ್ದ. ಇದೇ ಹರಿಶ್ಚಂದ್ರನು ತನ್ನ ಮಗ ರೋಹಿತನ ಬದಲಿಗೆ ಋಚೀಕ ಋಷಿಯ ಮಧ್ಯಮ ಪುತ್ರ ಶುನಶ್ಯೇಫನನ್ನು ವರುಣನಿಗೆ ಬಲಿ ನೀಡಲೆಂದು ಖರೀದಿಸಿದ್ದು ಇನ್ನೊಂದು ಕಥೆ. ಆದರೆ ಅದೇ ಶುನಶ್ಯೇಫನನ್ನು ವಿಶ್ವಾಮಿತ್ರ ಬಿಡುಗಡೆ ಮಾಡುತ್ತಾನೆ.

ಖರೀದಿಗೆ ಇದೆ ಎಂದಾದರೆ ಖರೀದಿಸುವವರೂ ಇರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಯಾರಾದರೂ ತಮ್ಮ ಪ್ರೀತಿಯನ್ನು ನೀಡಿ ನನ್ನನ್ನು ಖರೀದಿಸಲಿ ಎಂದು ಹಂಬಲಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಏಕೆ ಸಾಧ್ಯವಾಗುವುದಿಲ್ಲ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಮತ್ತೆ ನಾವು ಮನಸ್ಸಿನ ವಿಶ್ಲೇಷಣೆಗೆ ಇಳಿಯಬೇಕು. ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಗೆಳೆಯನಿಗೆ ತಾನು ಬಿಕರಿಯಾಗಿದ್ದೇನೆ ಎಂಬ ವಿಷಣ್ಣತೆಯಿದ್ದರೆ ನನ್ನಲ್ಲಿ ಖರೀದಿಸಿದ ಭಾವವಿರಲಿಲ್ಲ. ಅಂದರೆ ಎಲ್ಲೋ ಲಿಂಕ್ ಮಿಸ್ಸಾಗುತ್ತಲಿದೆ. ಅದು ಮನುಷ್ಯನ ವೈಯಕ್ತಿಕ ದುರಂತ; ಮನುಕುಲದ ದುರಂತ.